/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಪಾಡ್ಯತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ
ಮೇಷ ರಾಶಿ
- ಮಾತು ಮಿತವಾಗಿದ್ದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
- ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
- ಹಿರಿಯರ, ಗುರುಗಳ ಕೋಪಕ್ಕೆ ಒಳಗಾಗುವ ಸಾಧ್ಯತೆ ಇದೆ
- ಇಂದು ಅನಿರೀಕ್ಷಿತವಾಗಿ ಹಣ ಬರುತ್ತದೆ
- ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಬಹುದು
- ದಿನದ ಕೊನೆಯಲ್ಲಿ ಶುಭ ಫಲವಿದೆ
- ಅರುಣಾಚಲೇಶ್ವರನನ್ನು ಪ್ರಾರ್ಥಿಸಿ
ವೃಷಭ
- ಇಂದು ಸಾಲಬಾಧೆಯಿಂದ ಮುಕ್ತಿ ಸಾಧ್ಯತೆ
- ಹಣದ ವಿಚಾರಕ್ಕಾಗಿ ಕುಟುಂಬದಲ್ಲಿ ವಾಗ್ಯುದ್ಧ ನಡೆಯಬಹುದು
- ಇಂದು ಆತ್ಮವಿಶ್ವಾಸದ ಕೊರತೆ ಕಾಡುತ್ತದೆ
- ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ಕುಟುಂಬದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತವೆ
- ಚಿಕ್ಕ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ
- ನೀವು ಸಂಕಲ್ಪ ಮಾಡಿದ ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ
- ನರಸಿಂಹನನ್ನು ಪ್ರಾರ್ಥಿಸಿ
ಮಿಥುನ
- ಇಂದು ಶುಭ ಕಾರ್ಯಗಳನ್ನು ಮುಂದೂಡುವ ಪ್ರಸಂಗ ಬರುತ್ತದೆ
- ಕಾರ್ಯಗಳನ್ನು ಮುಂದೂಡದಿದ್ದರೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ
- ಅನಾರೋಗ್ಯ, ಕಲುಷಿತ ವಾತಾವರಣ, ಮಕ್ಕಳಿಂದ ಬೇಸರ ಸಾಧ್ಯತೆ
- ನಿಮ್ಮ ಜಾಣ್ಮೆ, ಬುದ್ಧಿವಂತಿಕೆಗಳು ಕೆಲಸಕ್ಕೆ ಬರುವುದಿಲ್ಲ
- ಈ ದಿನ ಬಂದದ್ದನ್ನು ನೀವು ಅನುಭವಿಸಲೇ ಬೇಕಾಗುತ್ತದೆ
- ಸ್ವಯಂವರ ಪಾರ್ವತಿ ದೇವಿಯನ್ನು ಆರಾಧನೆ ಮಾಡಿ
ಕಟಕ
- ಇಂದು ಮಾನಸಿಕವಾಗಿ ತುಂಬಾ ಕಿರಿಕಿರಿ ಸಾಧ್ಯತೆ
- ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆಯುತ್ತದೆ
- ಸರ್ಕಾರಿ ಕೆಲಸಗಳಲ್ಲಿ ಮಂದಗತಿಯ ಸಾಧನೆ
- ಸಾಹಿತ್ಯ, ಸಂಗೀತ ಶಾಸ್ತ್ರಜ್ಞರಿಗೆ ಗೌರವ ದೊರೆಯುತ್ತದೆ
- ಸರ್ಕಾರಿ ನೌಕರರಿಗೆ ಒತ್ತಡ, ಹಿತಶತ್ರುಗಳ ಕಾಟ ಹೆಚ್ಚಾಗಿರುತ್ತದೆ
- ಅಘೋರ ರುದ್ರನನ್ನು ಪ್ರಾರ್ಥನೆ ಮಾಡಿ
ಸಿಂಹ
- ಇಂದು ಮಕ್ಕಳಿಂದ ಅಥವಾ ತಮಗಿಂತ ಚಿಕ್ಕವರಿಂದ ತುಂಬಾ ಕಿರಿಕಿರಿ ಆಗಬಹುದು
- ಶತ್ರುಗಳನ್ನು ತಡೆಯಲು ನಿಮಗೆ ಮಾತಿನ ಅಸ್ತ್ರಗಳು, ಉಪಾಯಗಳು ದೊರೆಯುತ್ತವೆ
- ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
- ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
- ಅಧಿಕ ಖರ್ಚು ವೆಚ್ಚದಿಂದಾಗಿ ತಾಳ್ಮೆ ಕೆಡುತ್ತದೆ
- ಭುವನೇಶ್ವರಿಯನ್ನು ಆರಾಧಿಸಿ
ಕನ್ಯಾ
- ಇಂದು ಉದ್ಯೋಗದಲ್ಲಿ ಅನುಕೂಲ, ಸಾಲದಿಂದ ಮುಕ್ತಿ ಸಾಧ್ಯತೆ
- ಆರ್ಥಿಕವಾಗಿ ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ
- ಸಾಮಾಜಿಕ ಜನಪ್ರಿಯತೆಯಲ್ಲಿ ಅನುಮಾನ, ಅವಮಾನ ಹುಟ್ಟಿಕೊಳ್ಳುತ್ತವೆ
- ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಗುರುಗಳಿಂದ ಮಾರ್ಗದರ್ಶನ ಪಡೆಯಿರಿ
- ಮನೆಗೆ ಹೊಸ ವಸ್ತು ಖರೀದಿಸುತ್ತೀರಿ ಆದ್ರೆ ಖರೀದಿಸಿದ ವಸ್ತುವಿನಿಂದ ನಷ್ಟ ಸಾಧ್ಯತೆ
- ಸ್ವರ್ಣಾಕರ್ಷಣ ಭೈರವನನ್ನು ಪ್ರಾರ್ಥಿಸಿ
ತುಲಾ
- ಇಂದು ಅವಮಾನಕ್ಕೆ ಗುರಿಯಾಗುವ ಸಾಧ್ಯತೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ
- ಆರೋಗ್ಯದಲ್ಲಿ ಏರುಪೇರು, ಬುದ್ಧಿ ಚಾಂಚಲ್ಯ, ಮಂದತ್ವ ಕಾಡಬಹುದು
- ಹೆಚ್ಚು ಹಣ ಕೊಟ್ಟು ಖರೀದಿಸಿದ ವಸ್ತು ರಿಪೇರಿಗೆ ಬರಬಹುದು
- ಆಕಸ್ಮಿಕ ಬೆಂಕಿ ಅವಘಡ ಸಾಧ್ಯತೆಯಿದೆ ಎಚ್ಚರಿಕೆ ಇರಲಿ
- ಸಂಬಂಧಪಟ್ಟವರ ಜೊತೆ ಜಗಳವಾಗಬಹುದು
- ಇಂದು ಧೂಮಾವತಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಸ್ಥಿರಾಸ್ತಿ, ಭೂಮಿ, ವಾಹನ, ಬೆಲೆ ಬಾಳುವ ಪದಾರ್ಥಗಳ ಖರೀದಿಯಲ್ಲಿ ಮೋಸ ಸಾಧ್ಯತೆ
- ಇಂದು ವಿದ್ಯಾರ್ಥಿಗಳಿಗೆ ಅಶುಭ ಫಲ
- ವಿದ್ಯಾರ್ಥಿಗಳಿಗೆ ಶುಭವಾದ ದಿನ
- ಪ್ರಯಾಣಕ್ಕೆ ಅಡ್ಡಿ ಉಂಟಾಗಿ ಮುಂದೂಡಲ್ಪಡಬಹುದು
- ಆಲಸ್ಯ ಮತ್ತು ಅತಿಯಾದ ನಂಬಿಕೆಯಿಂದ ಮೋಸ ಸಾಧ್ಯತೆ
- ಕುಬೇರ ಲಕ್ಷ್ಮಿಯನ್ನು ಆರಾಧಿಸಿ
ಧನಸ್ಸು
- ವಿದ್ಯಾರ್ಥಿಗಳಿಗೆ ಓದು ಬರಹದ ಒತ್ತಡ ಹೆಚ್ಚು, ನಿದ್ರಾಭಂಗ ಸಾಧ್ಯತೆ
- ಮನೆಯಿಂದ ಹೊರಡುವಾಗ ಜಗಳವಾಗುವ ಸಾಧ್ಯತೆ ಇದೆ
- ಇಂದು ಜ್ವರದ ತಾಪವೂ ನಿಮ್ಮನ್ನು ಕಾಡಬಹುದು
- ಪ್ರೇಮಿಗಳಿಗೆ ಸಮಸ್ಯೆಯಾಗುವ ದಿನ, ಜಗಳ ಮನಸ್ತಾಪ ಏರ್ಪಡುವ ಸಾಧ್ಯತೆ
- ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥಿಸಿ
ಮಕರ
- ಹಳೆಯ ಜಗಳ, ವಿವಾದಗಳು ಇಂದು ರಾಜಿಯಾಗಬಹುದು
- ಇಂದು ಗರ್ಭಿಣಿಯರು ತಮ್ಮ ಬಗ್ಗೆ ಜಾಗ್ರತೆವಹಿಸಿ
- ಹಣದ ನಿರ್ವಹಣೆಯಲ್ಲಿ ಯಶಸ್ಸು, ವಿವಾಹದ ಮಾತುಕತೆ ಸಾಧ್ಯತೆ
- ಮನೆಯಲ್ಲಿ ಉತ್ತಮವಾದ ವಾತಾವರಣ, ಸಿಹಿ ಹಂಚಿಕೆ ಹಬ್ಬದ ಸಂಭ್ರಮ
- ಮನಸ್ಸಿಗೆ ಸಂಪೂರ್ಣ ನೆಮ್ಮದಿಯ ದಿನ
ಕುಂಭ
- ಮೊಬೈಲ್ ಬಳಸುತ್ತಾ ವಾಹನ ಚಲಾಯಿಸುವಾಗ ಅವಘಡ ಆಗಬಹುದು ಎಚ್ಚರಿಕೆ ಇರಲಿ
- ನಿಮ್ಮ ಆರೋಗ್ಯದ ಏರುಪೇರಿನಿಂದಾಗಿ ಮನೆಯವರ ನೆಮ್ಮದಿ ಕೆಡಬಹುದು
- ಇಂದು ಕಬ್ಬಿಣದ ವಸ್ತುಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
- ದಾಯಾದಿಗಳ ಮಾತಿನಿಂದ ಮನಸ್ಸಿಗೆ ಸಮಾಧಾನ
- ಸಂತಾನ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ
ಮೀನ
- ಹೊಸ ಸಂಬಂಧಕ್ಕೆ ಒಳ್ಳೆಯ ದಿನ, ಎಲ್ಲಾ ರೀತಿಯಲ್ಲಿ ಅನುಕೂಲವಾಗುತ್ತದೆ
- ಸ್ವಲ್ಪ ಕಷ್ಟ ಸಹಿಸಿಕೊಂಡು ದೇವರ ಧ್ಯಾನ ಮಾಡಿ
- ನಿಮ್ಮದಲ್ಲದಿರುವ ಕೆಲಸಕ್ಕೆ ಸಹಾಯ ಮಾಡಲು ಹೋಗಬೇಡಿ
- ಶನೈಶ್ಚರನನ್ನು ಪ್ರಾರ್ಥಿಸಿ
- ಮಹಾಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ