ಅಧಿಕ ಖರ್ಚು, ಒತ್ತಡ; ಈ ರಾಶಿಯವರ ಕೆಲಸ ಕಾರ್ಯಗಳಿಗೆ ವಿಘ್ನ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಮಾತು ಮಿತವಾಗಿದ್ದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
  • ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಗುರುಗಳಿಂದ ಮಾರ್ಗದರ್ಶನ ಪಡೆಯಿರಿ
  • ಹೊಸ ಸಂಬಂಧಕ್ಕೆ ಒಳ್ಳೆಯ ದಿನ, ಎಲ್ಲಾ ರೀತಿಯಲ್ಲಿ ಅನುಕೂಲ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಪಾಡ್ಯತಿಥಿ, ಮೂಲ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ

ಮೇಷ ರಾಶಿ

publive-image

  • ಮಾತು ಮಿತವಾಗಿದ್ದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
  • ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ
  • ಹಿರಿಯರ, ಗುರುಗಳ ಕೋಪಕ್ಕೆ ಒಳಗಾಗುವ ಸಾಧ್ಯತೆ ಇದೆ
  • ಇಂದು ಅನಿರೀಕ್ಷಿತವಾಗಿ ಹಣ ಬರುತ್ತದೆ
  • ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಬಹುದು
  • ದಿನದ ಕೊನೆಯಲ್ಲಿ ಶುಭ ಫಲವಿದೆ
  • ಅರುಣಾಚಲೇಶ್ವರನನ್ನು ಪ್ರಾರ್ಥಿಸಿ

ವೃಷಭ

publive-image

  • ಇಂದು ಸಾಲಬಾಧೆಯಿಂದ ಮುಕ್ತಿ ಸಾಧ್ಯತೆ
  • ಹಣದ ವಿಚಾರಕ್ಕಾಗಿ ಕುಟುಂಬದಲ್ಲಿ ವಾಗ್ಯುದ್ಧ ನಡೆಯಬಹುದು
  • ಇಂದು ಆತ್ಮವಿಶ್ವಾಸದ ಕೊರತೆ ಕಾಡುತ್ತದೆ
  • ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ಕುಟುಂಬದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತವೆ
  • ಚಿಕ್ಕ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ
  • ನೀವು ಸಂಕಲ್ಪ ಮಾಡಿದ ಕೆಲಸಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ
  • ನರಸಿಂಹನನ್ನು ಪ್ರಾರ್ಥಿಸಿ

ಮಿಥುನ

publive-image

  • ಇಂದು ಶುಭ ಕಾರ್ಯಗಳನ್ನು ಮುಂದೂಡುವ ಪ್ರಸಂಗ ಬರುತ್ತದೆ
  • ಕಾರ್ಯಗಳನ್ನು ಮುಂದೂಡದಿದ್ದರೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ
  • ಅನಾರೋಗ್ಯ, ಕಲುಷಿತ ವಾತಾವರಣ, ಮಕ್ಕಳಿಂದ ಬೇಸರ ಸಾಧ್ಯತೆ
  • ನಿಮ್ಮ ಜಾಣ್ಮೆ, ಬುದ್ಧಿವಂತಿಕೆಗಳು ಕೆಲಸಕ್ಕೆ ಬರುವುದಿಲ್ಲ
  • ಈ ದಿನ ಬಂದದ್ದನ್ನು ನೀವು ಅನುಭವಿಸಲೇ ಬೇಕಾಗುತ್ತದೆ
  • ಸ್ವಯಂವರ ಪಾರ್ವತಿ ದೇವಿಯನ್ನು ಆರಾಧನೆ ಮಾಡಿ

ಕಟಕ

publive-image

  • ಇಂದು ಮಾನಸಿಕವಾಗಿ ತುಂಬಾ ಕಿರಿಕಿರಿ ಸಾಧ್ಯತೆ
  • ಆರ್ಥಿಕ ಸಂಕಷ್ಟದಿಂದ ಮುಕ್ತಿ ದೊರೆಯುತ್ತದೆ
  • ಸರ್ಕಾರಿ ಕೆಲಸಗಳಲ್ಲಿ ಮಂದಗತಿಯ ಸಾಧನೆ
  • ಸಾಹಿತ್ಯ, ಸಂಗೀತ ಶಾಸ್ತ್ರಜ್ಞರಿಗೆ ಗೌರವ ದೊರೆಯುತ್ತದೆ
  • ಸರ್ಕಾರಿ ನೌಕರರಿಗೆ ಒತ್ತಡ, ಹಿತಶತ್ರುಗಳ ಕಾಟ ಹೆಚ್ಚಾಗಿರುತ್ತದೆ
  • ಅಘೋರ ರುದ್ರನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಇಂದು ಮಕ್ಕಳಿಂದ ಅಥವಾ ತಮಗಿಂತ ಚಿಕ್ಕವರಿಂದ ತುಂಬಾ ಕಿರಿಕಿರಿ ಆಗಬಹುದು
  • ಶತ್ರುಗಳನ್ನು ತಡೆಯಲು ನಿಮಗೆ ಮಾತಿನ ಅಸ್ತ್ರಗಳು, ಉಪಾಯಗಳು ದೊರೆಯುತ್ತವೆ
  • ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
  • ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
  • ಅಧಿಕ ಖರ್ಚು ವೆಚ್ಚದಿಂದಾಗಿ ತಾಳ್ಮೆ ಕೆಡುತ್ತದೆ
  • ಭುವನೇಶ್ವರಿಯನ್ನು ಆರಾಧಿಸಿ

ಕನ್ಯಾ

publive-image

  • ಇಂದು ಉದ್ಯೋಗದಲ್ಲಿ ಅನುಕೂಲ, ಸಾಲದಿಂದ ಮುಕ್ತಿ ಸಾಧ್ಯತೆ
  • ಆರ್ಥಿಕವಾಗಿ ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ
  • ಸಾಮಾಜಿಕ ಜನಪ್ರಿಯತೆಯಲ್ಲಿ ಅನುಮಾನ, ಅವಮಾನ ಹುಟ್ಟಿಕೊಳ್ಳುತ್ತವೆ
  • ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಗುರುಗಳಿಂದ ಮಾರ್ಗದರ್ಶನ ಪಡೆಯಿರಿ
  • ಮನೆಗೆ ಹೊಸ ವಸ್ತು ಖರೀದಿಸುತ್ತೀರಿ ಆದ್ರೆ ಖರೀದಿಸಿದ ವಸ್ತುವಿನಿಂದ ನಷ್ಟ ಸಾಧ್ಯತೆ
  • ಸ್ವರ್ಣಾಕರ್ಷಣ ಭೈರವನನ್ನು ಪ್ರಾರ್ಥಿಸಿ

ತುಲಾpublive-image

  • ಇಂದು ಅವಮಾನಕ್ಕೆ ಗುರಿಯಾಗುವ ಸಾಧ್ಯತೆ
  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ
  • ಆರೋಗ್ಯದಲ್ಲಿ ಏರುಪೇರು, ಬುದ್ಧಿ ಚಾಂಚಲ್ಯ, ಮಂದತ್ವ ಕಾಡಬಹುದು
  • ಹೆಚ್ಚು ಹಣ ಕೊಟ್ಟು ಖರೀದಿಸಿದ ವಸ್ತು ರಿಪೇರಿಗೆ ಬರಬಹುದು
  • ಆಕಸ್ಮಿಕ ಬೆಂಕಿ ಅವಘಡ ಸಾಧ್ಯತೆಯಿದೆ ಎಚ್ಚರಿಕೆ ಇರಲಿ
  • ಸಂಬಂಧಪಟ್ಟವರ ಜೊತೆ ಜಗಳವಾಗಬಹುದು
  • ಇಂದು ಧೂಮಾವತಿಯನ್ನು ಪ್ರಾರ್ಥಿಸಿ

ವೃಶ್ಚಿಕ

publive-image

  • ಸ್ಥಿರಾಸ್ತಿ, ಭೂಮಿ, ವಾಹನ, ಬೆಲೆ ಬಾಳುವ ಪದಾರ್ಥಗಳ ಖರೀದಿಯಲ್ಲಿ ಮೋಸ ಸಾಧ್ಯತೆ
  • ಇಂದು ವಿದ್ಯಾರ್ಥಿಗಳಿಗೆ ಅಶುಭ ಫಲ
  • ವಿದ್ಯಾರ್ಥಿಗಳಿಗೆ ಶುಭವಾದ ದಿನ
  • ಪ್ರಯಾಣಕ್ಕೆ ಅಡ್ಡಿ ಉಂಟಾಗಿ ಮುಂದೂಡಲ್ಪಡಬಹುದು
  • ಆಲಸ್ಯ ಮತ್ತು ಅತಿಯಾದ ನಂಬಿಕೆಯಿಂದ ಮೋಸ ಸಾಧ್ಯತೆ
  • ಕುಬೇರ ಲಕ್ಷ್ಮಿಯನ್ನು ಆರಾಧಿಸಿ

ಧನಸ್ಸು

publive-image

  • ವಿದ್ಯಾರ್ಥಿಗಳಿಗೆ ಓದು ಬರಹದ ಒತ್ತಡ ಹೆಚ್ಚು, ನಿದ್ರಾಭಂಗ ಸಾಧ್ಯತೆ
  • ಮನೆಯಿಂದ ಹೊರಡುವಾಗ ಜಗಳವಾಗುವ ಸಾಧ್ಯತೆ ಇದೆ
  • ಇಂದು ಜ್ವರದ ತಾಪವೂ ನಿಮ್ಮನ್ನು ಕಾಡಬಹುದು
  • ಪ್ರೇಮಿಗಳಿಗೆ ಸಮಸ್ಯೆಯಾಗುವ ದಿನ, ಜಗಳ ಮನಸ್ತಾಪ ಏರ್ಪಡುವ ಸಾಧ್ಯತೆ
  • ಇಂದ್ರಾಕ್ಷಿ ದೇವಿಯನ್ನು ಪ್ರಾರ್ಥಿಸಿ

ಮಕರ

publive-image

  • ಹಳೆಯ ಜಗಳ, ವಿವಾದಗಳು ಇಂದು ರಾಜಿಯಾಗಬಹುದು
  • ಇಂದು ಗರ್ಭಿಣಿಯರು ತಮ್ಮ ಬಗ್ಗೆ ಜಾಗ್ರತೆವಹಿಸಿ
  • ಹಣದ ನಿರ್ವಹಣೆಯಲ್ಲಿ ಯಶಸ್ಸು, ವಿವಾಹದ ಮಾತುಕತೆ ಸಾಧ್ಯತೆ
  • ಮನೆಯಲ್ಲಿ ಉತ್ತಮವಾದ ವಾತಾವರಣ, ಸಿಹಿ ಹಂಚಿಕೆ ಹಬ್ಬದ ಸಂಭ್ರಮ
  • ಮನಸ್ಸಿಗೆ ಸಂಪೂರ್ಣ ನೆಮ್ಮದಿಯ ದಿನ

ಕುಂಭ

publive-image

  • ಮೊಬೈಲ್​ ಬಳಸುತ್ತಾ ವಾಹನ ಚಲಾಯಿಸುವಾಗ ಅವಘಡ ಆಗಬಹುದು ಎಚ್ಚರಿಕೆ ಇರಲಿ
  • ನಿಮ್ಮ ಆರೋಗ್ಯದ ಏರುಪೇರಿನಿಂದಾಗಿ ಮನೆಯವರ ನೆಮ್ಮದಿ ಕೆಡಬಹುದು
  • ಇಂದು ಕಬ್ಬಿಣದ ವಸ್ತುಗಳಿಂದ ತೊಂದರೆಯಾಗುವ ಸಾಧ್ಯತೆಯಿದೆ
  • ದಾಯಾದಿಗಳ ಮಾತಿನಿಂದ ಮನಸ್ಸಿಗೆ ಸಮಾಧಾನ
  • ಸಂತಾನ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ

ಮೀನ 

publive-image

  • ಹೊಸ ಸಂಬಂಧಕ್ಕೆ ಒಳ್ಳೆಯ ದಿನ, ಎಲ್ಲಾ ರೀತಿಯಲ್ಲಿ ಅನುಕೂಲವಾಗುತ್ತದೆ
  • ಸ್ವಲ್ಪ ಕಷ್ಟ ಸಹಿಸಿಕೊಂಡು ದೇವರ ಧ್ಯಾನ ಮಾಡಿ
  • ನಿಮ್ಮದಲ್ಲದಿರುವ ಕೆಲಸಕ್ಕೆ ಸಹಾಯ ಮಾಡಲು ಹೋಗಬೇಡಿ
  • ಶನೈಶ್ಚರನನ್ನು ಪ್ರಾರ್ಥಿಸಿ
  • ಮಹಾಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ                                

Advertisment