/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಇಂದು ಸ್ವಲ್ಪ ದುರ್ಬಲವಾದ ದಿನ
- ಇಂದು ಪತಿ-ಪತ್ನಿಯರ ಮಧ್ಯೆ ಉತ್ತಮ ಬಾಂಧವ್ಯ
- ಇವತ್ತು ಯಾರನ್ನೂ ಅತಿಯಾಗಿ ನಂಬಬೇಡಿ
- ಇಂದು ಅನಗತ್ಯ ಕೆಲಸಗಳಿಂದ ದೂರವಿರಿ
- ನಿಮಗಿರುವ ಪ್ರತಿಭೆಯನ್ನ ಜನ ಇಂದು ಗುರುತಿಸುತ್ತಾರೆ
- ಪರಸ್ಪರ ಭಿನ್ನಾಭಿಪ್ರಾಯ ಬರಬಹುದು, ಮಾತು ಮೃದುವಾಗಿರಲಿ
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ವೃಷಭ
- ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸದ ವಿಚಾರದಲ್ಲಿ ಶುಭ ಸುದ್ದಿ ಬರುತ್ತದೆ
- ಆಸ್ತಿಯ ಖರೀದಿ ವಿಚಾರದಲ್ಲಿ ಮನಸ್ಸಿಗೆ ಸಮಾಧಾನ ಸಿಗುತ್ತದೆ
- ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
- ನೇರವಾಗಿ ಮಾತನಾಡಿ ನಿಷ್ಠೂರಕ್ಕೆ ಗುರಿಯಾಗುತ್ತೀರಿ
- ಪ್ರೇಮಿಗಳ ವಿಚಾರದಲ್ಲಿ ನಿರಾಸೆಯಾಗಬಹುದು
- ವಾಹನ ಚಾಲನೆ ಮಾಡುವಾಗ ಜಾಗ್ರತೆವಹಿಸಿ
- ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ
ಮಿಥುನ
- ನಿಮ್ಮ ಸಂಗಾತಿಗೆ ಆಶ್ಚರ್ಯಕರ ಉಡುಗೊರೆ ಕೊಟ್ಟು ಸಂತೋಷಪಡಿಸಿ
- ನಿಮಗಿರುವ ಧಾರ್ಮಿಕ ಭಾವನೆಯನ್ನು ಹೆಚ್ಚಿಸಿಕೊಳ್ಳಿ
- ಇಂದು ತುಂಬಾ ಕಾರ್ಯ ಒತ್ತಡಕ್ಕೆ ಸಿಲುಕುತ್ತೀರಿ
- ಗುರಿ ಮುಟ್ಟುವುದೇ ನಿಮ್ಮ ಮೂಲ ಉದ್ದೇಶ ಆಗಿರುತ್ತದೆ
- ಷೇರು ವ್ಯವಹಾರವನ್ನು ಬೆಳಗ್ಗೆ ರಾಹುಕಾಲ ಕಳೆದ ನಂತರ ಮಾಡಿದರೆ ಒಳ್ಳೆಯದು
ಕಟಕ
- ಇಂದು ನಿರುದ್ಯೋಗಿಗಳಿಗೆ ಶುಭ ಸುದ್ದಿ
- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು
- ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭವಾಗುವ ಸೂಚನೆಯಿದೆ
- ಬೇರೆಯವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
- ಗೋದರ್ಶನ ಮಾಡಿ
ಸಿಂಹ
- ಇಂದಿನ ಕೆಲಸ ಕಾರ್ಯಗಳು ನಿಮ್ಮ ಚುರುಕುತನಕ್ಕೆ ತಕ್ಕಂತೆ ಆಗುವುದಿಲ್ಲ
- ಉದ್ಯೋಗದಲ್ಲಿ ಸ್ವಲ್ಪ ಅಡಚಣೆ ಸಾಧ್ಯತೆ ಇದೆ
- ಸರ್ಕಾರಿ ಕೆಲಸಗಳಿಂದ ಮನಸ್ಸಿಗೆ ಸಮಾಧಾನ
- ಹೊಸ ವಿಷಯ ಕಲಿಯಲು ಉತ್ಸುಕರಾಗಿರುತ್ತೀರಿ
- ಆದರೆ ಸರಿಯಾದ ವಾತಾವರಣ ಇರುವುದಿಲ್ಲ
- ಉತ್ತಮ ಕಾರ್ಯಗಳಿಗಾಗಿ ಪ್ರಯಾಣ
- ಆಸ್ತಿ ವಿವಾದಗಳಿದ್ದರೆ ಬಗೆ ಹರಿಯುವ ಸಾಧ್ಯತೆ
- ಶ್ರೀ ಕೃಷ್ಣನನ್ನು ಪ್ರಾರ್ಥಿಸಿ
ಕನ್ಯಾ
- ನಿಮ್ಮ ಏಕಾಗ್ರತೆಗೆ ಅಡ್ಡಿಯಾಗುವ ಪ್ರಸಂಗಗಳೇ ಹೆಚ್ಚು
- ತಾಯಿ, ಅಜ್ಜಿಯ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
- ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಪ್ರಗತಿ ಕಾಣುತ್ತೀರಿ
- ಮಾಡಿದ ಕೆಲಸವು ಸರಿಯಾಗದೆ ಮತ್ತೆ ಮಾಡಬೇಕಾಗಬಹುದು
- ಸಂಗೀತ ಆಸಕ್ತರಿಗೆ ಉತ್ತಮವಾದ ದಿನ
- ನಿಮ್ಮ ಕಾರ್ಯಗಳಿಗೆ ಕುಟುಂಬದವರ ಸಹಕಾರ ಪೂರ್ಣವಾಗಿ ಸಿಗುತ್ತದೆ
- ರಾಹುಕಾಲ ಗಮನಿಸಿ ಪ್ರಯಾಣ ಮಾಡಿ
ತುಲಾ
- ರಹಸ್ಯ ಶತ್ರುಗಳ ಬಗ್ಗೆ ಹೆಚ್ಚು ಗಮನವಿರಲಿ
- ಅವರು ಯಾವುದೇ ಕ್ಷಣದಲ್ಲಿ ನಿಮಗೆ ತೊಂದರೆ ಮಾಡಬಹುದು
- ಮದುವೆಯೇ ಮೊದಲಾದ ಶುಭ ಕೆಲಸಗಳ ವಿಚಾರದಲ್ಲಿ ಮನೆಯಲ್ಲಿ ಪ್ರಸ್ತಾಪವಾಗಿ ಎಲ್ಲರೂ ಸಂಭ್ರಮಿಸುವ ವಾತಾವರಣ ಇರುತ್ತದೆ
- ವೈವಾಹಿಕ ವಿಚಾರದಲ್ಲಿರುವವರಿಗೆ ಉತ್ತಮ ಫಲಿತಾಂಶ
- ಶೂಲಿನೀ ದುರ್ಗಾದೇವಿ ಪ್ರಾರ್ಥನೆ ಮಾಡಿ
ವೃಶ್ಚಿಕ
- ಹಳೆಯ ಸ್ನೇಹಿತರ ಭೇಟಿಯಿಂದ ಮುಖ್ಯ ವಿಷಯಗಳ ಚರ್ಚೆಯಾಗುತ್ತದೆ
- ಬರಹಗಾರರಾಗಿದ್ದರೆ ದಿನ ಚೆನ್ನಾಗಿದೆ
- ಇಂದು ಸಮಯ ವ್ಯರ್ಥ ಮಾಡಬೇಡಿ
- ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶವಿದೆ
- ಕುಲದೇವತೆಯನ್ನ ಆರಾಧನೆ ಮಾಡಿ
ಧನಸ್ಸು
- ಹಣಕಾಸಿನ ಲಾಭದಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ
- ದುರಾಸೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
- ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸದ ನೀವೇ ಮಾಡಿ
- ಸಣ್ಣ ತೊಂದರೆಗಳ ನಂತರ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
- ಇಂದು ಬೇರೆಯವರಿಗೆ ಹಣ ನೀಡುವಾಗ ಎಚ್ಚರಿಕೆ ಇರಲಿ
- ದತ್ತಾತ್ರೇಯನನ್ನು ಆರಾಧಿಸಿ
ಮಕರ
- ಜೀವನಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ ಎಂಬ ಮನದಾಳದ ಮಾತು ನಿಮ್ಮ ಆತ್ಮಸ್ಥೈರ್ಯಕ್ಕೆ ಸಾಕ್ಷಿಯಾಗುತ್ತದೆ
- ಹೊಸ ಹೊಸ ಆದಾಯದ ಮೂಲಗಳು ಸಿಗುತ್ತವೆ
- ಮನೆಯಲ್ಲಿ ನಿಮ್ಮ ಮಾತೇ ಮುಖ್ಯವಾಗುತ್ತದೆ
- ನಿಮ್ಮ ಜೊತೆ ಕೆಲಸ ಮಾಡುವವರ ಬಗ್ಗೆ ವಿಶ್ವಾಸ ಉಳಿಸಿಕೊಳ್ಳಿ
- ಮುಂದೆ ಅವರಿಂದ ನಿಮ್ಮ ಕಾರ್ಯಕ್ಕೆ ಸಹಕಾರಿಯಾಗಬಹುದು
- ಕುಲದೇವತೆ ಹಾಗೂ ಗುರುಗಳನ್ನ ಆರಾಧಿಸಿ
ಕುಂಭ
- ಬೇರೆಯವರ ಮೇಲೆ ನಿಮ್ಮ ಹಿಡಿತವನ್ನು ಸಾಧಿಸಬೇಡಿ
- ಉದ್ಯೋಗದಲ್ಲಿ ಅನುಕೂಲ ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವ ಯೋಗವಿದೆ
- ನಿಮ್ಮ ಆಸಕ್ತಿಗನುಗುಣವಾಗಿ ಕೆಲಸದ ಆಯ್ಕೆ ಮಾಡಿಕೊಳ್ಳಿ
- ಅನಗತ್ಯ ತಿರುಗಾಟ ಬೇಡ, ನೀರಿನಿಂದ ದೂರವಿರಿ
- ನದಿಯ ಸಮೀಪ, ಸಮುದ್ರದ ಸಮೀಪಕ್ಕೆ ಹೋಗಬೇಡಿ
- ದುರ್ಗಾದೇವಿ ಪ್ರಾರ್ಥನೆ ಮಾಡಿ
ಮೀನ
- ಕುಟುಂಬದಲ್ಲ್ಲಿ ಎಲ್ಲರ ಮನಸ್ಥಿತಿ ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಬೇರೆಯವರ ವಾಹನದಲ್ಲಿ ಪ್ರಯಾಣ ಮಾಡಬೇಡಿ
- ಆದರೆ ಗೊತ್ತಿಲ್ಲದೆ ತಾವೇ ಮಾಡಿಕೊಂಡ ತಪ್ಪಿನಿಂದ ತೊಂದರೆಯಿದೆ ಎಚ್ಚರಿಕೆ ಇರಲಿ
- ಸ್ನೇಹಿತರೊಂದಿಗೆ ಕಾಲ ಕಳೆಯುತ್ತೀರಿ
- ಇಂದು ವಾಹನ ಸವಾರರು ಎಚ್ಚರಿಕೆಯಿಂದಿರಿ
- ಅಪಾಂಪತಿಯನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ