ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಅವಿವಾಹಿತರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಪರಸ್ಪರ ಭಿನ್ನಾಭಿಪ್ರಾಯ ಬರಬಹುದು, ಮಾತು ಮೃದುವಾಗಿರಲಿ
  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
  • ನಿಮ್ಮ ಸಂಗಾತಿಗೆ ಆಶ್ಚರ್ಯಕರ ಉಡುಗೊರೆ ಕೊಟ್ಟು ಸಂತೋಷಪಡಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಇಂದು ಸ್ವಲ್ಪ ದುರ್ಬಲವಾದ ದಿನ
  • ಇಂದು ಪತಿ-ಪತ್ನಿಯರ ಮಧ್ಯೆ ಉತ್ತಮ ಬಾಂಧವ್ಯ
  • ಇವತ್ತು ಯಾರನ್ನೂ ಅತಿಯಾಗಿ ನಂಬಬೇಡಿ
  • ಇಂದು ಅನಗತ್ಯ ಕೆಲಸಗಳಿಂದ ದೂರವಿರಿ
  • ನಿಮಗಿರುವ ಪ್ರತಿಭೆಯನ್ನ ಜನ ಇಂದು ಗುರುತಿಸುತ್ತಾರೆ
  • ಪರಸ್ಪರ ಭಿನ್ನಾಭಿಪ್ರಾಯ ಬರಬಹುದು, ಮಾತು ಮೃದುವಾಗಿರಲಿ
  • ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸದ ವಿಚಾರದಲ್ಲಿ ಶುಭ ಸುದ್ದಿ ಬರುತ್ತದೆ
  • ಆಸ್ತಿಯ ಖರೀದಿ ವಿಚಾರದಲ್ಲಿ ಮನಸ್ಸಿಗೆ ಸಮಾಧಾನ ಸಿಗುತ್ತದೆ
  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ
  • ನೇರವಾಗಿ ಮಾತನಾಡಿ ನಿಷ್ಠೂರಕ್ಕೆ ಗುರಿಯಾಗುತ್ತೀರಿ
  • ಪ್ರೇಮಿಗಳ ವಿಚಾರದಲ್ಲಿ ನಿರಾಸೆಯಾಗಬಹುದು
  • ವಾಹನ ಚಾಲನೆ ಮಾಡುವಾಗ ಜಾಗ್ರತೆವಹಿಸಿ
  • ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ

ಮಿಥುನ

publive-image

  • ನಿಮ್ಮ ಸಂಗಾತಿಗೆ ಆಶ್ಚರ್ಯಕರ ಉಡುಗೊರೆ ಕೊಟ್ಟು ಸಂತೋಷಪಡಿಸಿ
  • ನಿಮಗಿರುವ ಧಾರ್ಮಿಕ ಭಾವನೆಯನ್ನು ಹೆಚ್ಚಿಸಿಕೊಳ್ಳಿ
  • ಇಂದು ತುಂಬಾ ಕಾರ್ಯ ಒತ್ತಡಕ್ಕೆ ಸಿಲುಕುತ್ತೀರಿ
  • ಗುರಿ ಮುಟ್ಟುವುದೇ ನಿಮ್ಮ ಮೂಲ ಉದ್ದೇಶ ಆಗಿರುತ್ತದೆ
  • ಷೇರು ವ್ಯವಹಾರವನ್ನು ಬೆಳಗ್ಗೆ ರಾಹುಕಾಲ ಕಳೆದ ನಂತರ ಮಾಡಿದರೆ ಒಳ್ಳೆಯದು

ಕಟಕ

publive-image

  • ಇಂದು ನಿರುದ್ಯೋಗಿಗಳಿಗೆ ಶುಭ ಸುದ್ದಿ
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು
  • ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭವಾಗುವ ಸೂಚನೆಯಿದೆ
  • ಬೇರೆಯವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
  • ಗೋದರ್ಶನ ಮಾಡಿ

ಸಿಂಹ

publive-image

  • ಇಂದಿನ ಕೆಲಸ ಕಾರ್ಯಗಳು ನಿಮ್ಮ ಚುರುಕುತನಕ್ಕೆ ತಕ್ಕಂತೆ ಆಗುವುದಿಲ್ಲ
  • ಉದ್ಯೋಗದಲ್ಲಿ ಸ್ವಲ್ಪ ಅಡಚಣೆ ಸಾಧ್ಯತೆ ಇದೆ
  • ಸರ್ಕಾರಿ ಕೆಲಸಗಳಿಂದ ಮನಸ್ಸಿಗೆ ಸಮಾಧಾನ
  • ಹೊಸ ವಿಷಯ ಕಲಿಯಲು ಉತ್ಸುಕರಾಗಿರುತ್ತೀರಿ
  • ಆದರೆ ಸರಿಯಾದ ವಾತಾವರಣ ಇರುವುದಿಲ್ಲ
  • ಉತ್ತಮ ಕಾರ್ಯಗಳಿಗಾಗಿ ಪ್ರಯಾಣ
  • ಆಸ್ತಿ ವಿವಾದಗಳಿದ್ದರೆ ಬಗೆ ಹರಿಯುವ ಸಾಧ್ಯತೆ
  • ಶ್ರೀ ಕೃಷ್ಣನನ್ನು ಪ್ರಾರ್ಥಿಸಿ

ಕನ್ಯಾ

publive-image

  • ನಿಮ್ಮ ಏಕಾಗ್ರತೆಗೆ ಅಡ್ಡಿಯಾಗುವ ಪ್ರಸಂಗಗಳೇ ಹೆಚ್ಚು
  • ತಾಯಿ, ಅಜ್ಜಿಯ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಪ್ರಗತಿ ಕಾಣುತ್ತೀರಿ
  • ಮಾಡಿದ ಕೆಲಸವು ಸರಿಯಾಗದೆ ಮತ್ತೆ ಮಾಡಬೇಕಾಗಬಹುದು
  • ಸಂಗೀತ ಆಸಕ್ತರಿಗೆ ಉತ್ತಮವಾದ ದಿನ
  • ನಿಮ್ಮ ಕಾರ್ಯಗಳಿಗೆ ಕುಟುಂಬದವರ ಸಹಕಾರ ಪೂರ್ಣವಾಗಿ ಸಿಗುತ್ತದೆ
  • ರಾಹುಕಾಲ ಗಮನಿಸಿ ಪ್ರಯಾಣ ಮಾಡಿ

ತುಲಾ

publive-image

  • ರಹಸ್ಯ ಶತ್ರುಗಳ ಬಗ್ಗೆ ಹೆಚ್ಚು ಗಮನವಿರಲಿ
  • ಅವರು ಯಾವುದೇ ಕ್ಷಣದಲ್ಲಿ ನಿಮಗೆ ತೊಂದರೆ ಮಾಡಬಹುದು
  • ಮದುವೆಯೇ ಮೊದಲಾದ ಶುಭ ಕೆಲಸಗಳ ವಿಚಾರದಲ್ಲಿ ಮನೆಯಲ್ಲಿ ಪ್ರಸ್ತಾಪವಾಗಿ ಎಲ್ಲರೂ ಸಂಭ್ರಮಿಸುವ ವಾತಾವರಣ ಇರುತ್ತದೆ
  • ವೈವಾಹಿಕ ವಿಚಾರದಲ್ಲಿರುವವರಿಗೆ ಉತ್ತಮ ಫಲಿತಾಂಶ
  • ಶೂಲಿನೀ ದುರ್ಗಾದೇವಿ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಹಳೆಯ ಸ್ನೇಹಿತರ ಭೇಟಿಯಿಂದ ಮುಖ್ಯ ವಿಷಯಗಳ ಚರ್ಚೆಯಾಗುತ್ತದೆ
  • ಬರಹಗಾರರಾಗಿದ್ದರೆ ದಿನ ಚೆನ್ನಾಗಿದೆ
  • ಇಂದು ಸಮಯ ವ್ಯರ್ಥ ಮಾಡಬೇಡಿ
  • ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶವಿದೆ
  • ಕುಲದೇವತೆಯನ್ನ ಆರಾಧನೆ ಮಾಡಿ

ಧನಸ್ಸು

publive-image

  • ಹಣಕಾಸಿನ ಲಾಭದಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ
  • ದುರಾಸೆಯಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು
  • ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸದ ನೀವೇ ಮಾಡಿ
  • ಸಣ್ಣ ತೊಂದರೆಗಳ ನಂತರ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ
  • ಇಂದು ಬೇರೆಯವರಿಗೆ ಹಣ ನೀಡುವಾಗ ಎಚ್ಚರಿಕೆ ಇರಲಿ
  • ದತ್ತಾತ್ರೇಯನನ್ನು ಆರಾಧಿಸಿ

ಮಕರ

publive-image

  • ಜೀವನಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ ಎಂಬ ಮನದಾಳದ ಮಾತು ನಿಮ್ಮ ಆತ್ಮಸ್ಥೈರ್ಯಕ್ಕೆ ಸಾಕ್ಷಿಯಾಗುತ್ತದೆ
  • ಹೊಸ ಹೊಸ ಆದಾಯದ ಮೂಲಗಳು ಸಿಗುತ್ತವೆ
  • ಮನೆಯಲ್ಲಿ ನಿಮ್ಮ ಮಾತೇ ಮುಖ್ಯವಾಗುತ್ತದೆ
  • ನಿಮ್ಮ ಜೊತೆ ಕೆಲಸ ಮಾಡುವವರ ಬಗ್ಗೆ ವಿಶ್ವಾಸ ಉಳಿಸಿಕೊಳ್ಳಿ
  • ಮುಂದೆ ಅವರಿಂದ ನಿಮ್ಮ ಕಾರ್ಯಕ್ಕೆ ಸಹಕಾರಿಯಾಗಬಹುದು
  • ಕುಲದೇವತೆ ಹಾಗೂ ಗುರುಗಳನ್ನ ಆರಾಧಿಸಿ

ಕುಂಭ

publive-image

  • ಬೇರೆಯವರ ಮೇಲೆ ನಿಮ್ಮ ಹಿಡಿತವನ್ನು ಸಾಧಿಸಬೇಡಿ
  • ಉದ್ಯೋಗದಲ್ಲಿ ಅನುಕೂಲ ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವಣೆಯಾಗುವ ಯೋಗವಿದೆ
  • ನಿಮ್ಮ ಆಸಕ್ತಿಗನುಗುಣವಾಗಿ ಕೆಲಸದ ಆಯ್ಕೆ ಮಾಡಿಕೊಳ್ಳಿ
  • ಅನಗತ್ಯ ತಿರುಗಾಟ ಬೇಡ, ನೀರಿನಿಂದ ದೂರವಿರಿ
  • ನದಿಯ ಸಮೀಪ, ಸಮುದ್ರದ ಸಮೀಪಕ್ಕೆ ಹೋಗಬೇಡಿ
  • ದುರ್ಗಾದೇವಿ ಪ್ರಾರ್ಥನೆ ಮಾಡಿ

ಮೀನ 

publive-image

  • ಕುಟುಂಬದಲ್ಲ್ಲಿ ಎಲ್ಲರ ಮನಸ್ಥಿತಿ ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಬೇರೆಯವರ ವಾಹನದಲ್ಲಿ ಪ್ರಯಾಣ ಮಾಡಬೇಡಿ
  • ಆದರೆ ಗೊತ್ತಿಲ್ಲದೆ ತಾವೇ ಮಾಡಿಕೊಂಡ ತಪ್ಪಿನಿಂದ ತೊಂದರೆಯಿದೆ ಎಚ್ಚರಿಕೆ ಇರಲಿ
  • ಸ್ನೇಹಿತರೊಂದಿಗೆ ಕಾಲ ಕಳೆಯುತ್ತೀರಿ
  • ಇಂದು ವಾಹನ ಸವಾರರು ಎಚ್ಚರಿಕೆಯಿಂದಿರಿ
  • ಅಪಾಂಪತಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment