/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ವಾಹನ ಖರೀದಿ ಬಗ್ಗೆ ಯೋಚನೆ ಇದ್ದರೆ ಕೆಲ ದಿನ ಮುಂದಕ್ಕೆ ಹಾಕಿ
- ಕುಟುಂಬದಲ್ಲಿ ಅನೇಕ ಕಾರ್ಯಗಳ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬರುತ್ತವೆ
- ಹಣದ ಸಾಲ ನಿಮಗೆ ಅನಿವಾರ್ಯವಾಗುವ ಸಾಧ್ಯತೆ ಇದೆ
- ಈ ದಿನ ಮಕ್ಕಳು ಮಾಮೂಲಿಯಂತೆ ಇರುವುದಿಲ್ಲ
- ವಯಸ್ಸಾದವರು ಬೀಳುವುದಾಗಲಿ ಅಥವಾ ಅವರ ಆರೋಗ್ಯದಲ್ಲಿ ಏರುಪೇರಾಗಬಹುದು
- ಇಂದು ನಿಮಗೆ ಸಂಪೂರ್ಣ ಒತ್ತಡದ ದಿನ
- ಶರಭೇಶ್ವರನನ್ನು ಪ್ರಾರ್ಥಿಸಿ
ವೃಷಭ
- ಮಕ್ಕಳ ಅವಶ್ಯಕ ಪೂರೈಕೆ ನಿಮ್ಮನ್ನು ಕಾಡುತ್ತದೆ
- ದೊಡ್ಡ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಬರಬಹುದು
- ಮನೆಯಲ್ಲಿ ಭಯದ ವಾತಾವರಣ ಇರುತ್ತದೆ
- ವಿನಾಕಾರಣ ಕೆಲಸಕ್ಕೆ ಗೈರಾಗುವ ಸಾಧ್ಯತೆಗಳಿವೆ
- ಮನೆಯ ಹೊರಗಡೆಯೂ ನಿಮಗೆ ಉತ್ತಮ ವಾತಾವರಣ ಇದೆ ಅನ್ನಿಸುವುದಿಲ್ಲ
- ನಿಮ್ಮ ಕೆಲಸದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗುವ ಸಾಧ್ಯತೆ ಇದೆ
- ಕ್ಷೇತ್ರದ ಹರಕೆ ಬಾಕಿ ಇದ್ದರೆ ಆದಷ್ಟು ಬೇಗ ತೀರಿಸಿ
ಮಿಥುನ
- ಇಂದು ನಿಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಗಮನವಿರಲಿ
- ಒಟ್ಟಾರೆ ಇಂದು ನಿಮಗೆ ಅಶುಭ ದಿನ
- ನೀವು ಮಾಡಿದ ತಪ್ಪಿನಿಂದ ಸ್ಥಳ ಬದಲಾವಣೆ ಸಾಧ್ಯತೆ ಇದೆ
- ಉತ್ತಮ ಸ್ಪಂದನೆ ಸಿಗುವುದರಿಂದ ಮನೋಬಲ ಹೆಚ್ಚಾಗುತ್ತದೆ
- ಬೇರೆಯವರಿಗೆ ದಾನ, ಸಹಾಯ ಮಾಡುವ ಯೋಗವಿದೆ
- ಚಿಂತಾಮಣಿ ಗಣಪತಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಕಾರ್ಯಕ್ಷೇತ್ರಗಳಲ್ಲಿ ಕಾರ್ಯ ಪೂರ್ತಿ ಮಾಡಬೇಕೆಂಬ ಒತ್ತಡ ಇರಬಹುದು
- ಹೊರಗಿನ ವ್ಯಕ್ತಿಗಳಿಂದ ಉದ್ಯೋಗ, ವ್ಯವಹಾರದಲ್ಲಿ ಸಹಾಯ ಸಿಗುತ್ತದೆ
- ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಅಡೆತಡೆಗಳಿದ್ದರೆ ಅದು ನಿವಾರಣೆಯಾಗುತ್ತದೆ
- ಕಾಣೆಯಾಗಿರುವ ವಸ್ತು ಇಂದು ಸಿಗುವ ಸಾಧ್ಯತೆ ಇದೆ
- ಕೆಲ ದಿನಗಳಿಂದ ಇದ್ದ ಸಮಸ್ಯೆ ಇಂದು ಬಗೆಹರಿಯುತ್ತದೆ
ಸಿಂಹ
- ಉದ್ಯೋಗದಲ್ಲಿ ನಿಮ್ಮ ಕಾರ್ಯ ವೈಖರಿ ಚೆನ್ನಾಗಿರುತ್ತದೆ
- ನಿಮ್ಮ ವ್ಯಾಪಾರೀ ಬುದ್ಧಿಯಿಂದ ಹಲವರಿಗೆ ಬೇಸರವಾಗುವ ಸಾಧ್ಯತೆ ಇದೆ
- ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಣಬಹುದು ಸ್ವಲ್ಪ ಎಚ್ಚರವಹಿಸಿ
- ಪ್ರೇಮ ವಿಚಾರವನ್ನು ಮುಚ್ಚಿಟ್ಟು ಮುಂದೆ ತೊಂದರೆಯಾಗಬಹುದು
- ದೇವಿಯನ್ನು ಪಾರ್ಥನೆ ಮಾಡಿ
ಕನ್ಯಾ
- ಇಂದು ಮನೆಯಲ್ಲಿ ಅಶಾಂತಿಯ ವಾತಾವರಣ ಸಾಧ್ಯತೆ
- ವಿದ್ಯಾರ್ಥಿಗಳಿಗೆ ತಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ
- ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ಇರಲಿ
- ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ
ತುಲಾ
- ಮನೆಯಲ್ಲಿ ಮಂಗಳ ಕಾರ್ಯ ವಿಚಾರದಿಂದ ಸಂತೋಷದ ವಾತಾವರಣ ಇರುತ್ತದೆ
- ಇಂದು ನೀವು ಎಲ್ಲಾ ಕಾರ್ಯ ನಡೆಸಲು ಸಮರ್ಥರಾಗಿರುತ್ತೀರಿ
- ನಯವಾದ ಮಾತಿನಿಂದಲೇ ಅವರನ್ನು ದೂರಮಾಡಿ
- ಇಂದು ಕುಟುಂಬದವರೊಂದಿಗೆ ಸಂತೋಷದ ವಾತಾವರಣ ಇರುತ್ತದೆ
- ಮಾತಿನಿಂದಲೇ ನಿಮಗೆ ಇಂದು ನೆಮ್ಮದಿ ಸಿಗುತ್ತದೆ
- ಅಯ್ಯಪ್ಪ ಸ್ವಾಮಿಯನ್ನು ದರ್ಶನ ಮಾಡಿ
ವೃಶ್ಚಿಕ
- ಮಧುಮೇಹ ರೋಗವಿರುವವರು ಹೆಚ್ಚಿನ ಜಾಗ್ರತೆವಹಿಸಿ
- ನಿಮ್ಮ ಹಳೆಯ ವಿರೋಧಗಳಿಂದ ಮಂಗಳ ಕಾರ್ಯಗಳಿಗೆ ತೊಂದರೆ ಸಾಧ್ಯತೆ
- ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಹಿ ಸುದ್ದಿ ಸಿಗುತ್ತದೆ
- ಆತ್ಮವಿಶ್ವಾಸವು ನಿಮ್ಮೆಲ್ಲಾ ಕೆಲಸಗಳನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ
- ವಿರೋಧಿಗಳ ಜೊತೆ ವಾದ-ವಿವಾದಗಳು ಬೇಡ
- ಹಿರಿಯರ ಆಶೀರ್ವಾದ ಪಡೆಯಿರಿ
ಧನಸ್ಸು
- ಕೆಲಸವನ್ನು ಕಳೆದುಕೊಳ್ಳುವ ಭಯ ಕೂಡ ಕಾಡುತ್ತದೆ
- ವ್ಯಾಪಾರದಾರರು ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಬಹುದು
- ಯಾವುದೇ ರೀತಿಯ ವಾದ-ವಿವಾದ ಮಾಡಬೇಡಿ
- ಖಾಸಗಿ ಕ್ಷೇತ್ರದಲ್ಲಿರುವ ನೌಕರರಿಗೆ ಇಂದು ಸಿಹಿ ಸುದ್ದಿ ಸಾಧ್ಯತೆ
- ನಿಮ್ಮೆಲ್ಲಾ ಹಳೆಯ ಕೆಲಸಗಳು ಇಂದು ಪೂರ್ಣವಾಗುತ್ತವೆ
- ಇಂದು ಉತ್ತಮವಾದ ದಿನ
ಮಕರ
- ಇಂದು ಉದ್ಯೋಗದಲ್ಲಿ ಅಸ್ಥಿರತೆ ಕಾಡುತ್ತದೆ
- ಉದ್ಯೋಗ ಸಂಬಂಧಿ ವಿಚಾರದಲ್ಲಿ ಸಮಾಧಾನವಿರುವುದಿಲ್ಲ
- ಇಂದು ಉತ್ತಮವಾದ ಭೋಜನ ಮಾಡುವ ಯೋಗವಿರುತ್ತದೆ
- ಇಂದು ಸಹೋದ್ಯೋಗಿಗಳ ಜೊತೆಗಿನ ಭಿನ್ನಾಭಿಪ್ರಾಯ ದೂರವಾಗುತ್ತದೆ
- ಸಂಜೆ ಸಮಯದಲ್ಲಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳನ್ನು ಭೇಟಿ ಮಾಡಿ
- ಕಾಲಭೈರವಾಯ ನಮಃ ಎಂದು 11 ಬಾರಿ ಪ್ರಾರ್ಥನೆ ಮಾಡಿ
ಕುಂಭ
- ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ
- ಇಂದು ಯಾವುದೇ ಆತಂಕಗಳಿಲ್ಲದೆ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ
- ನಿಮ್ಮ ಕೋಪ ನಿಮ್ಮನ್ನು ಏಕಾಂಗಿಯನ್ನಾಗಿ ಮಾಡಬಹುದು
- ಸಿಟ್ಟಿನಿಂದಲೇ ಇಂದು ತೊಂದರೆಯಾಗುವ ಸಾಧ್ಯತೆ ಇದೆ
- ಬೆಂಕಿಯಿಂದ ಸ್ವಲ್ಪ ಅನಾಹುತ ಸಾಧ್ಯತೆ, ಜಾಗ್ರತೆ ಇರಲಿ ಭಯಬೇಡ
- ಈಶ್ವರ ಆರಾಧನೆ ಮಾಡಿ, ಬಿಲ್ವಪತ್ರೆ ಗಿಡವನ್ನು ದಾನ ಮಾಡಿ
ಮೀನ
- ಇಂದು ನಿಮ್ಮ ಮನೆಯ ಸದಸ್ಯರನ್ನು ಅವಮಾನಿಸಬೇಡಿ
- ಮನೆಯಲ್ಲಿ ಅಥವಾ ಕೆಲಸಕ್ಕೆ ಹೋದಾಗ ಬೆಂಕಿ ಮತ್ತು ನೀರಿನ ಬಗ್ಗೆ ಜಾಗ್ರತೆವಹಿಸಿ
- ನಿಮ್ಮ ಕೋಪ ನಿಮ್ಮ ನಿಯಂತ್ರಣದಲ್ಲಿರಲಿ
- ಇಂದು ಎಲ್ಲಾ ಮುಗಿದ ಮೇಲೆ ಪಶ್ಚಾತ್ತಾಪ ಪಡುತ್ತೀರಿ
- ತಾಪಸಮನ್ಯುವನ್ನು ಸ್ಮರಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ