ದೂರದ ಪ್ರಯಾಣದಿಂದ ತೊಂದರೆ, ಈ ರಾಶಿಗೆ ಅಧಿಕ ಲಾಭ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ವಾಹನ ಖರೀದಿ ಬಗ್ಗೆ ಯೋಚನೆ ಇದ್ದರೆ ಕೆಲ ದಿನ ಮುಂದಕ್ಕೆ ಹಾಕಿ
  • ನೀವು ಮಾಡಿದ ತಪ್ಪಿನಿಂದ ಸ್ಥಳ ಬದಲಾವಣೆ ಸಾಧ್ಯತೆ ಇದೆ
  • ಉದ್ಯೋಗದಲ್ಲಿ ನಿಮ್ಮ ಕಾರ್ಯ ವೈಖರಿ ಚೆನ್ನಾಗಿರುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ವಾಹನ ಖರೀದಿ ಬಗ್ಗೆ ಯೋಚನೆ ಇದ್ದರೆ ಕೆಲ ದಿನ ಮುಂದಕ್ಕೆ ಹಾಕಿ
  • ಕುಟುಂಬದಲ್ಲಿ ಅನೇಕ ಕಾರ್ಯಗಳ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬರುತ್ತವೆ
  • ಹಣದ ಸಾಲ ನಿಮಗೆ ಅನಿವಾರ್ಯವಾಗುವ ಸಾಧ್ಯತೆ ಇದೆ
  • ಈ ದಿನ ಮಕ್ಕಳು ಮಾಮೂಲಿಯಂತೆ ಇರುವುದಿಲ್ಲ
  • ವಯಸ್ಸಾದವರು ಬೀಳುವುದಾಗಲಿ ಅಥವಾ ಅವರ ಆರೋಗ್ಯದಲ್ಲಿ ಏರುಪೇರಾಗಬಹುದು
  • ಇಂದು ನಿಮಗೆ ಸಂಪೂರ್ಣ ಒತ್ತಡದ ದಿನ
  • ಶರಭೇಶ್ವರನನ್ನು ಪ್ರಾರ್ಥಿಸಿ

ವೃಷಭ

publive-image

  • ಮಕ್ಕಳ ಅವಶ್ಯಕ ಪೂರೈಕೆ ನಿಮ್ಮನ್ನು ಕಾಡುತ್ತದೆ
  • ದೊಡ್ಡ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಬರಬಹುದು
  • ಮನೆಯಲ್ಲಿ ಭಯದ ವಾತಾವರಣ ಇರುತ್ತದೆ
  • ವಿನಾಕಾರಣ ಕೆಲಸಕ್ಕೆ ಗೈರಾಗುವ ಸಾಧ್ಯತೆಗಳಿವೆ
  • ಮನೆಯ ಹೊರಗಡೆಯೂ ನಿಮಗೆ ಉತ್ತಮ ವಾತಾವರಣ ಇದೆ ಅನ್ನಿಸುವುದಿಲ್ಲ
  • ನಿಮ್ಮ ಕೆಲಸದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗುವ ಸಾಧ್ಯತೆ ಇದೆ
  • ಕ್ಷೇತ್ರದ ಹರಕೆ ಬಾಕಿ ಇದ್ದರೆ ಆದಷ್ಟು ಬೇಗ ತೀರಿಸಿ

ಮಿಥುನ

publive-image

  • ಇಂದು ನಿಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಗಮನವಿರಲಿ
  • ಒಟ್ಟಾರೆ ಇಂದು ನಿಮಗೆ ಅಶುಭ ದಿನ
  • ನೀವು ಮಾಡಿದ ತಪ್ಪಿನಿಂದ ಸ್ಥಳ ಬದಲಾವಣೆ ಸಾಧ್ಯತೆ ಇದೆ
  • ಉತ್ತಮ ಸ್ಪಂದನೆ ಸಿಗುವುದರಿಂದ ಮನೋಬಲ ಹೆಚ್ಚಾಗುತ್ತದೆ
  • ಬೇರೆಯವರಿಗೆ ದಾನ, ಸಹಾಯ ಮಾಡುವ ಯೋಗವಿದೆ
  • ಚಿಂತಾಮಣಿ ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಕಾರ್ಯಕ್ಷೇತ್ರಗಳಲ್ಲಿ ಕಾರ್ಯ ಪೂರ್ತಿ ಮಾಡಬೇಕೆಂಬ ಒತ್ತಡ ಇರಬಹುದು
  • ಹೊರಗಿನ ವ್ಯಕ್ತಿಗಳಿಂದ ಉದ್ಯೋಗ, ವ್ಯವಹಾರದಲ್ಲಿ ಸಹಾಯ ಸಿಗುತ್ತದೆ
  • ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಅಡೆತಡೆಗಳಿದ್ದರೆ ಅದು ನಿವಾರಣೆಯಾಗುತ್ತದೆ
  • ಕಾಣೆಯಾಗಿರುವ ವಸ್ತು ಇಂದು ಸಿಗುವ ಸಾಧ್ಯತೆ ಇದೆ
  • ಕೆಲ ದಿನಗಳಿಂದ ಇದ್ದ ಸಮಸ್ಯೆ ಇಂದು ಬಗೆಹರಿಯುತ್ತದೆ

ಸಿಂಹ

publive-image

  • ಉದ್ಯೋಗದಲ್ಲಿ ನಿಮ್ಮ ಕಾರ್ಯ ವೈಖರಿ ಚೆನ್ನಾಗಿರುತ್ತದೆ
  • ನಿಮ್ಮ ವ್ಯಾಪಾರೀ ಬುದ್ಧಿಯಿಂದ ಹಲವರಿಗೆ ಬೇಸರವಾಗುವ ಸಾಧ್ಯತೆ ಇದೆ
  • ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಣಬಹುದು ಸ್ವಲ್ಪ ಎಚ್ಚರವಹಿಸಿ
  • ಪ್ರೇಮ ವಿಚಾರವನ್ನು ಮುಚ್ಚಿಟ್ಟು ಮುಂದೆ ತೊಂದರೆಯಾಗಬಹುದು
  • ದೇವಿಯನ್ನು ಪಾರ್ಥನೆ ಮಾಡಿ

ಕನ್ಯಾ

publive-image

  • ಇಂದು ಮನೆಯಲ್ಲಿ ಅಶಾಂತಿಯ ವಾತಾವರಣ ಸಾಧ್ಯತೆ
  • ವಿದ್ಯಾರ್ಥಿಗಳಿಗೆ ತಮ್ಮ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ
  • ಕಾನೂನಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ಇರಲಿ
  • ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ

ತುಲಾ

publive-image

  • ಮನೆಯಲ್ಲಿ ಮಂಗಳ ಕಾರ್ಯ ವಿಚಾರದಿಂದ ಸಂತೋಷದ ವಾತಾವರಣ ಇರುತ್ತದೆ
  • ಇಂದು ನೀವು ಎಲ್ಲಾ ಕಾರ್ಯ ನಡೆಸಲು ಸಮರ್ಥರಾಗಿರುತ್ತೀರಿ
  • ನಯವಾದ ಮಾತಿನಿಂದಲೇ ಅವರನ್ನು ದೂರಮಾಡಿ
  • ಇಂದು ಕುಟುಂಬದವರೊಂದಿಗೆ ಸಂತೋಷದ ವಾತಾವರಣ ಇರುತ್ತದೆ
  • ಮಾತಿನಿಂದಲೇ ನಿಮಗೆ ಇಂದು ನೆಮ್ಮದಿ ಸಿಗುತ್ತದೆ
  • ಅಯ್ಯಪ್ಪ ಸ್ವಾಮಿಯನ್ನು ದರ್ಶನ ಮಾಡಿ

ವೃಶ್ಚಿಕ

publive-image

  • ಮಧುಮೇಹ ರೋಗವಿರುವವರು ಹೆಚ್ಚಿನ ಜಾಗ್ರತೆವಹಿಸಿ
  • ನಿಮ್ಮ ಹಳೆಯ ವಿರೋಧಗಳಿಂದ ಮಂಗಳ ಕಾರ್ಯಗಳಿಗೆ ತೊಂದರೆ ಸಾಧ್ಯತೆ
  • ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಹಿ ಸುದ್ದಿ ಸಿಗುತ್ತದೆ
  • ಆತ್ಮವಿಶ್ವಾಸವು ನಿಮ್ಮೆಲ್ಲಾ ಕೆಲಸಗಳನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ
  • ವಿರೋಧಿಗಳ ಜೊತೆ ವಾದ-ವಿವಾದಗಳು ಬೇಡ
  • ಹಿರಿಯರ ಆಶೀರ್ವಾದ ಪಡೆಯಿರಿ

ಧನಸ್ಸು

publive-image

  • ಕೆಲಸವನ್ನು ಕಳೆದುಕೊಳ್ಳುವ ಭಯ ಕೂಡ ಕಾಡುತ್ತದೆ
  • ವ್ಯಾಪಾರದಾರರು ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಬಹುದು
  • ಯಾವುದೇ ರೀತಿಯ ವಾದ-ವಿವಾದ ಮಾಡಬೇಡಿ
  • ಖಾಸಗಿ ಕ್ಷೇತ್ರದಲ್ಲಿರುವ ನೌಕರರಿಗೆ ಇಂದು ಸಿಹಿ ಸುದ್ದಿ ಸಾಧ್ಯತೆ
  • ನಿಮ್ಮೆಲ್ಲಾ ಹಳೆಯ ಕೆಲಸಗಳು ಇಂದು ಪೂರ್ಣವಾಗುತ್ತವೆ
  • ಇಂದು ಉತ್ತಮವಾದ ದಿನ

ಮಕರ

publive-image

  • ಇಂದು ಉದ್ಯೋಗದಲ್ಲಿ ಅಸ್ಥಿರತೆ ಕಾಡುತ್ತದೆ
  • ಉದ್ಯೋಗ ಸಂಬಂಧಿ ವಿಚಾರದಲ್ಲಿ ಸಮಾಧಾನವಿರುವುದಿಲ್ಲ
  • ಇಂದು ಉತ್ತಮವಾದ ಭೋಜನ ಮಾಡುವ ಯೋಗವಿರುತ್ತದೆ
  • ಇಂದು ಸಹೋದ್ಯೋಗಿಗಳ ಜೊತೆಗಿನ ಭಿನ್ನಾಭಿಪ್ರಾಯ ದೂರವಾಗುತ್ತದೆ
  • ಸಂಜೆ ಸಮಯದಲ್ಲಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳನ್ನು ಭೇಟಿ ಮಾಡಿ
  • ಕಾಲಭೈರವಾಯ ನಮಃ ಎಂದು 11 ಬಾರಿ ಪ್ರಾರ್ಥನೆ ಮಾಡಿ

ಕುಂಭ

publive-image

  • ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ
  • ಇಂದು ಯಾವುದೇ ಆತಂಕಗಳಿಲ್ಲದೆ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತವೆ
  • ನಿಮ್ಮ ಕೋಪ ನಿಮ್ಮನ್ನು ಏಕಾಂಗಿಯನ್ನಾಗಿ ಮಾಡಬಹುದು
  • ಸಿಟ್ಟಿನಿಂದಲೇ ಇಂದು ತೊಂದರೆಯಾಗುವ ಸಾಧ್ಯತೆ ಇದೆ
  • ಬೆಂಕಿಯಿಂದ ಸ್ವಲ್ಪ ಅನಾಹುತ ಸಾಧ್ಯತೆ, ಜಾಗ್ರತೆ ಇರಲಿ ಭಯಬೇಡ
  • ಈಶ್ವರ ಆರಾಧನೆ ಮಾಡಿ, ಬಿಲ್ವಪತ್ರೆ ಗಿಡವನ್ನು ದಾನ ಮಾಡಿ

ಮೀನ 

publive-image

  • ಇಂದು ನಿಮ್ಮ ಮನೆಯ ಸದಸ್ಯರನ್ನು ಅವಮಾನಿಸಬೇಡಿ
  • ಮನೆಯಲ್ಲಿ ಅಥವಾ ಕೆಲಸಕ್ಕೆ ಹೋದಾಗ ಬೆಂಕಿ ಮತ್ತು ನೀರಿನ ಬಗ್ಗೆ ಜಾಗ್ರತೆವಹಿಸಿ
  • ನಿಮ್ಮ ಕೋಪ ನಿಮ್ಮ ನಿಯಂತ್ರಣದಲ್ಲಿರಲಿ
  • ಇಂದು ಎಲ್ಲಾ ಮುಗಿದ ಮೇಲೆ ಪಶ್ಚಾತ್ತಾಪ ಪಡುತ್ತೀರಿ
  • ತಾಪಸಮನ್ಯುವನ್ನು ಸ್ಮರಣೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment