/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಕಲಾವಿದರಿಗೆ ಸಮಾಜದಲ್ಲಿ ವಿಶೇಷವಾದ ಮನ್ನಣೆ ಸಿಗುತ್ತದೆ
- ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಫಲವಿಲ್ಲ, ಗೊಂದಲದ ಪರಿಸ್ಥಿತಿ
- ಇಂದು ನಿಮ್ಮ ಮಾತು ಬಹಳ ನಿಯಂತ್ರಣದಲ್ಲಿರಬೇಕು
- ಬಾಕಿ ಇರುವ ಕೆಲಸಗಳು ಇಂದು ಸ್ವಲ್ಪ ನಿಧಾನವಾಗಿ ಪೂರ್ಣಗೊಳ್ಳುತ್ತವೆ
- ಸರ್ಕಾರಿ ನೌಕರರಿಗೆ ಅನುಕೂಲವಾಗುವ ದಿನ
- ವಾಗ್ದೇವತಾ ಆರಾಧನೆ ಮಾಡಿ
ವೃಷಭ
- ನಿಮ್ಮ ವೃತ್ತಿ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ
- ನಿಮ್ಮ ಮಾತಿನಿಂದಲೇ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ
- ಇಂದು ಕೈಗೆ ಬರಬೇಕಾದ ಹಣ ಬರುವುದಿಲ್ಲ
- ಅಷ್ಟಲಕ್ಷ್ಮಿಯನ್ನು ಆರಾಧನೆ ಮಾಡಿ
ಮಿಥುನ
- ಎಲ್ಲಾ ಕಾರ್ಯಗಳಿಗೂ ಕಠಿಣ ಪರಿಶ್ರಮ ಬೇಕಾಗುತ್ತದೆ
- ಚಿತ್ರೋದ್ಯಮದಲ್ಲಿ, ನಾಟಕಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆ
- ಹೊಸದಾಗಿ ಚಿತ್ರೋದ್ಯಮಕ್ಕೆ ಸೇರುವವರಿಗೆ ಅತ್ಯಂತ ಶುಭ ದಿನ
- ವಿಜ್ಞಾನ ವಿಷಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ದಿನ
- ದೊಡ್ಡವರ ಆಶೀರ್ವಾದ ಪಡೆಯಿರಿ
- ಕುಲದೇವತಾ ಆರಾಧನೆ ಮಾಡಿ
ಕಟಕ
- ಈ ದಿನ ನಿಮಗೆ ಅನಾರೋಗ್ಯ ಕಾಡಬಹುದು ತಾತ್ಸಾರ ಮಾಡದೆ ವೈದ್ಯರ ಸಲಹೆ ಪಡೆಯಿರಿ
- ಇಂದು ವಿದ್ಯಾರ್ಥಿಗಳಿಗೆ ಲಾಭದ ದಿನ
- ಸೂಕ್ಷ್ಮ ಕೆಲಸಗಳಲ್ಲಿ ಜಾಗ್ರತೆವಹಿಸಿ, ಎಲ್ಲಾ ರೀತಿಯಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ
- ಶನೈಶ್ಚರನನ್ನು ಪ್ರಾರ್ಥನೆ ಮಾಡಿ
ಸಿಂಹ
- ನಿಮ್ಮ ಆದಾಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ
- ನೀವು ಸಂಕಲ್ಪ ಮಾಡಿದ ಕೆಲಸಗಳಿಗೆ ವಿರೋಧಿಗಳಿಂದ ಅಡ್ಡಿಯಾಗಬಹುದು
- ಇಂದು ನಿಮ್ಮ ಜನಸೇವೆಯ ಕೆಲಸಗಳಿಗೆ ಜನರು ಸ್ಪಂದಿಸುತ್ತಾರೆ
- ಹಿಂದಿನಿಂದ ಕೂಡಿಟ್ಟ ಹಣ ಇವತ್ತು ಹೆಚ್ಚು ಖರ್ಚಾಗುವ ಸಾಧ್ಯತೆ
- ಮೇಧಾದಕ್ಷಿಣಾಮೂರ್ತಿಯ ಪ್ರಾರ್ಥನೆ ಮಾಡಿ
ಕನ್ಯಾ
- ಇಂದು ವಿನಾಕಾರಣ ವಾದ-ವಿವಾದಗಳು ಸೃಷ್ಟಿಯಾಗಬಹುದು
- ಅವರನ್ನು ವಿರೋಧ ಮಾಡಿಕೊಂಡು ಆ ಕೆಲಸ ಸಾಧಿಸಲು ಆಗುವುದಿಲ್ಲ
- ನಿಮ್ಮ ವೈಯ್ಯಕ್ತಿಕ ಕೆಲಸಗಳಲ್ಲಿ ಸ್ವಲ್ಪ ಏರುಪೇರು ಕಾಣಬಹುದು
- ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗುವುದಿಲ್ಲ
- ಲೇವಾದೇವಿ ವ್ಯವಹಾರಗಳಲ್ಲಿ ಸ್ವಲ್ಪ ನಷ್ಟ ಸಂಭವಿಸಬಹುದು
- ಪಾರ್ವತಿ ದೇವಿಯನ್ನು ಆರಾಧನೆ ಮಾಡಿ, ಗೋವಿಗೆ ಅಕ್ಕಿ-ಬೆಲ್ಲ ಕೊಡಿ
ತುಲಾ
- ನಿಮ್ಮ ಆತ್ಮೀಯರ ಮನೆಯಿಂದ ಶುಭ ಸುದ್ದಿ ಬರುತ್ತದೆ
- ಇಂದು ಪ್ರಯಾಣ ಮುಂದೂಡಿದರೆ ಒಳ್ಳೆಯದು
- ಇಂದು ಕೆಲಸ ಕಾರ್ಯಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
- ನೀವು ಬರಹಗಾರರಾಗಿದ್ದರೆ ದೂರದೂರಿಗೆ ಪ್ರಯಾಣ ಮಾಡುತ್ತೀರಿ
- ಇಂದು ಸರಳವಾಗಿ ವರ್ತಿಸಿ ಅಹಂಕಾರ ಬೇಡ
- ಅಶ್ವತ್ಥ ಮರಕ್ಕೆ 12 ಪ್ರದಕ್ಷಿಣೆ ಮಾಡಿ
ವೃಶ್ಚಿಕ
- ಇಂದು ವಾಹನ ಚಾಲನೆಯಿಂದ ನಷ್ಟ ಅನುಭವಿಸಬಹುದು
- ವಾಹನ ಅಪಘಾತ, ವಾಹನ ಕೆಟ್ಟು ಹೋಗಬಹುದು
- ಪ್ರಯಾಣ ಅರ್ಧಕ್ಕೆ ನಿಲ್ಲುವುದರಿಂದ ಕೆಟ್ಟ ಫಲಗಳಿವೆ, ಎಚ್ಚರಿಕೆಯಿಂದಿರಿ
- ಸಮಾಜದಲ್ಲಿ ಗೌರವ ಮನ್ನಣೆ ದೊರೆಯುತ್ತದೆ
- ಗಣಪತಿಯ ಆರಾಧನೆ ಮಾಡಿ
ಧನಸ್ಸು
- ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯ ಇಂದು ತಿರುವು ಪಡೆಯುತ್ತೆ
- ಕೋರ್ಟ್, ಕಚೇರಿಗಳಲ್ಲಿರುವ ಕಾರ್ಯ ಇವತ್ತು ಇತ್ಯರ್ಥ ಆಗುವ ಸೂಚನೆಗಳಿವೆ
- ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಹೆಚ್ಚು ಹಣ ಖರ್ಚಾಗಬಹುದು
- ಮಾತಿನ ಚಕಮಕಿಯಿಂದ ಕೋಪ ಹೆಚ್ಚಾಗಬಹುದು, ಕೋಪ ನಿಯಂತ್ರಣದಲ್ಲಿರಲಿ
- ಮಹಾಲಕ್ಷ್ಮಿ ಸಮೇತ ವರಾಹ ಸ್ವಾಮಿಯನ್ನು ಆರಾಧಿಸಿ, ತುಳಸೀಗಿಡ ದಾನಮಾಡಿ
ಮಕರ
- ಭೂ ವ್ಯವಹಾರ, ರಿಯಲ್ ಎಸ್ಟೇಟ್ ಮಾಡುವವರಿಗೆ ಇಂದು ಧನಲಾಭ
- ಇಂದು ಭೂಮಿ ಖರೀದಿ ಅಥವಾ ಮಾರಾಟ ಬೇಡ
- ನಿಮಗೆ ದೊರೆಯುವ ಹಣ ರಾತ್ರಿಯ ಸಮಯದಲ್ಲಿ ಸಿಗಬಹುದು
- ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳಿ
- ರಾವಣಕೃತ ಶನಿ ಸ್ತೋತ್ರ ಪಠಿಸಿ
ಕುಂಭ
- ಇಂದಿನ ವ್ಯವಹಾರದಲ್ಲಿ ಮೇಲುಗೈ ಸಾಧಿಸುವ ಸೂಚನೆಯಿದೆ
- ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ಹೊಂದಿರುವವರಿಗೆ ಅನುಕೂಲಕರವಾಗಿದೆ
- ಸಮಾಜದ ಮಾನ್ಯತೆಯ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ದಿನ
- ವಾಯುಸ್ತುತಿ ಪಠಣೆ ಮಾಡಿ
ಮೀನ
- ಸಹಕಾರ ಬ್ಯಾಂಕ್ , ಫೈನಾನ್ಸ್ , ಬಡ್ಡಿ ವ್ಯವಹಾರಸ್ಥರಿಗೆ ಶುಭ ದಿನ
- ತಾವು ಮಾಡಿದ ಬ್ಯಾಂಕ್ ಸಾಲ ಇತ್ಯಾದಿಗಳು, ಹೊಸ ವ್ಯವಹಾರದ ಹಾದಿ ಸುಗಮವಾಗಲಿದೆ
- ಇಂದು ಕೆಲಸ ಕಾರ್ಯಗಳಲ್ಲಿ ತುಂಬಾ ವಿಳಂಬ ಸಾಧ್ಯತೆ
- ವ್ಯಾಪರಸ್ಥರಿಗೆ ಗ್ರಾಹಕರಿಂದ ಮೆಚ್ಚುಗೆ ದೊರೆಯುತ್ತದೆ
- ಕನಕದುರ್ಗಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ