ಆದಾಯದಲ್ಲಿ ಏರುಪೇರು ಸಾಧ್ಯತೆ, ಈ ರಾಶಿಯವರು ಅಶ್ವತ್ಥ ಮರಕ್ಕೆ 12 ಪ್ರದಕ್ಷಿಣೆ ಹಾಕಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕಲಾವಿದರಿಗೆ ಸಮಾಜದಲ್ಲಿ ವಿಶೇಷವಾದ ಮನ್ನಣೆ ಸಿಗುತ್ತದೆ
  • ನಿಮ್ಮ ವೃತ್ತಿ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ
  • ಎಲ್ಲಾ ಕಾರ್ಯಗಳಿಗೂ ಕಠಿಣ ಪರಿಶ್ರಮ ಬೇಕಾಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಕಲಾವಿದರಿಗೆ ಸಮಾಜದಲ್ಲಿ ವಿಶೇಷವಾದ ಮನ್ನಣೆ ಸಿಗುತ್ತದೆ
  • ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಫಲವಿಲ್ಲ, ಗೊಂದಲದ ಪರಿಸ್ಥಿತಿ
  • ಇಂದು ನಿಮ್ಮ ಮಾತು ಬಹಳ ನಿಯಂತ್ರಣದಲ್ಲಿರಬೇಕು
  • ಬಾಕಿ ಇರುವ ಕೆಲಸಗಳು ಇಂದು ಸ್ವಲ್ಪ ನಿಧಾನವಾಗಿ ಪೂರ್ಣಗೊಳ್ಳುತ್ತವೆ
  • ಸರ್ಕಾರಿ ನೌಕರರಿಗೆ ಅನುಕೂಲವಾಗುವ ದಿನ
  • ವಾಗ್ದೇವತಾ ಆರಾಧನೆ ಮಾಡಿ

ವೃಷಭ

publive-image

  • ನಿಮ್ಮ ವೃತ್ತಿ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ
  • ನಿಮ್ಮ ಮಾತಿನಿಂದಲೇ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ
  • ಇಂದು ಕೈಗೆ ಬರಬೇಕಾದ ಹಣ ಬರುವುದಿಲ್ಲ
  • ಅಷ್ಟಲಕ್ಷ್ಮಿಯನ್ನು ಆರಾಧನೆ ಮಾಡಿ

ಮಿಥುನ

publive-image

  • ಎಲ್ಲಾ ಕಾರ್ಯಗಳಿಗೂ ಕಠಿಣ ಪರಿಶ್ರಮ ಬೇಕಾಗುತ್ತದೆ
  • ಚಿತ್ರೋದ್ಯಮದಲ್ಲಿ, ನಾಟಕಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆ
  • ಹೊಸದಾಗಿ ಚಿತ್ರೋದ್ಯಮಕ್ಕೆ ಸೇರುವವರಿಗೆ ಅತ್ಯಂತ ಶುಭ ದಿನ
  • ವಿಜ್ಞಾನ ವಿಷಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ದಿನ
  • ದೊಡ್ಡವರ ಆಶೀರ್ವಾದ ಪಡೆಯಿರಿ
  • ಕುಲದೇವತಾ ಆರಾಧನೆ ಮಾಡಿ

ಕಟಕ

publive-image

  • ಈ ದಿನ ನಿಮಗೆ ಅನಾರೋಗ್ಯ ಕಾಡಬಹುದು ತಾತ್ಸಾರ ಮಾಡದೆ ವೈದ್ಯರ ಸಲಹೆ ಪಡೆಯಿರಿ
  • ಇಂದು ವಿದ್ಯಾರ್ಥಿಗಳಿಗೆ ಲಾಭದ ದಿನ
  • ಸೂಕ್ಷ್ಮ ಕೆಲಸಗಳಲ್ಲಿ ಜಾಗ್ರತೆವಹಿಸಿ, ಎಲ್ಲಾ ರೀತಿಯಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ
  • ಶನೈಶ್ಚರನನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ನಿಮ್ಮ ಆದಾಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ
  • ನೀವು ಸಂಕಲ್ಪ ಮಾಡಿದ ಕೆಲಸಗಳಿಗೆ ವಿರೋಧಿಗಳಿಂದ ಅಡ್ಡಿಯಾಗಬಹುದು
  • ಇಂದು ನಿಮ್ಮ ಜನಸೇವೆಯ ಕೆಲಸಗಳಿಗೆ ಜನರು ಸ್ಪಂದಿಸುತ್ತಾರೆ
  • ಹಿಂದಿನಿಂದ ಕೂಡಿಟ್ಟ ಹಣ ಇವತ್ತು ಹೆಚ್ಚು ಖರ್ಚಾಗುವ ಸಾಧ್ಯತೆ
  • ಮೇಧಾದಕ್ಷಿಣಾಮೂರ್ತಿಯ ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಇಂದು ವಿನಾಕಾರಣ ವಾದ-ವಿವಾದಗಳು ಸೃಷ್ಟಿಯಾಗಬಹುದು
  • ಅವರನ್ನು ವಿರೋಧ ಮಾಡಿಕೊಂಡು ಆ ಕೆಲಸ ಸಾಧಿಸಲು ಆಗುವುದಿಲ್ಲ
  • ನಿಮ್ಮ ವೈಯ್ಯಕ್ತಿಕ ಕೆಲಸಗಳಲ್ಲಿ ಸ್ವಲ್ಪ ಏರುಪೇರು ಕಾಣಬಹುದು
  • ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಆಗುವುದಿಲ್ಲ
  • ಲೇವಾದೇವಿ ವ್ಯವಹಾರಗಳಲ್ಲಿ ಸ್ವಲ್ಪ ನಷ್ಟ ಸಂಭವಿಸಬಹುದು
  • ಪಾರ್ವತಿ ದೇವಿಯನ್ನು ಆರಾಧನೆ ಮಾಡಿ, ಗೋವಿಗೆ ಅಕ್ಕಿ-ಬೆಲ್ಲ ಕೊಡಿ

ತುಲಾ

publive-image

  • ನಿಮ್ಮ ಆತ್ಮೀಯರ ಮನೆಯಿಂದ ಶುಭ ಸುದ್ದಿ ಬರುತ್ತದೆ
  • ಇಂದು ಪ್ರಯಾಣ ಮುಂದೂಡಿದರೆ ಒಳ್ಳೆಯದು
  • ಇಂದು ಕೆಲಸ ಕಾರ್ಯಗಳಿಗೆ ಪ್ರಭಾವಿ ವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
  • ನೀವು ಬರಹಗಾರರಾಗಿದ್ದರೆ ದೂರದೂರಿಗೆ ಪ್ರಯಾಣ ಮಾಡುತ್ತೀರಿ
  • ಇಂದು ಸರಳವಾಗಿ ವರ್ತಿಸಿ ಅಹಂಕಾರ ಬೇಡ
  • ಅಶ್ವತ್ಥ ಮರಕ್ಕೆ 12 ಪ್ರದಕ್ಷಿಣೆ ಮಾಡಿ

ವೃಶ್ಚಿಕ

publive-image

  • ಇಂದು ವಾಹನ ಚಾಲನೆಯಿಂದ ನಷ್ಟ ಅನುಭವಿಸಬಹುದು
  • ವಾಹನ ಅಪಘಾತ, ವಾಹನ ಕೆಟ್ಟು ಹೋಗಬಹುದು
  • ಪ್ರಯಾಣ ಅರ್ಧಕ್ಕೆ ನಿಲ್ಲುವುದರಿಂದ ಕೆಟ್ಟ ಫಲಗಳಿವೆ, ಎಚ್ಚರಿಕೆಯಿಂದಿರಿ
  • ಸಮಾಜದಲ್ಲಿ ಗೌರವ ಮನ್ನಣೆ ದೊರೆಯುತ್ತದೆ
  • ಗಣಪತಿಯ ಆರಾಧನೆ ಮಾಡಿ

ಧನಸ್ಸು

publive-image

  • ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯ ಇಂದು ತಿರುವು ಪಡೆಯುತ್ತೆ
  • ಕೋರ್ಟ್​, ಕಚೇರಿಗಳಲ್ಲಿರುವ ಕಾರ್ಯ ಇವತ್ತು ಇತ್ಯರ್ಥ ಆಗುವ ಸೂಚನೆಗಳಿವೆ
  • ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಹೆಚ್ಚು ಹಣ ಖರ್ಚಾಗಬಹುದು
  • ಮಾತಿನ ಚಕಮಕಿಯಿಂದ ಕೋಪ ಹೆಚ್ಚಾಗಬಹುದು, ಕೋಪ ನಿಯಂತ್ರಣದಲ್ಲಿರಲಿ
  • ಮಹಾಲಕ್ಷ್ಮಿ ಸಮೇತ ವರಾಹ ಸ್ವಾಮಿಯನ್ನು ಆರಾಧಿಸಿ, ತುಳಸೀಗಿಡ ದಾನಮಾಡಿ

ಮಕರ

publive-image

  • ಭೂ ವ್ಯವಹಾರ, ರಿಯಲ್ ಎಸ್ಟೇಟ್ ಮಾಡುವವರಿಗೆ ಇಂದು ಧನಲಾಭ
  • ಇಂದು ಭೂಮಿ ಖರೀದಿ ಅಥವಾ ಮಾರಾಟ ಬೇಡ
  • ನಿಮಗೆ ದೊರೆಯುವ ಹಣ ರಾತ್ರಿಯ ಸಮಯದಲ್ಲಿ ಸಿಗಬಹುದು
  • ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನವಾಗಿಟ್ಟುಕೊಳ್ಳಿ
  • ರಾವಣಕೃತ ಶನಿ ಸ್ತೋತ್ರ ಪಠಿಸಿ

ಕುಂಭ

publive-image

  • ಇಂದಿನ ವ್ಯವಹಾರದಲ್ಲಿ ಮೇಲುಗೈ ಸಾಧಿಸುವ ಸೂಚನೆಯಿದೆ
  • ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ಹೊಂದಿರುವವರಿಗೆ ಅನುಕೂಲಕರವಾಗಿದೆ
  • ಸಮಾಜದ ಮಾನ್ಯತೆಯ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ದಿನ
  • ವಾಯುಸ್ತುತಿ ಪಠಣೆ ಮಾಡಿ

ಮೀನ 

publive-image

  • ಸಹಕಾರ ಬ್ಯಾಂಕ್ , ಫೈನಾನ್ಸ್​ , ಬಡ್ಡಿ ವ್ಯವಹಾರಸ್ಥರಿಗೆ ಶುಭ ದಿನ
  • ತಾವು ಮಾಡಿದ ಬ್ಯಾಂಕ್ ಸಾಲ ಇತ್ಯಾದಿಗಳು, ಹೊಸ ವ್ಯವಹಾರದ ಹಾದಿ ಸುಗಮವಾಗಲಿದೆ
  • ಇಂದು ಕೆಲಸ ಕಾರ್ಯಗಳಲ್ಲಿ ತುಂಬಾ ವಿಳಂಬ ಸಾಧ್ಯತೆ
  • ವ್ಯಾಪರಸ್ಥರಿಗೆ ಗ್ರಾಹಕರಿಂದ ಮೆಚ್ಚುಗೆ ದೊರೆಯುತ್ತದೆ
  • ಕನಕದುರ್ಗಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment