/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣಪಕ್ಷ, ಷಷ್ಟೀ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ
ಮೇಷ ರಾಶಿ
- ಬೇರೆಯವರಿಗೆ ಸಹಾಯ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ
- ಹೊಸ ಕೆಲಸವನ್ನು ಶುರು ಮಾಡುವ ಯೋಚನೆ ಮಾಡುತ್ತೀರಿ
- ನಿಮಗೆ ಹಿತಶತೃಗಳಿಂದ ತೊಂದರೆ ಸಾಧ್ಯತೆ, ಎಚ್ಚರಿಕೆ ಇರಲಿ
- ಬಹಳ ಕಾಲದ ನಂತರ ನಿಮ್ಮ ಪ್ರೀತಿ ಪಾತ್ರರ ದರ್ಶನದಿಂದ ಮನಸ್ಸಿಗೆ ಆನಂದ
- ಪೂರ್ವಿಕರು, ಹಿರಿಯರು ಮಾಡಿದ ಧರ್ಮ-ಕರ್ಮಗಳಿಂದ ನಿಮಗೆ ಯಶಸ್ಸು ಸಿಗುತ್ತದೆ
- ಈಶ್ವರನನ್ನು ಆರಾಧಿಸಿ
ವೃಷಭ
- ದೊಡ್ಡ ಉದ್ದಿಮೆ ಕೈಗಾರಿಕೆಗಳನ್ನು ಹೊಂದಿರುವವರಿಗೆ ಶುಭಫಲ
- ಹಿಂದೆ ಮಾಡಿದ್ದ ಉತ್ತಮ ಕೆಲಸಗಳಿಗೆ ಇಂದು ಮೆಚ್ಚುಗೆ ಸಿಗುತ್ತದೆ
- ಉದ್ಯೋಗ, ವ್ಯಾಪಾರಿಗಳಿಗೆ ಉದ್ವೇಗ ಹೆಚ್ಚು ಆದ್ದರಿಂದ ತಾಳ್ಮೆಯಿಂದ ವರ್ತಿಸಿ
- ನಿಮ್ಮ ವೃತ್ತಿಯಲ್ಲಿ ಸಮಾಧಾನ ಸಿಗುವ ದಿನ
- ಹೊಸ ಕೆಲಸಗಳು, ಯೋಜನೆಗಳು ಆರಂಭವಾಗುವ ದಿನ
- ಇಂದು ನಿಮ್ಮ ಮಾತುಗಳಲ್ಲಿ ಗೊಂದಲವಿಲ್ಲದೆ ಸ್ಪಷ್ಟವಾಗಿರಲಿ
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಅವಸರದಲ್ಲಿ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ, ಎಚ್ಚರಿಕೆ ಇರಲಿ
- ವಾಹನ ಚಾಲಕರು ನಿಯಮಾನುಸಾರ ವಾಹನ ಚಾಲನೆ ಮಾಡಿದರೆ ಒಳ್ಳೆಯದು
- ಕುಟುಂಬಕ್ಕೆ ಹೊಸ ಅತಿಥಿ ಆಗಮನ ಸಾಧ್ಯತೆ ಇದೆ
- ಅನಾರೋಗ್ಯ ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣಕ್ಕಾಗಿ ವೇದಿಕೆ ಸಿದ್ಧಪಡಿಸಿಕೊಳ್ಳಲು ಉತ್ತಮ ದಿನ
- ನಿಮ್ಮ ಗುರುಗಳನ್ನು ಆರಾಧಿಸಿ
ಕಟಕ
- ಶಾಂತವಾಗಿರಿ, ನಿಮ್ಮ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಿ
- ಕುಟುಂಬದ ಸದಸ್ಯರ ಮಧ್ಯೆ ಕಲಹ ಸಾಧ್ಯತೆ
- ಮನೆಯ ಹೊರಗಡೆ ವಿನಾಕಾರಣ ಜಗಳವಾಗಬಹುದು ಎಚ್ಚರಿಕೆ ಇರಲಿ
- ಕಾರ್ಯಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಸಾಧನೆ ಮಾಡುತ್ತೀರಿ
- ಸಮಾಜದಲ್ಲಿ ನಿಮ್ಮ ಚಿಂತನೆ ವಿಚಾರಗಳಿಗೆ ಮನ್ನಣೆ ದೊರೆಯುತ್ತದೆ
- ಔಷಧೋಪಚಾರಗಳು ಪರಿಣಾಮ ಬೀರದೆ ಇರಬಹುದು ಎಚ್ಚರ
- ಸಾಯಂಕಾಲದ ಸೂರ್ಯನನ್ನು ಪ್ರಾರ್ಥನೆ ಮಾಡಿ
ಸಿಂಹ
- ವೃತ್ತಿಪರರು ನಿಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
- ಜಮೀನು ಆಸ್ತಿ ವಿಚಾರಗಳ ಬಗ್ಗೆ ಪರ-ವಿರೋಧ ಚರ್ಚೆ ಸಾಧ್ಯತೆ
- ನೀವು ಬಳಸುವ ವಾಹನ ಬಗ್ಗೆ ಜಾಗ್ರತೆ ಇರಲಿ, ವಾಹನದಿಂದ ನಷ್ಟವಿದೆ
- ಹೃದ್ರೋಗಿಗಳು ತುಂಬಾ ಕಷ್ಟ ಅನುಭವಿಸುವ ಸಾಧ್ಯತೆ ಇದೆ
- ಗಂಟಲಿನ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
- ಉಗ್ರ ನರಸಿಂಹನ ಆರಾಧನೆ ಮಾಡಿ
ಕನ್ಯಾ
- ವೈಯಕ್ತಿಕ ಲಾಭಕ್ಕೆ ನಂಬಿದವರಿಂದ ಮೋಸ ಸಾಧ್ಯತೆ
- ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಾಧ್ಯತೆ
- ಇಂದು ಮಕ್ಕಳ ಶಿಕ್ಷಣ ವಿಚಾರವಾಗಿ ಉತ್ತಮ ದಿನ
- ಎಲ್ಲರ ಹಾರೈಕೆಯಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯತೆ
- ವೈವಾಹಿಕ ಜೀವನ ಸುಖಮಯ
- ಆದಾಯದಲ್ಲಿ ಹೆಚ್ಚಳ ಆಗಲಿದೆ
- ಆತ್ಮವಿಶ್ವಾಸ ಹೆಚ್ಚಾಗಿ ಸಂತೋಷ ಉಂಟಾಗಬಹುದು
- ಈಶ್ವರನನ್ನು ಪ್ರಾರ್ಥನೆ ಮಾಡಿ
ತುಲಾ
- ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
- ಬೇರೆಯವರ ವಿಷಯಕ್ಕೆ ತಲೆ ಹಾಕಬೇಡಿ, ಅವಮಾನ ಸಾಧ್ಯತೆ
- ಚಿನ್ನಾಭರಣಗಳ ಖರೀದಿ ಬೇಡ, ಮನೆಯಲ್ಲಿರುವ ಆಭರಣಗಳ ಬಗ್ಗೆ ಜಾಗ್ರತೆ ಇರಲಿ
- ಹೊಸ ಸಂಪರ್ಕಗಳಿಂದ ಮನಸ್ಸಿಗೆ ಖುಷಿಯಾಗಬಹುದು
- ಇಂದು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
- ನಿಮ್ಮ ಆಲೋಚನೆಗಳು ಕುಟುಂಬಕ್ಕೆ ಸೀಮಿತವಾಗಿರದೆ ಸಮಾಜಮುಖಿಯಾಗಿರಲಿ
- ವೀರಾಂಜನೇಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಇಂದು ಹಣ ಹೂಡಿಕೆಯಿಂದ ಮನಸ್ಸಿಗೆ ಸಮಾಧಾನ ಸಿಗಬಹುದು
- ಆಕಸ್ಮಿಕವಾಗಿ ಹಣ ಸಿಗುವುದರಿಂದ ಅಹಂಕಾರ ಬರಬಹುದು ಎಚ್ಚರ
- ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ, ಮಾತಾಡಲು ಒಪ್ಪುವುದಿಲ್ಲ
- ನಿಮ್ಮ ತಾಳ್ಮೆ ವಿನಯ ಮಾತ್ರ ನಿಮ್ಮನ್ನು ಕಾಪಾಡಬಲ್ಲದು
- ನಿಮ್ಮನ್ನು ನೀವು ಮರೆಯುವ ಸಾಧ್ಯತೆ ಇದೆ
- ಕೆಲಸದ ಒತ್ತಡ ಇದ್ದಾಗ್ಯೂ ಜನಸೇವೆ ಮಾಡಿ ಗೌರವ ಹೆಚ್ಚಾಗುತ್ತದೆ
- ಶ್ರೀರಾಮ ಪರಿವಾರ ದೇವತೆಗಳನ್ನು ಆರಾಧನೆ ಮಾಡಿ
ಧನಸ್ಸು
- ಸೈದ್ಧಾಂತಿಕವಾಗಿ ಮಾಡಬೇಕಿರುವ ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆಯಾಗಬಹುದು
- ನಿಮ್ಮ ಶತ್ರುಗಳ ಮಾತಿನಿಂದ ನಿಮ್ಮ ಆತ್ಮೀಯರು ನಿಮ್ಮನ್ನು ಅವಮಾನಿಸುವ ಸಾಧ್ಯತೆ
- ಇಂದು ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಬಿಟ್ಟರೆ ಒಳ್ಳೆಯದು
- ಸಮಾಜದಲ್ಲಿ ಚಿಕ್ಕವರ ಮುಂದೆ ಚಿಕ್ಕವರಾಗುವ ಸಾಧ್ಯತೆ ಇದೆ
- ಕಲ್ಕಿ ಭಗವಾನರನ್ನು ಸ್ಮರಿಸಿ
ಮಕರ
- ರಾಜಕಾರಣಿಗಳಿಗೆ ಹೊಸ ಸುದ್ದಿ ಸಾಧ್ಯತೆ
- ಸ್ಮೇಹಿತರೊಂದಿಗೆ ನಿಮ್ಮ ವಿದ್ಯಾಭ್ಯಾಸ, ಕೆಲಸ, ಹೊಸ ಆಲೋಚನೆಗಳ ಬಗ್ಗೆ ಚರ್ಚಿಸಿದರೆ ಒಳ್ಳೆಯದು
- ಮನಸ್ಸಿಗೆ ಆಹ್ಲಾದ ನೆಮ್ಮದಿ ದೊರೆಯುತ್ತದೆ
- ಮಕ್ಕಳ ಆರೋಗ್ಯ ವ್ಯತ್ಯಾಸದಿಂದ ಸಾಯಂಕಾಲದ ಸಮಯಕ್ಕೆ ಬೇಸರ ಸಾಧ್ಯತೆ
- ಬೆಳ್ಳಂಬೆಳಗ್ಗೆ ಕಹಿ ಘಟನೆಯಿಂದ ಮನೆಯಲ್ಲಿ ಅಶಾಂತಿ ಸಾಧ್ಯತೆ
- ಕೋದಂಡರಾಮನ ಪ್ರಾರ್ಥನೆ ಮಾಡಿ
ಕುಂಭ
- ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಆತ್ಮಗೌರವಕ್ಕೆ ಕೊರತೆ ಆಗಬಹುದು
- ಆದಾಯ ಖರ್ಚಿನ ಅಸ್ಪಷ್ಟತೆಯಿಂದ ತೊಳಲಾಡಬಹುದು
- ಮನೆ ದೇವಾಲಯಗಳಲ್ಲಿ ಕುಟುಂಬದ ಹಿತಕ್ಕಾಗಿ ಧರ್ಮಕಾರ್ಯ ನಡೆಯುತ್ತವೆ
- ಮಕ್ಕಳ ಉತ್ತಮ ಫಲಿತಾಂಶದಿಂದ ಸಮಾಧಾನ
- ಹಣದ ವ್ಯವಹಾರ ಹೂಡಿಕೆಯನ್ನು ಮಧ್ಯಾಹ್ನದ ನಂತರ ಮಾಡಿ
- ಶಿವಾರಾಧನೆ ಮಾಡಿ
ಮೀನ
- ಅವಿವಾಹಿತರಿಗೆ ವಿವಾಹ ವಿಚಾರದಲ್ಲಿ ಶುಭ ಫಲ
- ಇಂದು ಹಣದ ವಿಚಾರದಲ್ಲಿ ಗೊಂದಲ ಸಾಧ್ಯತೆ
- ತತ್ವ ಸಿದ್ಧಾಂತದ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟದ ದಿನ
- ಪ್ರಾಯೋಗಿಕ ರೀತಿಯಿಂದ ಬಗೆಹರಿಸಿಕೊಳ್ಳಿ
- ಸಂಗೀತಕಾರರಿಗೆ ತಮ್ಮ ಕಾರ್ಯದಲ್ಲಿ ಹಿನ್ನಡೆ, ಕಾರ್ಯಕ್ರಮ ರದ್ದಾಗುವ ಸೂಚನೆ
- ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆ ಹರಿಯುತ್ತದೆ
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ