/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಕಾನೂನು ವಿಷಯಗಳು ಜಟಿಲವಾಗುತ್ತದೆ
- ವಿದೇಶ ಪ್ರವಾಸದಲ್ಲಿ ತೊಂದರೆಯಾಗಬಹುದು
- ಬಂಧುಗಳ ಮಾತಿನಿಂದ ಬೇಸರ ಆಗಲಿದೆ
- ವಿಚಾರ ಮಾಡದೇ ಯಾರೊಂದಿಗೂ ಸ್ನೇಹ ಬೇಡ
- ಅಪರಿಚಿತರನ್ನು ನಂಬಿದರೆ ದ್ರೋಹ ಆಗಬಹುದು
- ಹಣ ಕಳೆದುಕೊಳ್ಳುವ, ಕಳ್ಳತನದ ಭಯ
- ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ
ವೃಷಭ
- ವೈವಾಹಿಕ, ದಾಂಪತ್ಯದಲ್ಲಿ ಗೊಂದಲ ಉಂಟಾಗಬಹುದು
- ಆತ್ಮೀಯರಿಂದ ಬೇಸರವಾಗಬಹುದು
- ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
- ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
- ಈ ದಿನ ಕಿರಿಯರನ್ನು ಗೌರವಿಸಿ
- ಬಿಳಿ ಬಟ್ಟೆ ಧರಿಸಿ ಸಂತೋಷವಿರುತ್ತದೆ
- ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮಿಥುನ
- ಹಳೆಯ ಸಮಸ್ಯೆ ಬಗೆಹರಿಯುವ ದಿನ
- ಕುಟುಂಬದವರ ಬೆಂಬಲವಿರುತ್ತದೆ
- ಉದ್ಯೋಗ ಬದಲಾವಣೆ ಅವಕಾಶವಿದೆ
- ಮಡದಿ, ಮಕ್ಕಳೊಂದಿಗೆ ಸಮಯ ಕಳೆಯಬಹುದು
- ಸ್ನೇಹಿತರ ಆಕಸ್ಮಿಕ ಭೇಟಿ ಆಶ್ಚರ್ಯವಾಗಬಹುದು
- ಆಭರಣದ ಬಗ್ಗೆ ಎಚ್ಚರವಿರಲಿ
- ಕಾರ್ತವೀಱರ್ಜುನನ್ನು ಸ್ಮರಣೆ ಮಾಡಿ
ಕಟಕ
- ಮೇಲಾಧಿಕಾರಿಗಳಿಂದ ಹೊಗಳಿಕೆ ಸಿಗಬಹುದು
- ಅಂದು ಕೊಂಡ ಕಾರ್ಯ ಸಾಧಿಸಬಹುದು
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
- ತುಂಬಾ ಸೋಮಾರಿತನ ಕಾಡುತ್ತದೆ
- ಸಂತೋಷವನ್ನು ಸರಿಯಾಗಿ ಅನುಭವಿಸುವುದಿಲ್ಲ
- ಇಂದಿನ ಕಾರ್ಯ ಇಂದೇ ಮಾಡಿ
- ಮಾರುತಿಯ ಉಪಾಸನೆ ಮಾಡಿ
ಸಿಂಹ
- ಮಾನಸಿಕ ಭಯ ಕಾಡಬಹುದು
- ಸಮಯದ ದುರುಪಯೋಗ ಆಗಬಹುದು
- ಹಿರಿಯರ, ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ
- ಕಮೀಷನ್ ಏಜೆಂಟ್ಸ್ಗಳಿಗೆ ಲಾಭವಿದೆ
- ಅಪೂರ್ಣ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ ಶುಭವಿದೆ
- ಹೊಟ್ಟೆಯ ನೋವು - ಉರಿ ಕಾಣಬಹುದು
- ಬೇರೆಯವರ ಸಮಯ ನಿರೀಕ್ಷಿಸಬಾರದು
- ಲಕ್ಷ್ಮೀನರಸಿಂಹನ ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಬಹುದು
- ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
- ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕು
- ಬೆನ್ನು ನೋವು ಸಮಸ್ಯೆ ಕಾಡಬಹುದು
- ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ದಿನ
- ಅಜೀರ್ಣ ಸಮಸ್ಯೆ ತೊಂದರೆ ಕಾಣಬಹುದು
- ಶಿವಾರಾಧನೆ ಮಾಡಿ
ತುಲಾ
- ಉದ್ಯೋಗದಲ್ಲಿ ಶ್ಲಾಘನೆ ಸಿಗಬಹುದು
- ಪ್ರತಿಭೆಗೆ ತಕ್ಕ ಪ್ರತಿಫಲ, ಸಂತೋಷ ಸಿಗುವ ದಿನ
- ವ್ಯಾಪಾರ ನಿಮಿತ್ತ ಪ್ರವಾಸ ಮಾಡಬಹುದು
- ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ
- ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಇರುತ್ತದೆ
- ನಾಯಕತ್ವದ ಗುಣ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ
- ಗಣಪತಿಯ ಪ್ರಾರ್ಥನೆ ಮಾಡಿ, ಬಿಳಿ ಎಕ್ಕದ ಹೂ ಸಮರ್ಪಣೆ ಮಾಡಿ
- ಕಲಾ ರಸಿಕರಿಗೆ ಉತ್ತಮ ಸಮಯ
- ನಾಟಕ, ಚಲನಚಿತ್ರ ಇತ್ಯಾದಿ ವೃತ್ತಿಯಲ್ಲಿ ಬಡ್ತಿ
- ಗಂಭೀರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು
- ಮನೆಯ ಅಲಂಕಾರ, ನವೀಕರಣಕ್ಕೆ ಖರ್ಚು ಮಾಡಬಹುದು
- ಮಾನಸಿಕ ಒತ್ತಡದ ದಿನ
- ಅಗತ್ಯವಾಗಿ ಕೆಲವರ ಕೆಲಸಗಳನ್ನು ಮಾಡಬೇಕಾಗುತ್ತದೆ
- ಚಂಡಿಕೇಶ್ವರನ ಪ್ರಾರ್ಥನೆ ಮಾಡಿ
ಧನಸ್ಸು
- ನವದಂಪತಿಗಳಿಗೆ ಪ್ರವಾಸದ ಯೋಗವಿದೆ
- ಸಣ್ಣ ಪುಟ್ಟ ವಿಚಾರಗಳಲ್ಲಿ ಗೊಂದಲ, ವಾದ-ವಿವಾದ ಮಾಡಬಹುದು
- ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
- ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯದ ದಿನ
- ಕುಟುಂಬದಲ್ಲಿ ಗೌರವ ಹೆಚ್ಚಬಹುದು
- ನೀರಿನ ಭಯ, ಜಲಕಂಟಕ ಕಾಣುತ್ತದೆ ಎಚ್ಚರಿಕೆ ಇರಲಿ
- ವರುಣ ದೇವರನ್ನು ಪ್ರಾರ್ಥಿಸಿ
ಮಕರ
- ಹೆಚ್ಚು ಹಣದ ವ್ಯಯವಾಗಬಹುದು
- ಆದಾಯ ಗಮನಿಸದೆ ಖರ್ಚಿಗೆ ಮುಂದಾಗಬಾರದು
- ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆಯಿದೆ
- ಕೆಟ್ಟ ಕನಸುಗಳು ನಿಮ್ಮನ್ನು ಕಾಡಬಹುದು
- ಕುಟುಂಬದ ವಾತಾವರಣ ಶಾಂತವಾಗಿರುತ್ತದೆ
- ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲವಾಗಬಹುದು
- ಕುಬೇರ ಲಕ್ಷ್ಮಿಯನ್ನು ಆರಾಧಿಸಿ
ಕುಂಭ
- ನಿಮ್ಮ ಶಿಸ್ತು, ಸ್ವಭಾವ ಬೇರೆಯವರಿಗೆ ಮಾದರಿ
- ವಿವಾಹಿತರು ಜಗಳ ಮಾಡಿಕೊಳ್ಳಬಾರದು
- ಹಿರಿಯರ ಬೆಂಬಲ ದೊರಕುತ್ತದೆ
- ಮಕ್ಕಳ ಪ್ರಗತಿಯ ಬಗ್ಗೆ ಚಿಂತಿಸಿ
- ಪ್ರೇಮಿಗಳಿಗೆ ಅವಮಾನ, ಬೆದರಿಕೆ ಬರಬಹುದು
- ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯ ಮಾಡಬಾರದು
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
ಮೀನ
- ಇಂದು ಧನಾತ್ಮಕವಾಗಿ ಚಿಂತಿಸಿ
- ಬೇರೆಯವರ ವಸ್ತುಗಳು ಬಗ್ಗೆ ಆಸಕ್ತಿ ತೋರದಿರಿ
- ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ
- ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ
- ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ
- ಇಂದು ತಂದೆಯ ಸಲಹೆ ಒಳಿತು
- ಅಧಿಕಾರಿಗಳೊಂದಿಗೆ ಮಾತುಕತೆ ಚೆನ್ನಾಗಿರುತ್ತದೆ
- ಹಿರಿಯರ ಆಶೀರ್ವಾದ ಪಡೆಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ