ವಿದ್ಯಾರ್ಥಿಗಳಿಗೆ ಪ್ರಗತಿ ಸಿಗುವ ದಿನ, ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳುತ್ತೀರಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಅನ್ಯಾಯದ ವಿರುದ್ಧ ಹೋರಾಟ ಮಾಡಲು ಮುಂದಾಗುತ್ತೀರಿ
  • ಸಾರ್ವಜನಿಕ ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ದಿನ
  • ನಂಬಿಕೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಳ್ಳೆಯದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ಅನ್ಯಾಯದ ವಿರುದ್ಧ ಹೋರಾಟ ಮಾಡಲು ಮುಂದಾಗುತ್ತೀರಿ
  • ಸಾರ್ವಜನಿಕ ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳುವ ದಿನ
  • ನಂಬಿಕೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಳ್ಳೆಯದು
  • ಯಾರೊಂದಿಗೂ ರಾಜಿಯಾಗುವ ಪ್ರಮೇಯವಿರುವುದಿಲ್ಲ
  • ಮಾತು ಮಿತವಾಗಿರಲಿ, ಜಗಳ-ದ್ವೇಷ ಉಂಟಾಗಬಹುದು
  • ಪ್ರಜಾಪತಿ, ಯಮಸಹಿತ ಶನಿಯನ್ನು ಆರಾಧಿಸಿ

ವೃಷಭ

publive-image

  • ಶ್ರಮಪಟ್ಟು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುವ ದಿನ
  • ಗಣ್ಯರ ಭೇಟಿಯಿಂದ ಸಂತಸವಾಗುತ್ತದೆ
  • ವಿದ್ಯಾರ್ಥಿಗಳಿಗೆ ಪ್ರಗತಿ ಸಿಗುವ ದಿನ
  • ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡುವ ವಾತಾವರಣ ಏರ್ಪಡುತ್ತದೆ
  • ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ

ಮಿಥುನ

publive-image

  • ನೀವು ಮಾಡಬೇಕಾದ ಜವಾಬ್ದಾರಿ ಕೆಲಸಗಳನ್ನು ಬೇಗ ಮಾಡಿ ಮುಗಿಸುತ್ತೀರಿ ಆದರೆ ಎಚ್ಚರಿಕೆ ಇರಲಿ
  • ಸ್ನೇಹಿತರ, ಕುಟುಂಬ ಸದಸ್ಯರ ಆಗಮನ
  • ವ್ಯಾಯಾಮದ ಕಡೆ ಹೆಚ್ಚು ಗಮನಹರಿಸಿ
  • ನಿಮ್ಮ ಮಾತಿನ ಬಗ್ಗೆ ಹೆಚ್ಚು ಗಮನವಿರಲಿ
  • ಶ್ರೀ ಕೃಷ್ಣನನ್ನು ಆರಾಧಿಸಿ

ಕಟಕ

publive-image

  • ವಿದ್ಯಾರ್ಥಿಗಳಿಗೆ ಪುಸ್ತಕ, ಶೈಕ್ಷಣಿಕ ವಿಷಯಕ್ಕೆ ಬೇಕಾದ ಮಾಹಿತಿ ದೊರಕಬಹುದು
  • ಕೈಹಿಡಿದ ಕೆಲಸ ಸಂಪೂರ್ಣ ಮಾಡಿ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಗೊಂದಲವಿರುತ್ತದೆ
  • ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ
  • ಆದಾಯ ಕಡಿಮೆ, ಖರ್ಚು ಜಾಸ್ತಿ
  • ನಿಮಗೆ ಹಲ್ಲು ನೋವು ಕಾಡಬಹುದು
  • ಶ್ರೀ ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ಹೊಸ ವಿಚಾರಗಳಲ್ಲಿ ಆಸಕ್ತಿ ಬೆಳೆಯಬಹುದು
  • ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ
  • ವ್ಯಾಪಾರಿಗಳು ಮೃದುವಾದ ಮಾತಿನಿಂದ ಗ್ರಾಹಕರನ್ನು ಆಕರ್ಷಿಸಬೇಕು
  • ವ್ಯಾಪಾರಸ್ಥರಿಗೆ ನಿರೀಕ್ಷೆಗೂ ಮೀರಿ ಲಾಭವಿದೆ
  • ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯ ಓದಲು ಮೀಸಲಿಡಬೇಕು
  • ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹಿನ್ನಡೆ ಸಾಧ್ಯತೆ
  • ಕುಲದೇವತಾ ಆರಾಧನೆ ಮಾಡಿ

ಕನ್ಯಾ

publive-image

  • ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹಿನ್ನಡೆಯಾಗಬಹುದು
  • ದಾಯಾದಿಗಳಿಂದ ತೊಂದರೆ, ಅವಮಾನ ಸಾಧ್ಯತೆ
  • ಇಂದು ಶತ್ರುಗಳ ನಾಶ ಆಗಲಿದೆ
  • ಕುಟುಂಬದಲ್ಲಿ ಹಿರಿಯ ಬೆಂಬಲ ಸಿಗುತ್ತದೆ
  • ಪದವೀಧರರಿಗೆ ನೌಕರಿಯ ಸಿಹಿ ಸುದ್ದಿ ಸಿಗಲಿದೆ
  • ಈ ದಿನ ಸಾಮಾನ್ಯವಾದ ಸಂತೋಷಕ್ಕೂ ಧಕ್ಕೆ ಬರಬಹುದು
  • ಸಣ್ಣ ಸಣ್ಣ ವಿಷಯಗಳು ದೊಡ್ಡದಾಗಿ ತೊಂದರೆಯೇ ಹೆಚ್ಚಾಗಬಹುದು
  • ಸರ್ಪರಾಜನನ್ನು ಪ್ರಾರ್ಥಿಸಿ

ತುಲಾ

publive-image

  • ರೇಷ್ಮೆ ಉದ್ದಿಮೆದಾರರಿಗೆ, ವ್ಯಾಪಾರಿಗಳಿಗೆ ಲಾಭವಿದೆ
  • ಬಹಳ ದಿನಗಳಿಂದ ಪ್ರಯತ್ನ ಮಾಡುತ್ತಿರುವ ಕೆಲಸಗಳಿಗೆ ಇಂದು ಯಶಸ್ಸು
  • ನಿಮ್ಮ ಖರ್ಚಿನ ಬಗ್ಗೆ ಹೆಚ್ಚು ಗಮನಕೊಡಿ
  • ಇಂದು ಕೌಟುಂಬಿಕ ಸಮಸ್ಯೆಗಳು ಉಲ್ಬಣವಾಗಬಹುದು
  • ಆರೋಗ್ಯದ ಸಮಸ್ಯೆ ಕಾಡುವ ಸಾಧ್ಯತೆ ಇದೆ
  • ಸಾಲ ಭಾದೆಯಿಂದ ಮುಕ್ತಿ ಸಿಗಬಹುದು
  • ಸಂತೋಷೀ ಮಾತಾ ದೇವಿಯನ್ನು ಆರಾಧಿಸಿ

ವೃಶ್ಚಿಕ

publive-image

  • ಇಂದು ಪಾಲುದಾರರಿಗೆ ಉತ್ತಮ ಲಾಭದ ದಿನ
  • ವಿವಾಹ ಅಪೇಕ್ಷೆಗಳಿಗೆ ಶುಭ ದಿನ
  • ವಿಶ್ರಾಂತಿಯ ಅಗತ್ಯವಿರುತ್ತದೆ
  • ಜವಾಬ್ದಾರಿ ಹೆಚ್ಚಿರುವ ಕೆಲಸವನ್ನು ಮರೆಯುವ ಸಾಧ್ಯತೆ ಇದೆ
  • ಮೇಲಾಧಿಕಾರಿಯ ನಿವೃತ್ತಿಯ ವಿಚಾರ ತಿಳಿದು ಬೇಸರವಾಗಬಹುದು
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ಇಂದು ಭೂ ಸಂಬಂಧಿ ವಿಚಾರಗಳಲ್ಲಿ ಲಾಭ
  • ಒತ್ತಡದ ಕೆಲಸದ ಮಧ್ಯ ಬಿಡುವು ಮಾಡಿಕೊಂಡು ಧ್ಯಾನ ಮಾಡಿ
  • ಬಿಡುವಿಲ್ಲದ ಸಮಯದಲ್ಲೂ ಸಮಾಜ ಸೇವೆ ಮಾಡಿ ಗೌರವ ಸಂಪಾದನೆ ಮಾಡಿ
  • ಸ್ಥಿರಾಸ್ತಿಯ ಬಗ್ಗೆ ಚಿಂತಿಸುವಿರಿ
  • ನಿಮ್ಮ ಜವಾಬ್ದಾರಿ ಕೆಲಸಗಳಲ್ಲಿ ಹೆಚ್ಚು ಗಮನಹರಿಸಿ, ತಾತ್ಸಾರ ಬೇಡ
  • ಚಂದ್ರನನ್ನು ವಿಶೇಷವಾಗಿ ಪ್ರಾರ್ಥಿಸಿ

ಮಕರ

publive-image

  • ಇಂದು ಸರ್ಕಾರಿ ಕೆಲಸಗಳಲ್ಲಿ ವಿಳಂಬ ಸಾಧ್ಯತೆ
  • ಇಂದು ದಾನ-ಧರ್ಮ ವಿಚಾರ ಬಗ್ಗೆ ಮನಸ್ಸಿನಲ್ಲಿ ಗೊಂದಲ ಬೇಡ
  • ಕಟ್ಟಡ ಸಾಮಾಗ್ರಿ ಮಾರಾಟಗಾರರಿಗೆ ಹಿನ್ನಡೆ ದಿನ
  • ಕೋರ್ಟ್ ಕಚೇರಿಯಲ್ಲಿನ ಕೇಸ್ ಇತ್ಯರ್ಥ ಆಗಲಿದೆ
  • ಭೂಸಂಬಂಧಿ ವಿಷಯಕ್ಕೆ ಜಗಳ ಆಗಬಹುದು
  • ಶನೈಶ್ಚರನನ್ನು ಪ್ರಾರ್ಥಿಸಿ

ಕುಂಭ

publive-image

  • ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನಲಾಭ
  • ಸ್ನೇಹಿತರು, ಸಂಬಂಧಿಗಳ ಮನೆಯ ಮಂಗಳ ಕಾರ್ಯಗಳಲ್ಲಿ ಭಾಗಿ
  • ಇಂದು ಮಾನಸಿಕ ಭಯ ನಿವಾರಣೆ ಸಾಧ್ಯತೆ
  • ಇಂದು ಚಂಚಲ ಮನಸ್ಸು, ಯಾವುದೇ ಕಾರಣಕ್ಕೂ ಸುಳ್ಳು ಮಾತನಾಡಬೇಡಿ
  • ವಾಹನ ಮಾರಾಟ ಮಾಡುವವರಿಗೆ ಅಧಿಕ ಲಾಭ
  • ಶ್ರೀ ರಾಮಚಂದ್ರನನ್ನು ಪ್ರಾರ್ಥಿಸಿ

ಮೀನ 

publive-image

  • ಕೃಷಿ ಉಪಕರಣ ಮಾರಾಟ ಮಾಡುವವರಿಗೆ ಹಿನ್ನಡೆ
  • ಇಂದು ನಿಮ್ಮ ಆತ್ಮಿಯರ, ಪ್ರೀಯರ ಭೇಟಿ ಮಾಡುತ್ತೀರಿ
  • ದಾನ-ಧರ್ಮದ ಬಗ್ಗೆ ವಿರುದ್ಧವಾದ ಮಾತುಗಳು ಬೇಡ
  • ಪ್ರೀತಿ- ಪ್ರೇಮ ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ
  • ಇಂದು ತೆರಿಗೆ ಸಂಬಂಧಿ ತಜ್ಞರಿಗೆ ಹೆಚ್ಚಿನ ಲಾಭದ ದಿನ
  • ಕುಲದೇವತೆ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment