ಸ್ನೇಹಿತರಿಂದ ಲಾಭ, ಈ ರಾಶಿಗೆ ಹಿರಿಯರ ಆಶೀರ್ವಾದ ಸಿಗಲಿದೆ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ
  • ಹೊಸ ಕೆಲಸಗಳನ್ನು ಆರಂಭ ಮಾಡುವುದಕ್ಕೆ ಉತ್ತಮವಾದ ದಿನ
  • ನಿಮ್ಮ ಪ್ರತಿಭೆ, ವಿದ್ಯೆ-ಬುದ್ಧಿಯನ್ನು ಸಮಾಜಕ್ಕೆ ತೋರಿಸಬೇಕಾದ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಕುಟುಂಬದ ಸದಸ್ಯರು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ
  • ಈ ದಿನ ಹಿರಿಯರ ಆಶೀರ್ವಾದ ಸಿಗಲಿದೆ
  • ಸಾಲಕ್ಕೆ ಹಣ ಬೇಕೆಂದರೆ ತಕ್ಷಣ ಸಿಗುವ ಸಾಧ್ಯತೆ ಇದೆ
  • ಕೆಲಸದಲ್ಲಿನ ನಿಮ್ಮ ಗುಣಗಳನ್ನು ಜನರು ಒಪ್ಪಿ ಹೆಚ್ಚು ಗೌರವಿಸುವ ಸಾಧ್ಯತೆ
  • ಸಾಮಾಜಿಕವಾಗಿ ಮತ್ತು ಮಾಧ್ಯಮಗಳಲ್ಲಿ ಹೆಚ್ಚು ಗೌರವ ಸಿಗುತ್ತದೆ
  • ಈ ದಿನ ನಿಮಗೆ ಎಲ್ಲ ರೀತಿಯಲ್ಲಿ ಶುಭದಿನ
  • ಅಮೃತೇಶ್ವರನನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ಹೊಸ ಕೆಲಸಗಳನ್ನು ಆರಂಭ ಮಾಡುವುದಕ್ಕೆ ಉತ್ತಮವಾದ ದಿನ
  • ನಿಮಗೆ ಸ್ನೇಹಿತರು, ಹಿತೈಷಿಗಳಿಂದ ಉತ್ತಮವಾದ ಸ್ಪಂದನೆ ಸಿಗುತ್ತದೆ
  • ಸಂಘ-ಸಂಸ್ಥೆ ಅಥವಾ ಟ್ರಸ್ಟ್​ ಪ್ರಾರಂಭಿಸಲು ಇಂದು ಉತ್ತಮವಾದ ಸಮಯ
  • ನಿಮ್ಮ ವ್ಯವಹಾರ, ಉದ್ಯೋಗಗಳಲ್ಲಿ ಉತ್ತಮ ಫಲ ಸಿಗುವ ದಿನ
  • ನಿಮ್ಮ ಕುಲದೇವತೆ ಆರಾಧನೆ ಮಾಡಿ

ಮಿಥುನ

publive-image

  • ನಿಮ್ಮ ಪ್ರತಿಭೆ, ವಿದ್ಯೆ-ಬುದ್ಧಿಯನ್ನು ಸಮಾಜಕ್ಕೆ ತೋರಿಸಬೇಕಾದ ದಿನ
  • ನಿಮಗಿರುವ ಆಳವಾದ ಜ್ಞಾನ ಹಾಗೇ ಉಳಿದು ಬಿಡುವ ಸಾಧ್ಯತೆ
  • ಇಂದು ಬೇರೆಯವರಿಂದ ಅನುಕೂಲ ಪಡೆಯಬೇಕಾದ ಸಮಯ
  • ಸಮಾಜದ ಕೆಲವರಿಂದ ಕಿರಿಕಿರಿ, ತೊಂದರೆಯಾಗುವ ಸಾಧ್ಯತೆ
  • ದೇವಿಯನ್ನು ಆರಾಧನೆ ಮಾಡಿ

ಕಟಕ

publive-image

  • ನಿಮಗೆ ಬೆನ್ನುಮೂಳೆಯ ಸಮಸ್ಯೆ ಕಾಡಬಹುದು
  • ಇಂದು ಪ್ರಯಾಣಕ್ಕೆ ಯೋಗ್ಯವಲ್ಲದ ದಿನ, ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು
  • ಆರೋಗ್ಯದ ಬಗ್ಗೆ ತಾತ್ಸಾರ ಮಾಡಬೇಡಿ, ಅಗತ್ಯ ಬಿದ್ದರೆ ವೈದ್ಯರನ್ನು ಭೇಟಿ ಮಾಡಿ
  • ಇಂದು ಶಸ್ತ್ರ ಚಿಕಿತ್ಸೆಯನ್ನು ನಾಳೆ ಬೆಳಗ್ಗೆಗೆ ಮುಂದೂಡುವುದು ಒಳ್ಳೆಯದು
  • ಚಂಡಿಕಾ ದುರ್ಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಸಿಂಹ

publive-image

  • ನಿಮ್ಮ ವೃತ್ತಿ ನಿಮಗೆ ಸಮಾಧಾನ ಕೊಡುವ ದಿನ
  • ವೈಯ್ಯಕ್ತಿಕ ಕಾರಣಗಳಿಂದ ನಿಮ್ಮ ಮನಸ್ಸು ಕಲುಷಿತಗೊಂಡು ಮಾನಸಿಕ ಅಸಮಾಧಾನ ಸಾಧ್ಯತೆ
  • ನಿಮ್ಮಿಂದ ಅವಮಾನಕ್ಕೆ ಒಳಗಾದವರು ನಿಮ್ಮನ್ನ ಅವಹೇಳನ ಮಾಡುವ ಸಾಧ್ಯತೆ
  • ನಿಮ್ಮ ವ್ಯಕ್ತಿತ್ವವನ್ನು ಬೇರೆಯವರ ಜೊತೆಗೆ ಹೋಲಿಕೆ ಮಾಡಬೇಡಿ
  • ನಿಮ್ಮ ಕೋಪ ನಿಮಗೆ ತೊಂದರೆ ಮಾಡುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ
  • ಉಮಾಮಹೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ಬೇರೆಯವರ ಕೆಲಸದಲ್ಲಿ ತೊಡಗಿಸಿಕೊಂಡು ಅವಮಾನಕ್ಕೆ ಒಳಗಾಗುವ ಸಾಧ್ಯತೆ ಇದೆ
  • ತಮ್ಮ ಭವಿಷ್ಯತ್ತಿನ ವಿದ್ಯೆಗೆ ಬೇಕಾಗಿರುವ ಮಾರ್ಗದರ್ಶನ ಸಿಗುವ ದಿನ
  • ತಜ್ಞರಿಂದ ಉತ್ತಮವಾದ ಸಲಹೆ ಪಡೆಯಿರಿ
  • ಏನಾದರು ತೀರ್ಮಾನ ಮಾಡುವಾಗ ಸರಿಯಾದ ಆಲೋಚನೆ ಮಾಡಿ
  • ಇಲ್ಲದಿದ್ದರೆ ಹಣ ಖರ್ಚಾಗಿ ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ
  • ಸರಸ್ವತಿಯನ್ನು ಆರಾಧನೆ ಮಾಡಿ

ತುಲಾ

publive-image

  • ಇಂದು ದಿಢೀರ್ ಪ್ರಯಾಣ ಏರ್ಪಡುವ ಸಾಧ್ಯತೆ ಇದೆ
  • ವಿದ್ಯಾರ್ಥಿಗಳಿಗೆ ಅತಿಮುಖ್ಯವಾದ ದಿನ
  • ಬೇರೆಯವರ ಸಹಾಯಕ್ಕಾಗಿ ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ
  • ಮುಂದೆ ಅವರಿಂದಲೇ ಅವಮಾನವಾಗುವ ಸಾಧ್ಯತೆ ಉಂಟು
  • ದುರ್ಗಾದೇವಿ ಆರಾಧನೆ ಮಾಡಿ

ವೃಶ್ಚಿಕ

publive-image

  • ನಿಮಗಿರುವ ಅನುಕೂಲ ನೋಡಿ ನಿಮಗೆ ಅಹಂಕಾರ ಬರುವ ದಿನ
  • ಅದನ್ನು ಮಾನಸಿಕವಾಗಿ ಕಡಿಮೆ ಮಾಡಿಕೊಳ್ಳಿ
  • ಸಾಯಂಕಾಲದ ಹೊತ್ತಿಗೆ ಒಳ್ಳೆಯ ಸುದ್ದಿ ಕೇಳಿ ಮನಸ್ಸಿಗೆ ಸಮಾಧಾನ ಸಿಗುತ್ತದೆ
  • ನಿಮ್ಮ ಮಾತಿನಿಂದ ನಿಮ್ಮ ವೈಯ್ಯಕ್ತಿಕ ಜೀವನಕ್ಕೆ ಧಕ್ಕೆ ಬರದಂತೆ ಎಚ್ಚರಿಕೆ ಇರಲಿ
  • ಬುಧಗ್ರಹವನ್ನು ಆರಾಧನೆ ಮಾಡಿ

ಧನಸ್ಸು

publive-image

  • ಆರೋಗ್ಯದ ಬಗ್ಗೆ ಗಮನಹರಿಸಿ
  • ಸಂಧಿವಾತ ನಿಮಗೆ ಹೆಚ್ಚಾಗಿ ಕಾಡಬಹುದು
  • ವಯಸ್ಸಾದವರಿಗೆ ಹಳೆಯ ನೋವಿನಿಂದ ಶಸ್ತ್ರಚಿಕಿತ್ಸೆ ಆಗುವ ಸಾಧ್ಯತೆ ಇದೆ
  • ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ
  • ಮೃತ್ಯುಂಜಯನನ್ನು ಪ್ರಾರ್ಥಿಸಿ

ಮಕರ

publive-image

  • ಮನೆಯಲ್ಲಿ ನಿಮ್ಮನ್ನು ನಿರ್ಲಕ್ಷಿಸಬಹುದು
  • ನಿಮ್ಮ ಸ್ವಭಾವವೂ, ವರ್ತನೆಯೂ ಹಾಗೆಯೇ ಇರುತ್ತದೆ
  • ಇಂದು ನಿಮಗೆ ಅಪಖ್ಯಾತಿ ಕೂಡ ಬರುವ ಸಾಧ್ಯತೆ ಇದೆ
  • ಮನೆ ಸದಸ್ಯರ ಸಂತೋಷಕ್ಕಾಗಿ ಕೆಲ ವಿಚಾರಗಳಲ್ಲಿ ರಾಜಿ ಒಳ್ಳೆಯದು
  • ನಿಮ್ಮ ಕುಲದೇವತೆ ಮತ್ತು ಆಂಜನೇಯನನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಇಂದು ಹಣದ ವಿಚಾರದಲ್ಲಿ ತುಂಬಾ ಜಾಗ್ರತೆ ಇರಲಿ
  • ನೀವು ಬೇರೆಯವರಿಗೆ ಕೊಡಿಸಿದ್ದ ಸಾಲದಿಂದ ತೊಂದರೆಯಾಗಬಹುದು
  • ಅದರಿಂದ ನಿಮ್ಮ ಜೊತೆ ಗಲಾಟೆಯಾಗುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ
  • ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಿ, ಜಗಳ ಮಾಡಿಕೊಳ್ಳಬೇಡಿ
  • ಈ ದಿನ ತಾಳ್ಮೆಯಿಂದ ವರ್ತಿಸಿ
  • ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿದರೆ ಒಳಿತು
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಇಂದು ನಿಮ್ಮ ಬುದ್ಧಿವಂತಿಕೆ ನಿಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುತ್ತದೆ
  • ದೂರದ ಊರಿನಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ
  • ಇದರಿಂದ ಹಲವಾರು ಜನ ನಿಮ್ಮನ್ನು ಅಭಿನಂದಿಸುತ್ತಾರೆ
  • ನಿಮ್ಮ ವೈಯ್ಯಕ್ತಿಕ ವರ್ಚಸ್ಸು ಹೆಚ್ಚಾಗುವ ಸಾಧ್ಯತೆ ಇದೆ
  • ಆದಿತ್ಯನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment