ವಿದ್ಯಾರ್ಥಿಗಳಿಗೆ ಸಂಕಷ್ಟ, ಇಂದು ಪ್ರವಾಸಕ್ಕೆ ಯೋಗ್ಯ ದಿನ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಆದರೆ ಹೊರಗಿನವರಿಂದ ಮೋಸ ಹೋಗುತ್ತೀರಿ ಎಚ್ಚರಿಕೆ ಇರಲಿ
  • ಮನೆ ಕಟ್ಟುವ, ಖರೀದಿಸುವ ಮಾತುಕತೆಗೆ ಅನುಕೂಲವಾದ ದಿನ
  • ಬೇರೆಯಾಗುವ, ಮನೆಬಿಟ್ಟು ಹೋಗುವ ಸೂಚನೆಗಳು ಕಾಣುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ
ಇರಲಿದೆ.

ಮೇಷ ರಾಶಿ

publive-image

  • ದಂಪತಿಗಳಲ್ಲಿ ವೈಮನಸ್ಸು ಮೂಡುವ ಸಾಧ್ಯತೆ
  • ಮನೆ ಕಟ್ಟುವ, ಖರೀದಿಸುವ ಮಾತುಕತೆಗೆ ಅನುಕೂಲವಾದ ದಿನ
  • ಸಂಬಂಧಿಕರ ವಿಚಾರ ಕುರಿತು ದುಃಖವಾಗುತ್ತದೆ
  • ಆದರೆ ಹೊರಗಿನವರಿಂದ ಮೋಸ ಹೋಗುತ್ತೀರಿ ಎಚ್ಚರಿಕೆ ಇರಲಿ
  • ಪ್ರತ್ಯಂಗೀರಾದೇವಿಯನ್ನು ಆರಾಧಿಸಿ

ವೃಷಭ

publive-image

  • ಇಂದು ಕೆಲಸದ ಒತ್ತಡ ಕಡಿಮೆ, ಆದರೆ ಆಲಸ್ಯ ಬೇಡ
  • ನಿಮ್ಮ ಸಂಗಾತಿಯೊಂದಿಗೆ ಕೋಪವಿರುತ್ತದೆ
  • ಬೇರೆಯಾಗುವ, ಮನೆಬಿಟ್ಟು ಹೋಗುವ ಸೂಚನೆಗಳು ಕಾಣುತ್ತದೆ
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ದಿನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಶುಭ ದಿನ
  • ಸರಸ್ವತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

publive-image

  • ಸ್ವಾಭಿಮಾನಕ್ಕೆ ಧಕ್ಕೆ ಬರುವ ಸನ್ನಿವೇಶ ಒದಗುತ್ತದೆ
  • ಹೊಸ ಆಲೋಚನೆಗಳ ಬಗ್ಗೆ ಕುತೂಹಲವಿರುತ್ತದೆ
  • ಕೆಲವು ಸವಾಲುಗಳನ್ನು ಎದುರಿಸುತ್ತಿದ್ದರೆ ಅವುಗಳು ಇಂದು ಈಡೇರುತ್ತದೆ
  • ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಪ್ರದರ್ಶಿಸಿ ಗೌರವ ಪಡೆಯಿರಿ, ತಾಳ್ಮೆಯಿರಲಿ
  • ಸಂಬಂಧಿಕರು ನಿಮ್ಮ ಅಭಿವೃದ್ಧಿಯನ್ನು ಸಹಿಸುವುದಿಲ್ಲ
  • ಲಕ್ಷ್ಮೀನಾರಾಯಣರನ್ನು ಆರಾಧಿಸಿ

ಕಟಕ

publive-image

  • ಹಿಂದೆ ಮಾಡಿದ್ದ ಸಾಲದಿಂದ ಇಂದು ಅವಮಾನ ಸಾಧ್ಯತೆ
  • ಸಮಯ ಕೇಳದೆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡಿ
  • ಮನೆಯಲ್ಲಿ ಉತ್ತಮ ವಾತಾವರಣ ಇರುವುದಿಲ್ಲ
  • ಖರ್ಚು ಹೆಚ್ಚು, ಮನಸ್ಸಿಗೆ ಹೆಚ್ಚು ಅತೃಪ್ತಿ ಇರುತ್ತದೆ
  • ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಕಾಳಜಿವಹಿಸಿ
  • ಭಗವತಿ ದೇವಿಯ ಆರಾಧನೆ ಮಾಡಿ

ಸಿಂಹ

publive-image

  • ಇದರಿಂದ ನಿಮ್ಮ ಬೇರೆ ಕೆಲಸಗಳಿಗೂ ಹಿನ್ನಡೆಯಾಗುತ್ತದೆ
  • ಇಂದು ವ್ಯಾಪಾರದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ
  • ಅಕ್ಕಪಕ್ಕದವರಿಂದ ಅವಮಾನ, ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ
  • ಇಂದು ಯಾವ ದುಬಾರಿ ವಸ್ತುವನ್ನು ಖರೀದಿಸಬೇಡಿ
  • ಮಹಾವಿಷ್ಣು, ಮಹಾಲಕ್ಷ್ನಿಯನ್ನು ಆರಾಧನೆ ಮಾಡಿ

ಕನ್ಯಾ

publive-image

  • ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ರಾಜಕೀಯ ನಡೆಯುವ ಸಾಧ್ಯತೆ
  • ನಿಮ್ಮ ಮೇಲೆ ಹಣ, ಕಳ್ಳತನದ ಆರೋಪ ಬರಬಹುದು
  • ನಿಮ್ಮದಲ್ಲದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತೀರಿ
  • ನೀವು ಇಂದು ಸ್ವಲ್ಪ ಜಾಗ್ರತೆಯಿಂದ ಇರಬೇಕಾದ ದಿನ
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥಿಸಿ

ತುಲಾ

publive-image

  • ಇಂದು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ
  • ನಿಮ್ಮ ಕೋಪ ನಿಮ್ಮ ಹಿಡಿತದಲ್ಲಿ ಇರಲಿ
  • ಉತ್ತಮವಾದ ಕೆಲಸದ ಕಡೆ ಗಮನ ಕೊಡಿ
  • ಬೇರೆಯವರಿಗೆ ದುಃಖ ಉಂಟಾಗದಂತೆ ಗಮನಿಸಿ ಮಾತನಾಡಿ
  • ಸಂಬಂಧಿಕರ ಮನೆಯಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆಗಳಿವೆ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ನಿಮ್ಮ ಕೆಲಸವನ್ನು ಕೆಲವರು ಪ್ರಶಂಸೆ ಮಾಡುತ್ತಾರೆ
  • ಇಂದು ಎಲ್ಲಾ ಕಡೆಯಿಂದ ಶುಭಸುದ್ದಿ, ಶುಭಾಷಯಗಳು ಬರುತ್ತವೆ
  • ಹಿಂದೆ ಮಾಡಿದ್ದ ಒಂದು ಕೆಲಸ ಇಂದು ನಿಮಗೆ ಗೌರವ ಕೊಡುತ್ತದೆ
  • ರಾತ್ರಿ ಹೊತ್ತಲ್ಲಿ ಪ್ರಯಾಣ ಮಾಡಬೇಡಿ
  • ನಿಮ್ಮ ಸಲಹೆಗಳಿಂದ ಜನರಿಗೆ ಅನುಕೂಲವಾಗುತ್ತದೆ
  • ಈಶ್ವರನನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ನಿಮ್ಮ ವಿಚಿತ್ರ ನಡವಳಿಕೆಯಿಂದ ನಿಮ್ಮ ಪ್ರೀತಿಪಾತ್ರರು ದೂರವಾಗುತ್ತಾರೆ
  • ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ
  • ಆದರೆ, ವೈಯ್ಯಕ್ತಿಕ ಸ್ವಭಾವದಿಂದ ನಿಮಗೆ ಅವಮಾನವೇ ಹೆಚ್ಚು
  • ಎಲ್ಲಾದರು ಹೊರಡುವುದಿದ್ದರೆ ರಾತ್ರಿಯ ಒಳಗೆ ತಲುಪಿ, ಇಲ್ಲ ಪ್ರಯಾಣವನ್ನು ನಾಳೆಗೆ ಮುಂದೂಡಿ
  • ನವಗ್ರಹ ಪ್ರಾರ್ಥನೆ ಮಾಡಿ

ಮಕರ

publive-image

  • ನಿಮ್ಮ ಹಕ್ಕುಗಳನ್ನು, ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳಿ
  • ಉನ್ನತ ಹುದ್ದೆಯಲ್ಲಿರುವವರಿಗೆ ಅವರ ಕೈಕೆಳಗೆ ಕೆಲಸ ಮಾಡುವವರಿಂದ ತೊಂದರೆ ಸಾಧ್ಯತೆ
  • ಯಾವುದೇ ಫೋನ್ ಕರೆಗಳು, ಸಂದೇಶಗಳು ಬಂದರೆ ತಾಳ್ಮೆಯಿಂದ ಉತ್ತರ ಕೊಡಿ
  • ನಿಮ್ಮ ಮಾತಿನಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರದಂತೆ ಕಾಪಾಡಿಕೊಳ್ಳಿ
  • ವಿಷ್ಣುವನ್ನು ಆರಾಧಿಸಿ

ಕುಂಭ

publive-image

  • ಇಂದು ಹಣಕಾಸಿನ ಸಮಸ್ಯೆ ಉಂಟಾಗಬಹುದು
  • ಹಿಂದೆ ಸಂಗ್ರಹ ಮಾಡಿಟ್ಟಿದ್ದ ಹಣಕ್ಕೆ ಸಂಚಕಾರ ಬರುವ ಸಾಧ್ಯತೆ
  • ಕುಟುಂಬದ ಸದಸ್ಯರೊಂದಿಗೆ ನೀವು ಪ್ರಯಾಣ ಬೆಳೆಸಿ ಆನಂದವಾಗಿರಿ
  • ಹೂಡಿಕೆ ಮಾಡಿದ್ದ ಹಣವು ಬೇರೆಯವರ ಪಾಲಾಗುವುದರಿಂದ ಕೋರ್ಟಿನ ಮೆಟ್ಟಿಲೇರಬಹುದು ಎಚ್ಚರ
  • ಧಾನ್ಯಲಕ್ಷ್ಮಿ, ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಗಂಡ-ಹೆಂಡತಿ ಇಬ್ಬರದ್ದೂ ಒಂದೇ ನಕ್ಷತ್ರ ಒಂದೇ ರಾಶಿ ಆಗಿದ್ದರೆ ಪರಸ್ಪರ ಹೊಂದಾಣಿಕೆ ಇರುವುದಿಲ್ಲ
  • ಇಂದು ಪ್ರವಾಸಕ್ಕೆ ಯೋಗ್ಯವಾದ ದಿನ
  • ನಿಮ್ಮ ಕೈ ಕೆಳಗೆ ಕೆಲಸ ಮಾಡವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಿ
  • ತಾವು ಕ್ಷಮೆಯಾಚಿಸುವ ಪ್ರಸಂಗ ಒದಗಿಬರಬಹುದು
  • ರಾಹುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment