ಹೊಸ ವಾಹನ ಖರೀದಿಯ ಯೋಗವಿದೆ, ಈ ರಾಶಿಗೆ ಶತ್ರುಗಳ ಕಾಟ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಕುಟುಂಬದ ಸದಸ್ಯರಿಂದ ನಿಮಗೆ ಸಹಕಾರ ಸಿಗುವುದಿಲ್ಲ
  • ಮಕ್ಕಳ ವಿಚಾರದಲ್ಲಿ ಸ್ವಲ್ಪ ಬೇಸರವಾಗುವ ಸಾಧ್ಯತೆ ಹೆಚ್ಚು
  • ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ಕುಟುಂಬದ ಸದಸ್ಯರಿಂದ ನಿಮಗೆ ಸಹಕಾರ ಸಿಗುವುದಿಲ್ಲ
  • ಮನಸ್ಸಿನ ಶಾಂತಿ ಕದಡುತ್ತೆ ಸ್ವಲ್ಪ ಜಾಗ್ರತೆವಹಿಸಿ
  • ನಿಮ್ಮನ್ನ ಸೋಲಿಸಲು ಪ್ರತಿಸ್ಪರ್ಧಿಗಳು ಕಾಯ್ತಾ ಇರ್ತಾರೆ ಜಾಗ್ರತೆ
  • ಬೇರೆಯವರ ಆಶ್ರಯದಿಂದ ತಮ್ಮ ಕೆಲಸಗಳನ್ನ ಮಾಡಿಕೊಳ್ಳುತ್ತೇನೆ ಅನ್ನೋ ಸಂಕಲ್ಪ ಬೇಡ
  • ಮನೆಯಿಂದ ಹೊರಗೆ ಹೋದಾಗ ನಿಮಗೆ ಬೆಲೆ, ಗೌರವ ಸಿಗುತ್ತದೆ
  • ಆಂಜನೇಯ ಸ್ವಾಮಿಗೆ ಗಂಧದ ಸೇವೆ ಮಾಡಿಸಿ

ವೃಷಭ

publive-image

  • ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಡಿ
  • ಐಷಾರಾಮಿ ಜೀವನಕ್ಕೆ ಅವಕಾಶವಿದೆ ಅದನ್ನ ಸದುಪಯೋಗ ಪಡಿಸಿಕೊಳ್ಳಿ
  • ದಾಖಲಾತಿಗಳಲ್ಲಿ ವ್ಯತ್ಯಯಗಳಾಗಿ ಗ್ರಾಹಕರಿಂದ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ
  • ಪೂಜೆ,ಜಪ,ಹೋಮ ಮಾಡುವುದರಿಂದ ಉತ್ತಮ ಫಲ ದೊರೆಯುತ್ತದೆ
  • ಭೂ ವ್ಯವಹಾರದಲ್ಲಿರುವ ದೋಷವು ನಿವಾರಣೆಯಾಗುತ್ತದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

publive-image

  • ನಿಮ್ಮಿಬ್ಬರಲ್ಲಿ ಪರಸ್ಪರ ಹೊಂದಾಣಿಕೆ ಇರಲಿ
  • ನೀವು ಸರಿಯಾದ ಮಾಹಿತಿಯನ್ನು ದಾಖಲಾತಿಗಳನ್ನ ಇಟ್ಟುಕೊಂಡು ಗ್ರಾಹಕರೊಂದಿಗೆ ವ್ಯವಹರಿಸಿ
  • ಖರೀದಿಗೆ ಬಂದ ಗ್ರಾಹಕರು ವ್ಯವಹಾರವನ್ನು ಮಾಡದೆ ಹಿಂದಿರುಗಬಹುದು
  • ಈ ದಿನ ತಕ್ಷಣ​ ನಿರ್ಧಾರ ಮಾಡಬೇಡಿ
  • ಮಕ್ಕಳ ವಿಚಾರದಲ್ಲಿ ಸ್ವಲ್ಪ ಬೇಸರವಾಗುವ ಸಾಧ್ಯತೆ ಹೆಚ್ಚು
  • ಮಾತಿನ ಬಗ್ಗೆ ಗಮನ ವಿರಲಿ
  • ಭೂ ಸಂಬಂಧಿ ವ್ಯವಹಾರಿಗಳಿಗೆ ,ರಿಯಲ್​ ಎಸ್ಟೇಟ್​ ಉದ್ಯೋಗಿಗಳಿಗೆ ಅಷ್ಟೊಂದು ಒಳ್ಳೆಯ ದಿನವಲ್ಲ
  • ಮಕ್ಕಳು ಕೂಡ ಶಿಕ್ಷಕರಿಗೆ ವಿರುದ್ಧ ರೀತಿಯಲ್ಲಿ ನಡ್ಕೊಬೇಡಿ
  • ಲಕ್ಷ್ಮೀ ಸರಸ್ವತಿಯರಿಬ್ಬರನ್ನು ಆರಾಧಿಸಬೇಕು

ಕಟಕ

publive-image

  • ಸಾಧನೆ ಮಾಡಬೇಕೆಂದು ಬೇರೆಯವರ ಸಹಾಯದ ನಿರೀಕ್ಷೆಯಲ್ಲಿರೋದಿಂದ್ರ ಆ ನಿರೀಕ್ಷೆ ಹುಸಿಯಾಗುತ್ತೆ
  • ಸಹೋದರರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಗಮನ ಹರಿಸಿ
  • ಶಿಕ್ಷಕರು, ವಿದ್ಯಾರ್ಥಿಗಳ ಮಧ್ಯದಲ್ಲಿ ಅಸಮಾಧಾನ ಉಂಟಾಗುವ ಪರಿಸ್ಥಿತಿ
  • ಶಿಕ್ಷಕರು ಮಕ್ಕಳನ್ನ ನಿಂದಿಸುವುದು, ಹೊಡೆಯುವುದು ಮಾಡಬೇಡಿ
  • ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಬೇರೆಯವರಿಗೆ ಹೋಲಿಕೆ ಮಾಡಿ ಒತ್ತಡ ಹೇರಬೇಡಿ
  • ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬ ಮಾತನ್ನ ಕುಟುಂಬದ ಸದಸ್ಯರು ನಿಮಗೆ ಹೇಳ್ತಾರೆ
  • ಗುರು-ಶಿಷ್ಯರು ತಾಯಿ ಶಾರದೆಯನ್ನು ಪ್ರಾರ್ಥಿಸಿ

ಸಿಂಹ

publive-image

  • ಈ ದಿನ ಓದುವುದರಿಂದ ಭವಿಷ್ಯದಲ್ಲಿ ಅನುಕೂಲವಾಗುತ್ತದೆ
  • ಪದಾರ್ಥಗಳನ್ನ ಆಮದು ರಫ್ತು ಮಾಡುತ್ತಿರುವವರಿಗೆ ಇಂದು ಶುಭದಿನ
  • ಹೊಸ ವಾಹನ ಖರೀದಿಯ ಯೋಗವಿದೆ
  • ಪ್ರಾಮಾಣಿಕ ಪ್ರಯತ್ನ ಮಾಡಿ ಸದಾ ಶುಭಫಲವನ್ನು ಹೊಂದುತ್ತೀರಿ
  • ನಿಮ್ಮ ಮನೆದೇವರ ದರ್ಶನ ಮಾಡಿ

ಕನ್ಯಾ

publive-image

  • ನೀವು ಕೆಲಸ ಮಾಡುವ ಸ್ಥಳದಲ್ಲಿ ಯಾರನ್ನು ನಿರ್ಲಕ್ಷ್ಯ ಮಾಡಬೇಡಿ
  • ವಿದ್ಯಾರ್ಥಿಗಳು ಓದು - ಬರಹದಿಂದ ತುಂಬಾ ಆಯಾಸಗೊಳ್ಳುವ ದಿನ
  • ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವುದಾಗಿರತ್ತೆ
  • ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆಯಿಂದಿರಬೇಕು
  • ಪವಮಾನ ಹೋಮ ಮಾಡಿಸುವುದು ಸೂಕ್ತ ಪರಿಹಾರ

ತುಲಾ

publive-image

  • ತುಲಾ ರಾಶಿಯ ಕ್ರೀಡಾಪಟುಗಳಿಗೆ ಹಿಂದೆ ಮಾಡಿದ ತಪ್ಪುಗಳಿಂದ ಇಂದು ಹಿನ್ನಡೆಯಾಗುತ್ತೆ
  • ಅವಕಾಶದಿಂದ ವಂಚಿತರಾಗುತ್ತೀರಿ ಎಚ್ಚರಿಕೆ
  • ಪ್ರಾಮಾಣಿಕವಾದ ಸ್ಪರ್ಧಾಳುಗಳಿಗೆ ಸದಾಕಾಲ ಜಯ
  • ನಿಮ್ಮ ಹೆತ್ತವರ ಆರ್ಶೀವಾದ ಪಡೆಯಿರಿ
  • ಕುಟುಂಬದಲ್ಲಿ ಸಂತೋಷ ನಿಮ್ಮದಾಗಲಿದೆ
  • ದಿನೇ ದಿನೇ ಶತ್ರುಗಳು ಹೆಚ್ಚಾಗುತ್ತಾರೆ ಜಾಗ್ರತೆ ಇರಲಿ
  • ರಾಜರಾಜೇಶ್ವರಿಯನ್ನು ಉಪಾಸನೆ ಮಾಡಿ

ವೃಶ್ಚಿಕ

publive-image

  • ಕಾರ್ಯಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಹರಸಾಹಸ ಪಡಬೇಕಾಗುತ್ತದೆ
  • ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಬಹುದು
  • ಮನೆಯನ್ನ ನವೀಕರಿಸುವ ಯೋಗವಿದೆ
  • ಶತ್ರುಗಳ ಮೇಲೆ ನಿಮ್ಮ ಹಿಡಿತ ಹೆಚ್ಚಾಗಲಿದೆ
  • ಮಧ್ಯಾಹ್ನದ ಹೊತ್ತಿಗೆ ಒಂದು ಕಹಿಸುದ್ದಿ ನಿಮಗೆ ಆಘಾತವನ್ನುಂಟು ಮಾಡುತ್ತೆ
  • ಯಾವುದೇ ಒಪ್ಪಂದಗಳಿಗೆ ಸಹಿ ಹಾಕಬೇಡಿ
  • ಯಾವುದೇ ವ್ಯವಹಾರದಲ್ಲಿ ಇಂದು ಮಧ್ಯಸ್ಥಿಕೆಯನ್ನ ವಹಿಸಬೇಡಿ.
  • ಹನುಮಾನ್​ ಚಾಲೀಸ್​ ಪಠಿಸಿ

ಧನಸ್ಸು

publive-image

  • ಉದ್ಯೋಗದಲ್ಲಿ ನಿಮಗೆ ಬೋನಸ್ ಸಿಗಬಹುದು
  • ವ್ಯವಹಾರದಲ್ಲಿ ಉತ್ತಮ ವ್ಯಕ್ತಿಗಳ ಸಂರ್ಪಕ ದೊರೆಯಬಹುದು
  • ನಿಮ್ಮ ಪ್ರತಿಭೆ ಬೇರೆಯವರಿಗೆ ಮಾದರಿಯಾಗುತ್ತೆ
  • ಕಷ್ಟಕ್ಕೆ ಸಿಲುಕುತ್ತೀರಿ ಜಾಗ್ರತೆ ವಹಿಸಿ
  • ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಿಮ್ಮ ತೀರ್ಮಾನವನ್ನ ಕೈಗೊಳ್ಳಿ
  • ಗಣಪತಿಯ ಆರಾಧನೆ ಮಾಡಿ

ಮಕರ

publive-image

  • ಕಬ್ಬಿಣದ ವಸ್ತುವನ್ನು ಉಪಯೋಗಿಸಬೇಡಿ
  • ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ
  • ಅವಿವಾಹಿತರು ಇಂದು ವಿವಾಹ ಮಂಗಳ ಕಾರ್ಯಕ್ಕೆ ಪ್ರಯತ್ನ ಪಡುತ್ತೀರಿ
  • ನಿಮ್ಮ ಕೆಲಸದಲ್ಲಿ ತೃಪ್ತಿ ಹೊಂದುತ್ತೀರಿ
  • ಶ್ರೀನಿವಾಸ ಕಲ್ಯಾಣ ಮಾಡಿಸಿ

ಕುಂಭ

publive-image

  • ಸಂಬಂಧಿಕರು ಮಧ್ಯ ಮಾತಾಡಿ ಸಂಬಂಧ ಮುರಿದುಬೀಳುವ ಸಾಧ್ಯತೆ ಇದೆ ಎಚ್ಚರಿಕೆ
  • ಸಂಜೆಯ ವೇಳೆ ಮದುವೆಯ ವಿಚಾರದಲ್ಲಿ ಬೇಸರ ಪಡುತ್ತೀರಿ
  • ಇಂದು ಕೈ ಅಥವಾ ಕೈ ಬೆರಳಿಗೆ ತೊಂದರೆಯಾಗಬಹುದು ಜಾಗ್ರತೆ ವಹಿಸಿ
  • ಜನಬಲ ಹಣಬಲ ಎರಡೂ ನಿಮ್ಮದಾಗುತ್ತೆ
  • ವಕೀಲರಿಗೆ ಇಂದು ಶುಭದಿನ
  • ವಾದ-ವಿವಾದಗಳ ವಿಷಯ ಇತ್ಯರ್ಥಗೊಳ್ಳುವ ದಿನ
  • ನಿಮ್ಮ ಪ್ರತಿಭೆಗೆ ಸದಾ ಕಾಲ ಬೆಲೆ ಇರುತ್ತದೆ
  • ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಿ
  • ದುರ್ಗಾದೇವಿಯನ್ನು ಪ್ರಾರ್ಥಿಸಿ

ಮೀನ 

publive-image

  • ನಿಮಗೆ ಶತೃಗಳು ಹೆಚ್ಚಾಗುತ್ತಾರೆ ಜಾಗ್ರತೆವಹಿಸಿ
  • ನೀವು ಮಾಡಿದ ಕೆಲಸದಿಂದ ಬೇರೆಯವರು ಅನುಕೂಲವನ್ನು ಪಡೆಯುತ್ತಾರೆ
  • ಪುಣ್ಯಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಸಫಲತೆ ಕಾಣುತ್ತೀರಿ
  • ಕುಟುಂಬದವರಿಂದ ಮನಸಿಗೆ ಬೇಸರ ಉಂಟಾಗಬಹುದು
  • ಹೊರಗಿನಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತದೆ
  • ನಿಮಗೆ ಮೋಸ ಮಾಡಿದವರ ಜೊತೆ ಬಾಂಧವ್ಯ ದೂರ ಆಗಬಹುದು
  • ಗೌರಿ ದೇವಿಯನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment