/newsfirstlive-kannada/media/post_attachments/wp-content/uploads/2024/11/RCB-5.jpg)
ಕಳೆದ 17 ಸೀಸನ್ಗಳಿಂದಲೂ ಕಪ್ ಗೆಲ್ಲಲೇಬೇಕು ಅನ್ನೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಮುಂದುವರಿದಿದೆ. ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ ಅನ್ನೋ ಆರ್ಸಿಬಿ ಫೈನಲ್ಗೆ ಹೋಗದೆ ಬರೋಬ್ಬರಿ 8 ವರ್ಷಗಳು ಕಳೆದಿವೆ. ಕಳೆದ ಸೀಸನ್ನಲ್ಲೂ ಆರ್ಸಿಬಿ 14 ಪಂದ್ಯಗಳಲ್ಲಿ ಕೇವಲ 7 ಮ್ಯಾಚ್ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಹಾಗಾಗಿ ಮುಂದಿನ ಸೀಸನ್ನಲ್ಲಾದ್ರೂ ಕಪ್ ಗೆಲ್ಲಬೇಕು ಎಂದಿರೋ ಆರ್ಸಿಬಿ ಬಲಿಷ್ಠ ತಂಡ ಕಟ್ಟಿದೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪೂರ್ಣಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್ಸಿಬಿ ಈ ಮೂಲಕ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ. ಆದರೀಗ, ಆರ್ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಪ್ರಶ್ನೆ ಇದೆ.
ಇನ್ನೊಂದೆಡೆ ಬರೋಬ್ಬರಿ 83 ಕೋಟಿ ಹಣವನ್ನು ಇಟ್ಟುಕೊಂಡು ಆಕ್ಷನ್ಗೆ ಹೋಗಿದ್ದ ಆರ್ಸಿಬಿ, ಡಿಸೆಂಟ್ ತಂಡ ಕಟ್ಟಿದೆ. ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿರೋ ಹಲವರು ಸ್ಟಾರ್ಗಳು. ಇವರ ಖರೀದಿ ನಿಜಕ್ಕೂ ಕ್ರಿಕೆಟ್ ವಲಯದಲ್ಲಿ ಸರ್ಪ್ರೈಸ್ ಅನಿಸಿದೆ. ಅಂದ್ಹಾಗೆ ಆ ಸರ್ಪ್ರೈಸ್ ಖರೀದಿಗಳನ್ನ ಸುಖಾ ಸುಮ್ಮನೆ ಮಾಡಿದ್ದಲ್ಲ.
ಅಭಿನಂದನ್ ಸಿಂಗ್
ಉತ್ತರ ಪ್ರದೇಶದ ಯುವ ಪ್ರತಿಭೆ ಅಭಿನಂದನ್ ಸಿಂಗ್. ಈತನನ್ನ ಮತ್ತೊಬ್ಬ ಬುಮ್ರಾ ಅನ್ನಬಹುದು. ವೇಗಿ ಬುಮ್ರಾ ಅವರಂತೆ ಬೌಲಿಂಗ್ ಮಾಡೋ ಅಭಿನಂದನ್ ಸಿಂಗ್, ಈ ಸೀಸನ್ ಉತ್ತರ ಪ್ರದೇಶ ಟಿ20 ಲೀಗ್ನ ಟಾಪ್ 5 ಬೌಲರ್ಗಳಲ್ಲಿ ಒಬ್ಬರು. 10 ಪಂದ್ಯಗಳಲ್ಲಿ 15 ವಿಕೆಟ್ ಉರುಳಿಸಿದ ಅಭಿನಂದನ್, ಡಿ.ವೈ ಪಾಟೀಲ್ ಟೂರ್ನಮೆಂಟ್ ಫೈನಲ್ ಮ್ಯಾನ್ ಆಫ್ ಮ್ಯಾಚ್ ಆಗಿ ಹೊರಹೊಮ್ಮಿದರು. ಈತನ ಪರ್ಫಾಮೆನ್ಸ್ನ ಕ್ಲೋಸ್ ಆಗಿ ಮಾನಿಟರ್ ಮಾಡಿದ ಬಳಿಕವೇ ಆರ್ಸಿಬಿ ಖರೀದಿಸಿರೋದು. ಇವರು ಆರ್ಸಿಬಿ ತಂಡದ ಬೆಸ್ಟ್ ಪಿಕ್ ಆಗಿದೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಬಿಗ್ ಶಾಕ್; ಬುಮ್ರಾ 3ನೇ ಟೆಸ್ಟ್ ಆಡೋದು ಡೌಟ್; ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ