/newsfirstlive-kannada/media/post_attachments/wp-content/uploads/2024/06/KOHLI-JAISWAL.jpg)
ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ತಿಲಕ್​ ವರ್ಮಾ. ಇವರು ಎದುರಾಳಿ ಬೌಲರ್​​ಗಳಿಗೆ ನಡುಕ ಹುಟ್ಟಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಟಿ20 ಮಾತ್ರವಲ್ಲ ಭಾರತ ಏಕದಿನ ತಂಡದಲ್ಲೂ ಖಾಯಂ ಸ್ಥಾನ ಪಡೆಯಲು ಅರ್ಹರು ಕೂಡ. ಹೀಗಾಗಿ ಈ ಬ್ಯಾಟರ್​​ನಿಂದ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಕುತ್ತು ತಂದಿದೆ.
ಇಂಗ್ಲೆಂಡ್​ ವಿರುದ್ಧ ತಿಲಕ್​ ವರ್ಮಾ ಆರ್ಭಟ
ಇತ್ತೀಚೆಗೆ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್​ ಮಾಡಿದ್ರು. ಇವರ ಬ್ಯಾಟಿಂಗ್​​ಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ನಂತರ ಮತ್ತೊಬ್ಬ ಜವಾಬ್ದಾರಿಯುವ ಬ್ಯಾಟರ್​ ಸಿಕ್ಕಿದ್ದಾರೆ ಎನ್ನಬಹುದು. ಇವರನ್ನು ಜೂನಿಯರ್​ ಕೊಹ್ಲಿ ಎಂದರೂ ತಪ್ಪಾಗಲಾರದು.
/newsfirstlive-kannada/media/post_attachments/wp-content/uploads/2024/11/Tilak-Verma.jpg)
ತಿಲಕ್​ ವರ್ಮಾ ಬ್ಯಾಟಿಂಗ್​ನಿಂದ ಭಾರತಕ್ಕೆ ಜಯ
ಇನ್ನು, ತಿಲಕ್ ವರ್ಮಾ ಅಜೇಯ 72 ರನ್ಗಳ ಇನ್ನಿಂಗ್ಸ್ ಆಡಿದ್ರು. ಇದರ ಪರಿಣಾಮ ಇಂಗ್ಲೆಂಡ್​ ತಂಡ ಭಾರತದ ವಿರುದ್ಧ 2 ವಿಕೆಟ್​ಗಳಿಂದ ಗೆದ್ದು ಬೀಗಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ತಿಲಕ್ ವರ್ಮಾ 55 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ಗಳ ನೆರವಿನಿಂದ ಅಜೇಯ 72 ರನ್ ಗಳಿಸಿದರು. ಇವರು ಕಳೆದ 4 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಮವಾಗಿ 107*, 120*, 19* ಮತ್ತು 72* ರನ್ ಗಳಿಸಿದ್ದಾರೆ. ಹೀಗಾಗಿ ಇವರನ್ನು ಭಾರತದ ಏಕದಿನ ತಂಡದಲ್ಲಿ ಶ್ರೇಯಸ್​ ಅಯ್ಯರ್​ ಬದಲಿಗೆ 4ನೇ ಕ್ರಮಾಂಕದಲ್ಲಿ ಖಾಯಂ ಆಗಿ ಆಡಿಸಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ.
ಶ್ರೇಯಸ್​ ಅಯ್ಯರ್​ಗೆ ಶಾಕ್​​
ಭಾರತ ತಂಡದ ಸ್ಟಾರ್​ ಪ್ಲೇಯರ್​​ ಶ್ರೇಯಸ್​ ಅಯ್ಯರ್​​. ಇವರು ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ ದೇಶಿಯ ಕ್ರಿಕೆಟ್​​ನಲ್ಲಿ ಮುಂಬೈ ರಣಜಿ ತಂಡದ ಕ್ಯಾಪ್ಟನ್​ ಆಗಿ ಅಬ್ಬರಿಸಿದ್ದರು. ಇಷ್ಟೇ ಅಲ್ಲ, ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿ ಅಮೋಘ ಪ್ರದರ್ಶನ ನೀಡಿ ಬಿಸಿಸಿಐ ಗಮನ ಸೆಳೆದಿದ್ರು. ಹೀಗಾಗಿ ಶ್ರೇಯಸ್​ ಅಯ್ಯರ್​ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ. ಒಂದು ವೇಳೆ ಶ್ರೇಯಸ್​ ಅಯ್ಯರ್​ ಭಾರತದ ಪರ ಮಿಂಚದೆ ಹೋದಲ್ಲಿ ತಿಲಕ್​ ವರ್ಮಾಗೆ ಬಿಸಿಸಿಐ ಮಣೆ ಹಾಕಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us