/newsfirstlive-kannada/media/post_attachments/wp-content/uploads/2024/11/RCB-1.jpg)
ಐಪಿಎಲ್ ಮೆಗಾ ಹರಾಜಿಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈ ನಡುವೆ ಫ್ರಾಂಚೈಸಿಗಳ ನಡುವೆ ಸ್ಟಾರ್ಗಳ ಖರೀದಿ ಸಂಬಂಧ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.
ಆಟಗಾರರ ಖರೀದಿಸುವ ಲೆಕ್ಕಾಚಾರದ ವಿಚಾರದಲ್ಲಿ ನಮ್ಮ ಆರ್ಸಿಬಿ ಕೂಡ ಹಿಂದೆ ಬಿದ್ದಿಲ್ಲ. ಈಗಾಗಲೇ ಮೂವರು ಆಟಗಾರರನ್ನು ಉಳಿಸಿಕೊಂಡಿರುವ ಆರ್ಸಿಬಿ, ಆರ್ಟಿಎಂ ಕಾರ್ಡ್ ಮೂಲಕ ಮತ್ತೆ ಮೂವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿದೆ. ಅದರ ಹೊರತಾಗಿ ತಂಡಕ್ಕೆ ಹೊಸ ಮುಖಗಳನ್ನು ಪರಿಚಯ ಮಾಡಿಸಲಿದೆ.
ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಯುವ ವೇಗಿ ಖರೀದಿಸಲು ಆರ್ಸಿಬಿ ಪ್ಲಾನ್; ಜಿದ್ದಿಗೆ ಬಿದ್ದ LSG
ಅದರಲ್ಲೂ ಕೆ.ಎಲ್.ರಾಹುಲ್ ಹಾಗೂ ಯಜುವೇಂದ್ರ ಚಹಾಲ್ರನ್ನು ಟಾರ್ಗೆಟ್ ಮಾಡಿದೆ. ಇವರಿಬ್ಬರು ಒಂದು ಕಾಲದಲ್ಲಿ ಆರ್ಸಿಬಿ ಸ್ಟಾರ್ಗಳಾಗಿದ್ದರು. ಮತ್ತೆ ಇಬ್ಬರನ್ನು ತಂಡಕ್ಕೆ ಮರಳಿ ತರುವ ಪ್ರಯತ್ನದಲ್ಲಿದೆ. ಜೊತೆಗೆ ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ರಬಾಡ ಮೇಲೆ ಆರ್ಸಿಬಿ ಕಣ್ಣಿಟ್ಟಿದೆ ಎಂದು ವರದಿಯಾಗಿದೆ.
ಕಗಿಸೋ ರಬಾಡ..
ಹೌದು ವರದಿಗಳ ಪ್ರಕಾರ ಸಿರಾಜ್, ವಿಜಯಕುಮಾರ್ ವೈಶಾಕ್ ಇವಱರೂ ಆರ್ಸಿಬಿ ಟಾರ್ಗೆಟ್ ಅಲ್ಲ. ರಬಾಡ ಅವರನ್ನು ತಂಡಕ್ಕೆ ಕರೆದುಕೊಂಡು ಬರಲು ಮ್ಯಾನೇಜ್ಮೆಂಟ್ ತಯಾರಿ ನಡೆಸಿದೆಯಂತೆ. ಅನುಭವ ಇರುವ ಈ ವೇಗಿ ತಂಡದಲ್ಲಿದ್ದರೆ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಬಹುದು ಅನ್ನೋದು ಆರ್ಸಿಬಿ ಲೆಕ್ಕ. ಪ್ರತಿ ಐಪಿಎಲ್ನಲ್ಲೂ ಆರ್ಸಿಬಿ ಫೇಲ್ ಆಗ್ತಿರೋದೇ ಬೌಲಿಂಗ್ ವಿಭಾಗದಲ್ಲಿ. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಅನುಭವಿ ಬೌಲರ್ಗಳನ್ನು ಕರ್ಕೊಂಡು ಬಂದು ಸ್ಟ್ರಾಂಗ್ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅಂದು ತುತ್ತು ಊಟಕ್ಕೂ ಪರದಾಟ.. ಇಂದು 13 ಕೋಟಿ ಒಡೆಯ.. ರಿಂಕು ಸಿಂಗ್ ಐಷಾರಾಮಿ ಬಂಗಲೆ ಹೆಂಗಿದೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್