newsfirstkannada.com

‘20 ಜನ ಮೈಯೆಲ್ಲಾ ರಕ್ತ ಬರುವಂತೆ ಹೊಡೆದ್ರು’- ಹಲ್ಲೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ನಟ‌ ಚೇತನ್‌ ಚಂದ್ರ

Share :

Published May 13, 2024 at 12:13pm

Update May 13, 2024 at 12:15pm

    ದೇವಾಲಯಕ್ಕೆ ಹೋಗಿ ಬರುವಾಗ ಸುಮಾರು 20 ಮಂದಿಯಿಂದ ಹಲ್ಲೆ

    ತನ್ನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ನಟ

    ಚೆನ್ನಾಗಿ ಕುಡಿದಿದ್ದ, ನಾನು ರಾಬರಿ ಮಾಡಲು ಬಂದಿದ್ದಾರೆ ಅನ್ಕೊಂಡಿದ್ದೆ

ಬೆಂಗಳೂರು: ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ಕಗ್ಗಲಿಪುರದ ಬಳಿ ಸ್ಯಾಂಡಲ್​ವುಡ್ ನಟ‌ ಚೇತನ್‌ ಚಂದ್ರ ಮೇಲೆ ಪುಂಡರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವತಃ ನಟ‌ ಚೇತನ್‌ ಚಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಚೇತನ್ ಚಂದ್ರ ಅವರು ಮೊಬೈಲ್​ನ ಸೆಲ್ಫಿ ಕ್ಯಾಮೆರಾ ಮೂಲಕ ಮಾತನಾಡಿ, ಮದ್ಯಪಾನ ಮಾಡಿದ್ದ ಗುಂಪೊಂದು ನನ್ನ ಕಾರನ್ನು ಅಡ್ಡ ಹಾಕಿ, ಸುಮಾರು 20 ಜನರು ಸೇರಿ ನನಗೆ ಮೈಯೆಲ್ಲ ರಕ್ತ ಬರುವಂತೆ ಚೆನ್ನಾಗಿ ಹೊಡೆದಿದ್ದಾರೆ. ಅವರು ಯಾಕೆ ಅಡ್ಡ ಹಾಕಿ ಹೊಡೆದರು ಅಂತ ಗೊತ್ತಿಲ್ಲ. ಸದ್ಯ ಇದೀಗ ಕಗ್ಗಲೀಪುರ ಪೊಲೀಸ್ ಠಾಣೆ ಪಕ್ಕ ಆಸ್ಪತ್ರೆ ಇದೆ. ಆ ಆಸ್ಪತ್ರೆಗೆ ಬಂದಿದ್ದೇನೆ. ದೇವಾಲಯಕ್ಕೆ ಹೋಗಿ ಬರುವಾಗ ಇದು ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

ಈ ವಿಡಿಯೋವನ್ನು ನನ್ನ ಅಪ್ಪ, ಅಮ್ಮ, ಹೆಂಡತಿ, ಫ್ರೆಂಡ್ಸ್​ ನೋಡುತ್ತಿರುತ್ತಾರೆ. ಏನು ಆಗಿಲ್ಲ ನಾನು ಚೆನ್ನಾಗಿದ್ದೇನೆ. ಹುಷಾರ್ ಆಗಿದ್ದೇನೆ. ಮದರ್ಸ್​ ಡೇ ಹಿನ್ನೆಲೆಯಲ್ಲಿ ಅಮ್ಮನ ಹೊರಗೆ ಕರೆದುಕೊಂಡು ಹೋಗಿ ಬಂದಿದ್ದೆ. ಬಳಿಕ ದೇವಾಲಯಕ್ಕೆಂದು ಬಂದು ವಾಪಸ್ ಆಗುವಾಗ ದಾಳಿ ಮಾಡಿದ್ದಾರೆ. ಮೂಗು ಮುರಿದು ಹಾಕಿದ್ದಾರೆ ಅನಿಸುತ್ತೆ. ಅವನು ಕಿರುಚಿಕೊಂಡು ಬಂದು ಕಾರಿಗೆ ಅಡ್ಡ ಹಾಕಿದ. ಚೆನ್ನಾಗಿ ಕುಡಿದಿದ್ದ, ನಾನು ರಾಬರಿ ಮಾಡಲು ಬಂದಿದ್ದಾರೆ ಅನ್ಕೊಂಡಿದ್ದೆ. ಅವನ ತಮ್ಮ, ತಂಗಿ ಅನಿಸುತ್ತೆ. ಅವರು ಓಡೋಡಿ ಬಂದಿದ್ದೇ ತಡ ಹೊಡೆದಿದ್ದಾರೆ. ಕಾರಿನ ಮೀರರ್​ ಎಲ್ಲ ಹೊಡೆದು ಹಾಕಿದ್ದಾರೆ. ಈ ತರದ ತುಂಬಾ ಕೆಟ್ಟ ಜನ ಥ್ಹೂ. ಆ ಮೇಲೆ ಹುಡುಗಿ ಬಂದು ನನಗೆ ಹೊಡೆದ ಅಂತ ಹೇಳಿದ್ದಾಳೆ. ಅಫಿಶೀಯಲ್ ಆಗಿ ಇರುತ್ತೀರಾ ಅಫಿಶೀಯಲ್ ಆಗಿ ಇರಿ. ಅವನು ಚೆನ್ನಾಗಿ ಕುಡಿದಿದ್ದ. ಪೊಲೀಸ್ ಠಾಣೆ ಬಳಿ ಅವನು ಬಂದಿಲ್ಲ. ಬೇರೆಯವರು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘20 ಜನ ಮೈಯೆಲ್ಲಾ ರಕ್ತ ಬರುವಂತೆ ಹೊಡೆದ್ರು’- ಹಲ್ಲೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ನಟ‌ ಚೇತನ್‌ ಚಂದ್ರ

https://newsfirstlive.com/wp-content/uploads/2024/05/CHETAN_CHANDRA.jpg

    ದೇವಾಲಯಕ್ಕೆ ಹೋಗಿ ಬರುವಾಗ ಸುಮಾರು 20 ಮಂದಿಯಿಂದ ಹಲ್ಲೆ

    ತನ್ನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ನಟ

    ಚೆನ್ನಾಗಿ ಕುಡಿದಿದ್ದ, ನಾನು ರಾಬರಿ ಮಾಡಲು ಬಂದಿದ್ದಾರೆ ಅನ್ಕೊಂಡಿದ್ದೆ

ಬೆಂಗಳೂರು: ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ಕಗ್ಗಲಿಪುರದ ಬಳಿ ಸ್ಯಾಂಡಲ್​ವುಡ್ ನಟ‌ ಚೇತನ್‌ ಚಂದ್ರ ಮೇಲೆ ಪುಂಡರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವತಃ ನಟ‌ ಚೇತನ್‌ ಚಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ನಟ ಚೇತನ್ ಚಂದ್ರ ಅವರು ಮೊಬೈಲ್​ನ ಸೆಲ್ಫಿ ಕ್ಯಾಮೆರಾ ಮೂಲಕ ಮಾತನಾಡಿ, ಮದ್ಯಪಾನ ಮಾಡಿದ್ದ ಗುಂಪೊಂದು ನನ್ನ ಕಾರನ್ನು ಅಡ್ಡ ಹಾಕಿ, ಸುಮಾರು 20 ಜನರು ಸೇರಿ ನನಗೆ ಮೈಯೆಲ್ಲ ರಕ್ತ ಬರುವಂತೆ ಚೆನ್ನಾಗಿ ಹೊಡೆದಿದ್ದಾರೆ. ಅವರು ಯಾಕೆ ಅಡ್ಡ ಹಾಕಿ ಹೊಡೆದರು ಅಂತ ಗೊತ್ತಿಲ್ಲ. ಸದ್ಯ ಇದೀಗ ಕಗ್ಗಲೀಪುರ ಪೊಲೀಸ್ ಠಾಣೆ ಪಕ್ಕ ಆಸ್ಪತ್ರೆ ಇದೆ. ಆ ಆಸ್ಪತ್ರೆಗೆ ಬಂದಿದ್ದೇನೆ. ದೇವಾಲಯಕ್ಕೆ ಹೋಗಿ ಬರುವಾಗ ಇದು ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟ‌ ಚೇತನ್​ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ.. ಸಿನಿಮಾ ಸ್ಟೈಲ್​ನಲ್ಲಿ ರಾಬರಿ.. ಅಸಲಿಗೆ ಆಗಿದ್ದೇನು..?

ಈ ವಿಡಿಯೋವನ್ನು ನನ್ನ ಅಪ್ಪ, ಅಮ್ಮ, ಹೆಂಡತಿ, ಫ್ರೆಂಡ್ಸ್​ ನೋಡುತ್ತಿರುತ್ತಾರೆ. ಏನು ಆಗಿಲ್ಲ ನಾನು ಚೆನ್ನಾಗಿದ್ದೇನೆ. ಹುಷಾರ್ ಆಗಿದ್ದೇನೆ. ಮದರ್ಸ್​ ಡೇ ಹಿನ್ನೆಲೆಯಲ್ಲಿ ಅಮ್ಮನ ಹೊರಗೆ ಕರೆದುಕೊಂಡು ಹೋಗಿ ಬಂದಿದ್ದೆ. ಬಳಿಕ ದೇವಾಲಯಕ್ಕೆಂದು ಬಂದು ವಾಪಸ್ ಆಗುವಾಗ ದಾಳಿ ಮಾಡಿದ್ದಾರೆ. ಮೂಗು ಮುರಿದು ಹಾಕಿದ್ದಾರೆ ಅನಿಸುತ್ತೆ. ಅವನು ಕಿರುಚಿಕೊಂಡು ಬಂದು ಕಾರಿಗೆ ಅಡ್ಡ ಹಾಕಿದ. ಚೆನ್ನಾಗಿ ಕುಡಿದಿದ್ದ, ನಾನು ರಾಬರಿ ಮಾಡಲು ಬಂದಿದ್ದಾರೆ ಅನ್ಕೊಂಡಿದ್ದೆ. ಅವನ ತಮ್ಮ, ತಂಗಿ ಅನಿಸುತ್ತೆ. ಅವರು ಓಡೋಡಿ ಬಂದಿದ್ದೇ ತಡ ಹೊಡೆದಿದ್ದಾರೆ. ಕಾರಿನ ಮೀರರ್​ ಎಲ್ಲ ಹೊಡೆದು ಹಾಕಿದ್ದಾರೆ. ಈ ತರದ ತುಂಬಾ ಕೆಟ್ಟ ಜನ ಥ್ಹೂ. ಆ ಮೇಲೆ ಹುಡುಗಿ ಬಂದು ನನಗೆ ಹೊಡೆದ ಅಂತ ಹೇಳಿದ್ದಾಳೆ. ಅಫಿಶೀಯಲ್ ಆಗಿ ಇರುತ್ತೀರಾ ಅಫಿಶೀಯಲ್ ಆಗಿ ಇರಿ. ಅವನು ಚೆನ್ನಾಗಿ ಕುಡಿದಿದ್ದ. ಪೊಲೀಸ್ ಠಾಣೆ ಬಳಿ ಅವನು ಬಂದಿಲ್ಲ. ಬೇರೆಯವರು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More