ನಿನ್ನೆ ರಾತ್ರಿ ದರ್ಶನ್​​ಗೆ ಮತ್ತಷ್ಟು ಟೆನ್ಷನ್, ಬಿಡುವಿಲ್ಲದ ಚಡಪಡಿಕೆ.. ಕೋರ್ಟ್​​ನಲ್ಲಿ ಇಂದು ಮಹತ್ವದ ಬೆಳವಣಿಗೆ ನಿರೀಕ್ಷೆ

author-image
Veena Gangani
Updated On
ಜೈಲಲ್ಲಿ ಅನ್ನ ತಿನ್ನುವುದು ಬಿಟ್ಟ ದರ್ಶನ್.. ಈ ಮಾತ್ರೆಗಳನ್ನ ಸೇವನೆ ಮಾಡುತ್ತಿರುವುದು ಏಕೆ?
Advertisment
  • ಸೆಂಟ್ರಲ್ ಜೈಲಿನಲ್ಲಿ 13 ದಿನ ಕಳೆದ ದರ್ಶನ್, ನ್ಯಾಯಾಂಗ ಬಂಧನ ಅಂತ್ಯ
  • ಇಂದು ಬಳ್ಳಾರಿ ಜೈಲಿಂದ ಬೇರೆ ಜೈಲಿಗೆ ಶಿಫ್ಟ್‌ಗೆ ಮನವಿ ಸಲ್ಲಿಕೆ ಸಾಧ್ಯತೆ
  • ಬಳ್ಳಾರಿ ಜೈಲ್‌ನ‌ ಕಠಿಣತೆಗೆ ಹೈರಾಣಾದ ದರ್ಶನ್, ರಿಲೀಫ್​ಗಾಗಿ ಚಡಪಡಿಕೆ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್​ ಆರೋಪದ ಮೇಲೆ ಪರಪ್ಪನ ಅಗ್ರಹಾರದಿಂದ ಸೆಂಟ್ರಲ್ ಜೈಲ್​ಗೆ ದರ್ಶನ್ ಶಿಫ್ಟ್​ ಆಗಿದ್ದಾರೆ. ಇಂದು ದರ್ಶನ್ ನ್ಯಾಯಾಂಗ ಬಂಧನ ಅಂತ್ಯವಾಗಿದೆ. ಹೀಗಾಗಿ ನಿನ್ನೆ ರಾತ್ರಿಯಿಂದಲೇ‌ ನಟ ದರ್ಶನ್​ ಟೆನ್ಷನ್ ಶುರುವಾಗಿದೆ.

ಇದನ್ನೂ ಓದಿ:ಹೊಸ ಲುಕ್​ನಲ್ಲಿ ಬಿಗ್​ಬಾಸ್​ ಮಾಜಿ ಸ್ಪರ್ಧಿ ಸಿರಿ; ನಿಮ್ಗೆ ಮಾತ್ರ ವಯಸ್ಸೇ ಆಗಿಲ್ವಲ್ಲ ಮೇಡಂ ಅಂದ್ರು ಫ್ಯಾನ್​

publive-image

ಪರಪ್ಪನ ಅಗ್ರಹಾರದಿಂದ ನಟ ದರ್ಶನ್​ನನ್ನು ಆಗಸ್ಟ್​ 29ರಂದು ಸೆಂಟ್ರಲ್ ಜೈಲಿಗೆ ಶಿಫ್ಟ್​ ಮಾಡಲಾಗಿತ್ತು. ಇಂದಿಗೆ 13 ದಿನಗಳ ನ್ಯಾಯಾಂಗ ಬಂಧನ ಅಂತ್ಯವಾಗಿದೆ. ಮತ್ತೆ ಎಲ್ಲಿ ನ್ಯಾಯಾಂಗ ವಿಸ್ತರಣೆ ಮಾಡುತ್ತಾರೆ ಎಂಬ ಆತಂಕ ಮನೆಮಾಡಿದೆ. ಇಂದು ನಟ ದರ್ಶನ್​ ಬಳ್ಳಾರಿ ಜೈಲ್‌ನ ವಿಸಿ ಮೂಲಕ ಕೋರ್ಟ್ ಕಛೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್​ ಮುಂದೆ ಹಾಜರಾಗಲಿದ್ದಾರೆ.

publive-image

ಈ ವೇಳೆ ಸೆಂಟ್ರಲ್ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್‌ಗೆ ಮಾಡಲು ದರ್ಶನ್​ ಮನವಿ ಮಾಡೋ ಸಾಧ್ಯತೆ ಇದೆ. ಈಗಾಗಲೇ ಬೇರೆ ಜೈಲ್‌ ಶಿಫ್ಟ್‌ಗೆ ಕುಟುಂಬಸ್ಥರೊಂದಿಗೆ ದರ್ಶನ್ ಚರ್ಚೆ ಮಾಡಿದ್ದಾರಂತೆ. ನ್ಯಾಯಾಂಗ ಬಂಧನದ ತೀರ್ಮಾನ, ಬೇಲ್ ಅರ್ಜಿ ಸಲ್ಲಿಕೆ ಬಳಿಕ ಶಿಫ್ಟ್‌ಗೆ ದರ್ಶನ್ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ. ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ಹತ್ತಿರದ ಜೈಲ್‍ ಶಿಫ್ಟ್‌ಗೆ ದರ್ಶನ್ ಕುಟುಂಬಸ್ಥರ ಚಿಂತನೆ ನಡೆಸಿದ್ದಾರಂತೆ. ಹೀಗಾಗಿ ಇಂದು ದರ್ಶನ ವಕೀಲರಿಂದ ಸಲಹೆ ಪಡೆದು ಶಿಫ್ಟ್‌ಗೆ ಅರ್ಜಿ ಸಲ್ಲಿಕೆ‌ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment