ಹೊಸ ಸಾಹಸಕ್ಕೆ ಮುಂದಾದ ಸ್ಟಾರ್ ನಟಿ.. ದೆವ್ವದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದೇಕೆ ಸುಧಾರಾಣಿ..?

author-image
Veena Gangani
Updated On
ಹೊಸ ಸಾಹಸಕ್ಕೆ ಮುಂದಾದ ಸ್ಟಾರ್ ನಟಿ.. ದೆವ್ವದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದೇಕೆ ಸುಧಾರಾಣಿ..?
Advertisment
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯ್ತು ಈ ಪೋಸ್ಟ್​
  • ತುಳಿಸಿ ಪಾತ್ರಕ್ಕೆ ಹೆಚ್ಚು ಪ್ರೀತಿ ಕೊಡ್ತಿದ್ದಾರೆ ಸೀರಿಯಲ್​ ವೀಕ್ಷಕರು
  • ಚಂದನವನದ ಚಲುವೆ ಸುಧಾರಾಣಿ ಮುಂದಿನ ಹೆಜ್ಜೆಗೆ ಫ್ಯಾನ್ಸ್​ ಹಾರೈಕೆ

ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಸುಧಾರಾಣಿ ಅವರು ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಲೋಕಕ್ಕೆ ಕಾಲಿಟ್ಟು ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಟಾಪ್​ 6ರಲ್ಲಿ ಯಾರ ಕೈಗೆ ಸೇರಲಿದೆ Sa Re Ga Ma Pa ಟ್ರೋಫಿ.. ವೀಕ್ಷಕರ ಚಿತ್ತ ಯಾರತ್ತ?

publive-image

ಹೌದು,  ನಟಿ ಸುಧಾರಾಣಿ ಅವರು ‘GHOST, ದಿ. ದೆವ್ವ’ ಎಂಬ ಕಿರುಚಿತ್ರದ ಮೂಲಕ ಕಿರು ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿ ಮಿಂಚೋದಕ್ಕೆ ಸಜ್ಜಾಗಿದ್ದಾರೆ. ವಿಶೇಷ ಎಂದರೆ ಕಿರುಚಿತ್ರಕ್ಕಾಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿ ತಂಡದೊಂದಿಗೆ ಕೈಜೋಡಿಸಿರುವ ಸುಧಾರಾಣಿ, ಈ ಸಸ್ಪೆನ್ಸ್ ಥ್ರಿಲ್ಲರ್ ಶಾರ್ಟ್‌ ಮೂವಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮೊದಲು ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸುಧಾರಾಣಿ, ಶಿವರಾಜ್‌ಕುಮಾರ್ ಅಭಿನಯದ ಆನಂದ್ ಸಿನಿಮಾದ ಮೂಲಕ ನಾಯಕಿಯಾದರು. ರಾಜ್​ಕುಮಾರ್​, ರವಿಚಂದ್ರನ್​ ಸೇರಿದಂತೆ ಸಾಕಷ್ಟು ಸ್ಟಾರ್​ ನಟರ ಜೊತೆಗೆ ನಟನೆ ಮಾಡಿದ್ದರು. ಇದಾದ ಬಳಿಕ ಕೆಲವು ವರ್ಷಗಳ ಹಿಂದೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆಗೂ ಎಂಟ್ರಿ ನೀಡಿದರು. ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ನಿರ್ದೇಶಕ ಸುದೇಶ್ ಕೆ ರಾವ್ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರು ಕೂಡ ಒಂದು ಮಹತ್ವದ ಪಾತ್ರವನ್ನು ಮಾಡಿದ್ದಾರೆ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಕೂಡ ನಟಿಯ ಮುಂದಿನ ಹೆಜ್ಜೆಗೆ ಶುಭ ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment