newsfirstkannada.com

BBK10: ಕೊನೆಗೂ ಕಿಚ್ಚ ಸುದೀಪ್ ಕ್ಷಮೆ ಕೇಳಿದ ರಕ್ಷಕ್‌ ಬುಲೆಟ್‌; ಏನಿದು ಕಿರಿಕ್‌? ಅಸಲಿಗೆ ಆಗಿದ್ದೇನು?

Share :

Published January 18, 2024 at 12:21pm

    ನಾನು ಹೇಳಿದ್ದು ಆ ಕಾಂಟೆಸ್ಟ್‌ನಲ್ಲಿ ಅಲ್ಲ ಎಂದ ರಕ್ಷಕ್ ಬುಲೆಟ್

    ‘ನಮ್ಮ ತಂದೆ ಮೇಲೂ ಸುದೀಪ್‌ ಅಣ್ಣಂಗೆ ಗೌರವ ಇತ್ತು’

    ಕಿಚ್ಚ ಸುದೀಪ್ ಅಣ್ಣನ ಮೇಲೆ ನನಗೆ ತುಂಬಾ ಗೌರವ ಇದೆ

ಬಿಗ್‌ಬಾಸ್ ಸೀಸನ್ 10ರ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡ್ತಿದೆ. ಫಿನಾಲೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಕಂಟೆಸ್ಟೆಂಟ್‌ಗಳ ಬಿಗ್‌ ಫೈಟ್‌ ಜೋರಾಗಿದೆ. ಈ ಮಧ್ಯೆ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ಸ್ಪರ್ಧಿಗಳ ಮಾತು ಹೊಸ ಕಿಚ್ಚು ಹೊತ್ತಿಸಿದೆ. ರಕ್ಷಕ್ ಬುಲೆಟ್ ಅವರು ಕಿಚ್ಚ ಸುದೀಪ್ ಅವರ ಬಗ್ಗೆ ಆಡಿದ ಮಾತುಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ನ್ಯೂಸ್‌ ಫಸ್ಟ್‌ಗೆ ನೀಡಿದ್ದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ರಕ್ಷಕ್ ಬುಲೆಟ್ ಅವರು ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟ ಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲೋವುದಿಲ್ಲ. ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ ಎಂದು ಹೇಳಿಕೆ ನೀಡಿದ್ದರು.

ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ರಕ್ಷಕ್ ಬುಲೆಟ್ ನೀಡಿದ್ದ ಈ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಗ್‌ಬಾಸ್‌ನಲ್ಲಿ ಸುದೀಪಣ್ಣ ಬಂದ ಮೇಲೆ ನಾವೆಲ್ಲ ಭಕ್ತಾದಿಗಳಾಗುತ್ತೇವೆ. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಮಾತನ್ನು ಖಂಡಿಸಿದ್ದ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಕಿಚ್ಚ ಸುದೀಪ್ ಅವರ ಕ್ಷಮೆ ಕೇಳಲು ಒತ್ತಾಯಿಸಿದ್ದಾರೆ. ಸುದೀಪ್ ಅಭಿಮಾನಿಗಳ ಆಗ್ರಹಕ್ಕೆ ಮಣಿದಿರುವ ರಕ್ಷಕ್ ಬುಲೆಟ್ ಅವರು ಇದೀಗ ಕ್ಷಮೆ ಕೇಳಿದ್ದಾರೆ.

 

View this post on Instagram

 

A post shared by rakshak sena (@rakshak_bullet)


ರಕ್ಷಕ್ ಕೊಟ್ಟ ಸ್ಪಷ್ಟನೆ ಏನು?
ಎಲ್ಲರಿಗೂ ನಮಸ್ಕಾರ.. ಈ ವಿಡಿಯೋ ಮಾಡ್ತಾ ಇರೋ ಕಾರಣ ಏನಂದ್ರೆ. ಎರಡು ದಿನದಿಂದ ಒಂದು ವಿಡಿಯೋ ಹರಿದಾಡ್ತಿದೆ. ನಾನು ಸುದೀಪಣ್ಣನ ಮೇಲೆ ನೆಗೆಟಿವ್ ಆಗಿ ಹೇಳಿದೆ ಅನ್ನೋದು. ನಾನು ಹೇಳಿದ್ದು ಆ ಕಾಂಟೆಸ್ಟ್‌ನಲ್ಲಿ ಅಲ್ಲ. ನೀವು ಇಡೀ ಇಂಟರ್‌ವ್ಯೂ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ನಾನು ಯಾವ ಲೈನ್ ಏನಕ್ಕೆ ಹೇಳಿರ್ತೀನಿ ಅಂತ. ನಿಜವಾಗ್ಲೂ ಎಲ್ಲರಿಗೂ ಸಾರಿ ಬೇಜಾರಾಗಿದ್ರೆ. ಸುದೀಪಣ್ಣ ಹಾಗೂ ಸುದೀಪ್ ಅಣ್ಣ ಫ್ಯಾನ್ಸ್‌ಗೆ. ಸುದೀಪ್ ಅಣ್ಣನ ಮೇಲೆ ನನಗೆ ತುಂಬಾ ಗೌರವ ಇದೆ. ಬಿಗ್‌ಬಾಸ್ ಜರ್ನಿಯಿಂದ ಕಂಟಿನ್ಯೂ ಮಾಡಿಕೊಂಡು ಬಂದಿದ್ದೇನೆ. ನಮ್ಮ ತಂದೆ ಮೇಲೂ ಸುದೀಪ್‌ ಅಣ್ಣಂಗೆ ಗೌರವ ಇತ್ತು. ಯಾರಿಗಾದ್ರೂ ಬೇಜಾರಾಗಿದ್ರೆ ನಿಜವಾಗ್ಲೂ ಸಾರಿ.

ಇದನ್ನೂ ಓದಿ: BIGG BOSS: ಹೆಂಗೆ ಬಂದ್ರೋ, ಹಂಗೇ ವಾಪಸ್​ ಹೋಗ್ಬಿಡಿ.. ಗಳಗಳನೆ ಕಣ್ಣೀರಿಟ್ಟ ನಮ್ರತಾ

ರಕ್ಷಕ್‌ ಬುಲೆಟ್‌ ಅವರು ಬಿಗ್‌ಬಾಸ್ ಸೀಸನ್‌ 10ರಲ್ಲಿ ಒಂದು ತಿಂಗಳ ಕಾಲ ಮನೆಯಲ್ಲಿದ್ದು ಎಲಿಮಿನೇಟ್ ಆಗಿ ಬಂದಿದ್ದರು. ಇದೀಗ ಮತ್ತೆ ಹಳೇ ಕಂಟೆಸ್ಟೆಂಟ್‌ಗಳ ಜೊತೆ ಮತ್ತೆ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದರು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಕೊನೆಗೂ ಕಿಚ್ಚ ಸುದೀಪ್ ಕ್ಷಮೆ ಕೇಳಿದ ರಕ್ಷಕ್‌ ಬುಲೆಟ್‌; ಏನಿದು ಕಿರಿಕ್‌? ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/01/Rakshak-Bullet-on-Sudeep.jpg

    ನಾನು ಹೇಳಿದ್ದು ಆ ಕಾಂಟೆಸ್ಟ್‌ನಲ್ಲಿ ಅಲ್ಲ ಎಂದ ರಕ್ಷಕ್ ಬುಲೆಟ್

    ‘ನಮ್ಮ ತಂದೆ ಮೇಲೂ ಸುದೀಪ್‌ ಅಣ್ಣಂಗೆ ಗೌರವ ಇತ್ತು’

    ಕಿಚ್ಚ ಸುದೀಪ್ ಅಣ್ಣನ ಮೇಲೆ ನನಗೆ ತುಂಬಾ ಗೌರವ ಇದೆ

ಬಿಗ್‌ಬಾಸ್ ಸೀಸನ್ 10ರ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡ್ತಿದೆ. ಫಿನಾಲೆ ಹತ್ತಿರವಾಗುತ್ತಿರುವ ಸಂದರ್ಭದಲ್ಲೇ ಕಂಟೆಸ್ಟೆಂಟ್‌ಗಳ ಬಿಗ್‌ ಫೈಟ್‌ ಜೋರಾಗಿದೆ. ಈ ಮಧ್ಯೆ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ಸ್ಪರ್ಧಿಗಳ ಮಾತು ಹೊಸ ಕಿಚ್ಚು ಹೊತ್ತಿಸಿದೆ. ರಕ್ಷಕ್ ಬುಲೆಟ್ ಅವರು ಕಿಚ್ಚ ಸುದೀಪ್ ಅವರ ಬಗ್ಗೆ ಆಡಿದ ಮಾತುಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ನ್ಯೂಸ್‌ ಫಸ್ಟ್‌ಗೆ ನೀಡಿದ್ದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ರಕ್ಷಕ್ ಬುಲೆಟ್ ಅವರು ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟ ಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲೋವುದಿಲ್ಲ. ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ ಎಂದು ಹೇಳಿಕೆ ನೀಡಿದ್ದರು.

ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ರಕ್ಷಕ್ ಬುಲೆಟ್ ನೀಡಿದ್ದ ಈ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಗ್‌ಬಾಸ್‌ನಲ್ಲಿ ಸುದೀಪಣ್ಣ ಬಂದ ಮೇಲೆ ನಾವೆಲ್ಲ ಭಕ್ತಾದಿಗಳಾಗುತ್ತೇವೆ. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಮಾತನ್ನು ಖಂಡಿಸಿದ್ದ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಕಿಚ್ಚ ಸುದೀಪ್ ಅವರ ಕ್ಷಮೆ ಕೇಳಲು ಒತ್ತಾಯಿಸಿದ್ದಾರೆ. ಸುದೀಪ್ ಅಭಿಮಾನಿಗಳ ಆಗ್ರಹಕ್ಕೆ ಮಣಿದಿರುವ ರಕ್ಷಕ್ ಬುಲೆಟ್ ಅವರು ಇದೀಗ ಕ್ಷಮೆ ಕೇಳಿದ್ದಾರೆ.

 

View this post on Instagram

 

A post shared by rakshak sena (@rakshak_bullet)


ರಕ್ಷಕ್ ಕೊಟ್ಟ ಸ್ಪಷ್ಟನೆ ಏನು?
ಎಲ್ಲರಿಗೂ ನಮಸ್ಕಾರ.. ಈ ವಿಡಿಯೋ ಮಾಡ್ತಾ ಇರೋ ಕಾರಣ ಏನಂದ್ರೆ. ಎರಡು ದಿನದಿಂದ ಒಂದು ವಿಡಿಯೋ ಹರಿದಾಡ್ತಿದೆ. ನಾನು ಸುದೀಪಣ್ಣನ ಮೇಲೆ ನೆಗೆಟಿವ್ ಆಗಿ ಹೇಳಿದೆ ಅನ್ನೋದು. ನಾನು ಹೇಳಿದ್ದು ಆ ಕಾಂಟೆಸ್ಟ್‌ನಲ್ಲಿ ಅಲ್ಲ. ನೀವು ಇಡೀ ಇಂಟರ್‌ವ್ಯೂ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ನಾನು ಯಾವ ಲೈನ್ ಏನಕ್ಕೆ ಹೇಳಿರ್ತೀನಿ ಅಂತ. ನಿಜವಾಗ್ಲೂ ಎಲ್ಲರಿಗೂ ಸಾರಿ ಬೇಜಾರಾಗಿದ್ರೆ. ಸುದೀಪಣ್ಣ ಹಾಗೂ ಸುದೀಪ್ ಅಣ್ಣ ಫ್ಯಾನ್ಸ್‌ಗೆ. ಸುದೀಪ್ ಅಣ್ಣನ ಮೇಲೆ ನನಗೆ ತುಂಬಾ ಗೌರವ ಇದೆ. ಬಿಗ್‌ಬಾಸ್ ಜರ್ನಿಯಿಂದ ಕಂಟಿನ್ಯೂ ಮಾಡಿಕೊಂಡು ಬಂದಿದ್ದೇನೆ. ನಮ್ಮ ತಂದೆ ಮೇಲೂ ಸುದೀಪ್‌ ಅಣ್ಣಂಗೆ ಗೌರವ ಇತ್ತು. ಯಾರಿಗಾದ್ರೂ ಬೇಜಾರಾಗಿದ್ರೆ ನಿಜವಾಗ್ಲೂ ಸಾರಿ.

ಇದನ್ನೂ ಓದಿ: BIGG BOSS: ಹೆಂಗೆ ಬಂದ್ರೋ, ಹಂಗೇ ವಾಪಸ್​ ಹೋಗ್ಬಿಡಿ.. ಗಳಗಳನೆ ಕಣ್ಣೀರಿಟ್ಟ ನಮ್ರತಾ

ರಕ್ಷಕ್‌ ಬುಲೆಟ್‌ ಅವರು ಬಿಗ್‌ಬಾಸ್ ಸೀಸನ್‌ 10ರಲ್ಲಿ ಒಂದು ತಿಂಗಳ ಕಾಲ ಮನೆಯಲ್ಲಿದ್ದು ಎಲಿಮಿನೇಟ್ ಆಗಿ ಬಂದಿದ್ದರು. ಇದೀಗ ಮತ್ತೆ ಹಳೇ ಕಂಟೆಸ್ಟೆಂಟ್‌ಗಳ ಜೊತೆ ಮತ್ತೆ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದರು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More