/newsfirstlive-kannada/media/post_attachments/wp-content/uploads/2024/12/SUDEEP-2.jpg)
ಕನ್ನಡದ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿವೆ. ಮನೆ ಒಳಗೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಿದ್ದು ಈ ವಾರ ಮನೆಯಿಂದ ಗೇಟ್ ಪಾಸ್ ಯಾರಿಗೆ ಎಂಬುದು ಮಾತ್ರ ಕೂತುಹಲ ಮೂಡಿಸಿದೆ. ಡಬಲ್ ಎಲಿಮಿನೇಷನ್ ಇದೆ ಎನ್ನಲಾಗ್ತಿದೆ. ಆದರೆ ಇದು ಅನೌನ್ಸ್ ಆದಾಗಲೇ ಎಲ್ಲ ಗೊತ್ತಾಗುತ್ತೆ. ಸದ್ಯ ಬಿಡುಗಡೆಗೊಂಡ ಫ್ರೋಮೋದಲ್ಲಿ ಸ್ಪರ್ಧಿಗಳಿಗೆ ರೆಸಾರ್ಟ್ ಗೇಮ್ ನೀಡಲಾಗಿದೆ.
ಸದ್ಯ ಮನೆಯಲ್ಲಿ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಭವ್ಯಗೌಡ, ತ್ರಿವಿಕ್ರಮ್, ಮಂಜು, ಗೌತಮಿ, ಮೋಕ್ಷಿತಾ, ರಜತ್, ಧನರಾಜ್, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಐಶ್ವರ್ಯಾ ಇದ್ದಾರೆ. ಇವರಲ್ಲಿ ಈ ವಾರ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಮನೆ ಖಾಲಿ ಮಾಡುವರು ಯಾರು ಎಂಬುದು ಇಂದು ಅಥವಾ ನಾಳೆ ಗೊತ್ತಾಗಲಿದೆ.
ಧನರಾಜ್, ಮೋಕ್ಷಿತಾ, ಚೈತ್ರಾ, ಗೌತಮಿ, ತ್ರಿವಿಕ್ರಮ್, ಹನುಮಂತು, ಮಂಜು ಇವರೆಲ್ಲಾ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಔಟ್ ಆಗುತ್ತಾರೆ ಎನ್ನುವುದು ಮಾತ್ರ ಊಹೆ ಮಾಡಲಾಗುತ್ತಿಲ್ಲ. ಇದಕ್ಕಾಗಿ ಬಿಗ್ಬಾಸ್ ಶೋವನ್ನೇ ಇಂದು ಹಾಗೂ ನಾಳೆ ವೀಕ್ಷಣೆ ಮಾಡಲೇಬೇಕಾಗಿದೆ. ಕಿಚ್ಚ ಸುದೀಪ್ ಅವರು ಯಾರ ಆಟಕ್ಕೆ ಫುಲಿಸ್ಟಾಪ್ ಇಡುತ್ತಾರೆ ಎನ್ನುವುದು ಗೊತ್ತಾಗಲಿದೆ. ಒಂದು ವೇಳೆ ಇಬ್ಬರು ಮನೆಯಿಂದ ಹೋದರೇ 10 ಸ್ಪರ್ಧಿಗಳಲ್ಲಿ 8 ಜನರು ಮಾತ್ರ ಉಳಿದುಕೊಳ್ಳಲಿದ್ದಾರೆ.
ಇದನ್ನೂ ಓದಿ:BBK11; ಯಾವ ಸ್ಪರ್ಧಿ ಆಟಕ್ಕೆ ಬೀಳುತ್ತೆ ಕಿಚ್ಚನ ಫುಲ್ಸ್ಟಾಪ್.. ಮನೆಯಿಂದ ಹೊರ ಬರೋದು ಯಾರು?
ರೆಸಾರ್ಟ್ ಗೇಮ್ನಲ್ಲಿ ಯಾವ ಆರೋಪಕ್ಕೆ ಈ ರೀತಿ ನನ್ನನ್ನು ಮಾಡುತ್ತಿದ್ದಾರೆ ಎಂದು ಚೈತ್ರಾ ಕತ್ತಲಿನಲ್ಲಿ ಕಣ್ಣೀರು ಹಾಕಿದ್ದಾರೆ. ಮಂಜು ಹಾಗೂ ಚೈತ್ರಾ ನಡುವೆ ಏನೋ ಗಲಾಟೆ ನಡೆದಂತೆ ಕಾಣುತ್ತಿದೆ. ಆದರೆ ಏನಾಗಿದೆ ಎಂದು ಗೊತ್ತಿಲ್ಲ. ರಜತ್ ಗೋಡೆಗೆ ಹೊಡೆದು ನೋಡ್ ನಾನು ಏನ್ ಅಂತ ತೋರಿಸಿಲ್ಲ ಎಂದರೆ ಅಂತ ಹೇಳಿದ್ದಾರೆ. ತ್ರಿವಿಕ್ರಮ್ ಕಾಲುಗಳನ್ನು ಚೈತ್ರಾ ತೊಳೆದಿದ್ದಾರೆ. ರಜತ್ ಹಾಗೂ ಇನ್ನೊಬ್ಬ ಸ್ಪರ್ಧಿ ಬಟ್ಟೆ ವಾಶ್ ಮಾಡಿರುವುದು ತೋರಿಸಲಾಗಿದೆ. ಧನ್ರಾಜ್ ಬೆಡ್ಶೀಟ್ ಎತ್ತಿ ಬಿಸಾಕಿ ಕೂಗಾಡಿದ್ದಾರೆ.
ರೆಸಾರ್ಟ್ ಮ್ಯಾನೇಜರ್ ಆಗಿರುವ ಮೋಕ್ಷಿತಾ ಮೇಲೆ ಉಗ್ರಂ ಮಂಜು ಫುಲ್ ಗರಂ ಆಗಿದ್ದಾರೆ. ಎಚ್ಚೆತ್ತುಕೊಳ್ಳಿ ಎಂದು ಮಂಜು ಮುಖಕ್ಕೆ ಗೌತಮಿ ಟೀ ಚೆಲ್ಲಿರುವುದು ಆಶ್ಚರ್ಯ ಮೂಡಿಸಿದೆ. ಇಂದಿನ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಯನ್ನು ಮೆನಯಿಂದ ಕಳಿಸ್ತಾರಾ ಅಥವಾ ನಾಳೆಗೆ ಮುಹೂರ್ತ ಇಡುತ್ತಾರಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ