/newsfirstlive-kannada/media/post_attachments/wp-content/uploads/2024/11/GUN-FIRE-1.jpg)
ಬೆಂಗಳೂರು: ನಿರ್ದೇಶಕನ ಮೇಲೆ ನಟನ ಫೈರ್ ಮಾಡಿದ ಹಿಂದಿನ ಸತ್ಯ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ಚಿತ್ರಕ್ಕೆ ನಟಿಯ ಆಯ್ಕೆ ತಡವಾಗಿದ್ದಕ್ಕೆ ಹಿರೋ ಡೈರೆಕ್ಟರ್ ಮೇಲೆ ಕೋಪ ತೀರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಭರತ್ ಮೇಲೆ ಕಮಿಷನ್ ಪಡೆಯುತ್ತಿರೋ ಆರೋಪವೂ ಕೇಳಿ ಬಂದಿದೆ.
ನಟಿಯ ಆಯ್ಕೆ ತಡವಾಗಿದ್ದಕ್ಕೆ ಅಸಮಾಧಾನ
ಸಿನಿಮಾ ನಿರ್ದೇಶಕ ಕೊಟ್ಟಿರೋ ದೂರಿನ ಎಫ್ಐಆರ್ನಲ್ಲಿ ನಟನ ಮುನಿಸಿನ ಅಸಲಿ ಸತ್ಯ ಬಯಲಾಗಿದೆ. ದೇವನಾಂಪ್ರಿಯ ಸಿನಿಮಾಗೆ ನಾಯಕ ನಟಿ ಆಯ್ಕೆ ತಡವಾಗಿದ್ದಕ್ಕೆ ತಾಂಡವ್ ಕೋಪಗೊಂಡಿದ್ದ. ಇದೇ ವಿಚಾರವಾಗಿ ನಿರ್ದೇಶಕ ಭರತ್ ಜೊತೆ ಗಲಾಟೆ ಮಾಡ್ಕೊಂಡಿದ್ದ. ತಾಂಡವ್ಮೊನ್ನೆ ಕೂಡ ಮಾತಿಗೆ ಮಾತು ಬೆಳೆದು ಡೈರೆಕ್ಟರ್ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಎಫ್ಐಆರ್ನಲ್ಲಿ ಏನಿದೆ?
ಚಿತ್ರ ಆರಂಭವಾಗಿ 2 ವರ್ಷವಾದ್ರೂ ನಾಯಕಿ ಆಯ್ಕೆ ಆಗಿರಲಿಲ್ಲ. ಹೀಗಾಗಿ ನಟ ತಾಂಡವ ರಾಮ್ ನನ್ನ ಮೇಲೆ ಕೋಪಗೊಂಡು, ಎರಡು ಬಾರೀ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ರು. ಅಷ್ಟೇ ಅಲ್ಲ ಸಿನಿಮಾ ತಂತ್ರಜ್ಞರಿಂದ ನಾನು ಕಮಿಷನ್ ಪಡೆದಿದ್ದೇನೆ ಎಂದು ತಾಂಡವ್ ಆರೋಪ ಮಾಡಿದ್ರು. ಬಳಿಕ ತಾಂಡವ್, ತಾನು ಖರ್ಚು ಮಾಡಿದ 6 ಲಕ್ಷ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ರು. ಇದೇ ವಿಚಾರಕ್ಕೆ ಸೋಮವಾರದ ಸಂಜೆ ಸಭೆ ಸೇರಲಾಗಿತ್ತು. ಚಂದ್ರಲೇಔಟ್ ನಿರ್ಮಾಪಕರ ಕಚೇರಿಯಲ್ಲಿ ಸಭೆ ಸೇರಿದ್ವಿ. ಈ ವೇಳೆ ತಾನು ಖರ್ಚು ಮಾಡಿದ ಹಣ ಕೊಡುವಂತೆ ತಾಂಡವ್ ಗಲಾಟೆ ಮಾಡಿದ್ರು. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ತಾಂಡವ್ ಗನ್ ತರಿಸಿ ನನ್ನ ಮೇಲೆ ಹಾರಿಸಿದ್ರು. ತಕ್ಷಣ ನಾನು ಪಕಕ್ಕೆ ಸರಿದು, ಗನ್ ಮೇಲಕ್ಕೆ ಎತ್ತಿದೆ. ಸದ್ಯ ಗುಂಡು ಸೀಲಿಂಗ್ಗೆ ತಗುಲಿತು, ತಪ್ಪಿಸದೇ ಹೋಗಿದ್ರೆ ನನ್ನ ತಲೆಗೆ ತಾಗಿ ಸಾವು ಸಂಭವಿಸುತ್ತಿತ್ತು ಎಂದು ಭರತ್ ದಾಖಲಿಸಿರೋ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ನಿರ್ದೇಶಕ ಭರತ್ ವಿಚಾರಣೆ ನಡೆಸಿರೋ ಪೊಲೀಸರು ಘಟನೆ ವೇಳೆ ಹಾಜರಿದ್ದವರ ಹೇಳಿಕೆಯನ್ನೂ ಪಡೆದಿದ್ದಾರೆ. ಇತ್ತ ಆರೋಪಿ ತಾಂಡವೇಶ್ವರ್ ವಿಚಾರಣೆ ಕೂಡ ನಡೆದಿದ್ದು, ಚಂದ್ರಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ವಿಪರೀತ ತೂಕನಷ್ಟ; ಸಣಕಲು ಕಡ್ಡಿಯಾದ ಸುನೀತಾ ವಿಲಿಯಮ್ಸ್; ಇವ್ರ ಆರೋಗ್ಯ ಹೇಗಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ