ಪ್ರಯಾಣಕ್ಕೆ ಒಳ್ಳೆಯದು.. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡೋರಿಗೆ ಗೌರವ, ಸನ್ಮಾನ; ಇಲ್ಲಿದೆ ರಾಶಿ ಭವಿಷ್ಯ!

author-image
Bheemappa
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಇಂದು ನಿಮ್ಮ ಆತ್ಮವಿಶ್ವಾಸದ ಜತೆಗೆ ನಿಮ್ಮ ಪ್ರತಿಭೆಗೆ ತಕ್ಕ ಫಲ ದೊರಕಬಹುದು
  • ಕುಟುಂಬ, ವ್ಯವಹಾರದಲ್ಲಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ
  • ಹಾಲು, ನೀರು, ಎಣ್ಣೆ ಇತ್ಯಾದಿ ದ್ರವ ಪದಾರ್ಥ ವ್ಯಾಪಾರ ಮಾಡುವರಿಗೆ ಲಾಭ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ (ಪಾಡ್ಯ), ಆರಿದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ..

ಮೇಷ ರಾಶಿ

publive-image

  • ನಿಮ್ಮ ಗೆಳೆಯ, ಗೆಳತಿಯರ ವಿವಾಹದ ಶುಭ ಸುದ್ದಿ ಕೇಳುತ್ತೀರಿ
  • ಊಟವೂ ಸಕಾಲಕ್ಕೆ ದೊರೆಯದೇ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ
  • ನಿಮ್ಮಲ್ಲಿರುವ ಬೇರೆಯವರ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇದೆ
  • ಮಕ್ಕಳ ಕೆಟ್ಟ ಅಭ್ಯಾಸಗಳಿಂದ ಅವಮಾನ, ಮನಸ್ಸಿಗೆ ನೋವು ಉಂಟಾಗಬಹುದು
  • ಇದರಿಂದ ನಿಮ್ಮ ಹಾಗೂ ನಿಮ್ಮ ಸ್ನೇಹಿತನ ಮಧ್ಯ ಅಸಮಾಧಾನ ಏರ್ಪಟ್ಟು ಕಲಹವಾಗಬಹುದು
  • ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದುರ್ಗಾ ಹೋಮ ಮಾಡಿಸಿ

ವೃಷಭ

publive-image

  • ಈ ದಿನ ನಿಮಗೆ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ
  • ನಿಮ್ಮ ಮನಸ್ಸು ಶುದ್ಧವಾಗಿರಲಿ, ತಾಳ್ಮೆ ಇರಲಿ ಶುಭವಿದೆ
  • ಆಸ್ತಿಯ ವಿಚಾರವಾಗಿ ವಾದ-ವಿವಾದಗಳು ಏರ್ಪಡಬಹುದು
  • ಹಣದ ವಿಚಾರವಾಗಿ ದೈಹಿಕ, ಮಾನಸಿಕ ತೊಂದರೆ ಸಾಧ್ಯತೆ
  • ನಿಮ್ಮ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ವಸ್ತುಗಳು ಕಳುವಾಗುವ ಸಾಧ್ಯತೆ, ಜಾಗ್ರತೆ ವಹಿಸಿ
  • ಹಯಗ್ರೀವರನ್ನು ಪ್ರಾರ್ಥಿಸಿ

ಮಿಥುನ

publive-image

  • ಹೊಸ ಬದಲಾವಣೆಯಾಗುವ ಸೂಚನೆಗಳು ಕಾಣಬಹುದು
  • ನಿಮ್ಮ ಷೇರು ವ್ಯವಹಾರವು ಮಧ್ಯಾಹ್ನ 1.30 ರಿಂದ 3 ಗಂಟೆ ಒಳಗಿರಲಿ
  • ಇಂದು ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಚ್ಚರಿಕೆ
  • ವಿವಾಹ ವಿಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಕಾಡಬಹುದು
  • ನಿಮ್ಮ ಕೆಲಸಕ್ಕೆ ಮನೆಯವರ ಸಹಾಯ, ಸಹಕಾರ ದೊರೆಯದೆ ಇರಬಹುದು
  • ಪ್ರತ್ಯಂಗಿರಾದೇವಿಯನ್ನು ಆರಾಧಿಸಿ

ಕಟಕ

publive-image

  • ಸಮಾಜಕ್ಕೆ ಸರಿಯಾದ ಸಂದೇಶ ನೀಡುತ್ತಾ ಇನ್ನೂ ಹೆಚ್ಚಿನ ಮನ್ನಣೆಯನ್ನು ಪಡೆಯಿರಿ
  • ರಸ್ತೆಯಲ್ಲಿರುವ ಮರ ಅಥವಾ ಮರದ ಕೊಂಬೆಯಿಂದ ತೊಂದರೆ ಸಾಧ್ಯತೆ
  • ಅಪಘಾತದಿಂದ ಹೆಚ್ಚು ಹಣ ಖರ್ಚಾಗಬಹುದು, ಜಾಗ್ರತೆ ಇರಲಿ
  • ನಿಮ್ಮ ಬುಧ್ಧಿವಂತಿಕೆಯಿಂದ ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ
  • ಉಚ್ಚಾಟನಾ ಸುದರ್ಶನ ಹೋಮ ಮಾಡಿಸಿ

ಸಿಂಹ

publive-image

  • ಕುಟುಂಬದಲ್ಲಿ, ವ್ಯವಹಾರದಲ್ಲಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ
  • ಹಾಲು,ನೀರು ,ಎಣ್ಣೆ ಇತ್ಯಾದಿ ದ್ರವ ಪದಾರ್ಥಗಳನ್ನು ವ್ಯಾಪಾರ ಮಾಡುವವರಿಗೆ ಲಾಭವಿದೆ
  • ಈ ದಿನ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆ ಇರಲಿ
  • ಇಂದು ಅನಿರೀಕ್ಷಿತ ಹಣ ನಿಮ್ಮ ಕೈ ಸೇರಬಹುದು
  • ನಿಮ್ಮ ಪಾಲುದಾರಿಕೆಯಿಂದ ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು
  • ಕಪಾಲಿನೀ ದೇವಿಯನ್ನ ಆರಾಧನೆ ಮಾಡಿ

ಕನ್ಯಾ

publive-image

  • ನಿಮ್ಮ ನಿಮ್ಮ ಕ್ಷೇತ್ರದಲ್ಲಿ ವಿಶೇಷ ಗೌರವ ಸಿಗುವ ದಿನ
  • ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಗೌರವ, ಪುರಸ್ಕಾರ ದೊರೆಯುವ ದಿನ
  • ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಗೌರವ, ಸನ್ಮಾನ ಸಿಗುತ್ತದೆ
  • ಭೂವ್ಯಾಪಾರಿಗಳಿಗೆ ಉತ್ತಮವಾದ ದಿನ
  • ಉತ್ತಮವಾದ ಕಾರ್ಯಗಳು ಆರಂಭವಾಗಬಹುದು
  • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ

ತುಲಾ

publive-image

  • ಅನಗತ್ಯ ಹಣ ಖರ್ಚು ಮಾಡಿ ಸಮಸ್ಯೆ ಬಗೆಹರಿಯದೆ ಒದ್ದಾಡಬೇಕಾಗಬಹುದು
  • ಇಂದು ನಿಮ್ಮ ಆತ್ಮವಿಶ್ವಾಸದ ಜೊತೆಗೆ ನಿಮ್ಮ ಪ್ರತಿಭೆಗೆ ತಕ್ಕ ಫಲವು ದೊರಕಬಹುದು
  • ನಿಮ್ಮ ಪ್ರತಿಭೆಯನ್ನ ವೈಯಕ್ತಿಕ ಲಾಭಕ್ಕಿಂತ ಸಮಾಜ ಸೇವೆಗೆ ಉಪಯೋಗಿಸಿ
  • ರಾಜಕೀಯ ವ್ಯಕ್ತಿಗಳ ಹಾಗೂ ಗಣ್ಯರ ಬೆಂಬಲ ಹೆಚ್ಚಾಗಬಹುದು
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಮಾಂತ್ರಿಕವಾದ ದೋಷ ನಿಮ್ಮನ್ನು ಮತ್ತು ಕುಟುಂಬವನ್ನು ಕಾಡಬಹುದು
  • ಈ ದಿನ ಪ್ರಯಾಣಕ್ಕೆ ಒಳ್ಳೆಯ ದಿನ
  • ಪ್ರೇಯಸಿಯೊಂದಿಗೆ ನಿಮ್ಮ ಪ್ರಯಾಣ ಆನಂದವಾಗಿರುತ್ತದೆ
  • ಈ ರಾಶಿಯ ಸ್ತ್ರೀಯರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ತೊಡಗಿಸಿ ಲಾಭ ಪಡೆಯುತ್ತಾರೆ
  • ಹಳೆಯ ಷೇರುಗಳಿದ್ದರೆ ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು
  • ಸಂಪತ್ ಲಕ್ಷ್ಮೀಯನ್ನು ಪ್ರಾರ್ಥಿಸಿ

ಧನಸ್ಸು 

publive-image

  • ಚಿಕ್ಕಮಕ್ಕಳ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಗಮನವಿರಲಿ
  • ವ್ಯಾಪಾರ - ವ್ಯವಹಾರಗಳಲ್ಲಿ ತಪ್ಪು ಸಂಭವಿಸಬಹುದು
  • ಸ್ನೇಹಿತರು ನಿಮ್ಮನ್ನು ವ್ಯವಹಾರದಿಂದ ಹೊರಗಿಟ್ಟು ರಹಸ್ಯವಾಗಿ ವ್ಯವಹರಿಸುತ್ತಾರೆ
  • ನೀವು ವ್ಯವಕಾರವನ್ನ ರದ್ದು ಮಾಡಬಹುದು
  • ಸ್ವಯಂವರ ಪಾರ್ವತಿಯನ್ನು ಆರಾಧನೆ ಮಾಡಿ

ಮಕರ

publive-image

  • ನಿಮಗೆಲ್ಲಾ ಇದ್ರೂ ಏನೋ ಮಾಡಲು ಹೋಗಿ ಬೇಡವಾದದ್ದನ್ನು ಗಂಟು ಹಾಕಿಕೊಳ್ಳುತ್ತೀರಿ
  • ನಿಮ್ಮ ಕಾರ್ಯಕ್ಷೇತ್ರದಲ್ಲಿರುವ ಚಿಂತನೆ, ಯೋಜನೆಗಳಾಗಲಿ ಯಾರಿಗೂ ಸರಿಯಾಗಿ ಅರ್ಥವಾಗೋದಿಲ್ಲ
  • ನಿಮಗೆ ಯಾರ ಸಹಕಾರವೂ ಸರಿಯಾಗಿ ಸಿಗುವುದಿಲ್ಲ
  • ನಿಮ್ಮಿಂದ ಹಲವಾರು ಜನ ಉಪಕಾರ ಪಡೆದು ನಿಮ್ಮ ಸ್ವಭಾವಕ್ಕೆ ಬೇಸತ್ತು ದೂರವಾಗುತ್ತಾರೆ
  • ನಿಮ್ಮ ಕುಲದೇವಿಯನ್ನು ದ್ರವ್ಯದಿಂದ ಆರಾಧಿಸಿ

ಕುಂಭ

publive-image

  • ವಿವಾಹದ ದೃಷ್ಟಿಯಿಂದ ನಿಮ್ಮ ಬಂಧುಗಳು ಹೊಸ ಸಂಬಂಧ ಬೆಳೆಸಬಹುದು
  • ನಿಮ್ಮ ಮಾತು ಇಂದು ಬಹಳ ಮುಖ್ಯವಾಗಿರುತ್ತದೆ
  • ಈ ದಿನ ನಿಮ್ಮ ಹಣದ ಸ್ಥಿತಿ ಸುಧಾರಿಸುತ್ತದೆ
  • ಏಕ ರಾಶಿ, ಏಕ ನಕ್ಷತ್ರದಲ್ಲಿರುವ ದಂಪತಿಗಳು ಇವತ್ತಿನ ಮಾತುಕತೆಗೆ, ವ್ಯವಹಾರಕ್ಕೆ ಕೇಂದ್ರ ಬಿಂದುವಾಗಿರುತ್ತೀರಿ
  • ದುರ್ಗಾ ದೇವಿಯ ಪ್ರಾರ್ಥನೆ ಮಾಡಿ

ಮೀನ 

publive-image

  • ಚರ್ಮರೋಗಕ್ಕೆ ಸಂಬಂಧಿಸಿದ ವ್ಯಕ್ತಿಗಳು ಜಾಗರೂಕರಾಗಿರಬೇಕು
  • ನಿಮ್ಮ ಚರ್ಮರೋಗ ಹೆಚ್ಚಾಗುವ ಸೂಚನೆಗಳಿವೆ
  • ವೈದ್ಯರು ಹೇಳಿದ ಪಥ್ಯಗಳನ್ನು ಶಿಸ್ತಿನಿಂದ ಪಾಲಿಸಬೇಕು
  • ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ ಆನಂದವಾಗಿರುತ್ತೀರಿ
  • ಚರ್ಮರೋಗಿಗಳು ಅಮೃತಬಳ್ಳಿ ಎಲೆಗಳನ್ನು ಸೇವಿಸಿ
  • ವಿಷ್ಣುವನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment