newsfirstkannada.com

ಸಾಹಿತ್ಯ-ಕರ್ಣ ಜೋಡಿ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ; ಈ ಸೀರಿಯಲ್​ಗೆ ವೀಕ್ಷಕರಿಂದ ಮೆಚ್ಚುಗೆ..!

Share :

Published March 27, 2024 at 5:49am

    ಸೀರಿಯಲ್​ ಸ್ಲೋ ಪಾಯ್ಸನ್‌ ರೀತಿ ಜನರ ಮನಸು ಕದಿಯುತ್ತಿದೆ

    ಕರಿಮಣಿ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ, ಹಿಂದಿನ ಸಿಕ್ರೇಟ್ ಏನು?

    ನಾಯಕಿ ಸಾಹಿತ್ಯಾಳ ಅಪ್ಪನಿಗೆ ಬಹಳ ವರ್ಷಗಳ ಕನಸೊಂದಿದೆ

ಕರಿಮಣಿ ಅಂತಾ ಟೈಟಲ್‌ ಜನರಿಗೆ ತಿಳಿದಾಗಲೇ ಅವ್ರಿಗೆ ಏನೋ ಒಂದು ಕುತೂಹಲ. ಆ ಟೈಮ್‌ನಲ್ಲೇ ಕರಿಮಣಿ ರೀಲ್ಸ್‌ ಪೀಕ್‌ನಲ್ಲಿತ್ತು. ಹೀಗಾಗಿ, ಜನರು ಈ ಟೈಟಲ್‌ಗೆ ಬೇಗ ಕನೆಕ್ಟ್ ಆದರು. ಇನ್‌ಫ್ಯಾಕ್ಟ್ ಈ ಸೀರಿಯಲ್‌, ಆರಂಭವದಲ್ಲಿ ವ್ಹಾವ್ ಅನ್ನೋ ರೇಂಜಿಗೆ ಸದ್ದು ಮಾಡ್ಲಿಲ್ಲ. ಆದ್ರೆ, ಆ ಸ್ಲೋ ಪಾಯ್ಸನ್‌ ಥರಾ ಈಗ, ಜನರ ಮನಸ್ಸು ಕದಿಯುತ್ತಿದೆ.

ಕೆಲವೊಂದು ಕಥೆಗಳೇ ಹಾಗೇ. ಜನರಿಗೆ ಇಷ್ಟವಾಗೋಕೆ ಟೈಮ್ ಬೇಕಾಗುತ್ತದೆ. ಒಂದು ಬಾರಿ ಮನಸ್ಸಿಗೆ ಈಡಿಸಿದ್ರೆ, ಬಹುಶಃ ಆಡಿಯನ್ಸ್‌ ಅಲುಗಾಡೋದಿಲ್ಲ. ಕರಿಮಣಿ ಸೀರಿಯಲ್‌ ವಿಚಾರದಲ್ಲೂ ಈಗ ಇದೇ ರೀತಿ ಆಗಿದೆ. ಅದಕ್ಕೆ ಕಾರಣ ಮುಖ್ಯವಾಗಿ ಕಥೆ ಮತ್ತು ಚಿತ್ರಕಥೆ. ಕರಿಮಣಿ ಸೀರಿಯಲ್‌ನಲ್ಲಿ ಒಂದು ಸ್ಟ್ರಾಂಗ್ ಕಂಟೆಂಟ್ ಇದೆ. ಅದೇ ಹೆಣ್ಣಿನ ಭಾವನೆ. ಕಥಾ ನಾಯಕಿ ಸಾಹಿತ್ಯಾಳ ಅಪ್ಪನಿಗೆ ಬಹಳ ವರ್ಷಗಳ ಕನಸೊಂದಿದೆ. ಸಾಹಿತ್ಯಾಳಿಗೆ ಒಳ್ಳೆ ಮದುವೆ ಮಾಡಿ, ಒಳ್ಳೆ ಮನೆ ಸೇರಿಸ್ಬೇಕು ಅನ್ನೋದು. ಆದ್ರೆ, ಸಾಹಿತ್ಯ ಬದುಕಲ್ಲಿ ಅವಳ ಮದುವೆ ದಿನಾನೆ, ವಿಧಿ ಬೇರೆ ಆಟನೇ ಆಡಿತ್ತು. ದುರಾದೃಷ್ಟವಶಾತ್, ಕಥಾನಾಯಕ ಕರ್ಣನ ಕೈಯಿಂದ ಗೊತ್ತಿಲ್ಲದೆ ಸಾಹಿತ್ಯ ಮದುವೆ ನಿಂತು ಹೋಯ್ತು.

ಇದನ್ನೂ ಓದಿ: ಈಜಲು ನದಿಗೆ ಇಳಿದಿದ್ದ ಮೂವರು ಯುವಕರು ನೀರು ಪಾಲು.. ಓರ್ವನ ಮೃತದೇಹ ಪತ್ತೆ

ದಿನೇ ದಿನೆ ಧಾರಾವಾಹಿ ನೋಡುಗರ ಸಂಖ್ಯೆ ಹೆಚ್ಚುತ್ತಿದೆ

ಕರ್ಣನ ಈ ಒಂದು ನಿರ್ಧಾರ ಸಾಹಿತ್ಯ ಬದುಕನ್ನೇ ನುಚ್ಚು ನೂರು ಮಾಡಿದೆ. ಮದುವೆ ನಿಲ್ಲಿಸಿದ ತಪ್ಪಿಗೆ ಕರ್ಣ ಪ್ರತಿ ದಿನ ಕೊರಗ್ತಾ ಇದ್ದಾನೆ. ಸಾಹಿತ್ಯಾಳ ಬದುಕನ್ನ ತಾನೇ ಸರಿ ಮಾಡ್ತೀನಿ ಅಂತ ಶಪಥ ತಟ್ಟಿದ್ದಾನೆ. ಸದ್ಯ ಸಾಹಿತ್ಯಳ ತಂದೆ, ಮಗಳ ಭವಿಷ್ಯ ಈ ರೀತಿ ಆಗಿದ್ದನ್ನ ನೋಡಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕತೆ ತುಂಬಾನೆ ಕುತೂಹಲಕಾರಿಯಾಗಿ ಹೋಗ್ತಿದ್ದು, ದಿನೇ ದಿನೇ ಧಾರಾವಾಹಿಯ ನೋಡುಗರ ಸಂಖ್ಯೆ ಹೆಚ್ತಿದೆ.

ವಾರದಿಂದ ವಾರಕ್ಕೆ ಕರಿಮಣಿ ವೀಕ್ಷಕರ ಸಂಖ್ಯೆ ಹೆಚ್ಚಾಗ್ತಿದೆ. ಇದು ಇಡೀ ಟೀಮ್‌ಗೆ ಈ ಸುದ್ದಿ ಖುಷಿ ಕೊಟ್ಟಿದ್ದು, ಮತ್ತಷ್ಟು ಟ್ವಿಸ್ಟ್ ಕೊಡಲು ಸಜ್ಜಾಗಿದ್ದಾರೆ. ಇನ್ನೊಂದೆಡೆ, ಕರ್ಣ, ಸಾಹಿತ್ಯ ಪಾತ್ರ ನಿಭಾಯಿಸ್ತಿರೋ ನಟ ಅಶ್ವಿನ್ ಹಾಗೂ ನಟಿ ಸ್ಪಂದನಾ ಸೋಮಣ್ಣ ಇವರ ಬಗ್ಗೆ ಒಳ್ಳೆ ರೆಸ್ಪಾನ್ಸ್ ಕೇಳಿ ಬರ್ತಿದೆ. ನಟ ಅಶ್ವಿನ್ ಹಾಗೂ ನಟಿ ಸ್ಪಂದನ ಇಬ್ಬರು ಮೂಲತಹ: ಮೈಸೂರಿನವರು. ಅಶ್ವಿನ್ ಈ ಮುಂಚೆ ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಜೊತೆಗೆ ಹಲವಾರು ಶಾರ್ಟ್​ ಮೂವೀಸ್​ಗಳಲ್ಲಿ ನಟನ ಕೌಶಲ್ಯ ಶೋ ಮಾಡಿದ್ದಾರೆ. ಕರಿಮಣಿ ಧಾರಾವಾಹಿ ಅಶ್ವಿನ್ ಅವರ ಕರಿಯರ್​ನಲ್ಲಿ ಒಂದು ದೊಡ್ಡ ಬ್ರೇಕ್ ನೀಡೋದ್ರಲ್ಲಿ ಸಂಶಯವೇ ಇಲ್ಲ.

ವೀಕ್ಷಕರು ಭಾರಿ ಮೆಚ್ಚುಗೆ ಕರ್ಣನ ಪಾತ್ರಕ್ಕೆ

ಸದ್ಯ ಸುಮಾರಷ್ಟು ಎಪಿಸೋಡ್ಸ್​ಗಳಿಂದ ಕರ್ಣನ ಪಾತ್ರಕ್ಕೆ ವೀಕ್ಷಕರು ಭಾರಿ ಮೆಚ್ಚುಗೆಯನ್ನ ವ್ಯಕ್ತಪಡಿಸ್ತಿದ್ದಾರೆ. ನಟ ಅಶ್ವಿನ್ ಅವರ ಪ್ರತಿಭೆ ಗುರುತಿಸಿ ಶಹಬ್ಬಾಸ್​ ಅಂತಿದ್ದಾರೆ. ಇನ್ನೂ ಸ್ಪಂದನಾ ಕೂಡ ಸಾಹಿತ್ಯ ಪಾತ್ರವನ್ನ ಅತ್ಯದ್ಭುತವಾಗಿ ಕ್ಯಾರಿ ಮಾಡ್ತಿದ್ದಾರೆ. ತೆರೆ ಮೇಲೆ ಸಾಹಿತ್ಯ ಕರ್ಣನ ಸೀನ್ಸ್​ಗೆ ವೀಕ್ಷಕರು ವೇಟ್ ಮಾಡುವಂತಾಗಿದೆ. ನಟಿ ಸ್ಪಂದನಾ ಅವರ ಡೈಲಾಗ್ ಡೆಲಿವರಿ, ಫೇಸ್ ಎಕ್ಸ್‌ಪ್ರೆಷನ್‌, ಬಾಡಿ ಲಾಂಗ್ವೆಜ್‌ ಪಾತ್ರಕ್ಕೆ ಸೂಟ್ ಆಗ್ತಿದೆ. ಇದೇ ನಟಿಗೆ ಪ್ರಶಂಸೆ ತಂದುಕೊಡ್ತಿದೆ. ಸಾಹಿತ್ಯ-ಕರ್ಣ ಕಲರ್ಸ್​ ವಾಹಿನಿಗೆ ಮತ್ತೊಂದು ಹಿಟ್ ಜೋಡಿ ಆಗೋದ್ರಲ್ಲಿ ಡೌಟೇ ಇಲ್ಲ ಅಂತಿದ್ದಾರೆ ಕರಿಮಣಿ ಧಾರಾವಾಹಿಯ ಅಭಿಮಾನಿಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಹಿತ್ಯ-ಕರ್ಣ ಜೋಡಿ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ; ಈ ಸೀರಿಯಲ್​ಗೆ ವೀಕ್ಷಕರಿಂದ ಮೆಚ್ಚುಗೆ..!

https://newsfirstlive.com/wp-content/uploads/2024/03/KARIMANI.jpg

    ಸೀರಿಯಲ್​ ಸ್ಲೋ ಪಾಯ್ಸನ್‌ ರೀತಿ ಜನರ ಮನಸು ಕದಿಯುತ್ತಿದೆ

    ಕರಿಮಣಿ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ, ಹಿಂದಿನ ಸಿಕ್ರೇಟ್ ಏನು?

    ನಾಯಕಿ ಸಾಹಿತ್ಯಾಳ ಅಪ್ಪನಿಗೆ ಬಹಳ ವರ್ಷಗಳ ಕನಸೊಂದಿದೆ

ಕರಿಮಣಿ ಅಂತಾ ಟೈಟಲ್‌ ಜನರಿಗೆ ತಿಳಿದಾಗಲೇ ಅವ್ರಿಗೆ ಏನೋ ಒಂದು ಕುತೂಹಲ. ಆ ಟೈಮ್‌ನಲ್ಲೇ ಕರಿಮಣಿ ರೀಲ್ಸ್‌ ಪೀಕ್‌ನಲ್ಲಿತ್ತು. ಹೀಗಾಗಿ, ಜನರು ಈ ಟೈಟಲ್‌ಗೆ ಬೇಗ ಕನೆಕ್ಟ್ ಆದರು. ಇನ್‌ಫ್ಯಾಕ್ಟ್ ಈ ಸೀರಿಯಲ್‌, ಆರಂಭವದಲ್ಲಿ ವ್ಹಾವ್ ಅನ್ನೋ ರೇಂಜಿಗೆ ಸದ್ದು ಮಾಡ್ಲಿಲ್ಲ. ಆದ್ರೆ, ಆ ಸ್ಲೋ ಪಾಯ್ಸನ್‌ ಥರಾ ಈಗ, ಜನರ ಮನಸ್ಸು ಕದಿಯುತ್ತಿದೆ.

ಕೆಲವೊಂದು ಕಥೆಗಳೇ ಹಾಗೇ. ಜನರಿಗೆ ಇಷ್ಟವಾಗೋಕೆ ಟೈಮ್ ಬೇಕಾಗುತ್ತದೆ. ಒಂದು ಬಾರಿ ಮನಸ್ಸಿಗೆ ಈಡಿಸಿದ್ರೆ, ಬಹುಶಃ ಆಡಿಯನ್ಸ್‌ ಅಲುಗಾಡೋದಿಲ್ಲ. ಕರಿಮಣಿ ಸೀರಿಯಲ್‌ ವಿಚಾರದಲ್ಲೂ ಈಗ ಇದೇ ರೀತಿ ಆಗಿದೆ. ಅದಕ್ಕೆ ಕಾರಣ ಮುಖ್ಯವಾಗಿ ಕಥೆ ಮತ್ತು ಚಿತ್ರಕಥೆ. ಕರಿಮಣಿ ಸೀರಿಯಲ್‌ನಲ್ಲಿ ಒಂದು ಸ್ಟ್ರಾಂಗ್ ಕಂಟೆಂಟ್ ಇದೆ. ಅದೇ ಹೆಣ್ಣಿನ ಭಾವನೆ. ಕಥಾ ನಾಯಕಿ ಸಾಹಿತ್ಯಾಳ ಅಪ್ಪನಿಗೆ ಬಹಳ ವರ್ಷಗಳ ಕನಸೊಂದಿದೆ. ಸಾಹಿತ್ಯಾಳಿಗೆ ಒಳ್ಳೆ ಮದುವೆ ಮಾಡಿ, ಒಳ್ಳೆ ಮನೆ ಸೇರಿಸ್ಬೇಕು ಅನ್ನೋದು. ಆದ್ರೆ, ಸಾಹಿತ್ಯ ಬದುಕಲ್ಲಿ ಅವಳ ಮದುವೆ ದಿನಾನೆ, ವಿಧಿ ಬೇರೆ ಆಟನೇ ಆಡಿತ್ತು. ದುರಾದೃಷ್ಟವಶಾತ್, ಕಥಾನಾಯಕ ಕರ್ಣನ ಕೈಯಿಂದ ಗೊತ್ತಿಲ್ಲದೆ ಸಾಹಿತ್ಯ ಮದುವೆ ನಿಂತು ಹೋಯ್ತು.

ಇದನ್ನೂ ಓದಿ: ಈಜಲು ನದಿಗೆ ಇಳಿದಿದ್ದ ಮೂವರು ಯುವಕರು ನೀರು ಪಾಲು.. ಓರ್ವನ ಮೃತದೇಹ ಪತ್ತೆ

ದಿನೇ ದಿನೆ ಧಾರಾವಾಹಿ ನೋಡುಗರ ಸಂಖ್ಯೆ ಹೆಚ್ಚುತ್ತಿದೆ

ಕರ್ಣನ ಈ ಒಂದು ನಿರ್ಧಾರ ಸಾಹಿತ್ಯ ಬದುಕನ್ನೇ ನುಚ್ಚು ನೂರು ಮಾಡಿದೆ. ಮದುವೆ ನಿಲ್ಲಿಸಿದ ತಪ್ಪಿಗೆ ಕರ್ಣ ಪ್ರತಿ ದಿನ ಕೊರಗ್ತಾ ಇದ್ದಾನೆ. ಸಾಹಿತ್ಯಾಳ ಬದುಕನ್ನ ತಾನೇ ಸರಿ ಮಾಡ್ತೀನಿ ಅಂತ ಶಪಥ ತಟ್ಟಿದ್ದಾನೆ. ಸದ್ಯ ಸಾಹಿತ್ಯಳ ತಂದೆ, ಮಗಳ ಭವಿಷ್ಯ ಈ ರೀತಿ ಆಗಿದ್ದನ್ನ ನೋಡಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕತೆ ತುಂಬಾನೆ ಕುತೂಹಲಕಾರಿಯಾಗಿ ಹೋಗ್ತಿದ್ದು, ದಿನೇ ದಿನೇ ಧಾರಾವಾಹಿಯ ನೋಡುಗರ ಸಂಖ್ಯೆ ಹೆಚ್ತಿದೆ.

ವಾರದಿಂದ ವಾರಕ್ಕೆ ಕರಿಮಣಿ ವೀಕ್ಷಕರ ಸಂಖ್ಯೆ ಹೆಚ್ಚಾಗ್ತಿದೆ. ಇದು ಇಡೀ ಟೀಮ್‌ಗೆ ಈ ಸುದ್ದಿ ಖುಷಿ ಕೊಟ್ಟಿದ್ದು, ಮತ್ತಷ್ಟು ಟ್ವಿಸ್ಟ್ ಕೊಡಲು ಸಜ್ಜಾಗಿದ್ದಾರೆ. ಇನ್ನೊಂದೆಡೆ, ಕರ್ಣ, ಸಾಹಿತ್ಯ ಪಾತ್ರ ನಿಭಾಯಿಸ್ತಿರೋ ನಟ ಅಶ್ವಿನ್ ಹಾಗೂ ನಟಿ ಸ್ಪಂದನಾ ಸೋಮಣ್ಣ ಇವರ ಬಗ್ಗೆ ಒಳ್ಳೆ ರೆಸ್ಪಾನ್ಸ್ ಕೇಳಿ ಬರ್ತಿದೆ. ನಟ ಅಶ್ವಿನ್ ಹಾಗೂ ನಟಿ ಸ್ಪಂದನ ಇಬ್ಬರು ಮೂಲತಹ: ಮೈಸೂರಿನವರು. ಅಶ್ವಿನ್ ಈ ಮುಂಚೆ ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಜೊತೆಗೆ ಹಲವಾರು ಶಾರ್ಟ್​ ಮೂವೀಸ್​ಗಳಲ್ಲಿ ನಟನ ಕೌಶಲ್ಯ ಶೋ ಮಾಡಿದ್ದಾರೆ. ಕರಿಮಣಿ ಧಾರಾವಾಹಿ ಅಶ್ವಿನ್ ಅವರ ಕರಿಯರ್​ನಲ್ಲಿ ಒಂದು ದೊಡ್ಡ ಬ್ರೇಕ್ ನೀಡೋದ್ರಲ್ಲಿ ಸಂಶಯವೇ ಇಲ್ಲ.

ವೀಕ್ಷಕರು ಭಾರಿ ಮೆಚ್ಚುಗೆ ಕರ್ಣನ ಪಾತ್ರಕ್ಕೆ

ಸದ್ಯ ಸುಮಾರಷ್ಟು ಎಪಿಸೋಡ್ಸ್​ಗಳಿಂದ ಕರ್ಣನ ಪಾತ್ರಕ್ಕೆ ವೀಕ್ಷಕರು ಭಾರಿ ಮೆಚ್ಚುಗೆಯನ್ನ ವ್ಯಕ್ತಪಡಿಸ್ತಿದ್ದಾರೆ. ನಟ ಅಶ್ವಿನ್ ಅವರ ಪ್ರತಿಭೆ ಗುರುತಿಸಿ ಶಹಬ್ಬಾಸ್​ ಅಂತಿದ್ದಾರೆ. ಇನ್ನೂ ಸ್ಪಂದನಾ ಕೂಡ ಸಾಹಿತ್ಯ ಪಾತ್ರವನ್ನ ಅತ್ಯದ್ಭುತವಾಗಿ ಕ್ಯಾರಿ ಮಾಡ್ತಿದ್ದಾರೆ. ತೆರೆ ಮೇಲೆ ಸಾಹಿತ್ಯ ಕರ್ಣನ ಸೀನ್ಸ್​ಗೆ ವೀಕ್ಷಕರು ವೇಟ್ ಮಾಡುವಂತಾಗಿದೆ. ನಟಿ ಸ್ಪಂದನಾ ಅವರ ಡೈಲಾಗ್ ಡೆಲಿವರಿ, ಫೇಸ್ ಎಕ್ಸ್‌ಪ್ರೆಷನ್‌, ಬಾಡಿ ಲಾಂಗ್ವೆಜ್‌ ಪಾತ್ರಕ್ಕೆ ಸೂಟ್ ಆಗ್ತಿದೆ. ಇದೇ ನಟಿಗೆ ಪ್ರಶಂಸೆ ತಂದುಕೊಡ್ತಿದೆ. ಸಾಹಿತ್ಯ-ಕರ್ಣ ಕಲರ್ಸ್​ ವಾಹಿನಿಗೆ ಮತ್ತೊಂದು ಹಿಟ್ ಜೋಡಿ ಆಗೋದ್ರಲ್ಲಿ ಡೌಟೇ ಇಲ್ಲ ಅಂತಿದ್ದಾರೆ ಕರಿಮಣಿ ಧಾರಾವಾಹಿಯ ಅಭಿಮಾನಿಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More