ಕಿರಣ್ ರಾಜ್ ಅಭಿಮಾನಿಗಳಿಗೆ ಇಂದು ಹಬ್ಬ.. ಕರ್ಣನ ಮನೆ ತುಂಬಿಸಿಕೊಳ್ಳಲು ಫ್ಯಾನ್ಸ್ ಎಕ್ಸೈಟ್..!

author-image
Ganesh
Updated On
ಇನ್ಮುಂದೆ ಕರ್ಣನ ಹವಾ ಬಲು ಜೋರು.. ವೀಕ್ಷಕರಿಗೆ ಇಷ್ಟ ಆಗುತ್ತಾ ಅಕ್ಕ-ತಂಗಿ ಕಾಂಬಿನೇಷನ್..!
Advertisment
  • ಕಿರಣ್ ರಾಜ್​​ರನ್ನ ಮತ್ತೆ ನೋಡಲು ಫ್ಯಾನ್ಸ್​ ಎಕ್ಸೈಟ್
  • ಇಂದು ರಾತ್ರಿ 8 ಗಂಟೆಗೆ ಕರ್ಣ ಸೀರಿಯಲ್ ಲಾಂಚ್
  • ಜೂನ್ 16 ರಿಂದ ಪ್ರಸಾರವಾಗಬೇಕಿದ್ದ ಕರ್ಣ ಸೀರಿಯಲ್

ಝೀ ಕನ್ನಡ ವಾಹಿನಿಯ ಸೀರಿಯಲ್ ವೀಕ್ಷಕರಿಗೆ ಇಂದಿನಿಂದ ಮನರಂಜನೆಯ ಧಮಾಕಾ ಸಿಗಲಿದೆ. ಇಂದಿನಿಂದ ಕಿರಣ್ ರಾಜ್​ ಹಾಗೂ ಭವ್ಯ ಗೌಡ ಅಭಿನಯದ ಬಹು ನಿರೀಕ್ಷಿತ ‘ಕರ್ಣ’ಸೀರಿಯಲ್ ಲಾಂಚ್ ಆಗ್ತಿದೆ. ಜೂನ್​ 16 ರಂದು ಕರ್ಣ ಧಾರಾವಾಹಿ ಪ್ರಸಾರವಾಗಬೇಕಿತ್ತು. ಅನಿರೀಕ್ಷಿತ ತಿರುವುಗಳಿಂದಾಗಿ ಧಾರವಾಹಿ ಲಾಂಚ್​ ಮುಂದೂಡಿಕೆ ಆಗಿತ್ತು.

ಸೀರಿಯಲ್ ತಂಡ ಉಂಟಾಗಿದ್ದ ಎಲ್ಲಾ ಅಡೆತಡೆಗಳನ್ನು ದಾಟಿ ವೀಕ್ಷಕರ ಹೃದಯ ಮೀಟಲು ಇಂದಿನಿಂದ ಕರ್ಣ ಬರ್ತಿದ್ದಾನೆ. ಆ ಮೂಲಕ ಬರೋಬ್ಬರಿ ಎರಡು ವರ್ಷಗಳ ನಂತರ ನಟ ಕಿರಣ್​ ರಾಜ್​ ಅವರನ್ನು ಕಣ್ತುಂಬಿಕೊಳ್ಳಬೇಕು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.

ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?

publive-image

ಸೋಮ-ಶುಕ್ರ ಪ್ರತಿ ರಾತ್ರಿ 8 ಗಂಟೆಗೆ ಕರ್ಣ ಸೀರಿಯಲ್​ ಪ್ರಸಾರವಾಗಲಿದೆ. ಈ ಬಗ್ಗೆ ಖುದ್ದು ಜೀ ಕನ್ನಡ ತನ್ನ ಅಫೀಷಿಯಲ್ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ದಿಢೀರ್​ ಅಂತ ಕರ್ಣ ಡೇಟ್​ ಮುಂದೂಡಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಕಿರಣ್ ರಾಜ್ ಅವರು ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದರು. ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದರು ಕಿರಣ್​ ರಾಜ್​. ಅದೇ ರೀತಿ ನಿತ್ಯಾ ಪಾತ್ರ ಮಾಡ್ತಿರೋ ನಮ್ರತಾ ಗೌಡ ಅವರು ಕೂಡ ಕ್ಷಮೆ ಕೇಳಿದ್ದರು. ಆದಷ್ಟು ಬೇಗ ನಿಮ್ಮ ಮುಂದೆ ಬಂದೇ ಬರ್ತಿವಿ ಅಂತ ಕೂಡ ಭರವಸೆ ಕೊಟ್ಟಿದ್ದರು. ಜೊತೆಗೆ ನಿಧಿ ಪಾತ್ರ ಮಾಡ್ತಿರೋ ಭವ್ಯಾ ಗೌಡ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದರು. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಆಗೋದಲ್ಲ ಒಳ್ಳೆಯದಕ್ಕೆ ಎಂಬ ಅರ್ಥದಲ್ಲಿ ಟ್ರಸ್ಟ್​ ದಿ ಪ್ರೋಸಸ್​ ಎಂದು ಬರೆದುಕೊಂಡಿದ್ದರು.

publive-image

ಇಂದಿನಿಂದ ಝೀ ಕನ್ನಡದಲ್ಲಿ ರಾತ್ರಿ 8.00 ಗಂಟೆಗೆ ಕರ್ಣ ಸೀರಿಯಲ್​ ಪ್ರಸಾರವಾಗಲಿದೆ. ಈ ಹಿಂದೆ ಕರ್ಣ ಸೀರಿಯಲ್​ ತಂಡಕ್ಕೆ ಕಾನೂನು ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ವಾಹಿನಿ ಸ್ಪಷ್ಟ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇಂಟರ್​ನಲ್ ಸಮಸ್ಸೆ ಆಗಿದ್ದರಿಂದ ವೀಕ್ಷಕರ ಮುಂದೆ ಬರೋದಕ್ಕೆ ತಡವಾಗಿತ್ತು. ಈಗ ಎಲ್ಲಾ ಸವಾಲುಗಳನ್ನ ಮೀರಿ ಕರ್ಣ ಧಾರಾವಾಹಿ ಪ್ರಸಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment