/newsfirstlive-kannada/media/post_attachments/wp-content/uploads/2025/05/Srirasthu-Shubhamasthu.jpg)
ವಿಭಿನ್ನವಾದ ಲವ್​ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು, ಮಾಧವ ಹಾಗೂ ತುಳಸಿ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ವೀಕ್ಷಕರಿಗೆ ಭರ್ಜರಿ ರೆಸ್ಪಾನ್ಸ್​ ಪಡೆದುಕೊಂಡು ಮುನ್ನುಗ್ಗುತ್ತಿತ್ತು. ಆದರೆ ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಕ್ತಾಯವಾಗುತ್ತಿದೆ.
ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ
/newsfirstlive-kannada/media/post_attachments/wp-content/uploads/2025/05/Srirasthu-Shubhamasthu1.jpg)
ಶ್ರೀರಸ್ತು ಶುಭಮಸ್ತು ಕಲಾವಿದರು ಸಖತ್ ಕ್ಲೂಸ್​. ಶೂಟಿಂಗ್​ ಗ್ಯಾಪ್​ನಲ್ಲಿ ಸಖತ್​ ಜಾಲಿ ಮಾಡ್ತಿರ್ತಾರೆ. ಸೆಟ್​ನ ಮಜಾ ಈಗ ಕೇರಳವರೆಗೂ ಹರಡಿದೆ. ಹೌದು, ಅಭಿ, ಅವಿ, ಶಾರ್ವರಿ, ಮಾಧವ್​, ಪೂರ್ವಿ ಹಾಗೂ ದೀಪಿಕಾ ಪಾತ್ರ ಮಾಡ್ತಿರೋ ನಟರು ಕೇರಳದ ವೈಯನಾಡುಗೆ ತೆರಳಿದ್ದಾರೆ. ಹಾಟ್​​.. ಹಾಟ್​ ವಾತವರಣಕ್ಕೆ ಬೈ ಹೇಳಿ ಪ್ರಕೃತಿ ನಡುವೆ ಎಂಜಾಯ್​ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/05/Srirasthu-Shubhamasthu2.jpg)
ಮಸ್ತ್​​ ಆಗಿರೋ ವಾತಾವರಣದಲ್ಲಿ ಮಜೇದಾರ್​ ಕ್ಷಣಗಳನ್ನ ಕಳೆಯುತ್ತಿದ್ದಾರೆ ಸ್ನೇಹಿತರು. ಅಂದ್ಹಾಗೆ, ಶ್ರೀರಸ್ತು ಶುಭಮಸ್ತು ಮುಕ್ತಾಯ ಆಗುವ ಸೂಚನೆ ಸಿಗ್ತಿದ್ದು, ಅಧಿಕೃತವಾಗಿ ಘೋಷಣೆ ಆಗಿಲ್ಲ. ಇನ್ನೇನೂ ಕೊನೆ ಸಂಚಿಕೆ ಹಂತ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us