newsfirstkannada.com

ನಟ ದರ್ಶನ್​​ ವಿರುದ್ಧ ನೀಡಿದ್ದ ದೂರು ವಾಪಸ್​​.. ಕನ್ನಡಿಗರ ಕ್ಷಮೆ ಕೇಳಿದ ಕನ್ನಡ ಶಫಿ!

Share :

Published February 23, 2024 at 6:25pm

Update February 23, 2024 at 6:38pm

    ನಟ ದರ್ಶನ್​​ ವಿರುದ್ಧ ದೂರು ದಾಖಲಿಸಿದ್ದ ಕನ್ನಡ ಶಫಿ!

    ಕೇವಲ 2 ದಿನಗಳಲ್ಲಿ ದರ್ಶನ್​ ವಿರುದ್ಧದ ದೂರು ವಾಪಸ್​​

    ಕನ್ನಡಿಗರ ಕ್ಷಮೆ ಕೇಳಿ ದೂರು ವಾಪಸ್​ ಪಡೆದ ಶಫಿ ಏನಂದ್ರು?

ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​ ವಿರುದ್ಧ ನೀಡಿದ್ದ ದೂರನ್ನು ಕನ್ನಡ ಶಫಿ ವಾಪಸ್​ ಪಡೆದಿದ್ದಾರೆ. ಅಲ್ಲದೇ ನನ್ನಿಂದ ಕನ್ನಡದ ಮನಸ್ಸುಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ. ಸದ್ಯ ಕನ್ನಡ ಶಫಿ ದರ್ಶನ್​ ಅವರಿಗೆ ಕ್ಷಮೆ ಕೇಳಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಕನ್ನಡ ಶಫಿ ಮಾಡಿದ ವಿಡಿಯೋದಲ್ಲೇನಿದೆ..?

ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಶಫಿ. ಇವತ್ತು ನಾನು ನಿಮ್ಮ ಮುಂದೆ ಬಂದಿರೋ ಉದ್ದೇಶ ಏನಂದ್ರೆ, ದರ್ಶನ್​ ಅವರು ವೇದಿಕೆ ಮೇಲೆ ಬಳಸಿದ್ದ ಪದಗಳು ಮುಜುಗರ ಉಂಟು ಮಾಡಿತ್ತು. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು. ದರ್ಶನ್​ ಹಿರಿಯ ನಟ. ನಾವು ದೂರು ನೀಡಬಾರದಿತ್ತು, ಯಾಕೋ ಸ್ವಲ್ಪ ಆತುರ ಪಟ್ಟಿದ್ದೆವು ಅನಿಸಿದೆ. ನನ್ನಿಂದ ದರ್ಶನ್​ ಅವರಿಗಾಗಲಿ, ಕನ್ನಡಿಗರಿಗಾಗಲಿ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ.

ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ದರ್ಶನ್​ ವಿರುದ್ಧ ದಾಖಲಿಸಿರೋ ದೂರು ವಾಪಸ್​ ಪಡೆಯುವುದಾಗಿ ಹೇಳಿದ್ದಾರೆ. ಈ ಹಿಂದೆ ಉಮಾಪತಿ ಅವರಿಗೆ ವೇದಿಕೆ ಮೇಲೆ ದರ್ಶನ್​ ತಗಡು ಎಂದು ಕರೆದಿದ್ದರು. ಇದರ ಬೆನ್ನಲ್ಲೇ ದರ್ಶನ್​ ವಿರುದ್ಧ ಕನ್ನಡ ಶಫಿ ದೂರು ದಾಖಲಿಸಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಟ ದರ್ಶನ್​​ ವಿರುದ್ಧ ನೀಡಿದ್ದ ದೂರು ವಾಪಸ್​​.. ಕನ್ನಡಿಗರ ಕ್ಷಮೆ ಕೇಳಿದ ಕನ್ನಡ ಶಫಿ!

https://newsfirstlive.com/wp-content/uploads/2024/02/Darshan_Shafi.jpg

    ನಟ ದರ್ಶನ್​​ ವಿರುದ್ಧ ದೂರು ದಾಖಲಿಸಿದ್ದ ಕನ್ನಡ ಶಫಿ!

    ಕೇವಲ 2 ದಿನಗಳಲ್ಲಿ ದರ್ಶನ್​ ವಿರುದ್ಧದ ದೂರು ವಾಪಸ್​​

    ಕನ್ನಡಿಗರ ಕ್ಷಮೆ ಕೇಳಿ ದೂರು ವಾಪಸ್​ ಪಡೆದ ಶಫಿ ಏನಂದ್ರು?

ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​ ವಿರುದ್ಧ ನೀಡಿದ್ದ ದೂರನ್ನು ಕನ್ನಡ ಶಫಿ ವಾಪಸ್​ ಪಡೆದಿದ್ದಾರೆ. ಅಲ್ಲದೇ ನನ್ನಿಂದ ಕನ್ನಡದ ಮನಸ್ಸುಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ. ಸದ್ಯ ಕನ್ನಡ ಶಫಿ ದರ್ಶನ್​ ಅವರಿಗೆ ಕ್ಷಮೆ ಕೇಳಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಕನ್ನಡ ಶಫಿ ಮಾಡಿದ ವಿಡಿಯೋದಲ್ಲೇನಿದೆ..?

ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಶಫಿ. ಇವತ್ತು ನಾನು ನಿಮ್ಮ ಮುಂದೆ ಬಂದಿರೋ ಉದ್ದೇಶ ಏನಂದ್ರೆ, ದರ್ಶನ್​ ಅವರು ವೇದಿಕೆ ಮೇಲೆ ಬಳಸಿದ್ದ ಪದಗಳು ಮುಜುಗರ ಉಂಟು ಮಾಡಿತ್ತು. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು. ದರ್ಶನ್​ ಹಿರಿಯ ನಟ. ನಾವು ದೂರು ನೀಡಬಾರದಿತ್ತು, ಯಾಕೋ ಸ್ವಲ್ಪ ಆತುರ ಪಟ್ಟಿದ್ದೆವು ಅನಿಸಿದೆ. ನನ್ನಿಂದ ದರ್ಶನ್​ ಅವರಿಗಾಗಲಿ, ಕನ್ನಡಿಗರಿಗಾಗಲಿ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ.

ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ದರ್ಶನ್​ ವಿರುದ್ಧ ದಾಖಲಿಸಿರೋ ದೂರು ವಾಪಸ್​ ಪಡೆಯುವುದಾಗಿ ಹೇಳಿದ್ದಾರೆ. ಈ ಹಿಂದೆ ಉಮಾಪತಿ ಅವರಿಗೆ ವೇದಿಕೆ ಮೇಲೆ ದರ್ಶನ್​ ತಗಡು ಎಂದು ಕರೆದಿದ್ದರು. ಇದರ ಬೆನ್ನಲ್ಲೇ ದರ್ಶನ್​ ವಿರುದ್ಧ ಕನ್ನಡ ಶಫಿ ದೂರು ದಾಖಲಿಸಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More