ನಟ ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಕನ್ನಡ ಶಫಿ!
ಕೇವಲ 2 ದಿನಗಳಲ್ಲಿ ದರ್ಶನ್ ವಿರುದ್ಧದ ದೂರು ವಾಪಸ್
ಕನ್ನಡಿಗರ ಕ್ಷಮೆ ಕೇಳಿ ದೂರು ವಾಪಸ್ ಪಡೆದ ಶಫಿ ಏನಂದ್ರು?
ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ನೀಡಿದ್ದ ದೂರನ್ನು ಕನ್ನಡ ಶಫಿ ವಾಪಸ್ ಪಡೆದಿದ್ದಾರೆ. ಅಲ್ಲದೇ ನನ್ನಿಂದ ಕನ್ನಡದ ಮನಸ್ಸುಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ. ಸದ್ಯ ಕನ್ನಡ ಶಫಿ ದರ್ಶನ್ ಅವರಿಗೆ ಕ್ಷಮೆ ಕೇಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಡಿ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿದ ಕನ್ನಡ ಶಫಿ ಹೆಸರಿನ ನಕಲಿ ಹೋರಾಟಗಾರ ಡಿ ಬಾಸ್ ಮತ್ತು ಅಭಿಮಾನಿಗಳ ಕ್ಷಮೆಯಾಚಿಸಿದ#DBoss #ChallengingStarDarshan pic.twitter.com/wGCmwIXJwY
— D Company(R)Official (@Dcompany171) February 23, 2024
ಕನ್ನಡ ಶಫಿ ಮಾಡಿದ ವಿಡಿಯೋದಲ್ಲೇನಿದೆ..?
ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಶಫಿ. ಇವತ್ತು ನಾನು ನಿಮ್ಮ ಮುಂದೆ ಬಂದಿರೋ ಉದ್ದೇಶ ಏನಂದ್ರೆ, ದರ್ಶನ್ ಅವರು ವೇದಿಕೆ ಮೇಲೆ ಬಳಸಿದ್ದ ಪದಗಳು ಮುಜುಗರ ಉಂಟು ಮಾಡಿತ್ತು. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು. ದರ್ಶನ್ ಹಿರಿಯ ನಟ. ನಾವು ದೂರು ನೀಡಬಾರದಿತ್ತು, ಯಾಕೋ ಸ್ವಲ್ಪ ಆತುರ ಪಟ್ಟಿದ್ದೆವು ಅನಿಸಿದೆ. ನನ್ನಿಂದ ದರ್ಶನ್ ಅವರಿಗಾಗಲಿ, ಕನ್ನಡಿಗರಿಗಾಗಲಿ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ.
ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ದರ್ಶನ್ ವಿರುದ್ಧ ದಾಖಲಿಸಿರೋ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಈ ಹಿಂದೆ ಉಮಾಪತಿ ಅವರಿಗೆ ವೇದಿಕೆ ಮೇಲೆ ದರ್ಶನ್ ತಗಡು ಎಂದು ಕರೆದಿದ್ದರು. ಇದರ ಬೆನ್ನಲ್ಲೇ ದರ್ಶನ್ ವಿರುದ್ಧ ಕನ್ನಡ ಶಫಿ ದೂರು ದಾಖಲಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಟ ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಕನ್ನಡ ಶಫಿ!
ಕೇವಲ 2 ದಿನಗಳಲ್ಲಿ ದರ್ಶನ್ ವಿರುದ್ಧದ ದೂರು ವಾಪಸ್
ಕನ್ನಡಿಗರ ಕ್ಷಮೆ ಕೇಳಿ ದೂರು ವಾಪಸ್ ಪಡೆದ ಶಫಿ ಏನಂದ್ರು?
ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ನೀಡಿದ್ದ ದೂರನ್ನು ಕನ್ನಡ ಶಫಿ ವಾಪಸ್ ಪಡೆದಿದ್ದಾರೆ. ಅಲ್ಲದೇ ನನ್ನಿಂದ ಕನ್ನಡದ ಮನಸ್ಸುಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ. ಸದ್ಯ ಕನ್ನಡ ಶಫಿ ದರ್ಶನ್ ಅವರಿಗೆ ಕ್ಷಮೆ ಕೇಳಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಡಿ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿದ ಕನ್ನಡ ಶಫಿ ಹೆಸರಿನ ನಕಲಿ ಹೋರಾಟಗಾರ ಡಿ ಬಾಸ್ ಮತ್ತು ಅಭಿಮಾನಿಗಳ ಕ್ಷಮೆಯಾಚಿಸಿದ#DBoss #ChallengingStarDarshan pic.twitter.com/wGCmwIXJwY
— D Company(R)Official (@Dcompany171) February 23, 2024
ಕನ್ನಡ ಶಫಿ ಮಾಡಿದ ವಿಡಿಯೋದಲ್ಲೇನಿದೆ..?
ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಶಫಿ. ಇವತ್ತು ನಾನು ನಿಮ್ಮ ಮುಂದೆ ಬಂದಿರೋ ಉದ್ದೇಶ ಏನಂದ್ರೆ, ದರ್ಶನ್ ಅವರು ವೇದಿಕೆ ಮೇಲೆ ಬಳಸಿದ್ದ ಪದಗಳು ಮುಜುಗರ ಉಂಟು ಮಾಡಿತ್ತು. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು. ದರ್ಶನ್ ಹಿರಿಯ ನಟ. ನಾವು ದೂರು ನೀಡಬಾರದಿತ್ತು, ಯಾಕೋ ಸ್ವಲ್ಪ ಆತುರ ಪಟ್ಟಿದ್ದೆವು ಅನಿಸಿದೆ. ನನ್ನಿಂದ ದರ್ಶನ್ ಅವರಿಗಾಗಲಿ, ಕನ್ನಡಿಗರಿಗಾಗಲಿ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದಿದ್ದಾರೆ.
ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟ ದರ್ಶನ್ ವಿರುದ್ಧ ದಾಖಲಿಸಿರೋ ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಈ ಹಿಂದೆ ಉಮಾಪತಿ ಅವರಿಗೆ ವೇದಿಕೆ ಮೇಲೆ ದರ್ಶನ್ ತಗಡು ಎಂದು ಕರೆದಿದ್ದರು. ಇದರ ಬೆನ್ನಲ್ಲೇ ದರ್ಶನ್ ವಿರುದ್ಧ ಕನ್ನಡ ಶಫಿ ದೂರು ದಾಖಲಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ