ರಶ್ಮಿ, ಪವಿತ್ರಾ, ಜಯಶ್ರೀ ಹಲವರು ತೆಲುಗು ಸೀರಿಯಲ್ಗಳಲ್ಲಿದ್ದಾರೆ
ನಟಿ ಅಕ್ಷತಾ ಅವರು ತೆಲುಗಿನ ಯಾವ ಧಾರಾವಾಹಿಯಲ್ಲಿ ನಟಿಸ್ತಿದ್ದಾರೆ?
ಮೊದಲ ಬಾರಿಗೆ ತೆಲುಗು ಪ್ರಾಜೆಕ್ಟ್ಗೆ ಕೆಲಸ ಮಾಡುತ್ತಿರುವ ಅಕ್ಷತಾ
ತೆಲುಗು ಕಿರುತೆರೆಯಲ್ಲಿ ಕನ್ನಡಿಗರದ್ದೇ ಸಾಮ್ರಾಜ್ಯ. ಅದ್ರಲ್ಲೂ ಸ್ಟಾರ್ ಮಾ ವಾಹಿನಿಯಲ್ಲಿ ನಟಿ ಅಮೂಲ್ಯ, ರಶ್ಮಿ ಪ್ರಭಾಕರ್, ಪವಿತ್ರಾ ನಾಯಕ್, ಜಯಶ್ರೀ, ಪ್ರೇರಣಾ, ದೀಪಾ ಹಿರೆಮಠ, ರಕ್ಷಾ ಗೌಡ, ಅಂಕಿತಾ ಅಮರ್ ಸೇರಿದಂತೆ ಸಾಕಷ್ಟು ನಾಯಕಿಯರು ತೆಲುಗು ಕಿರುತೆರೆಯಲ್ಲಿ ಮಿಂಚು ಹರಿಸಿದ್ದಾರೆ. ಸದ್ಯ ಈ ಲಿಸ್ಟ್ಗೆ ಮತ್ತೊಬ್ಬ ನಟಿ ಅಕ್ಷತಾ ದೇಶಪಾಂಡೆ ಅವರು ಸೇರ್ಪಡೆಯಾಗುತ್ತಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಅಕ್ಷತಾ ನಾಯಕಿಯಾಗಿದ್ದ ಸೀರಿಯಲ್ ಮುಕ್ತಾಯ ಆಗುತ್ತಿದ್ದಂತೆ, ತೆಲುಗಿನ ಸ್ಟಾರ್ ಮಾ ವಾಹಿನಿಗೆ ಕಾಲಿಟ್ಟಿದ್ದಾರೆ ನಟಿ. ನಿನ್ನು ಕೊರಿ ಎಂಬ ಸೀರಿಯಲ್ ಮೂಲಕ ತೆಲುಗು ಪ್ರೇಕ್ಷರನ್ನ ಇನ್ಮುಂದೆ ಅಕ್ಷತಾ ರಂಜಿಸಲಿದ್ದಾರೆ.
ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಬ್ಯಾನರ್ ಹಾಕಿ ಮಗಳು ಪ್ರಚಾರ.. ‘ನನ್ನ ತಂದೆಯೇ ನನಗೆ ಸ್ಫೂರ್ತಿ’ ಎಂದ ವಿದ್ಯಾರಾಣಿ
ಹೂ, ಪ್ರಕೃತಿ ಜೊತೆ ಮಾತನಾಡುವ ಮುಗ್ಧ ಮನಸ್ಸಿನ ಚಂದ್ರಕಲಾಗೆ ಅಪ್ಪನೇ ಎಲ್ಲ. ಅಪ್ಪನ ಗೌರವಕ್ಕೆ ಧಕ್ಕೆ ಬಂದ್ರೇ ಸಹಿಸದ ಗಟ್ಟಿಗಿತ್ತಿ. ಆದ್ರೇ ಹೆಣ್ಮಕ್ಕಳು ಸೂಕ್ಷ್ಮತೆಯಿಂದ ಇರಬೇಕು. ಪುರುಷರ ಜೊತೆ ಸಮಬಲ ಸಾಧಿಸಬಾರದು ಎನ್ನುವ ಮನಸ್ಥಿತಿಯುಳ್ಳ ದೊಡ್ಡಪ್ಪ. ಹೇಗೆ ಈ ರೀತಿಯ ಆಲೋಚನೆಗಳನ್ನ ಬದಲಿಸ್ತಾಳೆ ಅನ್ನೋದು ನಿನ್ನು ಕೊರಿ ಸೀರಿಯಲ್ನ ಒನ್ ಲೈನ್ ಸ್ಟೋರಿ.
ಇದೇ ಫಸ್ಟ್ ಟೈಮ್ ತೆಲುಗು ಪ್ರಾಜೆಕ್ಟ್ಗೆ ಕೆಲಸ ಮಾಡ್ತಿರೋ ಅಕ್ಷತಾ ಸಂಭ್ರಮದಲ್ಲಿದ್ದಾರೆ. ಅವರ ಈ ಹೊಸ ಚಾಪ್ಟರ್ಗೆ ಒಳ್ಳೆದಾಗ್ಲಿ. ನಿನ್ನು ಕೊರಿ ಸೀರಿಯಲ್ ಸೂಪರ್ ಡ್ಯುಪರ್ ಹಿಟ್ ಆಗಿ ನಟಿಗೆ ಹೆಚ್ಚು ಹೆಚ್ಚು ಅವಕಾಶಗಳು ಅರಸಿ ಬರಲಿ ಎಂದು ಆಶಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಶ್ಮಿ, ಪವಿತ್ರಾ, ಜಯಶ್ರೀ ಹಲವರು ತೆಲುಗು ಸೀರಿಯಲ್ಗಳಲ್ಲಿದ್ದಾರೆ
ನಟಿ ಅಕ್ಷತಾ ಅವರು ತೆಲುಗಿನ ಯಾವ ಧಾರಾವಾಹಿಯಲ್ಲಿ ನಟಿಸ್ತಿದ್ದಾರೆ?
ಮೊದಲ ಬಾರಿಗೆ ತೆಲುಗು ಪ್ರಾಜೆಕ್ಟ್ಗೆ ಕೆಲಸ ಮಾಡುತ್ತಿರುವ ಅಕ್ಷತಾ
ತೆಲುಗು ಕಿರುತೆರೆಯಲ್ಲಿ ಕನ್ನಡಿಗರದ್ದೇ ಸಾಮ್ರಾಜ್ಯ. ಅದ್ರಲ್ಲೂ ಸ್ಟಾರ್ ಮಾ ವಾಹಿನಿಯಲ್ಲಿ ನಟಿ ಅಮೂಲ್ಯ, ರಶ್ಮಿ ಪ್ರಭಾಕರ್, ಪವಿತ್ರಾ ನಾಯಕ್, ಜಯಶ್ರೀ, ಪ್ರೇರಣಾ, ದೀಪಾ ಹಿರೆಮಠ, ರಕ್ಷಾ ಗೌಡ, ಅಂಕಿತಾ ಅಮರ್ ಸೇರಿದಂತೆ ಸಾಕಷ್ಟು ನಾಯಕಿಯರು ತೆಲುಗು ಕಿರುತೆರೆಯಲ್ಲಿ ಮಿಂಚು ಹರಿಸಿದ್ದಾರೆ. ಸದ್ಯ ಈ ಲಿಸ್ಟ್ಗೆ ಮತ್ತೊಬ್ಬ ನಟಿ ಅಕ್ಷತಾ ದೇಶಪಾಂಡೆ ಅವರು ಸೇರ್ಪಡೆಯಾಗುತ್ತಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಅಕ್ಷತಾ ನಾಯಕಿಯಾಗಿದ್ದ ಸೀರಿಯಲ್ ಮುಕ್ತಾಯ ಆಗುತ್ತಿದ್ದಂತೆ, ತೆಲುಗಿನ ಸ್ಟಾರ್ ಮಾ ವಾಹಿನಿಗೆ ಕಾಲಿಟ್ಟಿದ್ದಾರೆ ನಟಿ. ನಿನ್ನು ಕೊರಿ ಎಂಬ ಸೀರಿಯಲ್ ಮೂಲಕ ತೆಲುಗು ಪ್ರೇಕ್ಷರನ್ನ ಇನ್ಮುಂದೆ ಅಕ್ಷತಾ ರಂಜಿಸಲಿದ್ದಾರೆ.
ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಬ್ಯಾನರ್ ಹಾಕಿ ಮಗಳು ಪ್ರಚಾರ.. ‘ನನ್ನ ತಂದೆಯೇ ನನಗೆ ಸ್ಫೂರ್ತಿ’ ಎಂದ ವಿದ್ಯಾರಾಣಿ
ಹೂ, ಪ್ರಕೃತಿ ಜೊತೆ ಮಾತನಾಡುವ ಮುಗ್ಧ ಮನಸ್ಸಿನ ಚಂದ್ರಕಲಾಗೆ ಅಪ್ಪನೇ ಎಲ್ಲ. ಅಪ್ಪನ ಗೌರವಕ್ಕೆ ಧಕ್ಕೆ ಬಂದ್ರೇ ಸಹಿಸದ ಗಟ್ಟಿಗಿತ್ತಿ. ಆದ್ರೇ ಹೆಣ್ಮಕ್ಕಳು ಸೂಕ್ಷ್ಮತೆಯಿಂದ ಇರಬೇಕು. ಪುರುಷರ ಜೊತೆ ಸಮಬಲ ಸಾಧಿಸಬಾರದು ಎನ್ನುವ ಮನಸ್ಥಿತಿಯುಳ್ಳ ದೊಡ್ಡಪ್ಪ. ಹೇಗೆ ಈ ರೀತಿಯ ಆಲೋಚನೆಗಳನ್ನ ಬದಲಿಸ್ತಾಳೆ ಅನ್ನೋದು ನಿನ್ನು ಕೊರಿ ಸೀರಿಯಲ್ನ ಒನ್ ಲೈನ್ ಸ್ಟೋರಿ.
ಇದೇ ಫಸ್ಟ್ ಟೈಮ್ ತೆಲುಗು ಪ್ರಾಜೆಕ್ಟ್ಗೆ ಕೆಲಸ ಮಾಡ್ತಿರೋ ಅಕ್ಷತಾ ಸಂಭ್ರಮದಲ್ಲಿದ್ದಾರೆ. ಅವರ ಈ ಹೊಸ ಚಾಪ್ಟರ್ಗೆ ಒಳ್ಳೆದಾಗ್ಲಿ. ನಿನ್ನು ಕೊರಿ ಸೀರಿಯಲ್ ಸೂಪರ್ ಡ್ಯುಪರ್ ಹಿಟ್ ಆಗಿ ನಟಿಗೆ ಹೆಚ್ಚು ಹೆಚ್ಚು ಅವಕಾಶಗಳು ಅರಸಿ ಬರಲಿ ಎಂದು ಆಶಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ