/newsfirstlive-kannada/media/post_attachments/wp-content/uploads/2025/06/Vadhu2.jpg)
ಕೆಲ ಧಾರಾವಾಹಿ ಬಂದ ಹಾಗೇ ವೇಗವಾಗಿ ಜರ್ನಿ ಮುಗಿಸಿಬಿಡುತ್ತೆ. ಈ ಲಿಸ್ಟ್ಗೆ ವಧು ಧಾರಾವಾಹಿ ಸೇರ್ಪಡೆಯಾಗಿದೆ.
ಹೌದು, ಪ್ರೋಮೋ ಮೂಲಕ ಸಖತ್ ಸೌಂಡ್ ಮಾಡಿದ್ದ ಧಾರಾವಾಹಿ ಬಿಗ್ಬಾಸ್ ವೇದಿಕೆ ಮೇಲೆ ರಿಲೀಸ್ ಆಗಿತ್ತು. ಟಿ. ಎನ್. ಸೀತಾರಾಮ್ ಕಾಣಿಸಿಕೊಂಡಿದ್ದ ಪ್ರೋಮೋ ಕುತೂಹಲ ಹೆಚ್ಚಿಸಿತ್ತು. ಜನವರಿ 27ಕ್ಕೆ ತೆರೆ ಕಂಡಿತ್ತು ವಧು ಧಾರಾವಾಹಿ.
ಇದನ್ನೂ ಓದಿ: ಟಾಪ್ 6ರಲ್ಲಿ ಯಾರ ಕೈಗೆ ಸೇರಲಿದೆ Sa Re Ga Ma Pa ಟ್ರೋಫಿ.. ವೀಕ್ಷಕರ ಚಿತ್ತ ಯಾರತ್ತ?
ಆದ್ರೆ, ನಿರೀಕ್ಷೆಯಂತೆ ವೀಕ್ಷಕರ ಮನ ಮುಟ್ಟುವಲ್ಲಿ ಸೀರಿಯಲ್ ಯಶಸ್ವಿ ಆಗಲಿಲ್ಲ. TRP ರೇಟಿಂಗ್ನಲ್ಲಿ ಸುಧಾರಣೆ ಕಾಣಲಿಲ್ಲ, ಇದರ ನಡುವೆ ಸಮಯ ಬದಲಾವಣೆ ಮತ್ತಷ್ಟು ಹೊಡೆತ ಕೊಟ್ಟಿತ್ತು. ಬರಹಗಾರರ ತಂಡ ಬದಲಾಗಿದ್ದು, ಮತ್ತೊಂದು ಹೊಡೆತವಾಗಿತ್ತು. ಮೊದಲು ಕನ್ನಡತಿ ಧಾರಾವಾಹಿಗೆ ಕಥೆ ಬರೆದಿದ್ದ ನಿರ್ದೇಶಕ, ಚಾನಲ್ ಹೆಡ್ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಅವರು ವಧುಗೆ ಸ್ಟೋರಿ ಮಾಡಿದ್ರು. ಮೊದಲ ಪ್ರೋಮೋ ಕೂಡ ಇವರೇ ನಿರ್ದೇಶನ ಮಾಡಿದ್ದು. ಧಾರಾವಾಹಿ ಶುರುವಾದ ಒಂದೇ ವಾರದಲ್ಲಿ ಉದಯ ವಾಹಿನಿಗೆ ಹೆಡ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ.
ಹೀಗಾಗಿ ರೈಟರ್ ಟೀಮ್ ಚೇಂಜ್ ಆಗಿದ್ದು ವಧುಗೆ ಹೊಡೆತೆ ಕೊಟ್ಟಿತು. ಪಾರು, ಬ್ರಹ್ಮಗಂಟು ಸೂಪರ್ ಹಿಟ್ ಸೀರಿಯಲ್ಗಳನ್ನ ಕೊಡಗೆ ನೀಡಿರೋ ಧೃತಿ ಕ್ರಿಯೇಷನ್ಸ್ ಅಡಿ ವಧು ನಿರ್ಮಾಣ ಮಾಡಿದ್ರು. ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಹಾಗೂ ಪತ್ನಿ ಶ್ರೀವಿದ್ಯಾ ವಧುಗೆ ಬಂಡವಾಳ ಹಾಕಿದ್ರು. ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವ, ವಧು ಪಾತ್ರದಲ್ಲಿ ದುರ್ಗಶ್ರೀ, ಸಾರ್ಥಕ್ ಪಾತ್ರದಲ್ಲಿ ಅಭಿಷೇಕ್ ಹಾಗೂ ಪ್ರಮುಖ ಪಾತ್ರದಲ್ಲಿ ವಿನಯಾ ಪ್ರಸಾದ್ ಅಭಿನಯಿಸಿದ್ರು. ಈ ವಾರ ಕೊನೆ ಸಂಚಿಕೆಗಳು ಪ್ರಸಾರವಾಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ