ರಾಮ ಲಲ್ಲಾ ಪ್ರತಿಷ್ಠಾಪನೆಗೆ ಮೂರೇ ದಿನ ಬಾಕಿ
ಶುಭಾ ಸಂತೋಷ ಅವರಿಗೆ ಅಯೋಧ್ಯೆಯಿಂದ ಆಹ್ವಾನ
40 ವರ್ಷದ ತಂಜಾವೂರಿನ ವೀಣೆ ನುಡಿಸಲಿರುವ ಕನ್ನಡತಿ
ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಲಲ್ಲಾ ಪ್ರತಿಷ್ಠಾಪನೆಗೆ ಕೆಲವೇ ಕೆಲವು ಮಂದಿಗೆ ಆಹ್ವಾನ ಸಿಕ್ಕಿದೆ. ಆದರೀಗ ರಾಮಜನ್ಮ ಭೂಮಿಯಲ್ಲಿ ನಡೆಯಲಿರುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ ಅವರಿಗೂ ಆಹ್ವಾನ ಬಂದಿದ್ದು, ವೀಣೆ ನುಡಿಸಲು ಅವರನ್ನು ಕೋರಲಾಗಿದೆ.
ರಾಮ ಮಂದಿರ ಉದ್ಘಾಟನೆ ದಿನ ಸಮರ್ಪಣ ಮನೋಭಾವದಲ್ಲಿ ಮೇಳ ನಡೆಯಲಿದೆ. ಈ ಮೇಳದಲ್ಲಿ ಕನ್ನಡತಿ ಶುಭಾ ಸಂತೋಷ ವೀಣೆಯನ್ನು ನುಡಿಸಲು ಆಹ್ವಾನ ಬಂದಿದೆ. ಆಹ್ವಾನ ಸಿಕ್ಕ ವಿಷಯ ಕೇಳಿ ಶುಭಾ ಅವರು ಸಂತೋಷಪಟ್ಟಿದ್ದಾರೆ.
ಅಯ್ಯೋಧೆಯಲ್ಲಿ ಸುಮಾರು 22 ರಾಜ್ಯಗಳ ಶಾಸ್ತ್ರೀಯ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ಮೊಳಗಲಿವೆ. ಈ ಹಿನ್ನಲೆ ಶುಭಾ ಅವರಿಗೂ ಅಹ್ವಾನ ಬಂದಿದೆ.
ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರು ಶುಭಾ ಅವರ ಗುರುಗಳು. ಈಗಾಗಲೇ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶುಭಾ ವೀಣೆ ನುಡಿಸಿದ್ದಾರೆ. ಈಗ ರಾಮಂದಿರಲ್ಲಿ ಕನ್ನಡತಿ ವೀಣೆ ನುಡಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. “ಜಯತು ಕೋಂದಡ ರಾಮ ಜಯತು ದಶರತ ರಾಮ” ಹಾಡನು ಶುಭಾ ಸಂತೋಷ ಹಾಡಲಿದ್ದಾರೆ ಎನ್ನಲಾಗುತ್ತಿದೆ.
ಅಷ್ಟು ಮಾತ್ರವಲ್ಲದೆ, ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಅಯೋಧ್ಯೆ ಅಹ್ವಾನದಿಂದ ಸಂತಸಗೊಂಡ ಶುಭಾ ಸಂತೋಷ ತಮ್ಮ ಗುರುಗಳಾದ ಶ್ರೀ ಶ್ರೀನಿವಾಸ ಮೂರ್ತಿ ಆಚಾರ್, ಸುಧಾವ್ಯಾದರಾಜ್ , ಹೆಚ್ ಎಅ್ ಸುಧೀಂದ್ರ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ರಾಮ ಲಲ್ಲಾ ಪ್ರತಿಷ್ಠಾಪನೆಗೆ ಮೂರೇ ದಿನ ಬಾಕಿ
ಶುಭಾ ಸಂತೋಷ ಅವರಿಗೆ ಅಯೋಧ್ಯೆಯಿಂದ ಆಹ್ವಾನ
40 ವರ್ಷದ ತಂಜಾವೂರಿನ ವೀಣೆ ನುಡಿಸಲಿರುವ ಕನ್ನಡತಿ
ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಲಲ್ಲಾ ಪ್ರತಿಷ್ಠಾಪನೆಗೆ ಕೆಲವೇ ಕೆಲವು ಮಂದಿಗೆ ಆಹ್ವಾನ ಸಿಕ್ಕಿದೆ. ಆದರೀಗ ರಾಮಜನ್ಮ ಭೂಮಿಯಲ್ಲಿ ನಡೆಯಲಿರುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ ಅವರಿಗೂ ಆಹ್ವಾನ ಬಂದಿದ್ದು, ವೀಣೆ ನುಡಿಸಲು ಅವರನ್ನು ಕೋರಲಾಗಿದೆ.
ರಾಮ ಮಂದಿರ ಉದ್ಘಾಟನೆ ದಿನ ಸಮರ್ಪಣ ಮನೋಭಾವದಲ್ಲಿ ಮೇಳ ನಡೆಯಲಿದೆ. ಈ ಮೇಳದಲ್ಲಿ ಕನ್ನಡತಿ ಶುಭಾ ಸಂತೋಷ ವೀಣೆಯನ್ನು ನುಡಿಸಲು ಆಹ್ವಾನ ಬಂದಿದೆ. ಆಹ್ವಾನ ಸಿಕ್ಕ ವಿಷಯ ಕೇಳಿ ಶುಭಾ ಅವರು ಸಂತೋಷಪಟ್ಟಿದ್ದಾರೆ.
ಅಯ್ಯೋಧೆಯಲ್ಲಿ ಸುಮಾರು 22 ರಾಜ್ಯಗಳ ಶಾಸ್ತ್ರೀಯ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ಮೊಳಗಲಿವೆ. ಈ ಹಿನ್ನಲೆ ಶುಭಾ ಅವರಿಗೂ ಅಹ್ವಾನ ಬಂದಿದೆ.
ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರು ಶುಭಾ ಅವರ ಗುರುಗಳು. ಈಗಾಗಲೇ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶುಭಾ ವೀಣೆ ನುಡಿಸಿದ್ದಾರೆ. ಈಗ ರಾಮಂದಿರಲ್ಲಿ ಕನ್ನಡತಿ ವೀಣೆ ನುಡಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. “ಜಯತು ಕೋಂದಡ ರಾಮ ಜಯತು ದಶರತ ರಾಮ” ಹಾಡನು ಶುಭಾ ಸಂತೋಷ ಹಾಡಲಿದ್ದಾರೆ ಎನ್ನಲಾಗುತ್ತಿದೆ.
ಅಷ್ಟು ಮಾತ್ರವಲ್ಲದೆ, ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಅಯೋಧ್ಯೆ ಅಹ್ವಾನದಿಂದ ಸಂತಸಗೊಂಡ ಶುಭಾ ಸಂತೋಷ ತಮ್ಮ ಗುರುಗಳಾದ ಶ್ರೀ ಶ್ರೀನಿವಾಸ ಮೂರ್ತಿ ಆಚಾರ್, ಸುಧಾವ್ಯಾದರಾಜ್ , ಹೆಚ್ ಎಅ್ ಸುಧೀಂದ್ರ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.