ಕಾಂತಾರ-1 ಸಿನಿಮಾಗೆ ಸಾಲು, ಸಾಲು ಅವಘಡ.. ಮಾಸ್ತಿ ಕಟ್ಟೆಯಲ್ಲಿ ಮತ್ತೆ ಶೂಟಿಂಗ್ ಆರಂಭ

author-image
admin
Updated On
ಕಾಂತಾರ-1 ಸಿನಿಮಾಗೆ ಸಾಲು, ಸಾಲು ಅವಘಡ.. ಮಾಸ್ತಿ ಕಟ್ಟೆಯಲ್ಲಿ ಮತ್ತೆ ಶೂಟಿಂಗ್ ಆರಂಭ
Advertisment
  • ಕಾಂತಾರ-1 ಚಿತ್ರೀಕರಣದಲ್ಲಿ ಬಳಕೆಯಾದ ದೋಣಿ ಮಗುಚಿ ಅವಘಡ
  • ಮಾಸ್ತಿ ಕಟ್ಟೆಯ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಚಿತ್ರೀಕರಣ
  • ಹಲವರು ಪಾರಾಗಿದ್ರೆ ಓರ್ವ ಮಹಿಳೆಗೆ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಶಿವಮೊಗ್ಗ: ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ಸಾಲು, ಸಾಲು ಅವಘಡದ ಸವಾಲುಗಳನ್ನ ಎದುರಿಸುತ್ತಿದೆ. ಸಾಲು, ಸಾಲು ಅವಘಡಗಳ ಮಧ್ಯೆಯೂ ಕಾಂತಾರ ಚಲನಚಿತ್ರದ ಚಿತ್ರೀಕರಣ ಮುಂದುವರಿದಿದೆ.

ಹೊಸನಗರ ತಾಲೂಕಿನ ಮಾಸ್ತಿ ಕಟ್ಟೆಯ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ-1 ಚಿತ್ರೀಕರಣ ನಡೆಯುತ್ತಿದೆ. ಕಳೆದ ರಾತ್ರಿ ಶೂಟಿಂಗ್ ವೇಳೆ ಚಿತ್ರೀಕರಣದಲ್ಲಿ ಬಳಕೆಯಾದ ದೋಣಿ ಮಗುಚಿ 30 ಜನ ಅಪಾಯದಿಂದ ಪಾರಾಗಿದ್ದರು.

publive-image

ಶೂಟಿಂಗ್‌ ವೇಳೆ ದೋಣಿ ಮುಗುಚಿದ ಘಟನೆಯಲ್ಲಿ ಹಲವರು ಪಾರಾಗಿದ್ರೆ ಓರ್ವ ಮಹಿಳೆ ತೀರ್ಥಹಳ್ಳಿಯ ಮೇಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಮಾಹಿತಿ ಮೇರೆಗೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಂತಾರ-1 ತಂಡಕ್ಕೆ ಮತ್ತೆ ಶಾಕ್​​.. ಶೂಟಿಂಗ್ ಸೆಟ್​ನಲ್ಲಿ ಮತ್ತೊಂದು ಅವಘಡ 

ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾಂತಾರ-1 ಸಿನಿಮಾದಲ್ಲಿ ಭಾಗಿಯಾಗಿದ್ದ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕಳೆದ ರಾತ್ರಿಯ ಅವಘಡ ಸೇರಿ ಒಟ್ಟು 6 ಅವಘಡಗಳು ಚಿತ್ರೀಕರಣದ ವೇಳೆ ನಡೆದಿದೆ.
ಹೀಗೆ ಸಾಲು, ಸಾಲು ಅವಘಡಗಳು ಕಾಂತಾರ-1 ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಷ್ಟಾದ್ರೂ ಇಂದು ಮತ್ತೆ ಶೂಟಿಂಗ್‌ ಅನ್ನು ಚಿತ್ರ ತಂಡ ಆರಂಭ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment