ವಂಚನೆ ಆರೋಪದಡಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಸಂದೇಶ ರವಾನೆ
ಮಾಡಿದ ಕರ್ಮದ ಫಲ ಅನುಭವಿಸುತ್ತೀರಿ, ಸತ್ಯ ಮೇಲುಗೈ ಸಾಧಿಸಿದೆ
ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿಯನ್ನ ದೆಹಲಿ ಅಬಕಾರಿ ಹಗರಣದಲ್ಲಿ ಬಂಧನ ಮಾಡಲಾಗಿದೆ. ಇಡಿ ವಶದಲ್ಲಿರುವ ಕೆ. ಕವಿತಾ ಸದ್ಯದಲ್ಲೇ ಜೈಲು ಪಾಲಾಗೋ ಸಾಧ್ಯತೆ ಇದೆ. ವಿಶೇಷ ಅಂದ್ರೆ ಬಾಲಿವುಡ್ ತಾರೆಯರ ಪಾಲಿಗೆ ರಾಹುವಾಗಿ ಕಾಡಿದ್ದ ವಂಚಕ ಸುಕೇಶ್ ಚಂದ್ರಶೇಖರ್ಗೆ ಈ ಬೆಳವಣಿಗೆ ಸಿಕ್ಕಾಪಟ್ಟೆ ಖುಷಿ ಉಂಟು ಮಾಡಿರುವ ಹಾಗಿದೆ. ಕವಿತಾಗೆ ಅಕ್ಕ ಅಂತಾ ಕರೆದು ವೆಲ್ಕಮ್ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಆರೋಪದಡಿ ತಿಹಾರ್ ಜೈಲು ಪಾಲಾಗಿರೋ ಸುಕೇಶ್ ಚಂದ್ರಶೇಖರ್ ಮತ್ತೆ ಸುದ್ದಿಯಾಗಿದ್ದಾನೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನ ಆಗಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ.ಕವಿತಾಗೆ ಜೈಲಿನಲ್ಲಿದ್ದುಕೊಂಡೇ ಪತ್ರವೊಂದನ್ನ ಬರೆದಿದ್ದಾರೆ. ಲಿಕ್ಕರ್ ಕೇಸ್ಗೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಸಂದೇಶ ರವಾನಿಸಿದ್ದಾನೆ.
ಕವಿತಾಗೆ ಕರ್ಮದ ಫಲ ಅನುಭವಿಸುತ್ತೀರ ಎಂದ ಸುಕೇಶ್!
ತಿಹಾರ್ ಜೈಲಿನಲ್ಲಿದ್ದುಕೊಂಡೆ ಪತ್ರ ಬರೆದಿರುವ ಸುಕೇಶ್ ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿಯಾಗಿರುವ ಕೆ. ಕವಿತಾ ಅವರನ್ನು ಅಕ್ಕ ಎಂದು ಸಂಬೋಧಿಸಿದ್ದಾನೆ. ಮಾಡಿದ ಕರ್ಮದ ಫಲ ಅನುಭವಿಸುತ್ತೀರ, ಸತ್ಯ ಮೇಲುಗೈ ಸಾಧಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರೋದು ಹೊಸ ಸಂಚಲನ ಸೃಷ್ಟಿಸಿದೆ.
ಸುಕೇಶ್ ‘ಪತ್ರ’ ಪ್ರಹಾರ!
ಅಕ್ಕ, ಸತ್ಯಕ್ಕೆ ಜಯ ಸಿಕ್ಕಿದೆ. ನಕಲಿ ಕೇಸ್, ಸುಳ್ಳು ಆರೋಪ ಎನ್ನುವ ನಾಟಕ ವಿಫಲವಾಗಿದೆ. ನೀವು ಕರ್ಮದ ಫಲಗಳು ನಿಮ್ಮ ಬಳಿ ವಾಪಸ್ ಬರುತ್ತಿವೆ. ನೀವು ಯಾವಾಗಲೂ ಅಜೇಯರಾಗಿದ್ದೀರಿ ಎಂದು ಭಾವಿಸಿದ್ದೀರಿ, ಆದರೆ ಈ ಹೊಸ ಭಾರತದಲ್ಲಿ ಕಾನೂನು ಕಾನೂನು ಹಿಂದೆಂದಿಗಿಂತಲೂ ಪ್ರಬಲವಾಗಿ ಶಕ್ತಿಯುತವಾಗಿದೆ. ನೀವು ತಿಹಾರ್ ಜೈಲು ಪಾಲಗುವ ಕೌಂಟ್ಡೌನ್ ಆರಂಭವಾಗಿದೆ. ನಿಮ್ಮ ಬಂಧನದಿಂದ ಭ್ರಷ್ಟಾಚಾರದ ಭಂಡಾರ ತೆರಯಲಿದೆ. ಇನ್ನು ಎಲ್ಲವನ್ನೂ ಮುಚ್ಚಿಡಲು ಪ್ರಯತ್ನಿಸುವಲ್ಲಿ ಯಾವುದೇ ಅರ್ಥವಿಲ್ಲ, ಭ್ರಷ್ಟಾಚಾರದ ರಾಜ, ಈ ಹಗರಣದ ಕಿಂಗ್ಪಿನ್ ನನ್ನ ಪ್ರೀತಿಯ ಅರವಿಂದ್ ಕೇಜ್ರಿವಾಲ್ ಈ ಹಗರಣದಲ್ಲಿ ಮತ್ತೊಂದು ಹಂತದಲ್ಲಿ ಬೆತ್ತಲಾಗುತ್ತಾರೆ. ನಿಮ್ಮನ್ನು ತಿಹಾರ್ ಜೈಲಿಗೆ ಸ್ವಾಗತಿಸುತ್ತೇನೆ.
ಈ ರೀತಿಯಾಗಿ ಸುಕೇಶ್ ಪತ್ರದಲ್ಲಿ ಬರೆದು ಕೆ.ಕವಿತಾ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ. ಆದ್ರೆ ಇದೆಲ್ಲ ಆರೋಪಗಳನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಾರ್ಟಿ, ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಅವರ ಹೆಸರನ್ನು ಕೆಡಿಸುವ ಪ್ರಯತ್ನವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಪತ್ರದ ಮೂಲಕ ಸುಕೇಶ್ ಚಂದ್ರಶೇಖರ್ ಮಾಡಿರೋ ಆರೋಪಗಳು ದೆಹಲಿ ಎಎಪಿ ಸರ್ಕಾರಕ್ಕೆ ಉರುಳಾಗಿದ್ದು. ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡರೇ 100 ವರ್ಷ ಆಯಸ್ಸು ಅನ್ನೋ ಹಾಗೆ ಸದ್ಯ ಎಎಪಿ ನಾಯಕರು ಸುಕೇಶ್ ಅರೋಪಗಳ ಸುಳಿಯಿಂದ ತಪ್ಪಿಸಿಕೊಳ್ಳೋ ದಾರಿ ಹುಡುಕುತ್ತಿದ್ದಾರೆ. ಆದ್ರೆ ಕವಿತಾಗೂ ಅಕ್ಕಾ ಅಂತಾ ಕರೆದು ಸ್ವಾಗತ ಕೋರಿರೋದು ವಿಶೇಷ ಎನಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಂಚನೆ ಆರೋಪದಡಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಸಂದೇಶ ರವಾನೆ
ಮಾಡಿದ ಕರ್ಮದ ಫಲ ಅನುಭವಿಸುತ್ತೀರಿ, ಸತ್ಯ ಮೇಲುಗೈ ಸಾಧಿಸಿದೆ
ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಪುತ್ರಿಯನ್ನ ದೆಹಲಿ ಅಬಕಾರಿ ಹಗರಣದಲ್ಲಿ ಬಂಧನ ಮಾಡಲಾಗಿದೆ. ಇಡಿ ವಶದಲ್ಲಿರುವ ಕೆ. ಕವಿತಾ ಸದ್ಯದಲ್ಲೇ ಜೈಲು ಪಾಲಾಗೋ ಸಾಧ್ಯತೆ ಇದೆ. ವಿಶೇಷ ಅಂದ್ರೆ ಬಾಲಿವುಡ್ ತಾರೆಯರ ಪಾಲಿಗೆ ರಾಹುವಾಗಿ ಕಾಡಿದ್ದ ವಂಚಕ ಸುಕೇಶ್ ಚಂದ್ರಶೇಖರ್ಗೆ ಈ ಬೆಳವಣಿಗೆ ಸಿಕ್ಕಾಪಟ್ಟೆ ಖುಷಿ ಉಂಟು ಮಾಡಿರುವ ಹಾಗಿದೆ. ಕವಿತಾಗೆ ಅಕ್ಕ ಅಂತಾ ಕರೆದು ವೆಲ್ಕಮ್ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಆರೋಪದಡಿ ತಿಹಾರ್ ಜೈಲು ಪಾಲಾಗಿರೋ ಸುಕೇಶ್ ಚಂದ್ರಶೇಖರ್ ಮತ್ತೆ ಸುದ್ದಿಯಾಗಿದ್ದಾನೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನ ಆಗಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಕೆ.ಕವಿತಾಗೆ ಜೈಲಿನಲ್ಲಿದ್ದುಕೊಂಡೇ ಪತ್ರವೊಂದನ್ನ ಬರೆದಿದ್ದಾರೆ. ಲಿಕ್ಕರ್ ಕೇಸ್ಗೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಸಂದೇಶ ರವಾನಿಸಿದ್ದಾನೆ.
ಕವಿತಾಗೆ ಕರ್ಮದ ಫಲ ಅನುಭವಿಸುತ್ತೀರ ಎಂದ ಸುಕೇಶ್!
ತಿಹಾರ್ ಜೈಲಿನಲ್ಲಿದ್ದುಕೊಂಡೆ ಪತ್ರ ಬರೆದಿರುವ ಸುಕೇಶ್ ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿಯಾಗಿರುವ ಕೆ. ಕವಿತಾ ಅವರನ್ನು ಅಕ್ಕ ಎಂದು ಸಂಬೋಧಿಸಿದ್ದಾನೆ. ಮಾಡಿದ ಕರ್ಮದ ಫಲ ಅನುಭವಿಸುತ್ತೀರ, ಸತ್ಯ ಮೇಲುಗೈ ಸಾಧಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರೋದು ಹೊಸ ಸಂಚಲನ ಸೃಷ್ಟಿಸಿದೆ.
ಸುಕೇಶ್ ‘ಪತ್ರ’ ಪ್ರಹಾರ!
ಅಕ್ಕ, ಸತ್ಯಕ್ಕೆ ಜಯ ಸಿಕ್ಕಿದೆ. ನಕಲಿ ಕೇಸ್, ಸುಳ್ಳು ಆರೋಪ ಎನ್ನುವ ನಾಟಕ ವಿಫಲವಾಗಿದೆ. ನೀವು ಕರ್ಮದ ಫಲಗಳು ನಿಮ್ಮ ಬಳಿ ವಾಪಸ್ ಬರುತ್ತಿವೆ. ನೀವು ಯಾವಾಗಲೂ ಅಜೇಯರಾಗಿದ್ದೀರಿ ಎಂದು ಭಾವಿಸಿದ್ದೀರಿ, ಆದರೆ ಈ ಹೊಸ ಭಾರತದಲ್ಲಿ ಕಾನೂನು ಕಾನೂನು ಹಿಂದೆಂದಿಗಿಂತಲೂ ಪ್ರಬಲವಾಗಿ ಶಕ್ತಿಯುತವಾಗಿದೆ. ನೀವು ತಿಹಾರ್ ಜೈಲು ಪಾಲಗುವ ಕೌಂಟ್ಡೌನ್ ಆರಂಭವಾಗಿದೆ. ನಿಮ್ಮ ಬಂಧನದಿಂದ ಭ್ರಷ್ಟಾಚಾರದ ಭಂಡಾರ ತೆರಯಲಿದೆ. ಇನ್ನು ಎಲ್ಲವನ್ನೂ ಮುಚ್ಚಿಡಲು ಪ್ರಯತ್ನಿಸುವಲ್ಲಿ ಯಾವುದೇ ಅರ್ಥವಿಲ್ಲ, ಭ್ರಷ್ಟಾಚಾರದ ರಾಜ, ಈ ಹಗರಣದ ಕಿಂಗ್ಪಿನ್ ನನ್ನ ಪ್ರೀತಿಯ ಅರವಿಂದ್ ಕೇಜ್ರಿವಾಲ್ ಈ ಹಗರಣದಲ್ಲಿ ಮತ್ತೊಂದು ಹಂತದಲ್ಲಿ ಬೆತ್ತಲಾಗುತ್ತಾರೆ. ನಿಮ್ಮನ್ನು ತಿಹಾರ್ ಜೈಲಿಗೆ ಸ್ವಾಗತಿಸುತ್ತೇನೆ.
ಈ ರೀತಿಯಾಗಿ ಸುಕೇಶ್ ಪತ್ರದಲ್ಲಿ ಬರೆದು ಕೆ.ಕವಿತಾ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾನೆ. ಆದ್ರೆ ಇದೆಲ್ಲ ಆರೋಪಗಳನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಾರ್ಟಿ, ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಅವರ ಹೆಸರನ್ನು ಕೆಡಿಸುವ ಪ್ರಯತ್ನವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಪತ್ರದ ಮೂಲಕ ಸುಕೇಶ್ ಚಂದ್ರಶೇಖರ್ ಮಾಡಿರೋ ಆರೋಪಗಳು ದೆಹಲಿ ಎಎಪಿ ಸರ್ಕಾರಕ್ಕೆ ಉರುಳಾಗಿದ್ದು. ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡರೇ 100 ವರ್ಷ ಆಯಸ್ಸು ಅನ್ನೋ ಹಾಗೆ ಸದ್ಯ ಎಎಪಿ ನಾಯಕರು ಸುಕೇಶ್ ಅರೋಪಗಳ ಸುಳಿಯಿಂದ ತಪ್ಪಿಸಿಕೊಳ್ಳೋ ದಾರಿ ಹುಡುಕುತ್ತಿದ್ದಾರೆ. ಆದ್ರೆ ಕವಿತಾಗೂ ಅಕ್ಕಾ ಅಂತಾ ಕರೆದು ಸ್ವಾಗತ ಕೋರಿರೋದು ವಿಶೇಷ ಎನಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ