/newsfirstlive-kannada/media/post_attachments/wp-content/uploads/2025/05/karna4.jpg)
ಅಂದುಕೊಂಡಂತೆ ನಿನ್ನೆ ಕರ್ಣ ಧಾರಾವಾಹಿ ಪ್ರಸಾರ ಆಗಿದ್ದರೇ ಅಭಿಮಾನಿಗಳು ಇಂದು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಆದ್ರೆ, ನಿನ್ನೆ ಕರ್ಣ ಧಾರಾವಾಹಿ ಪ್ರಸಾರ ಕಂಡಿಲ್ಲ. ಅಲ್ಲದೇ ನಟ ಕಿರಣ್ ರಾಜ್ ಅವರನ್ನ 2 ವರ್ಷಗಳ ಬಳಿಕ ಕಣ್ತುಂಬಿಕೊಳ್ಳಬೇಕು ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ ನಿನ್ನೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಇದನ್ನೂ ಓದಿ: ಕರ್ಣ ಸೀರಿಯಲ್ ಲಾಂಚ್ ಆಗಲೇ ಇಲ್ಲ.. ಬೇಸರದಲ್ಲೇ ಕ್ಷಮೆ ಕೇಳಿದ ನಟ ಕಿರಣ್ ರಾಜ್
ಹೌದು, ದಿಢೀರ್ ಅಂತ ಕರ್ಣ ಡೇಟ್ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ನಟ ಕಿರಣ್ ರಾಜ್ ಅವರು ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ ಕಿರಣ್ ರಾಜ್. ಅದೇ ರೀತಿ ನಿತ್ಯಾ ಪಾತ್ರ ಮಾಡ್ತಿರೋ ನಮ್ರತಾ ಗೌಡ ಅವರು ಕೂಡ ಕ್ಷಮೆ ಕೇಳಿದ್ದಾರೆ.
ಇನ್ನೂ, ನಿಧಿ ಪಾತ್ರ ಮಾಡ್ತಿರೋ ಭವ್ಯಾ ಗೌಡ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಗೋದಲ್ಲ ಒಳ್ಳೆಯದಕ್ಕೆ ಎಂಬ ಅರ್ಥದಲ್ಲಿ ಟ್ರಸ್ಟ್ ದಿ ಪ್ರೋಸಸ್ ಎಂದು ಬರೆದುಕೊಂಡಿದ್ದಾರೆ. ಇನ್ನೂ, ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ಕರ್ಣನಿಗೆ ಕಾನೂನು ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಅಧಿಕೃತವಾಗಿ ವಾಹಿನಿ ಬಿಟ್ಟುಕೊಟ್ಟಿಲ್ಲ. ಆದ್ರೆ ಇಂಟರ್ನಲ್ ಸಮಸ್ಸೆ ಆಗಿರೋದಂತೂ ಸತ್ಯ. ಈ ಎಲ್ಲಾ ಸವಾಲುಗಳನ್ನ ಮೀರಿ ಆದಷ್ಟು ಬೇಗ ನಾವು ನಿಮ್ಮ ಮುಂದೆ ಬರುತ್ತೇವೆ. ತಡ ಆಗಬಹುದು. ಆದರೆ ಖಂಡಿತವಾಗಿ ಬಂದೇ ಬರುತ್ತೇವೆ ಎಂದಿದೆ ತಂಡ. ಆದ್ರೆ ಈ ಹಿಂದೆಯೇ ಕರ್ಣ ಧಾರಾವಾಹಿ ಪ್ರಸಾರ ಆಗಬೇಕಾಗಿತ್ತು. ಆದ್ರೆ ಕಾರಣತರಗಳಿಂದ ಕೆಲವು ತೊಂದರೆಗಳು ಎದುರಾಗಿದ್ದವು. ಆದ್ರೂ ಆದಷ್ಟು ಬೇಗ ಸಮಸ್ಸೆಗಳನ್ನ ಬಗೆ ಹರಿಸಿಕೊಂಡು ಕರ್ಣ ತೆರೆಗೆ ಬರಲಿ ಅನ್ನೋದು ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ