ವಾಟಾಳ್ ನೇತೃತ್ವದಲ್ಲಿ ಕರ್ನಾಟಕ ಬಂದ್​​.. ಇವತ್ತು ಏನಿರುತ್ತೆ? ಏನಿರಲ್ಲ..?

author-image
Veena Gangani
Updated On
4, 5, 6, 7ನೇ ತರಗತಿಗೆ ಇಂದು ಪರೀಕ್ಷೆ ಫಿಕ್ಸ್‌.. ಗೊಂದಲಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಸ್ಪಷ್ಟನೆ; ಹೇಳಿದ್ದೇನು?
Advertisment
  • ಮರಾಠಿ ಪುಂಡರ ಪುಂಡಾಟದ ವಿರುದ್ಧ ಕನ್ನಡ ಪರ ಹೋರಾಟಗಾರರ ಕಹಳೆ
  • ವ್ಯಾಪಕ ವಿರೋಧದ ಮಧ್ಯೆಯೂ ಬಂದ್​ಗೆ ಕರೆಕೊಟ್ಟ ವಾಟಾಳ್ ನಾಗರಾಜ್
  • ಗೊಂದಲಗಳ ನಡುವೆಯೂ ಕರ್ನಾಟಕ ಬಂದ್​​ಗೆ ಕರೆ ಕೊಡಲಾಗಿದೆ

ಬೆಂಗಳೂರು: ಇಂದು ಅಖಂಡ ಕರ್ನಾಟಕ ಬಂದ್ ಆಗುತ್ತಾ, ಇಲ್ವಾ ಎಂಬ ಗೊಂದಲ ಎಲ್ಲರಲ್ಲೂ ಮನೆ ಮಾಡಿತ್ತು. ಆದ್ರೆ ಇಂದು ಬೆಳ್ಳಂಬೆಳಗ್ಗೆ ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಹೋರಾಟಗಾರರು ಪ್ರತಿಭಟನೆಗಿಳಿದಿದ್ದಾರೆ. ಅಲ್ಲದೇ ಟೈರ್​ಗೆ ಬೆಂಕಿ ಹಚ್ಚಿ ಕನ್ನಡಪರ ಹೋರಾಟಗಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?

publive-image

ನಗರದಲ್ಲಿ ​ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಶಿವರಾಮೇಗೌಡ ಬಣ, ಕರವೇ ಗಜಕೇಸರಿ ಸೇನೆ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ. ರೂಪೇಶ್ ರಾಜಣ್ಣ ಬಣ, ಆಟೋ ಚಾಲಕರ ಸಂಘ ಬಂದ್​ಗೆ ಬೆಂಬಲ ಕೊಟ್ಟಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು, ಕರವೇ ಸ್ವಾಭಿಮಾನಿ ಬಣ ಕೂಡ ಸಾಥ್​ ನೀಡುತ್ತಿವೆ.

publive-image

ಇಂದು ಕರ್ನಾಟಕ ಬಂದ್​ ಏಕೆ? 

ಕನ್ನಡಿಗರ ಮೇಲಿನ ದಬ್ಬಾಳಿಕೆ, ಎಂಇಎಸ್​, ಶಿವಸೇನೆ ಪುಂಡಾಟ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು.

ಏನಿರುತ್ತೆ?

  • ನಮ್ಮ ಮೆಟ್ರೋ
  • ಬಿಎಂಟಿಸಿ ಬಸ್‌ ಸೇವೆ
  • ಕೆಎಸ್‌ಆರ್‌ಟಿಸಿ ಬಸ್‌ ಸೇವೆ
  • ಶಾಲಾ ಕಾಲೇಜುಗಳು
  • ಮಾರುಕಟ್ಟೆಗಳು
  • ಆಸ್ಪತ್ರೆ,
  • ವೈದ್ಯಕೀಯ ಸೇವೆಗಳು
  • ಉಪಹಾರ ಮಂದಿರ
  • ಹೋಟೆಲ್‌ಗಳು
  • ಬಾರ್‌, ರೆಸ್ಟೋರೆಂಟ್‌, ಪಬ್‌ಗಳು
  • ಆ್ಯಂಬುಲೆನ್ಸ್
  • ಹೋಲ್ ಸೆಲ್ ಬಟ್ಟೆ ಅಂಗಡಿ
  • ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್
  • ಏರ್ ಪೋರ್ಟ್ ಟ್ಯಾಕ್ಸಿ ಸೇವೆ
  • 65% ಆಟೋಗಳ ಸೇವೆ ಬಂದ್ ದಿನ ಇರಲಿದೆ
  • ಎಪಿಎಂಸಿ
  • ಪೀಣ್ಯ ಕೈಗಾರಿಕಾ ಪ್ರದೇಶ ಓಪನ್ (13 ಸಾವಿರ ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ)

ಏನಿರಲ್ಲ?

  • ಮಧ್ಯಾಹ್ನ ತನಕ ಥಿಯೇಟರ್​ಗಳು ಬಂದ್
  • ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ
  • 35% ಆಟೋ ಸೇವೆಯಲ್ಲಿ ತುಸು ವ್ಯತ್ಯಯ
  • ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ
  • ಬ್ಯಾಂಕ್ ಇರಲ್ಲ (4th Saturday)
  • ಸರ್ಕಾರಿ ಕಚೇರಿಗಳು (4th Saturday)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment