newsfirstkannada.com

ಬೆಂಗಳೂರು ಜನರೇ ಹುಷಾರ್.. ಆರೋಗ್ಯ ಇಲಾಖೆ ನಡೆಸಿದ ವಾಟರ್ ಟೆಸ್ಟಿಂಗ್​ನಲ್ಲಿ ಆಘಾತಕಾರಿ ಅಂಶ ಬೆಳಕಿಗೆ

Share :

Published April 17, 2024 at 3:24pm

Update April 17, 2024 at 3:27pm

    ಬೋರ್ ಬೆಲ್, ನಲ್ಲಿ ನೀರು, ಆರ್.ಓ ಪ್ಲಾಂಟ್​ಗಳ ವಾಟರ್ ಟೆಸ್ಟಿಂಗ್

    20 ಕಡೆಯ ನೀರಿನ ವಾಟರ್ ಟೆಸ್ಟಿಂಗ್​ನಲ್ಲಿ ಬ್ಯಾಕ್ಟೀರಿಯಾ ಇರೋದು ಪತ್ತೆ

    ಬ್ಯಾಕ್ಟೀರಿಯಾ ಇರುವ ನೀರು ಕುಡಿದ್ರೆ ಕಾಲಾರಾ ಸೇರಿ ಇತರೆ ಕಾಯಿಲೆ ಫಿಕ್ಸ್

ಬೆಂಗಳೂರು: ಕುಡಿಯಲು ನೀರಿಲ್ಲದೆ ರಣಬಿಸಿಲಿನಿಂದ ತತ್ತರಿಸಿ ಹೋದ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಜೀವಜಲದ ನೆಪದಲ್ಲಿ ಜೀವ ಹಿಂಡುವ ಅಂಶ ಜನರ ಹೊಟ್ಟೆ ಸೇರುತ್ತಿರುವ ವಾಟರ್ ಟೆಸ್ಟಿಂಗ್ ರಿಪೋರ್ಟ್ ನಿಂದ ರಿವೀಲ್ ಆಗಿದೆ.

ಆರೋಗ್ಯ ಇಲಾಖೆಯ ಕೈ ಸೇರಿದ ರಿಪೋರ್ಟ್ ನಗರದ ಜನರ ಎದೆ ಬಡಿತವನ್ನ ಹೆಚ್ಚು ಮಾಡಿದೆ. ಸಿಲಿಕಾನ್ ಸಿಟಿ ಜನರೇ ಹುಷಾರ್. ನೀರಿನ ನೆಪದಲ್ಲಿ ನಿಮ್ಮ ಹೊಟ್ಟೆ ಸೇರ್ತಿದೆ ವಿಷಕಾರಿ ಜಲ. ಆ ನೀರು ನಿಮ್ಮ ಹೊಟ್ಟೆ ಸೇರಿದ್ರೆ ನೀವು ಆಸ್ಪತ್ರೆ ಸೇರೋದು ಪಕ್ಕಾ. ಯಾಕಂದ್ರೆ ಆರೋಗ್ಯ ಇಲಾಖೆ ನಡೆಸಿದ ವಾಟರ್ ಟೆಸ್ಟಿಂಗ್​ನಲ್ಲಿ ಅಂತಹದೊಂದು ಆಘಾತಕಾರಿ ಅಂಶ ಬಯಲಾಗಿದೆ. ನಗರದಲ್ಲಿ ಕರಾಳ ಕಾಲಾರದ ಕರಿಛಾಯೆ ಮೂಡ್ತಿದ್ದಂಗೆ ಆರೋಗ್ಯ ಇಲಾಖೆ ಅಲರ್ಟ್ ಆಗಿತ್ತು. ಕಾಲಾರದ ಓಟ ಆರೋಗ್ಯ ಇಲಾಖೆಯನ್ನ ಬಡಿದೆಬ್ಬಿಸಿತ್ತು.

ಇದನ್ನೂ ಓದಿ: 4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

ಕಲುಷಿತ ನೀರಿನಿಂದ ಕಾಲಾರ ಹರಡುತ್ತಿರುವುದನ್ನ ಮನಗಂಡ ಇಲಾಖೆ, ಜಲಮೂಲದ ಶುದ್ಧೀಕರಣಕ್ಕೆ ನೀರಿನ ಟೆಸ್ಟಿಂಗ್ ಮಾಡಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಟೆಸ್ಟಿಂಗ್ ಮಾಡಿದ್ದು, ಕೆಲವೆಡೆ ಏರಿಯಾದ ನೀರಿನಲ್ಲಿ ಟಾಯ್ಲೆಟ್ ನೀರು, ಕಲುಷಿತ ನೀರು ಮಿಕ್ಸ್ ಆಗಿರೋದು ರಿಪೋರ್ಟ್​ನಲ್ಲಿ ರಿವೀಲ್ ಆಗಿದೆ‌. ಬೋರ್ ಬೆಲ್, ನಲ್ಲಿ ನೀರು, ಆರ್.ಪ್ಲಾಂಟ್​ಗಳ ನೀರನ್ನ ಟೆಸ್ಟಿಂಗ್ ಒಳಪಡಿಸಲಾಗಿತ್ತು.

ಒಟ್ಟು 570 ಕಡೆಯಲ್ಲಿ ನೀರನ್ನ ಸಂಗ್ರಹ ಮಾಡಿ ಟೆಸ್ಟಿಂಗ್ ಮಾಡಲಾಗಿತ್ತು. ಈ ಪೈಕಿ 270 ಕಡೆಯ ನೀರಿನ ರಿಪೋರ್ಟ್ ಬಂದಿದ್ದು, ಈ ಪೈಕಿ 20 ಕಡೆಯ ನೀರಿನಲ್ಲಿ E.coli ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇಂತಹ ನೀರು ಕುಡಿದ್ರೆ ಕಾಲಾರಾ ಸೇರಿದಂತೆ ಇತರೆ ಕಾಯಿಲೆ ಕಾಡಲಿದೆ. 70 ಕಡೆಯ ನೀರು ಕುಡಿಯಲು ಯೋಗ್ಯವಿಲ್ಲ ಅನ್ನೋದನ್ನ ಕೂಡ ರಿಪೋರ್ಟ್ ಹೇಳಿದ್ದು ಕೆಲವೊಂದು ಕಡೆ ಆರ್.ಓ ಪ್ಲಾಂಟ್ ಗಳಿಗೀ ಬೀಗ ಬಿದ್ದಿದೆ. ಒಟ್ಟಿನಲ್ಲಿ ಒಂದು ಕಡೆ ನಗರದಲ್ಲಿ ನೀರಿಗೆ ಹಾಹಾಕಾರ ಇದೆ. ಮತ್ತೊಂದು ಕಲುಷಿತ ನೀರಿನ ಪೂರೈಕೆಯಾಗ್ತಿದೆ. ಇವೆರಡರ ನಡುವೆ ಸಿಲುಕಿರುವ ಜ‌ನಸಾಮಾನ್ಯರು ಇದೀಗ ಖಾಯಿಲೇಗೀಡಾಗ್ತಿದೆ. ಆದಷ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಈ ರೀತಿಯ ತಪ್ಪುಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಜನರೇ ಹುಷಾರ್.. ಆರೋಗ್ಯ ಇಲಾಖೆ ನಡೆಸಿದ ವಾಟರ್ ಟೆಸ್ಟಿಂಗ್​ನಲ್ಲಿ ಆಘಾತಕಾರಿ ಅಂಶ ಬೆಳಕಿಗೆ

https://newsfirstlive.com/wp-content/uploads/2024/04/water2.jpg

    ಬೋರ್ ಬೆಲ್, ನಲ್ಲಿ ನೀರು, ಆರ್.ಓ ಪ್ಲಾಂಟ್​ಗಳ ವಾಟರ್ ಟೆಸ್ಟಿಂಗ್

    20 ಕಡೆಯ ನೀರಿನ ವಾಟರ್ ಟೆಸ್ಟಿಂಗ್​ನಲ್ಲಿ ಬ್ಯಾಕ್ಟೀರಿಯಾ ಇರೋದು ಪತ್ತೆ

    ಬ್ಯಾಕ್ಟೀರಿಯಾ ಇರುವ ನೀರು ಕುಡಿದ್ರೆ ಕಾಲಾರಾ ಸೇರಿ ಇತರೆ ಕಾಯಿಲೆ ಫಿಕ್ಸ್

ಬೆಂಗಳೂರು: ಕುಡಿಯಲು ನೀರಿಲ್ಲದೆ ರಣಬಿಸಿಲಿನಿಂದ ತತ್ತರಿಸಿ ಹೋದ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕ್ ಎದುರಾಗಿದೆ. ಜೀವಜಲದ ನೆಪದಲ್ಲಿ ಜೀವ ಹಿಂಡುವ ಅಂಶ ಜನರ ಹೊಟ್ಟೆ ಸೇರುತ್ತಿರುವ ವಾಟರ್ ಟೆಸ್ಟಿಂಗ್ ರಿಪೋರ್ಟ್ ನಿಂದ ರಿವೀಲ್ ಆಗಿದೆ.

ಆರೋಗ್ಯ ಇಲಾಖೆಯ ಕೈ ಸೇರಿದ ರಿಪೋರ್ಟ್ ನಗರದ ಜನರ ಎದೆ ಬಡಿತವನ್ನ ಹೆಚ್ಚು ಮಾಡಿದೆ. ಸಿಲಿಕಾನ್ ಸಿಟಿ ಜನರೇ ಹುಷಾರ್. ನೀರಿನ ನೆಪದಲ್ಲಿ ನಿಮ್ಮ ಹೊಟ್ಟೆ ಸೇರ್ತಿದೆ ವಿಷಕಾರಿ ಜಲ. ಆ ನೀರು ನಿಮ್ಮ ಹೊಟ್ಟೆ ಸೇರಿದ್ರೆ ನೀವು ಆಸ್ಪತ್ರೆ ಸೇರೋದು ಪಕ್ಕಾ. ಯಾಕಂದ್ರೆ ಆರೋಗ್ಯ ಇಲಾಖೆ ನಡೆಸಿದ ವಾಟರ್ ಟೆಸ್ಟಿಂಗ್​ನಲ್ಲಿ ಅಂತಹದೊಂದು ಆಘಾತಕಾರಿ ಅಂಶ ಬಯಲಾಗಿದೆ. ನಗರದಲ್ಲಿ ಕರಾಳ ಕಾಲಾರದ ಕರಿಛಾಯೆ ಮೂಡ್ತಿದ್ದಂಗೆ ಆರೋಗ್ಯ ಇಲಾಖೆ ಅಲರ್ಟ್ ಆಗಿತ್ತು. ಕಾಲಾರದ ಓಟ ಆರೋಗ್ಯ ಇಲಾಖೆಯನ್ನ ಬಡಿದೆಬ್ಬಿಸಿತ್ತು.

ಇದನ್ನೂ ಓದಿ: 4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

ಕಲುಷಿತ ನೀರಿನಿಂದ ಕಾಲಾರ ಹರಡುತ್ತಿರುವುದನ್ನ ಮನಗಂಡ ಇಲಾಖೆ, ಜಲಮೂಲದ ಶುದ್ಧೀಕರಣಕ್ಕೆ ನೀರಿನ ಟೆಸ್ಟಿಂಗ್ ಮಾಡಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಟೆಸ್ಟಿಂಗ್ ಮಾಡಿದ್ದು, ಕೆಲವೆಡೆ ಏರಿಯಾದ ನೀರಿನಲ್ಲಿ ಟಾಯ್ಲೆಟ್ ನೀರು, ಕಲುಷಿತ ನೀರು ಮಿಕ್ಸ್ ಆಗಿರೋದು ರಿಪೋರ್ಟ್​ನಲ್ಲಿ ರಿವೀಲ್ ಆಗಿದೆ‌. ಬೋರ್ ಬೆಲ್, ನಲ್ಲಿ ನೀರು, ಆರ್.ಪ್ಲಾಂಟ್​ಗಳ ನೀರನ್ನ ಟೆಸ್ಟಿಂಗ್ ಒಳಪಡಿಸಲಾಗಿತ್ತು.

ಒಟ್ಟು 570 ಕಡೆಯಲ್ಲಿ ನೀರನ್ನ ಸಂಗ್ರಹ ಮಾಡಿ ಟೆಸ್ಟಿಂಗ್ ಮಾಡಲಾಗಿತ್ತು. ಈ ಪೈಕಿ 270 ಕಡೆಯ ನೀರಿನ ರಿಪೋರ್ಟ್ ಬಂದಿದ್ದು, ಈ ಪೈಕಿ 20 ಕಡೆಯ ನೀರಿನಲ್ಲಿ E.coli ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇಂತಹ ನೀರು ಕುಡಿದ್ರೆ ಕಾಲಾರಾ ಸೇರಿದಂತೆ ಇತರೆ ಕಾಯಿಲೆ ಕಾಡಲಿದೆ. 70 ಕಡೆಯ ನೀರು ಕುಡಿಯಲು ಯೋಗ್ಯವಿಲ್ಲ ಅನ್ನೋದನ್ನ ಕೂಡ ರಿಪೋರ್ಟ್ ಹೇಳಿದ್ದು ಕೆಲವೊಂದು ಕಡೆ ಆರ್.ಓ ಪ್ಲಾಂಟ್ ಗಳಿಗೀ ಬೀಗ ಬಿದ್ದಿದೆ. ಒಟ್ಟಿನಲ್ಲಿ ಒಂದು ಕಡೆ ನಗರದಲ್ಲಿ ನೀರಿಗೆ ಹಾಹಾಕಾರ ಇದೆ. ಮತ್ತೊಂದು ಕಲುಷಿತ ನೀರಿನ ಪೂರೈಕೆಯಾಗ್ತಿದೆ. ಇವೆರಡರ ನಡುವೆ ಸಿಲುಕಿರುವ ಜ‌ನಸಾಮಾನ್ಯರು ಇದೀಗ ಖಾಯಿಲೇಗೀಡಾಗ್ತಿದೆ. ಆದಷ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಈ ರೀತಿಯ ತಪ್ಪುಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More