ಬಿಜೆಪಿ ಹೋರಾಟಕ್ಕೆ ಯಡಿಯೂರಪ್ಪ ಬಲ.. ಫ್ರೀಡಂ ಪಾರ್ಕ್​​ನಲ್ಲಿ ರಾತ್ರಿಯಿಡೀ ಪ್ರತಿಭಟನೆ ಹೇಗಿತ್ತು..? Photos

author-image
Ganesh
Updated On
ಬಿಜೆಪಿ ಹೋರಾಟಕ್ಕೆ ಯಡಿಯೂರಪ್ಪ ಬಲ.. ಫ್ರೀಡಂ ಪಾರ್ಕ್​​ನಲ್ಲಿ ರಾತ್ರಿಯಿಡೀ ಪ್ರತಿಭಟನೆ ಹೇಗಿತ್ತು..? Photos
Advertisment
  • ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರ ವಿರುದ್ಧ ಕೇಸರಿಪಡೆ ಫೈಟ್​!
  • ಫ್ರೀಡಂಪಾರ್ಕ್​​​ನಲ್ಲಿ ರಾತ್ರಿಯಿಡಿ ಬಿಜೆಪಿ ನಾಯಕರ ಪ್ರೊಟೆಸ್ಟ್​
  • ವಿಜಯೇಂದ್ರ, ಸಿ.ಟಿ.ರವಿ, ಶ್ರೀರಾಮುಲು ಸೇರಿ ಹಲವು ನಾಯಕರು ವಾಸ್ತವ್ಯ

ರಾಜ್ಯ ಕಾಂಗ್ರೆಸ್​ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದಿರೋ ಬಿಜೆಪಿ ನಾಯಕರು ಫ್ರೀಡಂ ಫಾರ್ಕ್​ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ರಾತ್ರಿ ಇಡೀ ಫ್ರೀಡಂ ಪಾರ್ಕ್​ನಲ್ಲೇ ಬೀಡುಬಿಟ್ಟಿದ್ದ ಕೇಸರಿಪಡೆ, ರಾಜ್ಯ ಸರ್ಕಾರಕ್ಕೆ ಹೋರಾಟ ಮೂಲಕ ಬಿಸಿ ಮುಟ್ಟಿಸಿದೆ.

ಅಗತ್ಯವಸ್ತುಗಳ ಬೆಲೆ ಏರಿಕೆ, ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ಸೇರಿ ಸರ್ಕಾರದ ವೈಫಲ್ಯಗಳನ್ನು ಹಿಡಿದು ರಾಜ್ಯ ಬಿಜೆಪಿ ಹೋರಾಟಕ್ಕೆ ಧುಮುಕಿದೆ. ಫ್ರೀಡಂಪಾರ್ಕ್​​ನಲ್ಲಿ ರಣಕಹಳೆ ಮೊಳಗಿಸಿದ್ದು ಬೆಲೆ ಏರಿಕೆ ಹಿಂಪಡೀಬೇಕು ಅಂತ ಆಗ್ರಹಿಸಿದೆ.. ಎಲ್ಲಿವರೆಗೂ ಹೋರಾಟ ಬೆಲೆ ಏರಿಕೆಗೆ ಸರ್ಕಾರ ಬ್ರೇಕ್​ ಹಾಕೋವರೆಗೂ ಹೋರಾಟ ಅಂತ ಕೇಸರಿ ಕಲಿಗಳು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಿರಾಜ್​ಗೆ ಅತ್ಯಂತ ಬಿಗ್​ ಸಿಕ್ಸರ್​ ಸಿಡಿಸಿದ RCB ಸ್ಫೋಟಕ ಬ್ಯಾಟರ್ ಸಾಲ್ಟ್.. ಎಷ್ಟು ಮೀಟರ್​?

publive-image

ರಾತ್ರಿಯಿಡಿ ಬಿಜೆಪಿ ನಾಯಕರ ಪ್ರೊಟೆಸ್ಟ್​

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿಗೆ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ನಿನ್ನೆ ಹೋರಾಟದ ಕಹಳೆ ಮೊಳಗಿಸಿದ್ರು.. ಫ್ರೀಡಂಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಯಿತು.. ತಡರಾತ್ರಿವರೆಗೂ ಮಾಜಿ ಸಿಎಂ ಯಡಿಯೂರಪ್ಪ ಹೋರಾಟಕ್ಕೆ ಬಲ ತುಂಬಿದ್ರು.. ಕಾಂಗ್ರೆಸ್​ ಸರ್ಕಾರ ಬೆಲೆ ಏರಿಕೆಗೆ ಮಣಿಯದಿದ್ರೆ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಮಾಡುವ ಎಚ್ಚರಿಕೆ ಸಹ ನೀಡಿದ್ರು.

ಇದನ್ನೂ ಓದಿ: 15 ದೇಶಗಳಿಗೆ ಡಬಲ್ ಶಾಕ್‌ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ; ಭಾರತಕ್ಕೆ ಎಷ್ಟು ನಷ್ಟ?

publive-image

ಪ್ರೀಡಂಪಾರ್ಕ್​ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಾಸ್ತವ್ಯ

ನಿನ್ನೆ ಬೆಳಗ್ಗೆಯಿಂದಲೂ ಬೆಲೆ ಏರಿಕೆ ಖಂಡಿಸಿ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟಿಸಿದ ಬಿಜೆಪಿ ನಾಯಕರು ರಾತ್ರಿಯಾಗುತ್ತಿದ್ದಂತೆ ಹಾಸಿಗೆಗೆ ಒರಗಿ ರೆಸ್ಟ್​ ಮೂಡ್​ಗೆ ಜಾರಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಂಎಲ್​ಸಿ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಶ್ರೀರಾಮುಲು ಸೇರಿ ಹಲವು ಬಿಜೆಪಿ ನಾಯಕರು ಫ್ರೀಡಂ ಪಾರ್ಕ್​​ನಲ್ಲೇ ನಿದ್ದೆಗೆ ಜಾರಿದ್ರು. ಬಿಜೆಪಿ ನಾಯಕರಿಗೆ ಮಲಗಲು ವ್ಯವಸ್ಥೆ, ಬೆಡ್ ಶೀಟ್ ಹಾಗೂ ಹಾಸಿಗೆ ದಿಂಬಿನ ವ್ಯವಸ್ಥೆ ಮಾಡಲಾಗಿತ್ತು.

publive-image

ಒಟ್ನಲ್ಲಿ ಅತ್ತ ಬೆಲೆ ಏರಿಕೆ ಬಿಸಿ ರಾಜ್ಯದ ಜನರ ನಿದ್ದೆಗೆಡಿಸಿದ್ರೆ ಇತ್ತ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹೋರಾಟ ಕಹಳೆ ಮೊಳಗಿಸಿದ್ದಾರೆ.. ಬಿಜೆಪಿಗರ ಹೋರಾಟದ ಬಿಸಿ ಕಾಂಗ್ರೆಸ್​ ನಾಯಕರಿಗೆ ತಟ್ಟುತ್ತಾ, ಬಿಜೆಪಿ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಬ್ರೇಕ್​ ಹಾಕುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

ಇದನ್ನೂ ಓದಿ: ಮಧ್ಯರಾತ್ರಿ 1 ಗಂಟೆ ಬಳಿಕ ವಕ್ಫ್​​ ತಿದ್ದುಪಡಿ ಮಸೂದೆ ಪಾಸ್; ಹೆಸರು ಕೂಡ ಬದಲಾವಣೆ..!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment