newsfirstkannada.com

ಶಾಸಕ ಮುನಿರತ್ನಗೆ ಬಿಗ್ ಶಾಕ್; BJP ಪಕ್ಷದಿಂದ 5 ದಿನಗಳ ಡೆಡ್​ಲೈನ್!

Share :

Published September 14, 2024 at 7:19pm

Update September 14, 2024 at 7:28pm

    ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಬಂಧನ

    ಶಾಸಕ ಮುನಿರತ್ನ ನಾಯ್ಡುಗೆ ಕರ್ನಾಟಕ BJP ಹೇಳಿದ್ದೇನು?

    ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಶಾಸಕ ಅರೆಸ್ಟ್​

ಬೆಂಗಳೂರು: ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಶಾಸಕ ಮುನಿರತ್ನ ನಾಯ್ಡುರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಮುನಿರತ್ನ ನಾಯ್ಡುಗೆ ಕರ್ನಾಟಕ ಬಿಜೆಪಿ ನೋಟಿಸ್ ನೀಡಿದೆ.

ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿರುವಂತೆ ಮುನಿರತ್ನ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಪ್ರಸಾರಗುತ್ತಿದೆ. ಈ ತರಹದ ಘಟನೆ ಪಕ್ಷದ ಶಿಸ್ತಿಗೆ ದಕ್ಕೆಯುನ್ನುಂಟು ಮಾಡುತ್ತದೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ 5 ದಿನ ಒಳಗಾಗಿ ಬಿಜೆಪಿಯ ಶಿಸ್ತು ಸಮಿತಿಯ ಮುಂದೆ ಶಾಸಕ ಮುನಿರತ್ನ ಸ್ಪಷ್ಠೀಕರಣ ನೀಡಬೇಕೆಂದು ಸೂಚನೆ ನೀಡಲಾಗಿದೆ. ಬಿಜೆಪಿಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್‌ರಿಂದ ನೋಟಿಸ್ ಜಾರಿ ಮಾಡಲಾಗಿದ್ದು 5 ದಿನ ಒಳಗಾಗಿ ಮುನಿರತ್ನ ಅವರು ಉತ್ತರ ನೀಡಬೇಕಿದೆ. ಶಾಸಕ ಮುನಿರತ್ನ ಅವರು ನೀಡುವ ಉತ್ತರದ ಮೇಲೆ ಶಿಸ್ತು ಸಮಿತಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಸಕ ಮುನಿರತ್ನಗೆ ಬಿಗ್ ಶಾಕ್; BJP ಪಕ್ಷದಿಂದ 5 ದಿನಗಳ ಡೆಡ್​ಲೈನ್!

https://newsfirstlive.com/wp-content/uploads/2024/09/BJP-MLA-Munirathana.jpg

    ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಬಂಧನ

    ಶಾಸಕ ಮುನಿರತ್ನ ನಾಯ್ಡುಗೆ ಕರ್ನಾಟಕ BJP ಹೇಳಿದ್ದೇನು?

    ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಶಾಸಕ ಅರೆಸ್ಟ್​

ಬೆಂಗಳೂರು: ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಶಾಸಕ ಮುನಿರತ್ನ ನಾಯ್ಡುರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಮುನಿರತ್ನ ನಾಯ್ಡುಗೆ ಕರ್ನಾಟಕ ಬಿಜೆಪಿ ನೋಟಿಸ್ ನೀಡಿದೆ.

ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿರುವಂತೆ ಮುನಿರತ್ನ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಪ್ರಸಾರಗುತ್ತಿದೆ. ಈ ತರಹದ ಘಟನೆ ಪಕ್ಷದ ಶಿಸ್ತಿಗೆ ದಕ್ಕೆಯುನ್ನುಂಟು ಮಾಡುತ್ತದೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ 5 ದಿನ ಒಳಗಾಗಿ ಬಿಜೆಪಿಯ ಶಿಸ್ತು ಸಮಿತಿಯ ಮುಂದೆ ಶಾಸಕ ಮುನಿರತ್ನ ಸ್ಪಷ್ಠೀಕರಣ ನೀಡಬೇಕೆಂದು ಸೂಚನೆ ನೀಡಲಾಗಿದೆ. ಬಿಜೆಪಿಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್‌ರಿಂದ ನೋಟಿಸ್ ಜಾರಿ ಮಾಡಲಾಗಿದ್ದು 5 ದಿನ ಒಳಗಾಗಿ ಮುನಿರತ್ನ ಅವರು ಉತ್ತರ ನೀಡಬೇಕಿದೆ. ಶಾಸಕ ಮುನಿರತ್ನ ಅವರು ನೀಡುವ ಉತ್ತರದ ಮೇಲೆ ಶಿಸ್ತು ಸಮಿತಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More