ರಾಜ್ಯಸಭೆಯಲ್ಲಿ ಅಡ್ಡಮತದಾನ..‘ಕೇಸರಿ’ ಪಡೆ ಅಸಮಾಧಾನ
ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದ ಕಮಲ ನಾಯಕರು
ಹೆಬ್ಬಾರ, ಸೋಮಶೇಖರ್ ನಡುವೆ ಇರುವ ಮುಂದಿನ ಆಯ್ಕೆಗಳೇನು?
ಸಂಸತ್ ಮೇಲ್ಮನೆ ಮೇಲಾಟ ಅಂತ್ಯವಾಗಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಘಟಿಸಿವೆ. ಬಿಜೆಪಿಗೆ ಇಬ್ಬರು ಶಾಸಕರು ಶಾಕ್ ಕೊಟ್ಟಿದ್ದಾರೆ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕೊಟ್ಟಿರುವ ಚಮಕ್ಗೆ ಕೇಸರಿ ಪಡೆ ಕೆಂಡವಾಗಿದೆ. ವಿಪ್ ಉಲ್ಲಂಘನೆ ಕಾರಣಕ್ಕೆ ಮಾಡಿದ ನಾಯಕ ವಿರುದ್ಧ ಅನರ್ಹತೆಗೆ ಅಸ್ತ್ರ ಜರುಗಿಸಲು ಬಿಜೆಪಿ ಪ್ಲಾನ್ ಮಾಡಿದೆ.
ವಿಧಾನಸಭೆ ಚುನಾವಣೆ ಬಳಿಕ ಸದಾ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ತಿದ್ದ ಬಿಜೆಪಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜೈ ಎಂದಿದ್ದಾರೆ. ಮಾಜಿ ಸಚಿವ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿ ಶಾಕ್ ಕೊಟ್ಟಿದ್ದಾರೆ. ಇದು ಕಮಲಪಡೆಯ ಆಕ್ರೋಶಕ್ಕೆ ಕಾರಣ ಆಗಿದೆ.
ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದ ಕಮಲ ನಾಯಕರು
ನಿನ್ನೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅಖಾಡಕ್ಕೆ ಇಳಿದಿದ್ದ ಮೂವರು ಅಭ್ಯರ್ಥಿಗಳು ಗೆಲುವಿನ ನಗೆಬೀರಿದ್ದಾರೆ. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿ ಕೈ ಪರ ಜೈ ಎಂದಿದ್ದಾರೆ.. ಇತ್ತ ಮತ್ತೊಬ್ಬ ಕೇಸರಿ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಇದೀಗ ಇಬ್ಬರು ನಾಯಕರ ವಿರುದ್ಧ ಕ್ರಮಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ
ಶಾಸಕರ ಮುಂದಿನ ನಡೆಯೇನು?
ಒಟ್ಟಾರೆ ಬಿಜೆಪಿ ವಿರುದ್ಧ ಹೋಗಿರೋ ಇಬ್ಬರೂ ನಾಯಕರ ವಿರುದ್ಧ ಸ್ಪೀಕರ್ ದೂರು ನೀಡಲು ಬಿಜೆಪಿ ಮುಂದಾಗಿದೆ. ಇದೀಗ ಸ್ಪೀಕರ್ ಏನು ನಿರ್ಧಾರ ಕೈಗೊಳ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜ್ಯಸಭೆಯಲ್ಲಿ ಅಡ್ಡಮತದಾನ..‘ಕೇಸರಿ’ ಪಡೆ ಅಸಮಾಧಾನ
ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದ ಕಮಲ ನಾಯಕರು
ಹೆಬ್ಬಾರ, ಸೋಮಶೇಖರ್ ನಡುವೆ ಇರುವ ಮುಂದಿನ ಆಯ್ಕೆಗಳೇನು?
ಸಂಸತ್ ಮೇಲ್ಮನೆ ಮೇಲಾಟ ಅಂತ್ಯವಾಗಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಘಟಿಸಿವೆ. ಬಿಜೆಪಿಗೆ ಇಬ್ಬರು ಶಾಸಕರು ಶಾಕ್ ಕೊಟ್ಟಿದ್ದಾರೆ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕೊಟ್ಟಿರುವ ಚಮಕ್ಗೆ ಕೇಸರಿ ಪಡೆ ಕೆಂಡವಾಗಿದೆ. ವಿಪ್ ಉಲ್ಲಂಘನೆ ಕಾರಣಕ್ಕೆ ಮಾಡಿದ ನಾಯಕ ವಿರುದ್ಧ ಅನರ್ಹತೆಗೆ ಅಸ್ತ್ರ ಜರುಗಿಸಲು ಬಿಜೆಪಿ ಪ್ಲಾನ್ ಮಾಡಿದೆ.
ವಿಧಾನಸಭೆ ಚುನಾವಣೆ ಬಳಿಕ ಸದಾ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ತಿದ್ದ ಬಿಜೆಪಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜೈ ಎಂದಿದ್ದಾರೆ. ಮಾಜಿ ಸಚಿವ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿ ಶಾಕ್ ಕೊಟ್ಟಿದ್ದಾರೆ. ಇದು ಕಮಲಪಡೆಯ ಆಕ್ರೋಶಕ್ಕೆ ಕಾರಣ ಆಗಿದೆ.
ಇಬ್ಬರು ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದ ಕಮಲ ನಾಯಕರು
ನಿನ್ನೆ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಅಖಾಡಕ್ಕೆ ಇಳಿದಿದ್ದ ಮೂವರು ಅಭ್ಯರ್ಥಿಗಳು ಗೆಲುವಿನ ನಗೆಬೀರಿದ್ದಾರೆ. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅಡ್ಡ ಮತದಾನ ಮಾಡಿ ಕೈ ಪರ ಜೈ ಎಂದಿದ್ದಾರೆ.. ಇತ್ತ ಮತ್ತೊಬ್ಬ ಕೇಸರಿ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದಾರೆ. ಇದೀಗ ಇಬ್ಬರು ನಾಯಕರ ವಿರುದ್ಧ ಕ್ರಮಕೈಗೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ
ಶಾಸಕರ ಮುಂದಿನ ನಡೆಯೇನು?
ಒಟ್ಟಾರೆ ಬಿಜೆಪಿ ವಿರುದ್ಧ ಹೋಗಿರೋ ಇಬ್ಬರೂ ನಾಯಕರ ವಿರುದ್ಧ ಸ್ಪೀಕರ್ ದೂರು ನೀಡಲು ಬಿಜೆಪಿ ಮುಂದಾಗಿದೆ. ಇದೀಗ ಸ್ಪೀಕರ್ ಏನು ನಿರ್ಧಾರ ಕೈಗೊಳ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ