/newsfirstlive-kannada/media/post_attachments/wp-content/uploads/2025/03/MADHU-BANGARAPPA-3.jpg)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ಬಜೆಟ್ ಮಂಡನೆ ಮಾಡ್ತಿದ್ದಾರೆ. ರಾಜ್ಯದ ಜನರು ಸಿಎಂ ಮೇಲೆ ದೊಡ್ಡ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು, ಈ ಸಲದ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರದ ಮೇಲೂ ಒಂದಷ್ಟು ಬದಲಾವಣೆ ಸಾಧ್ಯತೆ ಇದೆ.
‘ಸ್ಕಿಲ್ ಟು ಸ್ಕೂಲ್’
8 ರಿಂದ 12ನೇ ತರಗತಿ ವರೆಗೆ ‘ಸ್ಕಿಲ್ ಟು ಸ್ಕೂಲ್’ ಎಂಬ ಹೊಸ ಯೋಜನೆ ಜಾರಿಗೆ ತರುವ ಸಾಧ್ಯತೆ ಇದೆ. ಮುಂಬರುವ ಶೈಕ್ಷಣಿಕ ಸಾಲಿನಿಂದ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಅಲ್ಪಾವಧಿ ಕೌಶಲ್ಯ ತರಬೇತಿ ಕೋರ್ಸ್ ಆರಂಭವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ದಾಖಲೆಯ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ರೆಡಿ; ಸವಾಲುಗಳ ಮೆಟ್ಟಿನಿಂತು ಜನಪರ ಬಜೆಟ್ ಮಂಡಿಸ್ತಾರಾ?
ಶಿಕ್ಷಣ ಇಲಾಖೆಯು ‘ಸ್ಕಿಲ್ ಟು ಸ್ಕೂಲ್’ ಎಂಬ ಮಹತ್ವದ ಯೋಜನೆ ರೂಪಿಸಿದೆ. ಅದು ಇಂದಿನ ಬಜೆಟ್ನಲ್ಲಿ ಅಧಿಕೃತ ಘೋಷಣೆ ಆಗಲಿದೆ. ರಾಜ್ಯದ ಕೆಲವು ಐಟಿ ಕಂಪನಿಗಳು ಮತ್ತು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಸಹಕಾರದೊಂದಿಗೆ ಈ ಯೋಜನೆ ತರುವ ಪ್ರಕ್ರಿಯೆ ನಡೆದಿದೆ. ಅಲ್ಪಾವಧಿ ಕೌಶಲ್ಯ ಕೋರ್ಸುಗಳನ್ನು ಪರಿಚಯಿಸಿ ತರಬೇತಿ ನೀಡಲಾಗುತ್ತದೆ. ಸುಮಾರು 30 ಲಕ್ಷ ವಿದ್ಯಾರ್ಥಿಗಳಿಗೆ ಈ ಕೋರ್ಸು ಪರಿಚಯಿಸಲಾಗುತ್ತದೆ.
ಇದನ್ನೂ ಓದಿ: ರಾಹುಕಾಲಕ್ಕೂ ಮೊದಲೇ ಸಿದ್ದರಾಮಯ್ಯ ಬಜೆಟ್.. ಎಷ್ಟು ಲಕ್ಷ ಕೋಟಿ ಆಯವ್ಯಯ ಮಂಡಿಸ್ತಾರೆ ಸಿಎಂ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ