ಕರ್ನಾಟಕ ಅನ್ನದಾತರ ಹೊಟ್ಟೆ ಮೇಲೆ ಹೊಡೆದ ಆಂಧ್ರಪ್ರದೇಶ.. ತೋತಾಪುರಿ‌ ನಿಷೇಧಿಸಿ ಯಡವಟ್ಟು..!

author-image
Veena Gangani
Updated On
ಕರ್ನಾಟಕ ತೋತಾಪುರಿ ಮಾವಿಗೆ ನಿರ್ಬಂಧ; ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಸಿದ್ದರಾಮಯ್ಯ ಪತ್ರ
Advertisment
  • ಚಿತ್ತೂರು ಡಿಸಿ ಅನ್ಯರಾಜ್ಯಗಳ ತೋತಾಪುರಿ ಮಾವು ನಿಷೇಧ ಏಕೆ?
  • ತೋತಾಪುರಿ ನಿಷೇಧ ಹಿಂಪಡೆಯಿರಿ ಅಂತ ಸರ್ಕಾರದಿಂದ ಮನವಿ
  • ಡಿಸಿ ನಿರ್ಧಾರಕ್ಕೆ ನೆರೆರಾಜ್ಯಗಳ ರೈತರಲ್ಲಿ ಮನೆಮಾಡಿದ ಆತಂಕ

ಕೋಲಾರ: ತೋತಾಪುರಿ ನಿಷೇಧವನ್ನು ಹಿಂಪಡೆಯುವಂತೆ ಆಂಧ್ರಕ್ಕೆ ಕರ್ನಾಟಕ ಸರ್ಕಾರ ಮನವಿ ಮಾಡಿಕೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಪತ್ರ ಬರೆಯುವ ಮೂಲಕ‌ ಆಂಧ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

publive-image

ಕರ್ನಾಟಕದಿಂದ ಬಂದ ಹಣ್ಣನ್ನು ಇಲ್ಲಿ ಬಂದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಅನ್ಯರಾಜ್ಯದವರು ಹಣ್ಣನ್ನ ಮಾರಾಟ ಮಾಡಬಾರದು. ಇದರಿಂದ ಇಲ್ಲಿನ ರೈತರಿಗೆ ಸಮಸ್ಯೆಯಾಗುತ್ತದೆ ಎಂದು ಚಿತ್ತೂರು ಡಿಸಿ ಆದೇಶ ಹೊರಡಿಸಿದ್ದಾರೆ. ಸ್ಥಳೀಯ ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ನೆರೆ ರಾಜ್ಯದ ಮಾವು ಬೆಳೆಗಾರರಿಗೆ ಶಾಕ್ ನೀಡಿದ್ದಾರೆ. ಈ ಮೂಲಕ ಚಿತ್ತೂರಿನಲ್ಲಿ ಅನ್ಯರಾಜ್ಯದ ತೋತಾಪುರಿ ಮಾವಿನ ಹಣ್ಣನ್ನ ಬ್ಯಾನ್​ ಮಾಡಿದ್ದಾರೆ.

ಇದನ್ನೂ ಓದಿ: ಕ್ಯಾರೆಟ್‌ ಹಲ್ವಾ, ಮಾವಿನ ಹಣ್ಣು ಮತ್ತು ಅನ್ನ; ಶುಭಾಂಶು ಶುಕ್ಲಾ ಗಗನಯಾನಕ್ಕೆ ಅಂತಿಮ ತಯಾರಿ ಹೇಗಿದೆ?

ಕರ್ನಾಟಕದ ಗಡಿಯಲ್ಲಿ ಹೆಚ್ಚು ತೋತಾಪುರಿ ಬೆಳೆಯಲಾಗುತ್ತಿದೆ. ಈ ಭಾಗದ ರೈತರಿಗೆ ಚಿತ್ತೂರು ಮಾರುಕಟ್ಟೆಯೇ ಮುಖ್ಯ ಪ್ರದೇಶವಾಗಿದೆ. ಡಿಸಿ ಅವರ ಈ ನಿರ್ಧಾರದಿಂದ ನೆರೆರಾಜ್ಯಗಳ ರೈತರಿಗೆ ಬೆದರಿಕೆಯೊಡ್ಡುವ ರೀತಿ ಇದೆ. ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಬಹುದು. ಆಂಧ್ರ ಸರ್ಕಾರದ ನಡೆಯಿಂದ ಕರ್ನಾಟಕದ ರೈತರಿಗೆ ಆತಂಕ ಎದುರಾಗಿದೆ. ಹಾಗಾಗಿ, ಆಂಧ್ರ ಸರ್ಕಾರ ಈ ವಿಚಾರದಲ್ಲಿ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಶಾಲಿನಿ‌ ರಜನೀಶ್ ಅವರು ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿ ಕೆ‌ ವಿಜಯಕುಮಾರ್​ ಅವರಿಗೆ ಮನವಿ ಪ್ರತ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment