/newsfirstlive-kannada/media/post_attachments/wp-content/uploads/2025/01/Karnataka-Cricket-Team.jpg)
ಕೊಟ್ಯಂತರ ಕನ್ನಡಿಗರ ಪ್ರಾರ್ಥನೆ ಫಲಿಸಿದೆ. ಕೆಲ ವರ್ಷಗಳಿಂದ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳನ್ನ ಕಾಡಿದ್ದ ಟ್ರೋಫಿ ಕೊರಗಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ವಡೋದರಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿದರ್ಭ ಪಡೆಯನ್ನ ಮಣಿಸಿ ಕರ್ನಾಟಕ ತಂಡದ ಚಾಂಪಿಯನ್ ಪಟ್ಟಕ್ಕೇರಿದೆ.
ಕನ್ನಡಿಗ VS ಕನ್ನಡಿಗರು.. ಈ ಬಾರಿಯ ವಿಜಯ್ ಹಜಾರೆ ಟೂರ್ನಿಯ ಫೈನಲ್ ಫೈಟ್ ಈ ಕಾರಣಕ್ಕೆ ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿತ್ತು. ಈ ಕುತೂಹಲದ ಫೈಟ್ನಲ್ಲಿ ಕನ್ನಡಿಗರು ಗೆದ್ದು ಬೀಗಿದ್ದಾರೆ. ಕನ್ನಡಿಗ ಕರುಣ್ ನಾಯರ್ ನೇತೃತ್ವದ ವಿದರ್ಭವನ್ನ ಮಯಾಂಕ್ ಅಗರ್ವಾಲ್ ನೇತೃತ್ವದ ಕನ್ನಡಿಗರು ಬಗ್ಗು ಬಡಿದಿದ್ದಾರೆ. ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ಕನ್ನಡದ ಭಾವುಟವನ್ನ ಹೆಮ್ಮೆಯಿಂದ ಹಾರಿಸಿ ಚಾಂಪಿಯನ್ ಪಟ್ಟವೇರಿದ್ದಾರೆ. 5ನೇ ಬಾರಿ ವಿಜಯ್ ಹಜಾರೆ ಟ್ರೋಫಿ ಕರ್ನಾಟಕದ ಪಾಲಾಗಿದೆ.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಕರ್ನಾಟಕ ತಂಡ ಆರಂಭದಲ್ಲಿ ಆಘಾತದ ಮೇಲೆ ಆಘಾತ ಎದುರಿಸಿತು. ಸಾಲಿಡ್ ಫಾರ್ಮ್ನಲ್ಲಿದ್ದ ದೇವದತ್ ಪಡಿಕ್ಕಲ್ 8 ರನ್ಗಳಿಗೆ ಆಟ ಅಂತ್ಯಗೊಳಿಸಿದ್ರು, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನೀಶ್ ಕೆವಿ ಕೂಡ ವಿಗ್ ಸ್ಕೋರ್ ಕಲೆ ಹಾಕುವಲ್ಲಿ ಫೇಲ್ ಆದ್ರು. ಇನ್ನು, ನಾಯಕ ಮಯಾಂಕ್ ಅಗರ್ವಾಲ್ 31 ರನ್ಗಳಿಸಿ ಔಟಾದ್ರು.
ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನೆರವಾದ ಸ್ಮರಣ್, ಶ್ರೀಜಿತ್.!
14.3 ಓವರ್, 67 ರನ್, 3 ವಿಕೆಟ್.. ಕರ್ನಾಟಕ ತಂಡ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಕ್ರಿಸ್ನಲ್ಲಿ ಜೊತೆಯಾಗಿದ್ದು ಸ್ಮರಣ್ ರವಿಚಂದ್ರನ್ ಹಾಗೂ ಕೆಎಲ್ ಶ್ರೀಜಿತ್! 4ನೇ ವಿಕೆಟ್ಗೆ ಜೊತೆಯಾದ ಕರ್ನಾಟಕದ ಈ ಯುವ ಆಟಗಾರರು ವಿದರ್ಭ ಬೌಲರ್ಗಳ ಬೆಂಡೆತ್ತಿದ್ರು. ಒತ್ತಡದ ಸಂದರ್ಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ಬರೋಬ್ಬರಿ 160 ರನ್ಗಳ ಕಾಣಿಕೆ ನೀಡಿತು.
ಸಂಕಷ್ಟದ ಸಂದರ್ಭದಲ್ಲಿ ದಿಟ್ಟ ಹೋರಾಟ ನಡೆಸಿದ ಶ್ರೀಜಿತ್ ಹಾಫ್ ಸೆಂಚುರಿ ಪೂರೈಸಿದ್ರು. 9 ಬೌಂಡರಿ, 1 ಸಿಕ್ಸರ್ ಸಿಡಿಸಿ ಮಿಂಚಿದ್ರು.
ಶತಕ ಸಿಡಿಸಿ ಸಂಭ್ರಮಿಸಿದ ಸ್ಮರಣ್ ರವಿಚಂದ್ರನ್.!
78 ರನ್ಗಳಿಸಿ ಶ್ರೀಜಿತ್ ಔಟಾದ್ರೆ, ಸ್ಮರಣ್ ವಿದರ್ಭ ಬೌಲರ್ಗಳ ಮೇಲೆ ಸವಾರಿ ಮುಂದುವರೆಸಿದ್ರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಭಿನವ್ ಮನೋಹರ್ ಜೊತೆಗೆ ಸ್ಮರಣ್ 106 ರನ್ಗಳ ಜೊತೆಯಾಟವಾಡಿದ್ರು. 92 ಎಸೆತಗಳಲ್ಲೇ ಶತಕ ಸಿಡಿಸಿ ಸಂಭ್ರಮಿಸಿದ್ರು.
ಅಂತಿಮ ಹಂತದಲ್ಲಿ ಅಭಿನವ್ ಮನೋಹರ್ ಸ್ಪೋಟ.!
92 ಎಸೆತ ಎದುರಿಸಿ 7 ಬೌಂಡರಿ, 3 ಸಿಕ್ಸರ್ ಸಹಿತ ಸ್ಮರಣ್ 101 ರನ್ ಸಿಡಿಸಿ ಔಟಾದ್ರು, ಆದ್ರೆ, ಅಭಿನವ್ ಮನೋಹರ್ ಅಬ್ಬರ ಮುಂದುವರೆಯಿತು. 188ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಅಭಿನವ್ 10 ಬೌಂಡರಿ, 4 ಸಿಕ್ಸರ್ಗಳ ನೆರವಿನಿಂದ 79 ರನ್ ಚಚ್ಚಿದ್ರು.
ಕೊನೇ ಹಂತದಲ್ಲಿ ಹಾರ್ದಿಕ್ ರಾಜ್, ಶ್ರೇಯಸ್ ಗೋಪಾಲ್ ಅಲ್ಪ ಕಾಣಿಕೆ ನೀಡಿದ್ರು. ಅಂತಿಮವಾಗಿ ಕರ್ನಾಟಕ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಕಲೆ ಹಾಕಿತು.
‘ರನ್ಮಷೀನ್’ ಕರುಣ್ ಆಟಕ್ಕೆ ಪ್ರಸಿದ್ಧ್ ಬ್ರೇಕ್.!
349 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ವಿದರ್ಭ ತಂಡಕ್ಕೆ ಆರಂಭದಲ್ಲೇ ಅಭಿಲಾಷ್ ಶೆಟ್ಟಿ ಶಾಕ್ ನೀಡಿದ್ರು. 22 ರನ್ಗಳಿಸಿದ್ದ ಯಶ್ ರಾಥೋಡ್ ಆಟಕ್ಕೆ ಬ್ರೇಕ್ ಹಾಕಿದ್ರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಜಯ್ ಹಜಾರೆ ಟೂರ್ನಿಯ ರನ್ಮಷೀನ್ ಕರುಣ್ ನಾಯರ್ ಆಟಕ್ಕೆ ಪ್ರಸಿದ್ಧ್ ಕೃಷ್ಣ ಬ್ರೇಕ್ ಹಾಕಿದ್ರು. ಪ್ರಸಿದ್ಧ್ ಬೌಲಿಂಗ್ನಲ್ಲಿ ಕಕ್ಕಾಬಿಕ್ಕಿಯಾದ ಕರುಣ್, ಕ್ಲೀನ್ ಬೋಲ್ಡ್ ಆದ್ರು.
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಶ್ ಕದಮ್ ಹಾರ್ದಿಕ್ ರಾಜ್ ಬೌಲಿಂಗ್ನಲ್ಲಿ ಮಂಡಿಯೂರಿದ್ರು. ಆದ್ರೆ, ನಾಲ್ಕನೇ ವಿಕೆಟ್ಗೆ ಜೊತೆಯಾದ ಜಿತೇಶ್ ಶರ್ಮಾ, ಧ್ರುವ್ ಶೋರೆ ಕರ್ನಾಟಕದ ಬೌಲರ್ಗಳನ್ನ ಕೆಲ ಕಾಲ ಕಾಡಿದ್ರು. ಅಂತಿಮವಾಗಿ ವಿ ಕೌಶಿಕ್ ಪಾರ್ಟನರ್ಶಿಪ್ನ ಬ್ರೇಕ್ ಮಾಡಿದ್ರು. ಜಿತೇಶ್ ಶರ್ಮಾ ಆಟ 34 ರನ್ಗಳಿಗೆ ಅಂತ್ಯವಾಯ್ತು.
ದೃವ್ ಶೋರೆ ದಿಟ್ಟ ಹೋರಾಟ, ಸಂಕಷ್ಟದಲ್ಲಿ ಶತಕ.!
ಇನ್ನೊಂದು ತುದಿಯಲ್ಲಿದ್ದ ಆರಂಭಿಕ ದೃವ್ ಶೋರೆ ಸಾಲಿಡ್ ಬ್ಯಾಟಿಂಗ್ ನಡೆಸಿದ್ರು. 36ನೇ ಓವರ್ನ 3ನೇ ಎಸೆತವನ್ನ ಸಿಕ್ಸರ್ ಸಿಡಿಸಿದ ಧೃವ್ ಶೋರೆ 99 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ರು.
ಶುಭಮ್ ದುಬೆ ಕ್ರಿಸ್ಗೆ ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ರೆ, ದೃವ್ ಶೋರೆ ಶತಕ ಸಿಡಿಸಿ ಔಟಾದ್ರು. ಅಪೂರ್ವ ವಾಂಖಡೆ, ನಚಿಕೇತ್ ಭತೆಗೆ ವಿ.ಕೌಶಿಕ್ ಪೆವಿಲಿಯನ್ ದಾರಿ ತೋರಿಸಿದ್ರು. ದರ್ಶನ್ ನಲ್ಕಂಡೆ ಆಟಕ್ಕೆ ಪ್ರಸಿದ್ಧ್ ಫುಲ್ ಸ್ಟಾಫ್ ಹಾಕಿದ್ರು.
8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಷ್ದುಬೆ ಬೌಂಡರಿ, ಸಿಕ್ಸರ್ ಸಿಡಿಸಿ ಅಬ್ಬರಿಸಿದ್ರು. ಕೇವಲ 30 ಎಸೆತಗಳಲ್ಲೇ 63 ರನ್ ಸಿಡಿಸಿ ಮಿಂಚಿದ್ರು. ಆದ್ರೆ, ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದ್ರು. ಹರ್ಷ್ದುಬೆ ವಿಕೆಟ್ನ ಅಭಿಲಾಷ್ ಶೆಟ್ಟಿ ಕಬಳಿಸೋದ್ರೊಂದಿಗೆ ಕರ್ನಾಟಕ ತಂಡ ಗೆದ್ದು ಬೀಗಿತು.
ವಿದರ್ಭ ತಂಡವನ್ನ 312 ರನ್ಗಳಿಗೆ ಆಲೌಟ್ ಮಾಡಿದ ಕರ್ನಾಟಕ 36 ರನ್ಗಳ ಗೆಲುವು ದಾಖಲಿಸಿತು. ಈ ಮೂಲಕ ಕರ್ನಾಟಕ ತಂಡ 5ನೇ ಬಾರಿ ವಿಜಯ್ ಹಜಾರೆ ಕಿರೀಟಕ್ಕೆ ಮುತ್ತಿಕ್ಕಿತು.
ಇದನ್ನೂ ಓದಿ:ಕಪ್ ಗೆಲ್ಲಿಸೋ ತಾಕತ್ತಿರೋ RCB ಪ್ಲೇಯರ್ಸ್ ಇವ್ರೇ! ಒಬ್ಬೊಬ್ಬರ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಾ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ