newsfirstkannada.com

‘ಡಿ.ಕೆ.ಶಿವಕುಮಾರ್ ಚಾಳಿ ಏನಂದರೆ..’ ಅಶೋಕ್ ಮಾಡಿದ ಆರೋಪ ಏನು..?

Share :

Published May 24, 2023 at 9:34am

Update September 25, 2023 at 10:26pm

    ಕಾಂಗ್ರೆಸ್ ಅಂದರೆ ಗೂಂಡಾಗಿರಿ, ಗೂಂಡಾಗಿರಿ ಅಂದರೆ ಕಾಂಗ್ರೆಸ್

    ಕಾಂಗ್ರೆಸ್​ನವರ ದೌರ್ಜನ್ಯವನ್ನು ಜನ ಸಹಿಸಲ್ಲ

    ಅಶೋಕ್​ ಅವರ ಕೋಪಕ್ಕೆ ಕಾರಣ ಏನು ಗೊತ್ತಾ..?

ಬೆಂಗಳೂರು ನಗರದಲ್ಲಿ ಮಾಜಿ ಸಚಿವ ಆರ್​.ಅಶೋಕ್ ಮಾತನಾಡಿ.. ‘ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಸಮ್ಮಿಶ್ರ ಸರ್ಕಾರ’ ಅಂತಾ ಗೇಲಿ ಮಾಡಿದ್ದಾರೆ.

ಮೌನಕ್ಕೆ ಜಾರಿದ ಸಿದ್ದರಾಮಯ್ಯ

ನಾನು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸಿಎಂ ಇದ್ದಾಗ ಯಾರು ಮಾತನಾಡಲ್ಲ. ಆದರೆ ಸಿದ್ದರಾಮಯ್ಯ ಮಾತನಾಡಿದ ಮೇಲೆ ನಾನೇ ಮಾತನಾಡಬೇಕು ಎಂಬುವುದು ಶಿವಕುಮಾರ್​​ಗೆ ಚಾಳಿ ಆಗಿದೆ. ಸಂವಿಧಾನಿಕವಾಗಿ ಉಪಮುಖ್ಯಮಂತ್ರಿ ಹುದ್ದೆ ಇಲ್ಲ. ಇದನ್ನು ಪಕ್ಷಗಳು ನಡೆಸುಕೊಂಡು ಬಂದಿರೋದು. ಸಿದ್ದರಾಮಯ್ಯನವರು ಯಾಕೋ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್​ನವರ ದೌರ್ಜನ್ಯವನ್ನು ಜನ ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಸಭೆಯಲ್ಲೇ ಡಿ.ಕೆ.ಶಿವಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಕಾಂಗ್ರೆಸ್ ಅಂದರೆ ಗೂಂಡಾಗಿರಿ, ಗೂಂಡಾಗಿರಿ ಅಂದರೆ ಕಾಂಗ್ರೆಸ್. ಪ್ರತಿ ಸರ್ಕಾರ ಬಂದಾಗಲೂ ಅದೇ ಅಧಿಕಾರಿಗಳು ಇರ್ತಾರೆ. ಆದರೆ ಧಮ್ಕಿ ಹಾಕೋ ಸಂಸ್ಕೃತಿ ಒಳ್ಳೆಯದಲ್ಲ. ಜೂನ್ 1 ರಂದು ಐದು ಗ್ಯಾರಂಟಿ ಕೊಡ್ತೀನಿ ಎಂದಿದ್ದರು. ಆದ್ರೆ ಇನ್ನೂ ಯಾವುದೇ ಪ್ರಕಟಣೆಗಳನ್ನು ನೀವು ನೀಡಿಲ್ಲ. ಗ್ಯಾರಂಟಿಗಳ ಬಗ್ಗೆ ಯಾವುದೇ ಘೊಷಣೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಡಿ.ಕೆ.ಶಿವಕುಮಾರ್ ಚಾಳಿ ಏನಂದರೆ..’ ಅಶೋಕ್ ಮಾಡಿದ ಆರೋಪ ಏನು..?

https://newsfirstlive.com/wp-content/uploads/2023/05/RASHOK24052023.jpg

    ಕಾಂಗ್ರೆಸ್ ಅಂದರೆ ಗೂಂಡಾಗಿರಿ, ಗೂಂಡಾಗಿರಿ ಅಂದರೆ ಕಾಂಗ್ರೆಸ್

    ಕಾಂಗ್ರೆಸ್​ನವರ ದೌರ್ಜನ್ಯವನ್ನು ಜನ ಸಹಿಸಲ್ಲ

    ಅಶೋಕ್​ ಅವರ ಕೋಪಕ್ಕೆ ಕಾರಣ ಏನು ಗೊತ್ತಾ..?

ಬೆಂಗಳೂರು ನಗರದಲ್ಲಿ ಮಾಜಿ ಸಚಿವ ಆರ್​.ಅಶೋಕ್ ಮಾತನಾಡಿ.. ‘ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಸಮ್ಮಿಶ್ರ ಸರ್ಕಾರ’ ಅಂತಾ ಗೇಲಿ ಮಾಡಿದ್ದಾರೆ.

ಮೌನಕ್ಕೆ ಜಾರಿದ ಸಿದ್ದರಾಮಯ್ಯ

ನಾನು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸಿಎಂ ಇದ್ದಾಗ ಯಾರು ಮಾತನಾಡಲ್ಲ. ಆದರೆ ಸಿದ್ದರಾಮಯ್ಯ ಮಾತನಾಡಿದ ಮೇಲೆ ನಾನೇ ಮಾತನಾಡಬೇಕು ಎಂಬುವುದು ಶಿವಕುಮಾರ್​​ಗೆ ಚಾಳಿ ಆಗಿದೆ. ಸಂವಿಧಾನಿಕವಾಗಿ ಉಪಮುಖ್ಯಮಂತ್ರಿ ಹುದ್ದೆ ಇಲ್ಲ. ಇದನ್ನು ಪಕ್ಷಗಳು ನಡೆಸುಕೊಂಡು ಬಂದಿರೋದು. ಸಿದ್ದರಾಮಯ್ಯನವರು ಯಾಕೋ ಮೌನಕ್ಕೆ ಶರಣಾಗಿದ್ದಾರೆ. ಕಾಂಗ್ರೆಸ್​ನವರ ದೌರ್ಜನ್ಯವನ್ನು ಜನ ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಸಭೆಯಲ್ಲೇ ಡಿ.ಕೆ.ಶಿವಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಕಾಂಗ್ರೆಸ್ ಅಂದರೆ ಗೂಂಡಾಗಿರಿ, ಗೂಂಡಾಗಿರಿ ಅಂದರೆ ಕಾಂಗ್ರೆಸ್. ಪ್ರತಿ ಸರ್ಕಾರ ಬಂದಾಗಲೂ ಅದೇ ಅಧಿಕಾರಿಗಳು ಇರ್ತಾರೆ. ಆದರೆ ಧಮ್ಕಿ ಹಾಕೋ ಸಂಸ್ಕೃತಿ ಒಳ್ಳೆಯದಲ್ಲ. ಜೂನ್ 1 ರಂದು ಐದು ಗ್ಯಾರಂಟಿ ಕೊಡ್ತೀನಿ ಎಂದಿದ್ದರು. ಆದ್ರೆ ಇನ್ನೂ ಯಾವುದೇ ಪ್ರಕಟಣೆಗಳನ್ನು ನೀವು ನೀಡಿಲ್ಲ. ಗ್ಯಾರಂಟಿಗಳ ಬಗ್ಗೆ ಯಾವುದೇ ಘೊಷಣೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More