Budget : ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ.. ಮೋದಿ ಬಜೆಟ್​ ಮೇಲೆ ಕರ್ನಾಟಕದ ನಿರೀಕ್ಷೆಗಳು ಏನೇನು..?

author-image
Ganesh
Updated On
ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ; ರಾಜ್ಯಕ್ಕೆ 18 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ
Advertisment
  • ಕೇಂದ್ರದ ಬಜೆಟ್​​ನತ್ತ ರಾಜ್ಯ ಸರ್ಕಾರದ ಚಿತ್ತ!
  • ಕೇಂದ್ರ ಬಜೆಟ್​ನಲ್ಲಿ ರಾಜ್ಯದ ನಿರೀಕ್ಷೆಗಳೇನು?
  • 90,000 ಕೋಟಿ ವೆಚ್ಚದ ಯೋಜನೆಗಳ ನೆರವಿಗೆ ಪತ್ರ

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಪ್ರತಿ ವಲಯವೂ ತತ್ತರಿಸಿದ್ದು, ಇಂದು ಮಂಡನೆ ಆಗುವ ಕೇಂದ್ರ ಬಜೆಟ್​ ಮೇಲೆ ನಿರೀಕ್ಷೆಯ ಭಾರ ಹೊತ್ತು ಕೂತಿದ್ದಾರೆ. ನಿರ್ಮಲಾ ಸೀತಾರಾಮನ್​​​ ದಾಖಲೆಯ 8ನೇ ಬಜೆಟ್​ ಮಂಡಿಸ್ತಿದ್ದು, ಎಲ್ಲಾ ವರ್ಗಗಳು ಚಿತ್ತ ನೆಟ್ಟಿವೆ. ಅದರಲ್ಲೂ ನಿರ್ಮಲ ಲೆಕ್ಕದತ್ತ ರಾಜ್ಯ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಎದುರುನೋಡ್ತಿದೆ.

ಕೇಂದ್ರದ ಬಜೆಟ್​​ನತ್ತ ರಾಜ್ಯ ಸರ್ಕಾರದ ಚಿತ್ತ!

ಕರ್ನಾಟಕ ಮತ್ತು ಬೆಂಗಳೂರು ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಸಿಎಂ, ಡಿಸಿಎಂ ₹90,000 ಕೋಟಿ ವೆಚ್ಚದ ಯೋಜನೆಗಳಿಗೆ ನೆರವಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಬಜೆಟ್​​ನಲ್ಲಿ ಸಾಕಷ್ಟು ನಿರೀಕ್ಷೆ ಇದೆ.

ಇದನ್ನೂ ಓದಿ: ಮೋದಿ ಬಜೆಟ್​ ಮೇಲೆ ದೊಡ್ಡ ನಿರೀಕ್ಷೆ.. ಬೆಂಗಳೂರು ಮಂದಿ ಬಯಸಿದ 12 ಬೇಡಿಕೆ ಇಲ್ಲಿದೆ..!

ಕೇಂದ್ರ ಬಜೆಟ್​ನಲ್ಲಿ ರಾಜ್ಯದ ನಿರೀಕ್ಷೆಗಳೇನು?

  • ಬೆಂಗಳೂರಲ್ಲಿ ಟ್ರಾಫಿಕ್​​​ ನಿವಾರಣೆಗೆ ಟನಲ್ ರಸ್ತೆಗೆ ಅನುದಾನ
  • ಹೆಬ್ಬಾಳದ ಎಸ್ಟೀಮ್ ಮಾಲ್​ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್​​
  • ಉತ್ತರ-ದಕ್ಷಿಣ 18.5 ಕಿ.ಮೀ ಟನಲ್​ಗಾಗಿ ₹15 ಸಾವಿರ ಕೋಟಿ
  • ಕೆ.ಆರ್.ಪುರ ವೃತ್ತ - ನಾಯಂಡನಹಳ್ಳಿ ಜಂಕ್ಷನ್ ಟನಲ್​ ರಸ್ತೆ
  • 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹25 ಸಾವಿರ ಕೋಟಿ
  • ಮೆಟ್ರೋ ರೈಲು ಮಾರ್ಗಗಳಿಗೆ 5 ಕಾರಿಡಾರು ವಿಸ್ತರಣೆ ಗುರುತು
  • 17 ಮೇಲ್ಸೇತುವೆ, ಬಫರ್ ವಲಯ ನಿರ್ಮಾಣಕ್ಕೆ ಅನುದಾನ
  • ಎಂಟು ಪಥದ 73.04 ಕಿ.ಮೀ ಬಿಸಿನೆಸ್ ಕಾರಿಡಾರ್​ ಯೋಜನೆ
  • ಕಾವೇರಿ 5ನೇ ಹಂತದ ಕುಡಿಯುವ ನೀರಿನ ಪೂರೈಕೆ ಯೋಜನೆ
  • ಭದ್ರಾ ಮೇಲ್ದಂಡೆಗೆ ₹5,300 ಕೋಟಿ ಬಿಡುಗಡೆಗೆ ಅನುದಾನ
  • ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುಮೋದನೆ
  • 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ಅನುದಾನಕ್ಕೆ ಬೇಡಿಕೆ
  • ಅಂಗನವಾಡಿ, ಆಶಾ, ಅಡುಗೆ ಸಹಾಯಕಿಯರ ಗೌರವಧನ ಹೆಚ್ಚಳ
  • ಪ್ರಧಾನಮಂತ್ರಿ ಆವಾಸ್​ ಯೋಜನೆ ನೆರವಿಗಾಗಿ ರಾಜ್ಯ ಸರ್ಕಾರದ ಮನವಿ
  • ವೃದ್ಧಾಪ್ಯ, ವಿಧವಾ ಮತ್ತು ವಿಕಲಚೇತನರ ಪಿಂಚಣಿ ಹೆಚ್ಚಿಸಬೇಕೆಂದು ಬೇಡಿಕೆ
  • ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹5,000 ಕೋಟಿ ಅನುದಾನಕ್ಕೆ ಮನವಿ
  • ಪಶ್ಚಿಮಘಟ್ಟ ಅಭಿವೃದ್ಧಿಗೆ 5 ವರ್ಷಗಳಿಗೆ ₹10,000 ಅನುದಾನಕ್ಕೆ ಬೇಡಿಕೆ

ಒಟ್ಟಾರೆ ಕೇಂದ್ರ ಬಜೆಟ್​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅದರಲ್ಲೂ ಗ್ಯಾರಂಟಿಗಳನ್ನು ಕೊಟ್ಟು ಖಜಾನೆ ಖಾಲಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ಕೇಂದ್ರದ ಆಯವ್ಯಯದ ಮೇಲೆ ಆಸೆಗಣ್ಣನ್ನು ಇಟ್ಟುಕೊಂಡಿದೆ. ಈ ಆಸೆಗಳನ್ನು ಕೇಂದ್ರ ಬಜೆಟ್ ಈಡೇರಿಸುತ್ತಾ ಅನ್ನೋದಕ್ಕೆ ಇಂದು ಉತ್ತರ ಸಿಗಲಿದೆ.

ಇದನ್ನೂ ಓದಿ: ನಿರ್ಮಲಾ ಸೀತರಾಮನ್​ರಿಂದ ಸತತ 8ನೇ ಬಜೆಟ್​ ಮಂಡನೆ.. ಜನರ ನಿರೀಕ್ಷೆ ದುಪ್ಪಟ್ಟು ಆಗಲು ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment