‘ಗ್ಯಾರಂಟಿ’ ಸರ್ಕಾರದಿಂದ ಯಾರಿಗೆಲ್ಲಾ ಸಿಹಿ, ಯಾರಿಗೆ ಕಹಿ?
ಇಂದು ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ
ಬಹುತೇಕ ಇಲಾಖೆಗೆ ಹೆಚ್ಚುವರಿ ಅನುದಾನ ಅನುಮಾನ
ಕೇಂದ್ರ ಮಧ್ಯಂತರ ಬಜೆಟ್ ಮಂಡನೆ ಬೆನ್ನಲ್ಲೇ ಇಂದು ರಾಜ್ಯದ ಆಯವ್ಯಯ ಲೆಕ್ಕವನ್ನ ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಒಂದ್ಕಡೆ ಗ್ಯಾರಂಟಿ ಯೋಜನೆ, ಮತ್ತೊಂದೆಡೆ ಸಾಲದ ಹೊರೆ. ಈ ನಡುವೆ ಲೋಕ ಸಮರ ಹಿನ್ನೆಲೆ ಜನಪರ ಯೋಜನೆ ನೀಡಬೇಕಾದ ಸ್ಥಿತಿ ಇದ್ದು ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಇದೇ ವೇಳೆ ಸಿಎಂ ಬಜೆಟ್ ಮಂಡಿಸುವಲ್ಲಿ ದಾಖಲೆ ಬರೆಯಲಿದ್ದಾರೆ.
ಫೆಬ್ರವರಿ ಬಂದ್ರೆ ಸಾಕು ಬಜೆಟ್ಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿರುತ್ತದೆ. ಜನಪರ ಘೋಷಣೆಗಳನ್ನು ಕೇಳಲು ಜನರ ಕಿವಿಗಳು ಹಾತೊರೆಯುತ್ತಿರುತ್ತವೆ. ಸದ್ಯ ಇದೇ ಬಜೆಟ್ ಕುತೂಹಲ, ನಿರೀಕ್ಷೆಗಳು ರಾಜ್ಯದಲ್ಲೂ ಗರಿಗೆದರಿವೆ. ಅದರಲ್ಲೂ ಬರಗಾಲ, ಗ್ಯಾರಂಟಿ ಹಾಗೂ ಕೇಂದ್ರದ ಅನುದಾನ ತಾರತಮ್ಯ ಹೋರಾಟದ ಬೆನ್ನಲ್ಲೇ ಈ ಬಾರಿಯ ರಾಜ್ಯ ಬಜೆಟ್ ಹಲವು ನಿರೀಕ್ಷೆ ಹುಟ್ಟು ಹಾಕಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಮಂಡನೆಯಾಗುತ್ತಿದ್ದು ಮತದಾರರ ಮನವೋಲೈಕೆಗೆ ಕಾಂಗ್ರೆಸ್ ಸರ್ಕಾರ ಮಹತ್ವದ ಘೋಷಣೆಗಳನ್ನ ಹೊರಡಿಸುನ ನಿರೀಕ್ಷೆಗಳಿವೆ. ಶುಭ ಶುಕ್ರವಾರದಂದು ಮಂಡನೆಯಾಗಲಿರುವ ಬಜೆಟ್ ರಾಜ್ಯದ ಜನತೆಗೆ ಶುಕ್ರದೆಸೆ ತರಲಿದೆ ಎಂಬ ಆಶಾಭಾವನೆ ಮೂಡಿದೆ.
ಬಜೆಟ್ 3.80 ಲಕ್ಷ ಕೋಟಿ ದಾಟುವ ನಿರೀಕ್ಷೆ
ಕರುನಾಡ ಜನತೆಗೆ ಭಾಗ್ಯಗಳ ಗೋಚಲನ್ನೇ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇಂದು 15ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ದಾಖಲೆಯನ್ನ ಬರೆಯಲಿದ್ದಾರೆ. ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಸಿಎಂ ಆಗಿ 7 ಬಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ಇಂದು ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಬಜೆಟ್ ಮಂಡಿಸಿ ರೆಕಾರ್ಡ್ ರಾಮಯ್ಯ ಆಗಿ ಹೊರಹೊಮ್ಮಲಿದ್ದಾರೆ.
ಸಿದ್ದು ಲೆಕ್ಕ!
ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಸರ್ಕಾರದ ಆದಾಯವೂ ಕುಂಠಿತವಾಗಿದೆ. ಅಲ್ಲದೇ ಕೇಂದ್ರ ಸರ್ಕಾರವೂ ಬರ ಪರಿಹಾರ ಸೇರಿದಂತೆ ರಾಜ್ಯದ ಅನುದಾನವನ್ನ ನೀಡದೇ ತಡೆಹಿಡಿದಿದೆ. ಇದ್ರಿಂದ ಸರ್ಕಾರದ ಇಲಾಖೆಗಳಿಗೆ ಅನುದಾನದ ಬಿಸಿ ತಟ್ಟುವ ಸಾಧ್ಯತೆ ಇದೆ.
‘ಅನುದಾನ’ ಅನುಮಾನ
ಗ್ಯಾರಂಟಿಗಳ ಅನುಷ್ಠಾನದ ನಡುವೆ ಉಳಿದ ಯೋಜನೆಗಳಿಗೆ ಹಣಕಾಸು ಹೊಂದಿಸುವುದು ಸವಾಲಾಗಿದೆ. ಈ ಮಧ್ಯೆ ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರ ಬಂಪರ್ ನೀಡುವ ಸಾಧ್ಯತೆ ಇದೆ.
ಬ್ರ್ಯಾಂಡ್ ಬೆಂಗಳೂರಿಗೇನು?
ಒಟ್ಟಾರೆ ಲೋಕಸಭೆ ಸಮರದ ಹೊತ್ತಲ್ಲಿ ರಾಜ್ಯ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳೇ ಮೂಡಿವೆ. ಜೊತೆಗೆ ಮೈಸೂರು ಕರ್ನಾಟಕ, ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಏನೆಲ್ಲಾ ಭರಪೂರ ಗಿಫ್ಟ್ ಸಿಗುತ್ತೆ ಅಂತ ರಾಜ್ಯದ ಜನ ಕಾತರದಿಂದ ಕಾಯ್ತಿದ್ದಾರೆ.. ಶುಭಶುಕ್ರವಾರದ ಬಜೆಟ್ ಯಾರಿಗೆಲ್ಲಾ ಶುಕ್ರದೆಸೆ ತರುತ್ತೆ ಅನ್ನೋದೇ ಕೌತುಕ.
ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯುರೋ, ನ್ಯೂಸ್ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
‘ಗ್ಯಾರಂಟಿ’ ಸರ್ಕಾರದಿಂದ ಯಾರಿಗೆಲ್ಲಾ ಸಿಹಿ, ಯಾರಿಗೆ ಕಹಿ?
ಇಂದು ಬೆಳಗ್ಗೆ 10.15ಕ್ಕೆ ಸಿದ್ದರಾಮಯ್ಯ ಬಜೆಟ್ ಮಂಡನೆ
ಬಹುತೇಕ ಇಲಾಖೆಗೆ ಹೆಚ್ಚುವರಿ ಅನುದಾನ ಅನುಮಾನ
ಕೇಂದ್ರ ಮಧ್ಯಂತರ ಬಜೆಟ್ ಮಂಡನೆ ಬೆನ್ನಲ್ಲೇ ಇಂದು ರಾಜ್ಯದ ಆಯವ್ಯಯ ಲೆಕ್ಕವನ್ನ ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಒಂದ್ಕಡೆ ಗ್ಯಾರಂಟಿ ಯೋಜನೆ, ಮತ್ತೊಂದೆಡೆ ಸಾಲದ ಹೊರೆ. ಈ ನಡುವೆ ಲೋಕ ಸಮರ ಹಿನ್ನೆಲೆ ಜನಪರ ಯೋಜನೆ ನೀಡಬೇಕಾದ ಸ್ಥಿತಿ ಇದ್ದು ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಇದೇ ವೇಳೆ ಸಿಎಂ ಬಜೆಟ್ ಮಂಡಿಸುವಲ್ಲಿ ದಾಖಲೆ ಬರೆಯಲಿದ್ದಾರೆ.
ಫೆಬ್ರವರಿ ಬಂದ್ರೆ ಸಾಕು ಬಜೆಟ್ಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿರುತ್ತದೆ. ಜನಪರ ಘೋಷಣೆಗಳನ್ನು ಕೇಳಲು ಜನರ ಕಿವಿಗಳು ಹಾತೊರೆಯುತ್ತಿರುತ್ತವೆ. ಸದ್ಯ ಇದೇ ಬಜೆಟ್ ಕುತೂಹಲ, ನಿರೀಕ್ಷೆಗಳು ರಾಜ್ಯದಲ್ಲೂ ಗರಿಗೆದರಿವೆ. ಅದರಲ್ಲೂ ಬರಗಾಲ, ಗ್ಯಾರಂಟಿ ಹಾಗೂ ಕೇಂದ್ರದ ಅನುದಾನ ತಾರತಮ್ಯ ಹೋರಾಟದ ಬೆನ್ನಲ್ಲೇ ಈ ಬಾರಿಯ ರಾಜ್ಯ ಬಜೆಟ್ ಹಲವು ನಿರೀಕ್ಷೆ ಹುಟ್ಟು ಹಾಕಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಹೊತ್ತಲ್ಲೇ ಬಜೆಟ್ ಮಂಡನೆಯಾಗುತ್ತಿದ್ದು ಮತದಾರರ ಮನವೋಲೈಕೆಗೆ ಕಾಂಗ್ರೆಸ್ ಸರ್ಕಾರ ಮಹತ್ವದ ಘೋಷಣೆಗಳನ್ನ ಹೊರಡಿಸುನ ನಿರೀಕ್ಷೆಗಳಿವೆ. ಶುಭ ಶುಕ್ರವಾರದಂದು ಮಂಡನೆಯಾಗಲಿರುವ ಬಜೆಟ್ ರಾಜ್ಯದ ಜನತೆಗೆ ಶುಕ್ರದೆಸೆ ತರಲಿದೆ ಎಂಬ ಆಶಾಭಾವನೆ ಮೂಡಿದೆ.
ಬಜೆಟ್ 3.80 ಲಕ್ಷ ಕೋಟಿ ದಾಟುವ ನಿರೀಕ್ಷೆ
ಕರುನಾಡ ಜನತೆಗೆ ಭಾಗ್ಯಗಳ ಗೋಚಲನ್ನೇ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇಂದು 15ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ದಾಖಲೆಯನ್ನ ಬರೆಯಲಿದ್ದಾರೆ. ಹಣಕಾಸು ಸಚಿವರಾಗಿ 7 ಬಾರಿ ಹಾಗೂ ಸಿಎಂ ಆಗಿ 7 ಬಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ಇಂದು ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಬಜೆಟ್ ಮಂಡಿಸಿ ರೆಕಾರ್ಡ್ ರಾಮಯ್ಯ ಆಗಿ ಹೊರಹೊಮ್ಮಲಿದ್ದಾರೆ.
ಸಿದ್ದು ಲೆಕ್ಕ!
ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಸರ್ಕಾರದ ಆದಾಯವೂ ಕುಂಠಿತವಾಗಿದೆ. ಅಲ್ಲದೇ ಕೇಂದ್ರ ಸರ್ಕಾರವೂ ಬರ ಪರಿಹಾರ ಸೇರಿದಂತೆ ರಾಜ್ಯದ ಅನುದಾನವನ್ನ ನೀಡದೇ ತಡೆಹಿಡಿದಿದೆ. ಇದ್ರಿಂದ ಸರ್ಕಾರದ ಇಲಾಖೆಗಳಿಗೆ ಅನುದಾನದ ಬಿಸಿ ತಟ್ಟುವ ಸಾಧ್ಯತೆ ಇದೆ.
‘ಅನುದಾನ’ ಅನುಮಾನ
ಗ್ಯಾರಂಟಿಗಳ ಅನುಷ್ಠಾನದ ನಡುವೆ ಉಳಿದ ಯೋಜನೆಗಳಿಗೆ ಹಣಕಾಸು ಹೊಂದಿಸುವುದು ಸವಾಲಾಗಿದೆ. ಈ ಮಧ್ಯೆ ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರ ಬಂಪರ್ ನೀಡುವ ಸಾಧ್ಯತೆ ಇದೆ.
ಬ್ರ್ಯಾಂಡ್ ಬೆಂಗಳೂರಿಗೇನು?
ಒಟ್ಟಾರೆ ಲೋಕಸಭೆ ಸಮರದ ಹೊತ್ತಲ್ಲಿ ರಾಜ್ಯ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳೇ ಮೂಡಿವೆ. ಜೊತೆಗೆ ಮೈಸೂರು ಕರ್ನಾಟಕ, ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಏನೆಲ್ಲಾ ಭರಪೂರ ಗಿಫ್ಟ್ ಸಿಗುತ್ತೆ ಅಂತ ರಾಜ್ಯದ ಜನ ಕಾತರದಿಂದ ಕಾಯ್ತಿದ್ದಾರೆ.. ಶುಭಶುಕ್ರವಾರದ ಬಜೆಟ್ ಯಾರಿಗೆಲ್ಲಾ ಶುಕ್ರದೆಸೆ ತರುತ್ತೆ ಅನ್ನೋದೇ ಕೌತುಕ.
ವಿಶೇಷ ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯುರೋ, ನ್ಯೂಸ್ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್