/newsfirstlive-kannada/media/post_attachments/wp-content/uploads/2024/08/SIDDARAMAIAH.jpg)
ಬೆಂಗಳೂರು: ಮುಡಾ ಪ್ರಕರಣದಲ್ಲಿ ಪತ್ನಿ ಅಕ್ರಮವಾಗಿ 14 ಸೈಟ್ ಪಡೆದಿರುವ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್​ ಅನುಮತಿ ನೀಡಿದ ಬೆನ್ನೆಲ್ಲೆ ಸಿದ್ದರಾಮಯ್ಯನವರ ಲೀಗಲ್ ಟೀಂ ಅಲರ್ಟ್ ಆಗಿದೆ.
ಇಂದು 12 ಗಂಟೆಗೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲು ಭರದ ಸಿದ್ಧತೆ ನಡೆಸಿದೆ ಸಿದ್ದರಾಮಯ್ಯನವರ ಕಾನೂನು ಪರಿಣಿತರ ತಂಡ. ರಾಜಕೀಯ ದುರುದ್ದೇಶದಿಂದ ಈ ಅನುಮತಿಯನ್ನು ನೀಡಲಾಗಿದೆ ಎನ್ನುವುದರ ಜೊತೆಗೆ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಸಜ್ಜಾಗಿದೆ.
ಸಿನಿಯರ್ ಪೊನ್ನಣ್ಣ ಅವರ ಕಚೇರಿಯಿಂದ ಅರ್ಜಿ ರೆಡಿಯಾಗಿದ್ದು ಪಿಸಿ ಆ್ಯಕ್ಟ್ ಸೆಕ್ಷನ್ 19ರ ಅಡಿ ನೀಡಿರುವ ಅನುಮತಿಯನ್ನು ರದ್ದುಕೋರಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಲಿದೆ. ಈಗಾಗಲೇ ಸಿದ್ದರಾಮಯ್ಯನವರ ಲೀಗಲ್ ಟೀಂ ಅರ್ಜಿ ರೆಡಿಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ