ಸಿದ್ದು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿಗೆ ಅಕ್ರಮಗಳೇ ಬ್ರಹ್ಮಾಸ್ತ್ರ
ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ
ಹೊರಗೆ ನಡೆಯುತ್ತಿದ್ದ ವಾಕ್ಸಮರ ಈಗ ಸದನದ ಒಳಗೆ ನಡೆಯುತ್ತದೆ
ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗ್ತಿದೆ. ಸರ್ಕಾರದ ವಿರುದ್ಧ 2 ಪ್ರಬಲ ಅಸ್ತ್ರಗಳು ವಿಪಕ್ಷಗಳ ಕೈಸೇರಿದ್ದು, ಸದನ ರಣರಂಗವಾಗಲಿದೆ. ಮೈತ್ರಿ ಪಡೆಗೆ ಹೆಚ್.ಡಿ ಕುಮಾರಸ್ವಾಮಿ, ಬೊಮ್ಮಾಯಿಯಂತ ಸದನಶೂರರ ಅನುಪಸ್ಥಿತಿ ಕಾಡಲಿದೆ. ಅಶೋಕ್, ವಿಜಯೇಂದ್ರ ಮೇಲೆ ಹೆಚ್ಚಿನ ಹೊಣೆ ಇದ್ದು, ಹೇಗೆ ನಿಭಾಯಿಸ್ತಾರೆ ಅನ್ನೋದು ಕುತೂಹಲ.
ಇದನ್ನೂ ಓದಿ: ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?
ಇಂದಿನಿಂದ 9 ದಿನಗಳ ಕಾಲ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಈ ಬಾರಿಯ ಅಧಿವೇಶನ ಕೇವಲ ಕಲಾಪವಾಗಿರುವುದಿಲ್ಲ. ಬದಲಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಗ್ಯುದ್ಧವಾಗಿದೆ. ಮಾತಿನ ಚಕಮಕಿ.. ಪರಸ್ಪರ ವಾಗ್ಬಾಣಗಳ ಪ್ರಯೋಗ. ವಿಧಾನಮಂಡಲದಲ್ಲಿ ಮಾತಿನ ಮಲ್ಲಯುದ್ಧವೇ ನಡೆಯಲಿದೆ.
ಇದನ್ನೂ ಓದಿ: ವಿಶ್ವ ದರ್ಜೆ ಬೌಲರ್ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!
ಮೈತ್ರಿ ಪಡೆ ಬತ್ತಳಿಕೆಯಲ್ಲಿ ವಾಲ್ಮೀಕಿ, ಮುಡಾ ಅಕ್ರಮ!
ವಾಲ್ಮೀಕಿ ಬಹುಕೋಟಿ ಹಗರಣ.. ಮುಡಾ ಅವ್ಯವಹಾರ, ಹೆಚ್ಚುತ್ತಿರುವ ಡೆಂಗ್ಯು ಪ್ರಕರಣ.. ಈ ಬಾರಿ ಸದನದಲ್ಲಿ ಕದನವಾಗಿ ಮಾರ್ಪಡಲಿವೆ.. ಇದೇ ಅಸ್ತ್ರಗಳನ್ನೇ ದೋಸ್ತಿಪಡೆ ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿವೆ.. ಇಂದಿನಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಯೋಗಿಸಲು ಸಜ್ಜಾಗಿವೆ.. ಲೋಕಸಭೆ ಚುನಾವಣೆ ಬಳಿಕ ನಡೀತಿರುವ ಮೊದಲ ಅಧಿವೇಶನ ಇದಾಗಿದ್ದು, ವಿಪಕ್ಷಗಳಿಗೂ ಫಲಿತಾಂಶ ಬಲ ನೀಡಿದೆ.. ಈವರೆಗೆ ಸದನದ ಹೊರಗೆ ನಡೀತಿದ್ದ ಹೋರಾಟ, ಈಗ ಸದನಕ್ಕೆ ವ್ಯಾಪಿಸಲಿದೆ..
ವಿಪಕ್ಷಗಳ ಬತ್ತಳಿಕೆಯಲ್ಲಿವೆ ದಶಾಸ್ತ್ರಗಳು!
ಅಸ್ತ್ರ 1: ಸರ್ಕಾರದ ವಿರುದ್ಧ ಮುಗಿಬೀಳಲು ಮುಡಾ ಅಕ್ರಮ ಬ್ರಹ್ಮಾಸ್ತ್ರ
ಅಸ್ತ್ರ 2: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಸದ್ದು- ಗದ್ದಲ
ಅಸ್ತ್ರ 3: ನಾಗೇಂದ್ರ ರಾಜೀನಾಮೆ, ಬಂಧನ ದದ್ದಲ್ಗೆ ಬಂಧನ ಭೀತಿ
ಅಸ್ತ್ರ 4: ಆದ್ರೆ ಸಿಎಂ ರಾಜೀನಾಮೆ, ತನಿಖೆ ಸಿಬಿಐಗೆ ಒಪ್ಪಿಸಲು ಆಗ್ರಹ
ಅಸ್ತ್ರ 5: ಬರ- ಬೆಳೆ ಹಾನಿಗೆ 14 ತಿಂಗಳಲ್ಲಿ 1,182 ರೈತರು ಆತ್ಮಹತ್ಯೆ
ಅಸ್ತ್ರ 6: ಪೂರ್ಣ ಪ್ರಮಾಣದಲ್ಲಿ ತಲುಪದ ಗ್ಯಾರಂಟಿ ಯೋಜನೆಗಳು
ಅಸ್ತ್ರ 7: ಗ್ಯಾರಂಟಿ ಕಾರಣ ಅಭಿವೃದ್ದಿ ಯೋಜನೆಗಳಿಗೆ ಸಿಗದ ಆದ್ಯತೆ
ಅಸ್ತ್ರ 8: ಗ್ಯಾರಂಟಿಗೆ ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹಣ ಬಳಕೆ ಪ್ರಶ್ನೆ
ಅಸ್ತ್ರ 9: ರಾಜ್ಯದಲ್ಲಿ ಪಾತಾಳಕ್ಕೆ ಕುಸಿದಿರುವ ಕಾನೂನು ಸುವ್ಯವಸ್ಥೆ
ಅಸ್ತ್ರ 10: ಡೆಂಘೀ, ಬೆಲೆ ಏರಿಕೆ, 7ನೇ ವೇತನ ಆಯೋಗ ವರದಿ ಜಾರಿ
ಕೇವಲ ವಿಪಕ್ಷಗಳ ಬಳಿ ಮಾತ್ರ ಅಸ್ತ್ರಗಳಿಲ್ಲ. ಇತ್ತ ಆಡಳಿತ ಪಕ್ಷದ ಬತ್ತಳಿಕೆಯಲ್ಲೂ ಪ್ರತ್ಯಾಸ್ತ್ರಗಳಿವೆ. ಬಿಜೆಪಿ ಆಡಳಿತಾವಧಿಯಲ್ಲಿನ ಲೋಪ-ದೋಷ ಮುಂದಿಟ್ಟು ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಮಾಡಿಕೊಂಡಿದೆ. ಅಲ್ಲದೆ ಚರ್ಚೆಗೆ ಸಮರ್ಪಕ ಉತ್ತರ ನೀಡಲು ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಮಾಹಿತಿ ಒದಗಿಸಬೇಕೆಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಮಾಡಿ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದು ಸಾವಿಗೆ ಶರಣಾದ ನಿವೃತ್ತ ASI.. ಸಾವಿಗೆ 2 ಕಾರಣಗಳು..!
ಮೊನ್ನೆ ಶುಕ್ರವಾರ ಸಮನ್ವಯ ಸಮಿತಿ ಸಭೆ ನಡೆಸಿದ್ದ ಮೈತ್ರಿ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.. ವಿಪಕ್ಷವಾಗಿ ಪ್ರಸ್ತಾಪಿಸಬೇಕಿರುವ ಎಲ್ಲ ವಿಷಯ ಪ್ರಸ್ತಾಪಿಸಿದ ಬಳಿಕವೇ ಪ್ರತಿಭಟನೆಗೆ ನಿರ್ಧರಿಸಿದೆ.. ಅಲ್ಲದೆ ಸದನದಲ್ಲಿ ಮುಡಾ ಅಕ್ರಮಕ್ಕೆ ಹೆಚ್ಚು ಒತ್ತು ನೀಡುವಂತೆ ಕೇಂದ್ರ ಸಚಿವ ಹೆಚ್.ಡಿ.ಕೆ ಸಲಹೆ ಕೊಟ್ಟಿದ್ದಾರಂತೆ..
ಇನ್ನು, ಇಂಟ್ರೆಸ್ಟಿಂಗ್ ಏನಂದ್ರೆ ಸಭಾ ನಾಯಕರಾಗಿ ಸಿದ್ದರಾಮಯ್ಯ ಕಲಾಪದಲ್ಲಿ ಭಾಗವಹಿಸಿದ್ರೆ ಪುತ್ರ ಡಾ.ಯತೀಂದ್ರ ಸದಸ್ಯರಾಗಿ ಪಾಲ್ಗೊಳ್ಳಲಿದ್ದಾರೆ. ಇತ್ತ ಮೇಲ್ಮನೆಯಲ್ಲಿ ಪೂಜಾರಿ ಲೋಕಸಭೆ ಪ್ರವೇಶದಿಂದ ಖಾಲಿಯಿರುವ ವಿಪಕ್ಷ ನಾಯಕ ಯಾರು ಅನ್ನೋ ತೀರ್ಮಾನ ಆಗಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿದ್ದು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳಿಗೆ ಅಕ್ರಮಗಳೇ ಬ್ರಹ್ಮಾಸ್ತ್ರ
ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ
ಹೊರಗೆ ನಡೆಯುತ್ತಿದ್ದ ವಾಕ್ಸಮರ ಈಗ ಸದನದ ಒಳಗೆ ನಡೆಯುತ್ತದೆ
ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗ್ತಿದೆ. ಸರ್ಕಾರದ ವಿರುದ್ಧ 2 ಪ್ರಬಲ ಅಸ್ತ್ರಗಳು ವಿಪಕ್ಷಗಳ ಕೈಸೇರಿದ್ದು, ಸದನ ರಣರಂಗವಾಗಲಿದೆ. ಮೈತ್ರಿ ಪಡೆಗೆ ಹೆಚ್.ಡಿ ಕುಮಾರಸ್ವಾಮಿ, ಬೊಮ್ಮಾಯಿಯಂತ ಸದನಶೂರರ ಅನುಪಸ್ಥಿತಿ ಕಾಡಲಿದೆ. ಅಶೋಕ್, ವಿಜಯೇಂದ್ರ ಮೇಲೆ ಹೆಚ್ಚಿನ ಹೊಣೆ ಇದ್ದು, ಹೇಗೆ ನಿಭಾಯಿಸ್ತಾರೆ ಅನ್ನೋದು ಕುತೂಹಲ.
ಇದನ್ನೂ ಓದಿ: ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?
ಇಂದಿನಿಂದ 9 ದಿನಗಳ ಕಾಲ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಈ ಬಾರಿಯ ಅಧಿವೇಶನ ಕೇವಲ ಕಲಾಪವಾಗಿರುವುದಿಲ್ಲ. ಬದಲಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಗ್ಯುದ್ಧವಾಗಿದೆ. ಮಾತಿನ ಚಕಮಕಿ.. ಪರಸ್ಪರ ವಾಗ್ಬಾಣಗಳ ಪ್ರಯೋಗ. ವಿಧಾನಮಂಡಲದಲ್ಲಿ ಮಾತಿನ ಮಲ್ಲಯುದ್ಧವೇ ನಡೆಯಲಿದೆ.
ಇದನ್ನೂ ಓದಿ: ವಿಶ್ವ ದರ್ಜೆ ಬೌಲರ್ಗೆ ಕಾಡಿತ್ತು ಕೊಹ್ಲಿಯಿಂದ ಕೀಳರಿಮೆ -ನಿವೃತ್ತಿ ವೇಳೆ ಸತ್ಯ ಬಿಚ್ಚಿಟ್ಟ ಲೆಜೆಂಡ್..!
ಮೈತ್ರಿ ಪಡೆ ಬತ್ತಳಿಕೆಯಲ್ಲಿ ವಾಲ್ಮೀಕಿ, ಮುಡಾ ಅಕ್ರಮ!
ವಾಲ್ಮೀಕಿ ಬಹುಕೋಟಿ ಹಗರಣ.. ಮುಡಾ ಅವ್ಯವಹಾರ, ಹೆಚ್ಚುತ್ತಿರುವ ಡೆಂಗ್ಯು ಪ್ರಕರಣ.. ಈ ಬಾರಿ ಸದನದಲ್ಲಿ ಕದನವಾಗಿ ಮಾರ್ಪಡಲಿವೆ.. ಇದೇ ಅಸ್ತ್ರಗಳನ್ನೇ ದೋಸ್ತಿಪಡೆ ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿವೆ.. ಇಂದಿನಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಯೋಗಿಸಲು ಸಜ್ಜಾಗಿವೆ.. ಲೋಕಸಭೆ ಚುನಾವಣೆ ಬಳಿಕ ನಡೀತಿರುವ ಮೊದಲ ಅಧಿವೇಶನ ಇದಾಗಿದ್ದು, ವಿಪಕ್ಷಗಳಿಗೂ ಫಲಿತಾಂಶ ಬಲ ನೀಡಿದೆ.. ಈವರೆಗೆ ಸದನದ ಹೊರಗೆ ನಡೀತಿದ್ದ ಹೋರಾಟ, ಈಗ ಸದನಕ್ಕೆ ವ್ಯಾಪಿಸಲಿದೆ..
ವಿಪಕ್ಷಗಳ ಬತ್ತಳಿಕೆಯಲ್ಲಿವೆ ದಶಾಸ್ತ್ರಗಳು!
ಅಸ್ತ್ರ 1: ಸರ್ಕಾರದ ವಿರುದ್ಧ ಮುಗಿಬೀಳಲು ಮುಡಾ ಅಕ್ರಮ ಬ್ರಹ್ಮಾಸ್ತ್ರ
ಅಸ್ತ್ರ 2: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಸದ್ದು- ಗದ್ದಲ
ಅಸ್ತ್ರ 3: ನಾಗೇಂದ್ರ ರಾಜೀನಾಮೆ, ಬಂಧನ ದದ್ದಲ್ಗೆ ಬಂಧನ ಭೀತಿ
ಅಸ್ತ್ರ 4: ಆದ್ರೆ ಸಿಎಂ ರಾಜೀನಾಮೆ, ತನಿಖೆ ಸಿಬಿಐಗೆ ಒಪ್ಪಿಸಲು ಆಗ್ರಹ
ಅಸ್ತ್ರ 5: ಬರ- ಬೆಳೆ ಹಾನಿಗೆ 14 ತಿಂಗಳಲ್ಲಿ 1,182 ರೈತರು ಆತ್ಮಹತ್ಯೆ
ಅಸ್ತ್ರ 6: ಪೂರ್ಣ ಪ್ರಮಾಣದಲ್ಲಿ ತಲುಪದ ಗ್ಯಾರಂಟಿ ಯೋಜನೆಗಳು
ಅಸ್ತ್ರ 7: ಗ್ಯಾರಂಟಿ ಕಾರಣ ಅಭಿವೃದ್ದಿ ಯೋಜನೆಗಳಿಗೆ ಸಿಗದ ಆದ್ಯತೆ
ಅಸ್ತ್ರ 8: ಗ್ಯಾರಂಟಿಗೆ ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹಣ ಬಳಕೆ ಪ್ರಶ್ನೆ
ಅಸ್ತ್ರ 9: ರಾಜ್ಯದಲ್ಲಿ ಪಾತಾಳಕ್ಕೆ ಕುಸಿದಿರುವ ಕಾನೂನು ಸುವ್ಯವಸ್ಥೆ
ಅಸ್ತ್ರ 10: ಡೆಂಘೀ, ಬೆಲೆ ಏರಿಕೆ, 7ನೇ ವೇತನ ಆಯೋಗ ವರದಿ ಜಾರಿ
ಕೇವಲ ವಿಪಕ್ಷಗಳ ಬಳಿ ಮಾತ್ರ ಅಸ್ತ್ರಗಳಿಲ್ಲ. ಇತ್ತ ಆಡಳಿತ ಪಕ್ಷದ ಬತ್ತಳಿಕೆಯಲ್ಲೂ ಪ್ರತ್ಯಾಸ್ತ್ರಗಳಿವೆ. ಬಿಜೆಪಿ ಆಡಳಿತಾವಧಿಯಲ್ಲಿನ ಲೋಪ-ದೋಷ ಮುಂದಿಟ್ಟು ವಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಮಾಡಿಕೊಂಡಿದೆ. ಅಲ್ಲದೆ ಚರ್ಚೆಗೆ ಸಮರ್ಪಕ ಉತ್ತರ ನೀಡಲು ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಮಾಹಿತಿ ಒದಗಿಸಬೇಕೆಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಮಾಡಿ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದು ಸಾವಿಗೆ ಶರಣಾದ ನಿವೃತ್ತ ASI.. ಸಾವಿಗೆ 2 ಕಾರಣಗಳು..!
ಮೊನ್ನೆ ಶುಕ್ರವಾರ ಸಮನ್ವಯ ಸಮಿತಿ ಸಭೆ ನಡೆಸಿದ್ದ ಮೈತ್ರಿ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.. ವಿಪಕ್ಷವಾಗಿ ಪ್ರಸ್ತಾಪಿಸಬೇಕಿರುವ ಎಲ್ಲ ವಿಷಯ ಪ್ರಸ್ತಾಪಿಸಿದ ಬಳಿಕವೇ ಪ್ರತಿಭಟನೆಗೆ ನಿರ್ಧರಿಸಿದೆ.. ಅಲ್ಲದೆ ಸದನದಲ್ಲಿ ಮುಡಾ ಅಕ್ರಮಕ್ಕೆ ಹೆಚ್ಚು ಒತ್ತು ನೀಡುವಂತೆ ಕೇಂದ್ರ ಸಚಿವ ಹೆಚ್.ಡಿ.ಕೆ ಸಲಹೆ ಕೊಟ್ಟಿದ್ದಾರಂತೆ..
ಇನ್ನು, ಇಂಟ್ರೆಸ್ಟಿಂಗ್ ಏನಂದ್ರೆ ಸಭಾ ನಾಯಕರಾಗಿ ಸಿದ್ದರಾಮಯ್ಯ ಕಲಾಪದಲ್ಲಿ ಭಾಗವಹಿಸಿದ್ರೆ ಪುತ್ರ ಡಾ.ಯತೀಂದ್ರ ಸದಸ್ಯರಾಗಿ ಪಾಲ್ಗೊಳ್ಳಲಿದ್ದಾರೆ. ಇತ್ತ ಮೇಲ್ಮನೆಯಲ್ಲಿ ಪೂಜಾರಿ ಲೋಕಸಭೆ ಪ್ರವೇಶದಿಂದ ಖಾಲಿಯಿರುವ ವಿಪಕ್ಷ ನಾಯಕ ಯಾರು ಅನ್ನೋ ತೀರ್ಮಾನ ಆಗಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ