ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ.. ಮೈಕ್ರೋ ಫೈನಾನ್ಸ್ ಚೆಲ್ಲಾಟಕ್ಕೆ ಏನೇನು ಆಗ್ತಿದೆ..?

author-image
Ganesh
Updated On
ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ.. ಮೈಕ್ರೋ ಫೈನಾನ್ಸ್ ಚೆಲ್ಲಾಟಕ್ಕೆ ಏನೇನು ಆಗ್ತಿದೆ..?
Advertisment
  • ನೆಂಟರಿಗಾಗಿ ಸಾಲ ತೆಗೆದುಕೊಟ್ಟು ಊರ ಬಿಟ್ಟ ಮಹಿಳೆ
  • ಕುಟುಂಬ ಬಿಟ್ಟು ಸಲೂನ್ ಮಾರಿ ಊರು ತೊರೆದ ಕ್ಷೌರಿಕ
  • ಮಗನ ಉಳಿಸಲು ಸಾಲ ಮಾಡಿದ್ದ ತಾಯಿ ಕೊರಳಲ್ಲಿ ಅರಿಶಿಣ ಕೊಂಬು

ಮೈಕ್ರೋ ಫೈನಾನ್ಸ್.. ಇವರೇ ಬರೋದು. ಹೇ.. ಡೋಂಟ್​ ವರಿ. ನಾವ್ ನಿಮ್ಮ ಕಷ್ಟಕ್ಕೆ ಆಗ್ತೀವಿ. ನಿಮಗೆ​ ಸಾಲ ಕೊಡ್ತೀವಿ ಅಂತಾ ಬಲವಂತವಾಗಿ ಸಾಲ ಕೊಡೋದು.. ಮತ್ತೆ ಸಾಲವನ್ನ ಹಿಂದಿರುಗಿಸಿ ಅಂತಾ ರೌಡಿಗಳಂತೆ ವರ್ತಿಸೋದು. ಪಾಪ ಜನ ಇವರ ಕಾಟ ತಾಳಲಾರದೆ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ದುರಂತಗಳೇ ನಡೆದು ಹೋಗುತ್ತಿದೆ.

ಎಲ್ಲೆಲ್ಲಿ ದೌರ್ಜನ್ಯ?

  • ಹಾವೇರಿ ಜಿಲ್ಲೆಯ ಹಾನಗಲ್‌ನ ಕೊಪ್ಪರಸಿಕೊಪ್ಪದಲ್ಲಿ ಮೈಕ್ರೋಫೈನಾನ್ಸ್‌ ಸಿಬ್ಬಂದಿ ಕಿರುಕುಳ ತಡೆಯಲಾಗದೇ ಸಾವಿತ್ರಮ್ಮ ಎಂಬ ಮಹಿಳೆ ಊರನ್ನೇ ತೊರೆದಿದ್ದಾಳೆ. ಇವರು ತಮ್ಮ ನೆಂಟರಿಗಾಗಿ ಮೈಕ್ರೋ ಫೈನಾನ್ಸ್​ನಿಂದ ಸಾಲ ಮಾಡಿಕೊಟ್ಟಿದ್ದರು. ಆದರೆ ಅವರು, ಸರಿಯಾಗಿ ಕಟ್ಟದ ಹಿನ್ನೆಲೆಯಲ್ಲಿ ಫೈನಾನ್ಸ್​ ಸಂಸ್ಥೆಯ ಸಿಬ್ಬಂದಿ ಮನಗೆ ಬಂದು ಕಿರುಕುಳ ನೀಡಲು ಶುರುಮಾಡಿದ್ದಾರೆ. ಇದರಿಂದ ನೊಂದು ಊರನ್ನೇ ಬಿಟ್ಟಿದ್ದಾರೆ.
  •  ಸಲೂನ್ ಮಾರಿ ಊರು ತೊರೆದ ಕ್ಷೌರಿಕ: ತಂದೆ ಮಗ ಎನ್.ಟಿ. ರಸ್ತೆಯಲ್ಲಿ 2 ವರ್ಷದ ಹಿಂದೆ ಮಾಸ್ಟರ್ ಕಟ್ ಸಲೂನ್ ಹೆಸರಿನ ಅಂಗಡಿ ತೆರೆದಿದ್ದರು. ಅಂಗಡಿಗೆ ಸ್ವಲ್ಪ ಸಾಲ ಮಾಡಿಕೊಂಡಿದ್ದ ಮಗ ಶ್ರೀನಿವಾಸ್ ಸಾಲ ತೀರಿಸಲು ಬಳಿ ಸಾಲ ಮಾಡಿದ್ದ ಬಳಿಕ ದಿನ ದುಡಿದರೂ ಬಡ್ಡಿ ಕಟ್ಟಲಾಗದೆ ಬಡ್ಡಿ ಮಾಫಿಯಾದ ಕಿರುಕುಳಕ್ಕೆ ಒಳಗಾಗಿದ್ದ. ಇತ್ತೀಚೆಗೆ ಫೈನಾನ್ಸ್ ಸಿಬ್ಬಂದಿ ಸಾಲ ಕಟ್ಟುವಂತೆ ಒತ್ತಡ ಹಾಕುತ್ತಿದ್ದರು. ಫೈನಾನ್ಸ್ ಅವರ ಕಿರುಕುಳಕ್ಕೆ ಬೆದರಿ 6 ತಿಂಗಳ ಹಿಂದೆ ತನ್ನ ಅಂಗಡಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಪತ್ನಿ, ಮಕ್ಕಳು, ವಯೋವೃದ್ಧ ತಂದೆ- ತಾಯಿಯನ್ನು ತೊರೆದು ಊರು ಬಿಟ್ಟಿದ್ದಾನೆ. ಮಗ ಮಾರಿದ ಸಲೂನ್‌ನಲ್ಲಿ ಅಪ್ಪ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.
  • ಬಾಣಂತಿ, ಹಸುಗೂಸು ಹೊರಹಾಕಿ ದೌರ್ಜನ್ಯ.. ಸಾಲ ವಸೂಲಾತಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ 1 ತಿಂಗಳ ಹಸುಗೂಸನ್ನು ಲೆಕ್ಕಿಸದೇ ಮನೆಯಿಂದ ಎಲ್ಲರನ್ನೂ ಹೊರಗೆ ಹಾಕಿ ಮನೆ ಜಪ್ತಿ ಮಾಡಿದ ಅಮಾನವೀಯ ಘಟನೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ತಾರಿಹಾಳದಲ್ಲಿ ನಡೆದಿದೆ. ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಫೈನಾನ್ಸ್ ಸಿಬ್ಬಂದಿ, ಮನೆಯಲ್ಲಿದ್ದ ಎಲ್ಲ ಸದಸ್ಯರನ್ನು ಹೊರಹಾಕಿದರು. ತಾರಿಹಾಳದ ಗಣಪತಿ ರಾಮಚಂದ್ರ ಲೋಹಾರ ಎಂಬುವರ ಮನೆಯನ್ನು ಜಪ್ತಿ ಮಾಡಲಾಗಿದೆ. 5 ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ ಫೈನಾನ್ಸ್​ನಿಂದ 25 ಲಕ್ಷ ಸಾಲ ಪಡೆದಿದರು. 3 ವರ್ಷ ಸರಿಯಾಗಿ ಕಂತನ್ನು ಕಟ್ಟಿದರು. ತಾಯಿಗೆ ಅನಾರೋಗ್ಯ ಮತ್ತು ಮಗಳ ಹೆರಿಗೆಯಾದ ಹಿನ್ನೆಲೆಯಲ್ಲಿ 6 ತಿಂಗಳಿಂದ ಸಾಲದ ಕಂತು ಮರುಪಾವತಿಸಲು ಸಾಧ್ಯವಾಗಿರಲಿಲ್ಲ.
  • ಅಲ್ಲೇ ಜೀವ ಬಿಟ್ಟ: ಯಾದಗಿರಿಯಲ್ಲಿ ಸಾಲ ಪಡೆದಿದ್ದ ಯುವಕನ ಮೇಲೆ ಮೀಟರ್‌ಬಡ್ಡಿ ದಂಧೆಕೋರನಿಂದ ದಾಳಿ ಮಾಡಿದ್ದಾರೆ. ದಾಳಿಯ ತೀವ್ರತೆಗೆ ಖಾಸಿಂ ಎಂಬ ಯುವಕ ಜೀವ ಕಳೆದುಕೊಂಡಿದ್ದಾನೆ. ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.
  • ತಾಳಿ ಹಿಡಿದು ಪ್ರತಿಭಟನೆ: ಬೆಳಗಾವಿಯಲ್ಲಿ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ತಾಳಿ ಹಿಡಿದು ಮಹಿಳೆಯರಿಂದ ಪ್ರತಿಭಟನೆ. ಕ್ರಮಕ್ಕೆ ಆಗ್ರಹಿಸಿದ್ದಾರೆ.
  • ಅರಿಶಿಣದ ಕೊಂಬು: ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತು ಸಿಎಂ ಸಿದ್ದರಾಮಯ್ಯಗೆ ಮಾಂಗಲ್ಯ ಪೋಸ್ಟ್ ಮಾಡಿದ್ದ ರಾಣೆಬೆನ್ನೂರಿನ ಶೈಲಾ ಎಂಬುವರು ಕೊರಳಲ್ಲಿ ತಾಳಿ ಬದಲು ಅರಿಶಿಣ ಕೊಂಬು ಕಟ್ಟಿಕೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಮಗನ ಬದುಕಿಸಿಕೊಳ್ಳಲು ಲಕ್ಷಗಟ್ಟಲೇ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment