ನಮಸ್ತೆ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ.. ಬೆಂಗಳೂರಿನಲ್ಲೇ ಕೆಲಸ

author-image
Bheemappa
Updated On
ನಮಸ್ತೆ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ.. ಬೆಂಗಳೂರಿನಲ್ಲೇ ಕೆಲಸ
Advertisment
  • ಕರ್ನಾಟಕ ಮುನ್ಸಿಪಲ್ ಆಡಳಿತದ ಅಡಿ ಉದ್ಯೋಗಗಳು
  • ಈ ಉದ್ಯೋಗಗಳಿಗೆ ಮಾಸಿಕ ಸಂಬಳ ಎಷ್ಟು ನೀಡುತ್ತಾರೆ?
  • 35 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಇದೊಂದು ಅವಕಾಶ

ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆ ಅಡಿ ಕರ್ನಾಟಕ ಮುನ್ಸಿಪಲ್ ಆಡಳಿತ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಅರ್ಜಿಗಳನ್ನು ಆಹ್ವಾನ ನೀಡಲಾಗಿತ್ತು. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು ಆಸಕ್ತಿ ಇರುವ, ಅರ್ಹರು ಸಂಜೆ ಒಳಗೆ ಅಪ್ಲೇ ಮಾಡಬಹುದು.

ಕರ್ನಾಟಕ ಮುನ್ಸಿಪಲ್ ಆಡಳಿತ ಹುದ್ದೆಗಳಿಗಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿ ಮಾಹಿತಿ ನೀಡಿತ್ತು. ಸಿಲಿಕಾನ್ ಸಿಟಿಯಲ್ಲಿ ಕೆಲಸ ಮಾಡಲು ಇಷ್ಟ ಇರುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಹೀಗಾಗಿ ಯಾರು ಇಲ್ಲಿವರೆ ಅಪ್ಲೇ ಮಾಡಿಲ್ಲವೋ ಅವರಿಗೆ ಇದು ಕೊನೆ ದಿನ. ಈ ಉದ್ಯೋಗಗಳಿಗೆ ಅರ್ಜಿಯನ್ನು ಆಫ್​ಲೈನ್ ಮೂಲಕ ಸಲ್ಲಿಸಬೇಕಾಗಿದೆ.

ವಿದ್ಯಾರ್ಹತೆ

ಪದವಿ ಅಥವಾ ಸ್ನಾತಕೋತ್ತರ ಪದವಿ
ಎನ್​ಜಿಒನಲ್ಲಿ ಕೆಲಸದ ಅನುಭವ ಇರಬೇಕು
ಬೇಸಿಕ್ ಕಂಪ್ಯೂಟರ್ ಜ್ಞಾನ
ಕನ್ನಡ, ಇಂಗ್ಲಿಷ್​ ಬಗ್ಗೆ ಅರಿವು

ವಯಸ್ಸಿನ ಮಿತಿ
21 ರಿಂದ 35 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು

ಸ್ಯಾಲರಿ ಎಷ್ಟು ಇದೆ?
ತಿಂಗಳಿಗೆ- 45,000 ರೂಪಾಯಿ

ಇದನ್ನೂ ಓದಿ:ಬ್ಯಾಂಕ್​​ನಿಂದ ಗುಡ್​ನ್ಯೂಸ್​; ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು.. ನಾಳೆ ಅರ್ಜಿ ಆರಂಭ

publive-image

ಇಲಾಖೆಯ ಹೆಸರು- Karnataka Municipal Administration
02 ಹುದ್ದೆಗಳು ಖಾಲಿ ಇವೆ

ಉದ್ಯೋಗದ ಹೆಸರು- ರಾಜ್ಯ ನಮಸ್ತೆ ಸಂಯೋಜಕರು

ಬೆಂಗಳೂರಿನಲ್ಲೇ ಕೆಲಸ ಇರಲಿದೆ.

ಅರ್ಜಿಯ ಪ್ರತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ಮೇಲೆ ಎಲ್ಲ ದಾಖಲೆಗಳನ್ನು ಲಗತ್ತಿಸಿ ಸೆಲ್ಫ್ ಅಟೆಸ್ಟೆಡ್ ಮಾಡಿದ ನಂತರ ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.

ವಿಳಾಸ-

State Mission Director (SMD)-SBM (U),
Directorate of Swachh Bharath Mission (Urban),
Bengaluru, 09th Floor, V.V. Tower,
Dr. Ambedkar Veedhi, Bengaluru-560001

ಅಪ್ಲಿಕೇಶನ್ ಇಲ್ಲಿಂದ ಡೌನ್​​ಲೋಡ್ ಮಾಡಬೇಕು
http://municipaladmn.gov.in/en/recruitment

ಕೊನೆ ದಿನಾಂಕ
21 ನವೆಂಬರ್ 2024 (ಇಂದು ಕಡೆಯ ದಿನ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment