ಗುರುಪ್ರಸಾದ್​ ಕೇಸ್​; ಪೊಲೀಸ್ರ ಆರಂಭಿಕ ತನಿಖೆಯಲ್ಲೇ ಸ್ಫೋಟಕ ಸತ್ಯ ಬಯಲು

author-image
Ganesh Nachikethu
Updated On
ಗುರುಪ್ರಸಾದ್​ ಕೇಸ್​; ಪೊಲೀಸ್ರ ಆರಂಭಿಕ ತನಿಖೆಯಲ್ಲೇ ಸ್ಫೋಟಕ ಸತ್ಯ ಬಯಲು
Advertisment
  • ಸ್ಟಾರ್​​ ಡೈರೆಕ್ಟರ್​ ಕೇಸ್​​ ತನಿಖೆ ಚುರುಕುಗೊಳಿಸಿದ ಪೊಲೀಸರು
  • ಗುರು ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಯೇ ಸಾವು..!
  • 72 ತಾಸಿಗೂ ಮುನ್ನ ಸಾವನ್ನಪ್ಪಿರೋದು ವರದಿಯಲ್ಲಿ ಬೆಳಕಿಗೆ

ಬೆಂಗಳೂರು: ಕನ್ನಡಕ್ಕೆ ಹತ್ತು ಹಲವು ಸಿನಿಮಾಗಳನ್ನ ನೀಡಿದ್ದ ಸ್ಟಾರ್​​ ಡೈರೆಕ್ಟರ್​ ಗುರು ದುರಂತ ನಾಯಕನಾಗಿ ಅಂತ್ಯ ಕಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರೋ ಕುರಿತು ದೃಢವಾಗಿದೆ. 72 ತಾಸಿಗೂ ಮುನ್ನಾ ಅವರು ಸಾವಿಗೀಡಾಗಿರೋದಾಗಿಯೂ ಮಾಹಿತಿ ಬಯಲಾಗಿದೆ. ಇನ್ನೊಂದ್ಕಡೆ ಹೆಚ್ಚಿನ ತನಿಖೆಗೆ ಮುಂದಾಗಿರೋ ಪೊಲೀಸರು ಗುರುಪ್ರಸಾದ್‌ ಬಳಸ್ತಾ ಇದ್ದ ಟ್ಯಾಬ್, ಪೋ‌ನ್ FSL​ಗೆ ರವಾನಿಸಲಾಗಿದ್ದು, ಇಡೀ ಫ್ಲ್ಯಾಟ್​ ಶೋಧ ಕಾರ್ಯ ಮಾಡಲಾಗಿದೆ.

‘ಗುರುಪ್ರಸಾದ್’ ಮಠ, ಎದ್ದೇಳು ಮಂಜುನಾಥ್ ಅನ್ನೋ ಹಿಟ್​​ ಸಿನಿಮಾಗಳನ್ನ ಕನ್ನಡಕ್ಕೆ ಕೊಟ್ಟ ಸ್ಟಾರ್​ ಡೈರೆಕ್ಟರ್. ಬಾರದ ಲೋಕಕ್ಕೆ ತೆರಳಿ ತಮ್ಮ ಜೀವನದ ಕಥೆಗೆ ತಾವೇ ಅಂತ್ಯ ಹಾಡಿದ್ರು. ಆದ್ರೆ ಪತಿ ಸಾವಿನ ಬಗ್ಗೆ ಎರಡನೇ ಪತ್ನಿ ಅನುಮಾನ ವ್ಯಕ್ತಪಡಿಸಿದ್ದು, ‘ನನ್ನ ಪತಿ ಸಾಲ ಮಾಡಿಕೊಂಡಿದ್ರು ನಿಜ. ಆದ್ರೆ ಸಾಲಕ್ಕೆ ಹೆದರುವವರಲ್ಲ ಅಂತ ಮಾದನಾಯಕನಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಿ, ಸೂಕ್ತ ತನಿಖೆ ಮಾಡುವಂತೆ ಆಗ್ರಹಿಸಿದ್ರು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ.

72 ತಾಸಿಗೂ ಮುನ್ನ ಸಾವನ್ನಪ್ಪಿರೋದು ವರದಿಯಲ್ಲಿ ಬೆಳಕಿಗೆ

ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಗುರುಪ್ರಸಾದ್​ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಯೇ ಸಾವನ್ನಪ್ಪಿರುವುದಾಗಿ ದೃಢವಾಗಿದೆ. ಹಾಗೆಯೇ ಅವರು ಸಾವನ್ನಪ್ಪಿ 72 ತಾಸು ಕಳೆದಿರೋದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಇದೇ ಮಾಹಿತಿ ಮೇರೆಗೆ ಗುರುಪ್ರಸಾದ್​​ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂದು ತನಿಖೆ ಮುಂದುವರಿಸಿರೋ ಪೊಲೀಸರು ನಟನ ಟ್ಯಾಬ್, ಪೋ‌ನ್ FSL​ಗೆ ರವಾನಿಸಿದ್ದಾರೆ. ಅಲ್ಲದೆ ಇವ್ರು ಆತ್ಮಹತ್ಯೆ ಮಾಡ್ಕೊಂಡಿದ್ದ ಇಡೀ ಫ್ಲ್ಯಾಟ್​ ಶೋಧ ನಡೆಸಿದ್ದಾರೆ.

ಆತ್ಮಹತ್ಯೆ ತನಿಖೆ ಚುರುಕು

ದೇಹದಲ್ಲಿ ಸೇರಿರುವ ರಾಸಾಯನಿಕ ವಸ್ತುವನ್ನ ಎಫ್​ಎಸ್​ಎಲ್​ಗೆ ರವಾನಿಸಲಾಗಿದೆ. ಸಾವಿಗೂ ಮುನ್ನ ಡೆತ್​ ನೋಟ್ ಬರೆದಿರಬಹುದಾ? ಅನ್ನೊ ಶಂಕೆ ಹಿನ್ನೆಲೆ ಗುರುಪ್ರಸಾದ್ ಇದ್ದ ಇಡೀ ಫ್ಲ್ಯಾಟ್​ನಲ್ಲಿ ಡೆತ್ ನೋಟ್​ಗಾಗಿ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ, ಈ ವೇಳೆ ಪೊಲೀಸರಿಗೆ ಫ್ಲ್ಯಾಟ್​ನಲ್ಲಿ ಯಾವ ಪತ್ರ, ಡೆತ್​ನೋಟ್ ಕೂಡ ಸಿಕ್ಕಿಲ್ಲ. ಬದಲಾಗಿ ಫ್ಲ್ಯಾಟ್​ನಲ್ಲಿ 4 ಮೊಬೈಲ್, 2 ಟ್ಯಾಬ್, ಒಂದು ಲ್ಯಾಪ್‌ಟಾಪ್ ಪತ್ತೆಯಾಗಿದೆ. 4 ದಿನಗಳಿಂದ ಚಾರ್ಜ್ ಮಾಡದ ಹಿನ್ನೆಲೆ ಮೊಬೈಲ್ ಸ್ವಿಚ್ ಆಫ್​ ರೀತಿಯಲ್ಲಿ ಸಿಕ್ಕಿದ್ದು, ಗುರುಪ್ರಸಾದ್ ಪೋನ್​, ಟ್ಯಾಬ್​ ರಿಟ್ರೀವ್​ಗೆ ಪೊಲೀಸರು ಮುಂದಾಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯ CDR ಮಾಹಿತಿ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಕಳೆದೊಂದು‌ ತಿಂಗಳಿನಿಂದ ಹೆಚ್ಚೆಚ್ಚು ಯಾರ ಬಳಿ ಮಾತನಾಡಿದ್ದಾರೆ? ಗೂಗಲ್ ಪೇ ಮತ್ತು ಪೋನ್‌ ಪೇನಲ್ಲಿ ಹಣ ಕಳುಹಿಸಿದ್ದರ ಬಗ್ಗೆಯೂ ತನಿಖೆ ನಡೆಸಿದ್ದಾರೆ. ಗುರು ಪ್ರಸಾದ್​ಗೆ ಆರ್ಥಿಕ ಸಮಸ್ಯೆ ಇತ್ತು. ಅಲ್ದೆ 3 ಕೋಟಿ ರೂಪಾಯಿ ಸಾಲ ಇರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಹಣ ಕೊಟ್ಟವರ ಒತ್ತಡ ಇತ್ತಾ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆ.

ಗುರುಪ್ರಸಾದ್‌ ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಆದ್ರೆ ಸೂಸೈಡ್​​ ಮಾಡ್ಕೊಳ್ಳೋದಕ್ಕೆ ಅಸಲಿ ಕಾರಣಗಳೇನು? ಅನ್ನೋದು ಪೊಲೀಸರ ತನಿಖೆ ಬಳಿಕವಷ್ಟೇ ಹೊರಬರಬೇಕಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾ ಪ್ರವಾಸದ ನಂತರ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ; ಇಬ್ಬರಿಗೆ ಗೇಟ್​​ಪಾಸ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment