ಕಾಲ್ತುಳಿತ ಪ್ರಕರಣ.. ಕೆಎಸ್​ಸಿಎ ತುರ್ತು ಸಭೆಯಲ್ಲಿ ನಡೆದಿದ್ದು ಏನು..? Video

author-image
Ganesh
Updated On
ಕಾಲ್ತುಳಿತ ಪ್ರಕರಣ.. ಕೆಎಸ್​ಸಿಎ ತುರ್ತು ಸಭೆಯಲ್ಲಿ ನಡೆದಿದ್ದು ಏನು..? Video
Advertisment
  • KSCA ಕಾರ್ಯದರ್ಶಿ, ಖಚಾಂಜಿ ರಾಜೀನಾಮೆ ಸ್ವೀಕಾರ
  • ತನಿಖೆಗೆ ಸಂಪೂರ್ಣ ಸಹಕಾರ ನೀಡಲು KSCA ನಿರ್ಧಾರ
  • ಸಭೆ ಬಳಿಕ KSCA ಅಧ್ಯಕ್ಷರು ಹೇಳಿದ್ದೇನು..?

ಬೆಂಗಳೂರು: ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತ ಪ್ರಕರಣ ಸಂಬಂಧ ಇವತ್ತು ಕೆಎಸ್​ಸಿಎ (The Karnataka State Cricket Association) ತುರ್ತು ಸಭೆ ನಡೆಸಿತು. ಮ್ಯಾನೇಜಿಂಗ್ ಕಮೀಟಿ ಮೀಟಿಂಗ್​ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ.

ಪ್ರಮುಖವಾಗಿ KSCAನ ಕಾರ್ಯದರ್ಶಿ ಎ.ಶಂಕರ್, ಖಜಾಂಚಿ E.S ಜೈರಾಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರು ಅಧಿಕಾರಿಗಳ ರಾಜೀನಾಮೆಯನ್ನು ಸಭೆಯಲ್ಲಿ ಒಮ್ಮತದಿಂದ ಸ್ವೀಕರಿಸಲಾಗಿದೆ.

ಜೊತೆಗೆ ಹಂಗಾಮಿ ಕಾರ್ಯದರ್ಶಿ ಹಾಗೂ ಖಜಾಂಚಿ ಆಯ್ಕೆ ಸಂಬಂಧ ಚರ್ಚೆ ನಡೆದಿದೆ. ಇಬ್ಬರು ಆಡಳಿತ ಅಧಿಕಾರಿಯನ್ನ ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದ್ದು, ಕಾನೂನು ತಜ್ಞರ ಸಲಹೆ ಪಡೆದು ಅಧಿಕೃತವಾಗಿ ಘೋಷಿಸಲು ಕೆಎಸ್​ಸಿಎ ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನು ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕೆಎಸ್​ಸಿಎ ಅಧ್ಯಕ್ಷ ರಘುರಾಮ್ ಭಟ್​ ತಿಳಿಸಿದ್ದಾರೆ.

ಇದನ್ನೂ ಓದಿ: BREAKING: ಕಾಲ್ತುಳಿತ ದುರಂತ ಪ್ರಕರಣ.. ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹೆಚ್ಚಳ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment