ಅತಿ ಹೆಚ್ಚು ಭೂಕುಸಿತವಾಗುವ ಜಿಲ್ಲೆಯೆಂದರೆ ಅದು ಉತ್ತರ ಕನ್ನಡ
2018ರಲ್ಲಿ ಕೊಡಗಿನಲ್ಲಿ ನಡೆದ ದುರ್ಘಟನೆಯ ಬಳಿಕವೂ ಎಚ್ಚೆತ್ತುಕೊಂಡಿಲ್ಲ
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡಕ್ಕೂ ಹಾಸನಕ್ಕೂ ಈ ಕಾಟ ತಪ್ಪಿದ್ದಲ್ಲ
ರಾಜ್ಯದ ಹಲವು ಸಮಸ್ಯೆಗಳಲ್ಲಿ ಭೂಕುಸಿತವು ಒಂದು. ಮಳೆಗಾಲದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆಯಾದರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚು ಗಮನ ಹರಿಸದೇ ಇರುವುದು ವಿಪರ್ಯಾಸವೇ ಆಗಿದೆ. ಜುಲೈ 16ರಂದು ಶಿರೂರಿನಲ್ಲಿ ನಡೆದ ಭೀಕರ ಘಟನೆ ಸರ್ಕಾರಕ್ಕೆ ಮತ್ತು ರಾಜ್ಯದ ಜನತೆಗೆ ಮತ್ತೊಮ್ಮೆ ಎಚ್ಚರಿಕೆಯ ಘಂಟೆಯಾಗಿದೆ. 7 ಜನರನ್ನು ಬಲಿ ತೆಗೆದುಕೊಂಡು, ಮೂವರನ್ನು ನಾಪತ್ತೆ ಮಾಡಿರುವ ಗುಡ್ಡ ಕುಸಿತ ಪ್ರಕರಣವು ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅದರಲ್ಲೂ ನಾಪತ್ತೆಯಾದ ಲಾರಿ ಮತ್ತು ಚಾಲಕನ ಹುಡುಕಾಟವು ಬಹುದೊಡ್ಡ ಸಾಹಸವಾಗಿಬಿಟ್ಟಿದೆ.
ಸಹ್ಯಾದ್ರಿ ಬೆಟ್ಟಗಳ ಸಾಲುಗಳು ಹಿಮಾಲಯಕ್ಕಿಂತಲೂ ನಿಸರ್ಗ ಸಂಪತ್ತು ಹೊಂದಿದೆ. ಇಲ್ಲಿರುವ ಸಸ್ಯವೈವಿಧ್ಯ, ಜೀವವೈವಿಧ್ಯವು ಬಹಳ ವಿಶೇಷತೆಯನ್ನು ಹೊಂದಿದೆ. ಇಲ್ಲಿ ಬದುಕುವ ಕೋಟ್ಯಾಂತರ ಜನರು ಕೂಡ ನಿಸರ್ಗಕ್ಕೆ ಅವಲಂಬಿತರಾಗಿ ಬದುಕುತ್ತಿದ್ದಾರೆ. ಆದರೆ ಪಶ್ಚಿಮಘಟ್ಟಗಳಲ್ಲಿ ಜನಜೀವನದ ಜೊತೆಗೆ ಭೂಕುಸಿತದಂತಹ ಸಮಸ್ಯೆಗಳನ್ನು ದೊಡ್ಡ ತಲೆನೋವಾಗಿಬಿಟ್ಟಿದೆ.
ರಾಜ್ಯದ ಗಂಭೀರ ಸಮಸ್ಯೆಗಳಲ್ಲಿ ಭೂಕುಸಿತವು ಒಂದು. ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ 7 ಜಿಲ್ಲೆ ಮತ್ತು 30 ತಾಲ್ಲೂಕಿನ ಜನರು ಪ್ರತಿ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ. ಇದರ ನಡುವೆ ಇಂಥ ಅಚಾತುರ್ಯಗಳು ಜನರ ಮನದಲ್ಲಿ ಮಾಸದಂತೆ ಗಾಯ ಮಾಡಿ ಹೋಗುತ್ತವೆ.
ಇದನ್ನೂ ಓದಿ: KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ
ಉತ್ತರ ಕನ್ನಡ ಮಾತ್ರವಲ್ಲ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು ಈ ಜಿಲ್ಲೆಗಳಲ್ಲಿ ಬರುವ ಕೆಲವು ತಾಲ್ಲೂಕುಗಳಲ್ಲಿ ಭೂಕುಸಿತ ಭೀತಿಯಿದೆ. ಅಧ್ಯಯನ ಪ್ರಕಾರ ಈ ಭಾಗಗಳಲ್ಲಿನ ಭೂಕುಸಿತಕ್ಕೆ ಹಲವು ಕಾರಣಗಳಿವೆ. ಆದರೆ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರವು ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿದೆ.
ಉತ್ತರ ಕನ್ನಡದ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೂಕುಸಿತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಆದರೆ ಇದಕ್ಕೂ ಮುನ್ನ ಈ ಭಾಗದಲ್ಲಿ ಇಂಥ ಘಟನೆಗಳು ನಡೆದಿವೆ. ಅದರಲ್ಲೂ ಭೂಕುಸಿತ ಪ್ರಕರಣಗಳ ಶೇಕಡಾವಾರು ನೋಡಿದಾಗ ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಭೂಕುಸಿತವಾಗುತ್ತಿದೆ.
ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಅರ್ಜುನ್ ಹುಡುಕಲು ಬಂದ ಐಬಾಡ್.. ನೀರು, ಮಣ್ಣು, ಹಿಮದಲ್ಲಿದ್ರು ಹುಡುಕುತ್ತೆ ಈ ಡ್ರೋನ್
2009ರಲ್ಲಿ ಕಾರವಾರದ ಕಡವಾಡದಲ್ಲಿ ಮೊದಲ ಭೂಕುಸಿತ ಸಂಭವಿಸಿತು. ಆ ಬಳಿಕ ಇಂಥಾ ಘಟನೆಗಳ ಸಂಖ್ಯೆ ಏರುತ್ತಲೇ ಹೋಯಿತು. ಇನ್ನು 2009ರಿಂದ 2021ರವರೆಗೆ ಉತ್ತರ ಕನ್ನಡ ಭಾಗದಲ್ಲಿ 439 ಭೂಕುಸಿತ ಪ್ರಕರಣಗಳು ಬೆಳಕಿಗೆ ಬಂದಿವೆ.
ಕೊಡಗಿನಲ್ಲೂ ಮಳೆಗಾಲದ ಸಮಯದಲ್ಲಿ ಭೂಕುಸಿತ ಗಂಭೀರ ಸಮಸ್ಯೆಯಾಗಿದೆ. 2018ರಲ್ಲಿ ನಡೆದ ದುರ್ಘಟನೆಯು ಆ ಭಾಗದ ಜನರು ಇಂದಿಗೂ ಮರೆಯಲು ಸಾಧ್ಯವಿಲ್ಲದಂತಾಗಿದೆ. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಾಗೂ ಬೇಸರಕ್ಕೆ ಕಾರಣ ಮಾಡಿದ ಪ್ರಕರಣವಾಗಿದೆ. ಈ ದುರ್ಘಟನೆಯಲ್ಲಿ 20 ಸಾವು, 268 ಜಾನುವಾರಗಳು ಸಾವನ್ನಪ್ಪಿದ್ದಲ್ಲದೆ, 900 ಮನೆಗಳು, ಕೃಷಿಗಳು ಸೇರಿ ಅನೇಕ ನಷ್ಟಕ್ಕೆ ಕಾರಣವಾಗಿತ್ತು.
ಕೊಡಗಿನಲ್ಲಿ 2009ರಿಂದ 2021ರವರೆಗೆ 79 ಭೂಕುಸಿತ ಪ್ರಕರಣಗಳು ಬೆಳಕಿಗೆ ಬಂದಿದೆ. ಭಾರತದ ಭೂ-ವೈಜ್ಞಾನಿಕ ಸಮೀಕ್ಷೆಯು ಕೊಡಗು ಜಿಲ್ಲೆಯ ಒಳಗೆ 2018ರಲ್ಲಿ 105 ಭೂಕುಸಿತ ಪ್ರಕರಣಗಳನ್ನು ಪತ್ತೆಹಚ್ಚಿದೆ. ಶಿವಮೊಗ್ಗದಲ್ಲಿ ಗಮನಿಸುವುದಾದರೆ 356 ಪ್ರಕರಣಗಳು ಬೆಳಕಿಗೆ ಬಂದಿವೆ. ಚಿಕ್ಕಮಗಳೂರಿನಲ್ಲಿ 193 ಪ್ರಕರಣಗಳು, ಉಡುಪಿಯಲ್ಲಿ 99 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 88 ಪ್ರಕರಣಗಳು ಮತ್ತು ಹಾಸನದಲ್ಲಿ 18 ಪ್ರಕರಣಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ: ಕಾಣೆಯಾದ ಲಾರಿಯನ್ನು ಈ 4 ತಂತ್ರಜ್ಞಾನಗಳ ಮೂಲಕ ಹುಡುಕಬಹುದು! ಇಲ್ಲಿದೆ ಮಾಹಿತಿ
ಕೊಡಗಿನ ಭೂಕುಸಿತದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು. ಗುಡ್ಡ ಕುಸಿತದ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ರಚನೆ ಮಾಡಿತು. 2021ರಲ್ಲಿ ‘ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗಟ್ಟುವ ಹಾಗೂ ನಿಯಂತ್ರಿಸುವ ಮಾರ್ಗೋಪಾಯ’ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಭೂಕುಸಿತವನ್ನು ತಡೆಗಟ್ಟಲು 2022ರಲ್ಲಿ ಭೂಕುಸಿತವಾಗುವ ಸ್ಥಳಗಳ ಕುರಿತು ಕಾರ್ಯ ಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು.
ಇದನ್ನೂ ಓದಿ: ತನ್ನ ಒಡವೆ ಮಾರಿ KRS ಡ್ಯಾಂ ನಿರ್ಮಿಸಿದ ತಾಯಿ.. ಇಂದು ರಾಜ್ಯದ ಜನರ ದಾಹ ತೀರಿಸುತ್ತಿರೋದು ಆಕೆ ಮಾಡಿದ ತ್ಯಾಗದಿಂದ!
ಕೆಎಸ್ಡಿಎಂಎ ಸಲ್ಲಿಸಿದ ವರದಿಯಲ್ಲಿ ಭೂಕುಸಿತವನ್ನು ತಡೆಯಲು ಮತ್ತು ಜನರನ್ನು ರಕ್ಷಿಸುವ ಸಲುವಾಗಿ, ಗುಡ್ಡ ಕುಸಿಯುವ ಸ್ಥಳಗಳಲ್ಲಿ ಸೂಚನಾಫಲಕ ಅಳವಡಿಕೆ, ತಡೆಗೋಡೆ ನಿರ್ಮಾಣ, ಗುಡ್ಡದ ಬದಿ ವಾಸಿಸುವ ನಿವಾಸಿಗಳ ಸ್ಥಳಾಂತರ ಸೇರಿ ಈ ವಿಚಾರಗಳನ್ನು ವರದಿಯಲ್ಲಿ ತಿಳಿಸಿತ್ತು. ಇದರ ಬಗ್ಗೆ ಗಮನಹರಿಸದೇ ಇರುವುದು ಈ ಬಾರಿ ಶಿರೂರಿನಲ್ಲಾದ ಘಟನೆಯೇ ಸಾಕ್ಷಿಯಾಗಿದೆ.
ಭೂಕುಸಿತಕ್ಕೆ ಕಾರಣಗಳೇನು?
ಭೂಕುಸಿತವಾಗಲು ಮನುಷ್ಯನೇ ಪ್ರಮುಖ ಕಾರಣ. ಅಕ್ರಮ ಗಣಿಗಾರಿಕೆ, ಮನೆ, ರಸ್ತೆ ನಿರ್ಮಾಣ, ಅರಣ್ಯ ನಾಶ, ಕಟ್ಟಡಗಳ ನಿರ್ಮಾಣ, ಸರಿಯಾಗಿ ನೀರನ್ನು ಹರಿಸದೇ ಇರುವುದು ಇವೆಲ್ಲವೂ ಇಂತಹ ಅನಾಹುತಗಳಿಗೆ ಪ್ರಮುಖ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅತಿ ಹೆಚ್ಚು ಭೂಕುಸಿತವಾಗುವ ಜಿಲ್ಲೆಯೆಂದರೆ ಅದು ಉತ್ತರ ಕನ್ನಡ
2018ರಲ್ಲಿ ಕೊಡಗಿನಲ್ಲಿ ನಡೆದ ದುರ್ಘಟನೆಯ ಬಳಿಕವೂ ಎಚ್ಚೆತ್ತುಕೊಂಡಿಲ್ಲ
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡಕ್ಕೂ ಹಾಸನಕ್ಕೂ ಈ ಕಾಟ ತಪ್ಪಿದ್ದಲ್ಲ
ರಾಜ್ಯದ ಹಲವು ಸಮಸ್ಯೆಗಳಲ್ಲಿ ಭೂಕುಸಿತವು ಒಂದು. ಮಳೆಗಾಲದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆಯಾದರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚು ಗಮನ ಹರಿಸದೇ ಇರುವುದು ವಿಪರ್ಯಾಸವೇ ಆಗಿದೆ. ಜುಲೈ 16ರಂದು ಶಿರೂರಿನಲ್ಲಿ ನಡೆದ ಭೀಕರ ಘಟನೆ ಸರ್ಕಾರಕ್ಕೆ ಮತ್ತು ರಾಜ್ಯದ ಜನತೆಗೆ ಮತ್ತೊಮ್ಮೆ ಎಚ್ಚರಿಕೆಯ ಘಂಟೆಯಾಗಿದೆ. 7 ಜನರನ್ನು ಬಲಿ ತೆಗೆದುಕೊಂಡು, ಮೂವರನ್ನು ನಾಪತ್ತೆ ಮಾಡಿರುವ ಗುಡ್ಡ ಕುಸಿತ ಪ್ರಕರಣವು ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅದರಲ್ಲೂ ನಾಪತ್ತೆಯಾದ ಲಾರಿ ಮತ್ತು ಚಾಲಕನ ಹುಡುಕಾಟವು ಬಹುದೊಡ್ಡ ಸಾಹಸವಾಗಿಬಿಟ್ಟಿದೆ.
ಸಹ್ಯಾದ್ರಿ ಬೆಟ್ಟಗಳ ಸಾಲುಗಳು ಹಿಮಾಲಯಕ್ಕಿಂತಲೂ ನಿಸರ್ಗ ಸಂಪತ್ತು ಹೊಂದಿದೆ. ಇಲ್ಲಿರುವ ಸಸ್ಯವೈವಿಧ್ಯ, ಜೀವವೈವಿಧ್ಯವು ಬಹಳ ವಿಶೇಷತೆಯನ್ನು ಹೊಂದಿದೆ. ಇಲ್ಲಿ ಬದುಕುವ ಕೋಟ್ಯಾಂತರ ಜನರು ಕೂಡ ನಿಸರ್ಗಕ್ಕೆ ಅವಲಂಬಿತರಾಗಿ ಬದುಕುತ್ತಿದ್ದಾರೆ. ಆದರೆ ಪಶ್ಚಿಮಘಟ್ಟಗಳಲ್ಲಿ ಜನಜೀವನದ ಜೊತೆಗೆ ಭೂಕುಸಿತದಂತಹ ಸಮಸ್ಯೆಗಳನ್ನು ದೊಡ್ಡ ತಲೆನೋವಾಗಿಬಿಟ್ಟಿದೆ.
ರಾಜ್ಯದ ಗಂಭೀರ ಸಮಸ್ಯೆಗಳಲ್ಲಿ ಭೂಕುಸಿತವು ಒಂದು. ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ 7 ಜಿಲ್ಲೆ ಮತ್ತು 30 ತಾಲ್ಲೂಕಿನ ಜನರು ಪ್ರತಿ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ. ಇದರ ನಡುವೆ ಇಂಥ ಅಚಾತುರ್ಯಗಳು ಜನರ ಮನದಲ್ಲಿ ಮಾಸದಂತೆ ಗಾಯ ಮಾಡಿ ಹೋಗುತ್ತವೆ.
ಇದನ್ನೂ ಓದಿ: KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ
ಉತ್ತರ ಕನ್ನಡ ಮಾತ್ರವಲ್ಲ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು ಈ ಜಿಲ್ಲೆಗಳಲ್ಲಿ ಬರುವ ಕೆಲವು ತಾಲ್ಲೂಕುಗಳಲ್ಲಿ ಭೂಕುಸಿತ ಭೀತಿಯಿದೆ. ಅಧ್ಯಯನ ಪ್ರಕಾರ ಈ ಭಾಗಗಳಲ್ಲಿನ ಭೂಕುಸಿತಕ್ಕೆ ಹಲವು ಕಾರಣಗಳಿವೆ. ಆದರೆ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರವು ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿದೆ.
ಉತ್ತರ ಕನ್ನಡದ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೂಕುಸಿತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಆದರೆ ಇದಕ್ಕೂ ಮುನ್ನ ಈ ಭಾಗದಲ್ಲಿ ಇಂಥ ಘಟನೆಗಳು ನಡೆದಿವೆ. ಅದರಲ್ಲೂ ಭೂಕುಸಿತ ಪ್ರಕರಣಗಳ ಶೇಕಡಾವಾರು ನೋಡಿದಾಗ ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಭೂಕುಸಿತವಾಗುತ್ತಿದೆ.
ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಅರ್ಜುನ್ ಹುಡುಕಲು ಬಂದ ಐಬಾಡ್.. ನೀರು, ಮಣ್ಣು, ಹಿಮದಲ್ಲಿದ್ರು ಹುಡುಕುತ್ತೆ ಈ ಡ್ರೋನ್
2009ರಲ್ಲಿ ಕಾರವಾರದ ಕಡವಾಡದಲ್ಲಿ ಮೊದಲ ಭೂಕುಸಿತ ಸಂಭವಿಸಿತು. ಆ ಬಳಿಕ ಇಂಥಾ ಘಟನೆಗಳ ಸಂಖ್ಯೆ ಏರುತ್ತಲೇ ಹೋಯಿತು. ಇನ್ನು 2009ರಿಂದ 2021ರವರೆಗೆ ಉತ್ತರ ಕನ್ನಡ ಭಾಗದಲ್ಲಿ 439 ಭೂಕುಸಿತ ಪ್ರಕರಣಗಳು ಬೆಳಕಿಗೆ ಬಂದಿವೆ.
ಕೊಡಗಿನಲ್ಲೂ ಮಳೆಗಾಲದ ಸಮಯದಲ್ಲಿ ಭೂಕುಸಿತ ಗಂಭೀರ ಸಮಸ್ಯೆಯಾಗಿದೆ. 2018ರಲ್ಲಿ ನಡೆದ ದುರ್ಘಟನೆಯು ಆ ಭಾಗದ ಜನರು ಇಂದಿಗೂ ಮರೆಯಲು ಸಾಧ್ಯವಿಲ್ಲದಂತಾಗಿದೆ. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಾಗೂ ಬೇಸರಕ್ಕೆ ಕಾರಣ ಮಾಡಿದ ಪ್ರಕರಣವಾಗಿದೆ. ಈ ದುರ್ಘಟನೆಯಲ್ಲಿ 20 ಸಾವು, 268 ಜಾನುವಾರಗಳು ಸಾವನ್ನಪ್ಪಿದ್ದಲ್ಲದೆ, 900 ಮನೆಗಳು, ಕೃಷಿಗಳು ಸೇರಿ ಅನೇಕ ನಷ್ಟಕ್ಕೆ ಕಾರಣವಾಗಿತ್ತು.
ಕೊಡಗಿನಲ್ಲಿ 2009ರಿಂದ 2021ರವರೆಗೆ 79 ಭೂಕುಸಿತ ಪ್ರಕರಣಗಳು ಬೆಳಕಿಗೆ ಬಂದಿದೆ. ಭಾರತದ ಭೂ-ವೈಜ್ಞಾನಿಕ ಸಮೀಕ್ಷೆಯು ಕೊಡಗು ಜಿಲ್ಲೆಯ ಒಳಗೆ 2018ರಲ್ಲಿ 105 ಭೂಕುಸಿತ ಪ್ರಕರಣಗಳನ್ನು ಪತ್ತೆಹಚ್ಚಿದೆ. ಶಿವಮೊಗ್ಗದಲ್ಲಿ ಗಮನಿಸುವುದಾದರೆ 356 ಪ್ರಕರಣಗಳು ಬೆಳಕಿಗೆ ಬಂದಿವೆ. ಚಿಕ್ಕಮಗಳೂರಿನಲ್ಲಿ 193 ಪ್ರಕರಣಗಳು, ಉಡುಪಿಯಲ್ಲಿ 99 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 88 ಪ್ರಕರಣಗಳು ಮತ್ತು ಹಾಸನದಲ್ಲಿ 18 ಪ್ರಕರಣಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ: ಕಾಣೆಯಾದ ಲಾರಿಯನ್ನು ಈ 4 ತಂತ್ರಜ್ಞಾನಗಳ ಮೂಲಕ ಹುಡುಕಬಹುದು! ಇಲ್ಲಿದೆ ಮಾಹಿತಿ
ಕೊಡಗಿನ ಭೂಕುಸಿತದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತು. ಗುಡ್ಡ ಕುಸಿತದ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ರಚನೆ ಮಾಡಿತು. 2021ರಲ್ಲಿ ‘ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಭೂಕುಸಿತ ತಡೆಗಟ್ಟುವ ಹಾಗೂ ನಿಯಂತ್ರಿಸುವ ಮಾರ್ಗೋಪಾಯ’ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಭೂಕುಸಿತವನ್ನು ತಡೆಗಟ್ಟಲು 2022ರಲ್ಲಿ ಭೂಕುಸಿತವಾಗುವ ಸ್ಥಳಗಳ ಕುರಿತು ಕಾರ್ಯ ಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು.
ಇದನ್ನೂ ಓದಿ: ತನ್ನ ಒಡವೆ ಮಾರಿ KRS ಡ್ಯಾಂ ನಿರ್ಮಿಸಿದ ತಾಯಿ.. ಇಂದು ರಾಜ್ಯದ ಜನರ ದಾಹ ತೀರಿಸುತ್ತಿರೋದು ಆಕೆ ಮಾಡಿದ ತ್ಯಾಗದಿಂದ!
ಕೆಎಸ್ಡಿಎಂಎ ಸಲ್ಲಿಸಿದ ವರದಿಯಲ್ಲಿ ಭೂಕುಸಿತವನ್ನು ತಡೆಯಲು ಮತ್ತು ಜನರನ್ನು ರಕ್ಷಿಸುವ ಸಲುವಾಗಿ, ಗುಡ್ಡ ಕುಸಿಯುವ ಸ್ಥಳಗಳಲ್ಲಿ ಸೂಚನಾಫಲಕ ಅಳವಡಿಕೆ, ತಡೆಗೋಡೆ ನಿರ್ಮಾಣ, ಗುಡ್ಡದ ಬದಿ ವಾಸಿಸುವ ನಿವಾಸಿಗಳ ಸ್ಥಳಾಂತರ ಸೇರಿ ಈ ವಿಚಾರಗಳನ್ನು ವರದಿಯಲ್ಲಿ ತಿಳಿಸಿತ್ತು. ಇದರ ಬಗ್ಗೆ ಗಮನಹರಿಸದೇ ಇರುವುದು ಈ ಬಾರಿ ಶಿರೂರಿನಲ್ಲಾದ ಘಟನೆಯೇ ಸಾಕ್ಷಿಯಾಗಿದೆ.
ಭೂಕುಸಿತಕ್ಕೆ ಕಾರಣಗಳೇನು?
ಭೂಕುಸಿತವಾಗಲು ಮನುಷ್ಯನೇ ಪ್ರಮುಖ ಕಾರಣ. ಅಕ್ರಮ ಗಣಿಗಾರಿಕೆ, ಮನೆ, ರಸ್ತೆ ನಿರ್ಮಾಣ, ಅರಣ್ಯ ನಾಶ, ಕಟ್ಟಡಗಳ ನಿರ್ಮಾಣ, ಸರಿಯಾಗಿ ನೀರನ್ನು ಹರಿಸದೇ ಇರುವುದು ಇವೆಲ್ಲವೂ ಇಂತಹ ಅನಾಹುತಗಳಿಗೆ ಪ್ರಮುಖ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ