ರಾಜ್ಯದಲ್ಲಿ ಗುಡುಗು ಸಹಿತ ಜೋರಾಗಿ ಸುರಿದ ಮಳೆ
ಪೂರ್ವ ಮುಂಗಾರು ಮಳೆ ಆರ್ಭಟ ತತ್ತರಿಸಿದ ಜನರು
ಈ ತಾಲೂಕಿನಲ್ಲಿ ಅರ್ಧ ಗಂಟೆಗಳ ಕಾಲ ಆಲಿಕಲ್ಲು ಮಳೆ
ರಾಜ್ಯದ್ಯಂತ ಪೂರ್ವ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಹುಬ್ಬಳ್ಳಿ ಬೆಳಗಾವಿ ಸೇರಿದಂತೆ ಹಲವೆಡೆ ಭಾರೀ ಮಳೆ ಆಗಿದೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆ ಜಲಾವೃತವಾಗಿದ್ದು, ಧಾರವಾಡದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ.
ಸಂಪೂರ್ಣ ಜಲಾವೃತವಾದ ಪೊಲೀಸ್ ಸ್ಟೇಷನ್. ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಕಾರುಗಳು. ಮಳೆಯಲ್ಲಿ ಮುಳುಗಿದ ಕಾರುಗಳು. ಸಿಡಿಲಿಗೆ ಹೊತ್ತಿ ಉರಿಯುತ್ತಿರುವ ಬೆಂಕಿ. ಇದು ರಾಜ್ಯದಲ್ಲಿ ಪೂರ್ವ ಮುಂಗಾರು ಸೃಷ್ಟಿಸಿದ ಅವಾಂತರ.
ರಾಜ್ಯದ್ಯಂತ ಪೂರ್ವ ಮುಂಗಾರು ಮಳೆ ಆರ್ಭಟ
ಬಿರುಬಿಸಿಲಿಗೆ ಹೈರಾಣಾಗಿದ್ದ ರಾಜ್ಯದ ಜನರಿಗೆ ಕಳೆದ ಒಂದು ವಾರದಿಂದ ಆಗುತ್ತಿರುವ ಮಳೆ ಸಂತಸ ತಂದಿದೆ. ಹಲವು ತಿಂಗಳಿನಿಂದ ಬಿಸಿಲಿನಿಂದ ಬೆಂದಿದ್ದ ಜನತೆಗೆ ಸಂಜೆಯಾಗುತ್ತಿದ್ದಂತೆಯೇ ವರುಣ ತಂಪೆರೆಯುತ್ತಿದ್ದಾನೆ.
ಹುಬ್ಬಳ್ಳಿ-ಧಾರವಾಡದಲ್ಲಿ ಮಳೆರಾಯನ ಅಬ್ಬರ
ಉತ್ತರ ಕರ್ನಾಟಕದ ಅವಳಿ ನಗರ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಗುಡುಗು ಸಹಿತ ಜೋರಾಗಿ ಮಳೆಯಾಗಿದೆ. ಸುಮಾರು 2 ಗಂಟೆಗಳ ಕಾಲ ಸುರಿದ ಮಳೆಗೆ ಕೆಲವು ಅವಾಂತರ ಸೃಷ್ಟಿಯಾಗಿವೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ರಸ್ತೆಗಳೆಲ್ಲಾ ಜಲವೃತವಾಗಿದ್ದು ವಾಹನ ಸವಾರರು ಹೈರಣಾಗಿದ್ದರು. ಮತ್ತೊಂದೆಡೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ.
ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರುಗಳು
ಇತ್ತ ಚಿಕ್ಕೋಡಿಯಲ್ಲೂ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಜನ ಜೀವನ ಅಸ್ತವ್ತಸ್ತವಾಗಿದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿರುವ ಗೌರಿಹಳ್ಳ ತುಂಬಿ ಹರಿದಿದ್ದು, ಹಳ್ಳದ ಪಕ್ಕ ನಿಲ್ಲಿಸಿದ್ದ ಕಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಬಿಸಿಲನಾಡು ರಾಯಚೂರಿನಲ್ಲಿ ತಂಪೆರೆದ ವರುಣ
ಬಿಸಿಲ ನಾಡು ರಾಯಚೂರಿ ಜಿಲ್ಲಿಯಲ್ಲಿ ತೀವ್ರ ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ವರುಣ ತಂಪರೆರಿದ್ದಾನೆ.. ಜಿಲ್ಲೆಯ ದೇವದುರ್ಗ, ಸಿರವಾರ, ಲಿಂಗಸೂಗೂರು ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ.
ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲೂ ವರುಣ ಸಿಂಚನವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಅರ್ಧ ಗಂಟೆಗಳ ಕಾಲ ಆಲಿಕಲ್ಲು ಮಳೆಯಾಗಿದೆ. ಮಳೆಯಿಂದಾಗಿ ಕಾಫಿ ತೋಟದ ಮಾಲೀಕರಿಗೆ ಫುಲ್ ಖುಷ್ ಆಗಿದ್ದಾರೆ. ಮತ್ತೊಂದೆಡೆ ಮಂಗಳೂರಿನ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಗಾಳಿ, ಗುಡುಗು ಸಹಿತ ಮಳೆಯಾಗಿದ್ದು ಭಕ್ತರಲ್ಲಿ ಸಂತಸ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜ್ಯದಲ್ಲಿ ಗುಡುಗು ಸಹಿತ ಜೋರಾಗಿ ಸುರಿದ ಮಳೆ
ಪೂರ್ವ ಮುಂಗಾರು ಮಳೆ ಆರ್ಭಟ ತತ್ತರಿಸಿದ ಜನರು
ಈ ತಾಲೂಕಿನಲ್ಲಿ ಅರ್ಧ ಗಂಟೆಗಳ ಕಾಲ ಆಲಿಕಲ್ಲು ಮಳೆ
ರಾಜ್ಯದ್ಯಂತ ಪೂರ್ವ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಹುಬ್ಬಳ್ಳಿ ಬೆಳಗಾವಿ ಸೇರಿದಂತೆ ಹಲವೆಡೆ ಭಾರೀ ಮಳೆ ಆಗಿದೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆ ಜಲಾವೃತವಾಗಿದ್ದು, ಧಾರವಾಡದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ.
ಸಂಪೂರ್ಣ ಜಲಾವೃತವಾದ ಪೊಲೀಸ್ ಸ್ಟೇಷನ್. ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಕಾರುಗಳು. ಮಳೆಯಲ್ಲಿ ಮುಳುಗಿದ ಕಾರುಗಳು. ಸಿಡಿಲಿಗೆ ಹೊತ್ತಿ ಉರಿಯುತ್ತಿರುವ ಬೆಂಕಿ. ಇದು ರಾಜ್ಯದಲ್ಲಿ ಪೂರ್ವ ಮುಂಗಾರು ಸೃಷ್ಟಿಸಿದ ಅವಾಂತರ.
ರಾಜ್ಯದ್ಯಂತ ಪೂರ್ವ ಮುಂಗಾರು ಮಳೆ ಆರ್ಭಟ
ಬಿರುಬಿಸಿಲಿಗೆ ಹೈರಾಣಾಗಿದ್ದ ರಾಜ್ಯದ ಜನರಿಗೆ ಕಳೆದ ಒಂದು ವಾರದಿಂದ ಆಗುತ್ತಿರುವ ಮಳೆ ಸಂತಸ ತಂದಿದೆ. ಹಲವು ತಿಂಗಳಿನಿಂದ ಬಿಸಿಲಿನಿಂದ ಬೆಂದಿದ್ದ ಜನತೆಗೆ ಸಂಜೆಯಾಗುತ್ತಿದ್ದಂತೆಯೇ ವರುಣ ತಂಪೆರೆಯುತ್ತಿದ್ದಾನೆ.
ಹುಬ್ಬಳ್ಳಿ-ಧಾರವಾಡದಲ್ಲಿ ಮಳೆರಾಯನ ಅಬ್ಬರ
ಉತ್ತರ ಕರ್ನಾಟಕದ ಅವಳಿ ನಗರ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಗುಡುಗು ಸಹಿತ ಜೋರಾಗಿ ಮಳೆಯಾಗಿದೆ. ಸುಮಾರು 2 ಗಂಟೆಗಳ ಕಾಲ ಸುರಿದ ಮಳೆಗೆ ಕೆಲವು ಅವಾಂತರ ಸೃಷ್ಟಿಯಾಗಿವೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ರಸ್ತೆಗಳೆಲ್ಲಾ ಜಲವೃತವಾಗಿದ್ದು ವಾಹನ ಸವಾರರು ಹೈರಣಾಗಿದ್ದರು. ಮತ್ತೊಂದೆಡೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ.
ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರುಗಳು
ಇತ್ತ ಚಿಕ್ಕೋಡಿಯಲ್ಲೂ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಜನ ಜೀವನ ಅಸ್ತವ್ತಸ್ತವಾಗಿದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿರುವ ಗೌರಿಹಳ್ಳ ತುಂಬಿ ಹರಿದಿದ್ದು, ಹಳ್ಳದ ಪಕ್ಕ ನಿಲ್ಲಿಸಿದ್ದ ಕಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಬಿಸಿಲನಾಡು ರಾಯಚೂರಿನಲ್ಲಿ ತಂಪೆರೆದ ವರುಣ
ಬಿಸಿಲ ನಾಡು ರಾಯಚೂರಿ ಜಿಲ್ಲಿಯಲ್ಲಿ ತೀವ್ರ ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ವರುಣ ತಂಪರೆರಿದ್ದಾನೆ.. ಜಿಲ್ಲೆಯ ದೇವದುರ್ಗ, ಸಿರವಾರ, ಲಿಂಗಸೂಗೂರು ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗಿದೆ.
ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲೂ ವರುಣ ಸಿಂಚನವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಅರ್ಧ ಗಂಟೆಗಳ ಕಾಲ ಆಲಿಕಲ್ಲು ಮಳೆಯಾಗಿದೆ. ಮಳೆಯಿಂದಾಗಿ ಕಾಫಿ ತೋಟದ ಮಾಲೀಕರಿಗೆ ಫುಲ್ ಖುಷ್ ಆಗಿದ್ದಾರೆ. ಮತ್ತೊಂದೆಡೆ ಮಂಗಳೂರಿನ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಗಾಳಿ, ಗುಡುಗು ಸಹಿತ ಮಳೆಯಾಗಿದ್ದು ಭಕ್ತರಲ್ಲಿ ಸಂತಸ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ