/newsfirstlive-kannada/media/post_attachments/wp-content/uploads/2024/05/Heavy-Rains-Karnataka.jpg)
ಬೆಂಗಳೂರು: ರಾಜ್ಯದ ಹಲವೆಡೆ ಮುಂದಿನ 2 ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್ 25 ಮತ್ತು 26ನೇ ತಾರೀಕಿನಂದು ಧಾರಾಕಾರ ಮಳೆಯಾದರೆ, 27 ಮತ್ತು 28ರಂದು ಸಾಧಾರಣ ಹನಿಮಳೆ ಬೀಳುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.
ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಅತೀ ಹೆಚ್ಚು ಮಳೆಯಾಗಲಿದ್ದು, ಜನ ಎಚ್ಚರಿಕೆಯಿಂದ ಇರಬೇಕು. ರಾಮನಗರದ ಮಾಗಡಿಯಲ್ಲಿ ಅತ್ಯಧಿಕ ಮಳೆ ಆಗಲಿದೆ. ಬೆಂಗಳೂರು, ಚಿಂತಾಮಣಿ ಮತ್ತು ವಿರಾಜಪೇಟೆ, ದೇವನಹಳ್ಳಿ ಕಡೆ 5 ಸೆಂಟಿ ಮೀಟರ್ ಮಳೆ ಬೀಳಲಿದೆ. ಕರಾವಳಿ ಕರ್ನಾಟಕದಲ್ಲೂ ಮುಂದಿನ ಒಂದು ವಾರ ಗುಡುಗು ಸಹಿತ ಜೋರು ಮಳೆ ಆಗಲಿದೆ ಎಂದು ಅಲರ್ಟ್ ನೀಡಲಾಗಿದೆ.
ಭಾರೀ ಬಿಸಿಲಿನ ಬೇಗೆಗೆ ಬೇಸತ್ತು ಹೋಗಿದ್ದ ಜನರಿಗೆ ಇತ್ತೀಚೆಗಷ್ಟೇ ಮಳೆ ತಂಪು ಮಾಡಿತ್ತು. ಈಗ ಮುಂದಿನ 4 ದಿನಗಳ ಭರ್ಜರಿ ಮಳೆ ಬೀಳಲಿದೆ. ಹೀಗಾಗಿ ಮನೆಯಿಂದ ಹೊರಬರೋ ಮುನ್ನ ಎಚ್ಚರದಿಂದ ಇರಿ ಎಂದಿದೆ ಹವಾಮಾನ ಇಲಾಖೆ.
ಇದನ್ನೂ ಓದಿ:ನಿಮ್ಮ ಮೊಬೈಲ್ನಲ್ಲಿ ಈ App ಇದ್ರೆ ಕೂಡಲೇ Uninstall ಮಾಡಿ; ಕೇಂದ್ರ ಸರ್ಕಾರದಿಂದ ಖಡಕ್ ಎಚ್ಚರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ